ಪುಟ:ಮಿಂಚು.pdf/೧೪೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

138

ಮಿಂಚು

ಹೇಳಿಕೆಯ ಕೊನೆಯ ವಾಕ್ಯ ದುರುದ್ದೇಶದಿಂದ ಕೂಡಿದೆ, ಅವಹೇಳನಕಾರಕವಾಗಿದೆ.
ಆ ಮಾತನ್ನು ಆವರು ಹಿಂದಕ್ಕೆ ತೆಗೆದುಕೊಳ್ಳಬೇಕು.”
ಆಳುವ ಪಕ್ಷದ ಶಾಸಕರು : "ಇಲ್ಲ, ಇಲ್ಲ.”
ಪ್ರಜಾಪಕ್ಷದ ಇನ್ನೊಬ್ಬ ಶಾಸಕ : “ನ್ಯಾಯಾಂಗ ತನಿಖೆಗೆ ಮುಖ್ಯಮಂತ್ರಿ
ಒಪ್ಪಬೇಕು.”
ಆಳುವ ಪಕ್ಷದವರು : “ಇಲ್ಲ. ಅವರು ಒಪ್ಪುವುದಿಲ್ಲ.”
ಸದನದಿಂದ ಹೊರನಡೆದು ಸುದ್ದಿಯಾಗುವುದೊಂದೇ ದಾರಿ - ಎಂದು
ನಾಯಕರು ತಮ್ಮ ಹಿಂಬಾಲಕರಿಗೆ ಸನ್ನೆ ಮಾಡಿದರು. ಪ್ರಜಾಪಕ್ಷದ ಐವರೂ
ದಂಡಪಾಣಿಯೂ ಸದನದಿಂದ ಹೊರಬಿದ್ದರು. ತಾನು ಭಾಷಣ ಮಾಡಿದ್ದ ಮೆಟ್ಟಲ
ಮೇಲೆ ಎರಡು ನಿಮಿಷ ಸಮತಾಶಾಸಕ ನಿಂತ.
"ಇರೋದು ನೀವೊಬ್ಬರೇ. ಆದರೆ ಕೆಲಸ ಎಷ್ಟು ಚೆನ್ನಾಗಿ ಮಾಡ್ತೀರಪ್ಪ”
ಎಂದು ನಾಯಕ ಮೆಚ್ಚುಗೆ ಸೂಚಿಸಿದ.