ಪುಟ:ಯಶೋಧರ ಚರಿತೆ.pdf/೧೧೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೧೦೦

ಯಶೋಧರ ಚರಿತೆ

ವ್ರತಹಾನಿ ಹಿಂಸೆಯೊಂದೀ
ಗತಿಗಿಕ್ಕಿದುದುಳಿದ ನಾಲ್ಕು ಮಾದೊಡೆ ಬಳಿಕೇಂ
ಚತುರಂಗಬಲ ಸಮೇತಂ
ಪ್ರತಿಪಕ್ಷಂ ಶೂರನಾದೊಡೇನಂ ಮಾಡಂ೩೪


ಅದರೆಂ ತನ್ನಂತಿರೆ ಬಗೆ-
ವುದು ಪೆರರಂ ಪ್ರಾಣಹಿಂಸೆಯಂ ಮಾಡಲ್ವೇ-
ಡ ದಯಾಮೂಲಂ ಧರ್ಮಂ
ಪದುಳಿಸಿ ಕೇಳ್ ಮಗನೆ ಹಿತಮಿದುಭಯಭವಕ್ಕಂ೩೫


ಗುರುವಿಂತು ಬೆಸಸೆ ಜಾತಿ
ಸ್ಮರಂಗಳಾಗಿರ್ದು ಪಕ್ಕಿಗಳ್ ಕೇಳ್ದೆರ್ದೆಯೊಳ್
ಪರಮೋತ್ಸವದಿಂ ವ್ರತಮಂ
ಧರಿಯಿಸುತಿರೆ ಚಂಡಕರ್ಮನುಂ ದರಿಯಿಸಿದಂ೩೬


೩೪. ಅಹಿಂಸೆ ಎಂಬ ಒಂದು ವ್ರತಕ್ಕೆ ಈ ಬಗೆಯ ಅಪಚಾರ ಸಂಭವಿಸಿದುದರಿಂದ
ಅವರಿಗೆ ಈ ಗತಿಯೊದಗಿತು. ಉಳಿದ ನಾಲ್ಕು ವ್ರತಗಳಿಗೂ ಭಂಗವುಂಟಾದರೆ
ಇನ್ನೇನಾಗದು? ಶೂರನೊಬ್ಬನು ಚತುರಂಗಬಲ ಸಮೇತನಾಗಿ ಬಂದರೆ ಏನು
ಮಾಡಲಾರ? ೩೫. ಆದುದರಿಂದ ಪರರನ್ನು ತನ್ನಂತೆ ಬಗೆಯಬೇಕು.
ಪ್ರಾಣಿಹಿಂಸೆಯನ್ನು ಮಾಡಬಾರದು, ಧರ್ಮವು ದಯಾಮೂಲವಾದುದು.
ಮಗು! ನೆಮ್ಮದಿಯಿಂದ ಕೇಳು: ಇದು ಇಹಪರಲೋಕಗಳ ಭವಕ್ಕೂ
ಹಿತವನ್ನುಂಟುಮಾಡುತ್ತದೆ." ೩೬. ಗುರುಗಳು ಕೊಟ್ಟ ಉಪದೇಶವನ್ನು ಕೇಳುತ್ತಿದ್ದಂತೆ
ಪೂರ್ವಜನ್ಮದ ಸ್ಮರಣೆಯುಂಟಾದ ಆ ಕೋಳಿಗಳೆರಡೂ ಅಂತರಂಗದಲ್ಲಿ
ಆನಂದಗೊಂಡು ಈ ವ್ರತವನ್ನು ಕೈಗೊಂಡವು. ಚಂಡಕರ್ಮನೂ ವ್ರತವನ್ನು
ಅಂಗೀಕರಿಸಿದನು.