ಪುಟ:ರಾಜಾರಾಮ ಮೋಹನರಾಯರ ಚರಿತ್ರೆ.djvu/೧೩೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧£ ರಾಜಾ ಕಾಮಮೋಹನರಾಯರ ಜೀವಿತ ಚರಿತ್ರ. ವಸಾರಿ ಪಟ್ಟಣಗಳಲ್ಲಿಯ ಕೂಲಿಯವರ ಕಷ್ಟ ಸುಖಗಳನ್ನು ತಿಳಿದುಕೊಳ್ಳುವುದಕ್ಕಾಗಿ ಅವರ ಮನೆಗಳಿಗೆ ಹೋಗಿ ವಿಚಾರಮಾಡುತಿದ್ದುದನ್ನು ತಾನು ನಿಶ್ಚಯವಾಗಿ ನೋಡಿದಂತೆ ಒಂದು ಕಡೆ ಬರೆದಿರುವನು. ಈತನಿಗೆ ಹಿಂಸುಯೆಂದರೆ ತುಂಬಾ ಅಸಮಾಧಾನ, ಒಂದು ದಿನ ರಾಮಸುಂದರನೆಂಬ ನೃತ್ಯನು ಎಲ್ಲಿಯೂ ಒಂದು ಮೇಕೆಯನ್ನು ಕೊಯ್ಯುತ್ತಿದ್ದನು. ಈ ವಾರ್ತೆಯನ್ನು ರಾಮ ಮೋಹನನು ಹೇಗೋ ತಿಳಿದುಕೊಂಡು ಅಲ್ಲಿಗೆ ತತ್‌ಕ್ಷಣವೇ ಹೋಗಿ ಪ್ರಾಣಿಹಿಂಸೆ ಮಾಡು ವುದು ತುಂಬ ಕೂರಕಾರ್ಯವೆಂದು ಅವನನ್ನು ನಿಂದಿಸಿ ಅವನಿಗೆ ಐದು ರೂಪಾಯಿಗಳ ದಂಡವನ್ನು ವಿಧಿಸಿದನು. ಈ ಕಾಲದಲ್ಲಿ ಒಂದು ಎಕರೆ ನೆಲವನ್ನು ಳ್ಳವನು ಸುದಾ ತನ್ನನ್ನು ರ್ಜಾದಾರನೆಂ ತಲೂ, ಲ್ಯಾಂಡ' ಲಾರ್ಡ್ ಎಂತಲೂ ಸಂಬೋಧಿಸಿಕೊಳ್ಳುತ್ತಿರುವುದನ್ನೂ, ರೈತರನ್ನು ಅನೇಕವಿಧವಾಗಿ ಹಿಂಸಿಸುತ್ತಿರುವುದನ್ನೂ ನಾವು ನೋಡುತ್ತಲೇ ಇರುವೆವು ಆದರೆ ರಾಮ ಮೋಹನನು ತಾನು ಒಬ್ಬ ದೊಡ್ಡ ರ್ಜಾದಾರನ ಮಗನಾಗಿ ಸ್ವತ: ದೊಡ್ಡ ಜ ರ್ಊಾದಾರನಾಗಿಯ ದ್ವಾರಕಾನಾಥ', ಕಾಳಿನಾಥ್, ಆನಂದಪ್ರಸಾದ್ ಮೊದಲಾದ ದೊಡ್ಡ ಪ್ರಭುಸ್ವಾಮಿಗಳ ಬಂಧುವಾಗಿಯೂ ಇದ್ದರೂ ಯಾವಾಗಲೂ ಹಿಂದೂ ದೇಶದಲ್ಲಿ ಯ, ಇಂಗ್ಲೆಂಡಿನಲ್ಲಿಯೂ, ಬಡವರಾದ ಬೇಸಾಯಗಾರರ ಕ್ಷೇಮವನ್ನೇ ಬಯಸಿ ಅವರ ಪಕ್ಷವನ್ನೇ ಅವಲಂಬಿಸಿ ರಾಜಸಾನ್ನಿಧ್ಯದಲ್ಲಿ ಸುಧಾ ಅವರಿಗಾಗಿಯೇ ತುಂಬ ಪ್ರಯತ್ನ ಪಟ್ಟು ಉಪಕಾರಮಾಡಿದನು. ಈತನ ಹೃದಯವು ಹಳ್ಳಿ ಮತ್ತು ಪಟ್ಟಣಗಳ ಕ್ಷೇಮಾಭಿಲಾಷೆಯಲ್ಲಿ ಮಾತ್ರವಲ್ಲದೆ ಸರ್ವಪ್ರಪಂಚದ ಅಭಿವೃದ್ಧಿಯಲ್ಲಿ ಕೂಡ ಅಗ್ನವಾಗಿದ್ದಿತು, ಎಲ್ಲಿಯೋ ಒಂದುಮೂಲೆ ಯಲ್ಲಿದ್ದ ಸ್ಪೇನಿನವರಿಗೆ ಪ್ರಜಾಪ್ರತಿನಿಧಿಸಭೆ ಏರ್ಪಟ್ಟಾಗ ಸಂತೋಷಪಟ್ಟು ಆ ಸಂತೋಷ ಸೂಚಕವಾಗಿ ಕಲ್ಕತ್ತೆಯ ಪುನಭವನ (Town fla!!) ನಲ್ಲಿ ಒಂದು ಭಾರೀ ಔತನಮಾಡಿ ಸಿದ್ದು, ನೇಪಲ್ಸಿನಲ್ಲಿ ಸ್ವಾತಂತ್ರ್ಯ ಪಕ್ಷದವರಿಗೆ ಅಪಜಯವಾದ ದುರ್ವಾರ್ತೆಯನ್ನು ಕೇಳಿ ದಾಗ ತನ್ನ ಸ್ನೇಹಿತರೊಂದಿಗೆ ಸಂಭಾಷಿಸುವುದಕ್ಕೆ ಕೂಡ ಇಷ್ಟವಿಲ್ಲದೆ ವಿಚಾರಗ್ರಸ್ತನಾಗಿ ದ್ವುದು, ಗ್ರೀಸ್ ದೇಶಕ್ಕೂ ತುರ್ಕಿ ದೇಶಕ್ಕೂ ಯುದ್ಧ ಒದಗಿದಾಗ ಗ್ರೀಕರ ಜಯವನ್ನು ಬರುಸುತ್ತಿದ್ದುದು, ಇಂಗ್ಲೆಂಡಿಗೆ ಪ್ರಯಾಣಮಾಡಿ ಹೊರಟಾಗ ಸಮುದ್ರಮಧ್ಯದಲ್ಲಿ ಕಾಣ ಬಂದ ಫ್ರಾನ್ಸಿನವರ ಹಡಗಿನಮೇಲಣ ಸ್ವಾತಂತ್ರ, ಸೂಚಳ ಧ್ವಜವನ್ನು ನೋಡಿ, ಅವರನ್ನು ಅಭಿನಂದಿಸಲಿಕ್ಕೆ ಹೋದುದು, ಈ ಮೊದಲಾದ ಕಾರ್ಯಗಳೆಲ್ಲವೂ ಪೂರೋಕ್ತ ವಿಷಯಗ ಳಿಗೆ ಪ್ರಬಲದೃಷ್ಟಾಂತಗಳಾಗಿವೆ. ಪ್ರಾಕೃತಿಕ ವಿಷಯಗಳಲ್ಲೆಲ್ಲಾ ಕಾಮಮೋಹನನು ಎಂತಹ ಮಹೋನ್ನತಿಯನ್ನು ಹೊಂದಿದ್ದನೋ ಹಾಗೆಯೇ ಭಗವದ್ಭಕ್ತಿ ವಿಷಯದಲ್ಲಿಯೂ ಕೂಡ ಅಗ್ರಗಣ್ಯನಾಗಿದ್ದನು ಒಂದೊಂದುವೇಳೆ ಭಗವಂತನ ಸ್ವಭಾವಸಿದ್ದಗಳಾದ ವರ್ಣನೆಗಳೊಂದಿಗೆ ಕೂಡಿದ ಹಾಡುಗ