ಪುಟ:ರಾಜಾರಾಮ ಮೋಹನರಾಯರ ಚರಿತ್ರೆ.djvu/೬೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೬೦ ೬೦ - ರಾಜಾ ರಾಮಮೋಹನರಾಯರ ಜೀವಿತ ಚರಿತ್ರೆ, « ಲೆಬ್೯ ' ಎಂಬ ಹೆಸರಿನ ಆಯುಧವನ್ನು ಮಾತ್ರ ಗುಟ್ಟಾಗಿ ತನ್ನ ಬಳಿಯಲ್ಲಿ ಇಟ್ಟು ಕೊಂಡೇ ಇದ್ದನು. ಈಗ ರಾಮಮೋಹನನಿಗೆ ಒಂದು ಚಿಂತೆಯುಂಟಾಯಿತು. ಇಲ್ಲಿ ಇಂಡಿಯಾ ಸರ್ಕಾ ರದವರು ಪ್ರಕಟಿಸಿದ ಸಹಗಮನ ನಿಷೇಧದ ಕಾನೂನು ಪ್ರಜೆಗಳ ಗದ್ದಲದಿಂದ ತಿರಗಿ ರದ್ದಾ ಗದಹಾಗೆ ಸರ್ಕಾರದವರು ದೃಢಸಂಕಲ್ಪವುಳ್ಳವರಾಗಿರುವುದಕ್ಕೂ, ವಿಲಾಯಿತಿಯಲ್ಲಿ ಪ್ರತಿ ಪಕ್ಷದವರಿಂದಲಾಗಲಿ ಸ್ವತಃ ಅವರ ಊಹೆಗಳಿಂದಲಾಗಲಿ, ಯಾವದಾದರೂ ಭಿನ್ನಾಭಿಪ್ರಾ ಯವುಂಬಾಗದೆ ಇರುವುದಕ್ಕೂ : ಈ ಶಾಸನವು ನಮ್ಮೆಲ್ಲರಿಗೂ ಸಂತೋಷ ಕರವಾ ದುದೇ ? ಎಂದು ಹಿಂದೂ ಜನರಿಂದ ಒಂದು ಕೃತಜ್ಞತೆಯ ಮನವಿಯನ್ನು ಬರೆಯಿಸಿ ಅದನ್ನು ರಾಜ ಪ್ರತಿನಿಧಿಯ ಸಮ್ಮುಖಕ್ಕೆ ಒಪ್ಪಿಸಬೇಕೆಂದು ಯೋಚಿಸಿದನು, ಮತ್ತೊಂದು ಕಡೆ ದೊಡ್ಡ , ದೊಡ್ಡ ಜಮಾನುದಾರರು, ಧನವಂತರು, ವರ್ತಕರು, ಪಂಡಿತರು, ಮೊದಲಾದವರಿಂದ ಕೂಡಿ ರುವ ಧರ್ಮಸಭೆಯವರು ಈ ಶಾಸನಕ್ಕೆ ವಿರೋಧವಾಗಿ ಮತ್ತೊಂದು ವಿಜ್ಞಾ ಪನಪತ್ರವನ್ನು ಬರೆದು ಒಪ್ಪಿಸಲು ಪ್ರಯತ್ನಿಸುತ್ತಿದ್ದರು. ಅವರ ಅದೃಷ್ಟವಶದಿಂದ ಆ ವರ್ಷ ಆ ಪಟ್ಟಣದ ಪ್ರಜೆಗಳ ಪರವಾಗಿ 11 ಬೀಧೀ ” ಎಂಬ ಯರೋತ್ಸರ್ಯ ಪ್ರತಿನಿಧಿ (Aರೀಫ್) ಯಾಗಿ ರಲು ತಟಸ್ಥವಾಯಿತು. ಆತನು ಇವರ ಜ್ಞಾನಪತ್ರವನ್ನು ಬರೆಯಲಿಕ್ಕೆ ಆವಶ್ಯಕವಾದ ವ್ಯವಹಾರಿಕ ವಿಷಯವನ್ನು ಕೊಟ್ಟು ಸಹಾಯಮಾಡಿದನು. ಈತನೂ ಹಿಂದೆ ಹೇಳಿದಂತೆ ಹಿಂದುಗಳು ಪವಿತ್ರಕಾರವೆಂದು ತಿಳಿದಿರುವ ಮತಾಚಾರಗಳಲ್ಲಿ ಕೈ ಹಾಕಬಾರದೆಂದು ವಾದಿ ಸುವ ಸ್ವಭಾವವುಳ್ಳ ಮತ್ತಿಬ್ಬರು ಯೂರೋಪಿರ್ಯರೂ ಹೊರತು ಉಳಿದ ಕಲ್ಕತ್ತೆಯಲ್ಲಿದ್ದ ಬ್ಯಾರಿಸ್ಟರುಗಳಾಗಿಯೂ ನ್ಯಾಯವಾದಿಗಳಾಗಿಯೂ ಇರುವ ಆಂಗ್ಲಯರೊಬ್ಬರಾದರೂ ಇ ವರಿಗೆ ಸಹಾಯಕರವಾಗಿರಲಿಲ್ಲ. ತನ್ನ ಬಿನ್ನವತ್ತಳೆಯಲ್ಲಿ ಸಹಿಮಾಡುವುದಕ್ಕೂ, ರಾಮಮೋಹನನ ಕೃತಜ್ಞತಾ ಪತ್ರದಲ್ಲಿ ಯಾರೂ ರುಜು ಮಾಡದೆ ಇರುವುದಕ್ಕೂ ದೊಡ್ಡ ದೊಡ್ಡ ಪ್ರಯತ್ನಗಳು ಮಾಡ ಲ್ಪಡುತ್ತಲಿದ್ದುವು. ಆ ಕಾಲದ ಗದ್ದಲಗಳನ್ನು ಪ್ರತ್ಯಕ್ಷವಾಗಿ ನೋಡಿದ ಒಬ್ಬ ಇಂಗ್ಲಿಷ್ ಗ್ರಂಥಕರ್ತನು ಒಂದು ಕಡೆಯಲ್ಲಿ « ಕೆಲವು ವಾರಗಳ ತನಕ ಕಲ್ಕತ್ತೆಯ ಪುರನಿವಾಸಿಗಳ ಗುಂಪಿನಲ್ಲಿ ಉಂಟಾದ ಸಹಗಮನ ನಿಷೇಧಶಾಸನದ ಖಂಡನೆಯನ್ನು ಕುರಿತ ಕಳವಳಗಳ ಇಂಗ್ಲಿಷ್‌ ರಾಜ್ಯದಲ್ಲಿ ಯಾವದಾದರೂ ರಾಜ್ಯಾಂಗದ ಚರ್ಚೆಯು ಸಂಭವಿಸಿದಾಗ ಉಂಟಾ ಗುವ ಕಲ್ಲೋಲಗಳಿಗೆ ಹೋಲಿಸತಕ್ಕದ್ರಗಳಾಗಿದ್ದುವು ' ಎಂದು ಬರೆದಿರುವನು, ರಾಮ ಮೋಹನನು ಜನಸಮೂಹದಿಂದ ಮರ್ಯಾದೆ ಪಡೆದಿರುವ ಪಂಡಿತರನ್ನು ತನ್ನ ಕಡೆಗೆ ಸೇರಿಸಿ ಕೊಳ್ಳಬೇಕೆಂದು ಎಷ್ಟು ಪ್ರಯತ್ನ ಮಾಡಿದರೂ ಪ್ರತಿಕಕ್ಷಿಗಳ ಆರ್ಭಟಕ್ಕೆ ಹೆದರಿ, ಅದುವ ರೆಗೆ ರಾಮಮೋಹನನಿಗೆ ವಾಗ್ದಾನಮಾಡಿದವರು ಸುದಾ ಧರ್ಮಸಭೆಯವರ ವಿಜ್ಞಾಪನ ಪತ್ರಕ್ಕೇನೇ ರುಜುಮಾಡಿದರು ಪ್ರತಿಪಕ್ಷ ಸಂಘದಲ್ಲಿ ಮುಂದಾಳಾಗಿದ್ದವನು ರಾಮಕಮ ಲಸೇನನು, ಇವನು ಇದಕ್ಕೆ ಮುಂಚೆ ಏಳು ವರ್ಷಗಳಿಂದ ಸಹಗಮನವು ಕೂಡದೆಂದು