ಪುಟ:ರಾಣಾ ರಾಜಾಸಿಂಹ.djvu/೧೭೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೩೦] | ಪಂಜರದೊಳಗಿನ ಸಿಂಹದಬಿಡುಗಡೆ ೧೬೩ / 10 1 ೧೧೧ ೧ ೧ ೧೧ 1 1೧ ೧ ೧ 1 1 1 1 1 1 1 1 1 1 1 ತಹದ ಕರಾರ ನಾಮೆಯನ್ನು ಹರಿದುಹಾಕಿದನು. ಪ್ರಾಣವಿರು ವವರೆಗೂ ಚಂಚಲಕುಮಾರಿಯನ್ನು ಅಪಹರಿಸಬೇಕೆಂಬ ನಿಶ್ಚಯವನ್ನು ಪ್ರಕಟಮಾಡಿದನು. ತಹನಾಮೆಯಲ್ಲಿ ಬರೆದ ಕರಾರುಗಳಿಗೆ ಸ್ವಲ್ಪವೂ ಒಪ್ಪ ಕೂಡದೆಂದು ಹೇಳಿ ಯುದ್ಧದ ಸಿದ್ಧತೆಯನ್ನು ಮಾಡತೊಡಗಿದನು - ಇತ್ತ ದಾಯ ಸೂರಿನ ಮಾರ್ಗದಿಂದ ಮೇವಾಡದೊಳಗಿಂದ ಉದೇ ಪುರಕ್ಕೆ ದಿಲೇರಖಾನನ ಸೇನೆಯು ಒರುತ್ತಿರುವುದೆಂದು ಚಾರರು ರಾಜ ಸಿಂಹನಿಗೆ ಹೇಳಿದರು ಇದನ್ನು ಕೇಳಿ ರಾಜಸಿಂಹನು ಬಾದಶಹನ ಕಡೆಗೆ ದೂತನನ್ನು ಕಳಿಸಿದನು ಅದಕ್ಕೆ ಔರಂಗಜೇಬನು-« ನಿಮ್ಮಂಧ ಯಃಕ ಶಿತ ರಾಜನೊಡನೆ ಬಾದಶಹನು ತಹಮಾಡಿಕೊಳ್ಳುವದು ಯೋಗ್ಯವೆ? ಚಂಚಲ ಕುಮಾರಿಯನ್ನು ಸ್ವಾಧೀನ ಮಾಡಿದ ಹೊರ್ತು ನಿಮ್ಮನ್ನು ಕ್ಷಮೆ ಮಾಡಲಿಕ್ಕಿಲ್ಲ.” ಎಂದು ನಿರೋಪ ಕಳಿಸಿದನು ಇದನ್ನು ಕೇಳಿ ರಾಣಾನು : ಖದ ಖದಾ ” ನಕ್ಕು-II ಇನ್ನೂ ನಾನು ಬದುಕಿರುವೆನು. ಏನೂ ಕಾಳಜಿ ಮಾಡಬೇಡ ” ಎಂದು ತನ್ನಷ್ಟಕ್ಕೆ ನುಡಿದನು ರೂಪನಗರದ ರಾಜಕನ್ನೆ ಯ ಹರಣವು ಬಾದಶಹನಿಗೆ ಶಲ್ಯದಂತೆ ಚುಚ್ಚುತ್ತಿತ್ತು ರಾಜಸಿಂಹನೊಡನೆ ಮಾಡಿಕೊಂಡ ಒಪ್ಪಂದವನ್ನು ಅಕ್ಕಿ ಸುವದಿಲ್ಲೆಂದು ಆತನಿಗೆ ತಿಳಿಸಿದಮೇಲೆ ರೂಪನಗರದ ವಿಕ್ರಮಸಿಂಹನಿಗೆ ಒಂದು ಹುಕುಮು ಕಳಿಸಿದನು, ಅದರೊಳಗೆ ನಿಮ್ಮ ಕನ್ನೆ ಯು ಈ ವರೆಗೂ ಇತ್ತ ಕಡೆಗೆ ಬರಲಿಲ್ಲ, ಆದ್ದರಿಂದ ಆಕೆಯನ್ನು ಬೇಗನೆ ಇತ್ತ ಕಡೆಗೆ ಕಳಿಸತಕ್ಕದು, ಇಲ್ಲದಿದ್ದರೆ ರೂಪನಗರವು' ಉಳಿಯಲಿಕ್ಕಿಲ್ಲ ? ಹೀಗೆ ಬರೆದಿತ್ತು, ತಂದೆಯು ಹಟ ಹಿಡಿದರೆ ಮಗಳು ತನ್ನಿಂದ ತಾನೇ ದಾರಿಗೆ ಬರುವಳೆಂದು ಬಾದಶಹನು ತಿಳಿದಿದ್ದನು , ಬಾದಶಹನ ಹುಕುಮು ಮುಟ್ಟಿದ ಕೂಡಲೆ ವಿಕ್ರಮ ಸಿಂಹನು : ಎರಡುಸಾವಿರ ಸೇನಾ ಜನ ರನ್ನು ಕರಕೊಂಡು ತಮ್ಮ ಸೇವೆಗೆ ಹಾಜರಾಗುತ್ತೇನೆಂದು '. ನಿರೋಸ ಕಳಿಸಿದನು