ಪುಟ:ರಾಯಚೂರು ವಿಜಯ ಭಾಗ ೧ .djvu/೧೭೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ರಾಯರು ವಿಜಯ ೯ ಬ ಈು. ಒಬ್ಬ ಸಾಮಾನ್ಯನಾದ ಮಹಮ್ಮದೀಯನ ಮಗಳನ್ನು ಮದುವೆಯಾಗಿದ್ದನು. ಇವನು ತನಗಿರುವ ಕುಂದನ್ನು ಒಬ್ಬಳು ಹೆಸರುವಾಸಿಯಾದ ಹಿಂದೂ ಸ್ತ್ರೀಯನ್ನು ಮದುವೆಯಾಗುವ್ರದರಿಂದ ಕಳೆದುಕೊಳ್ಳಬೇಕೆಂದು ನಿರ್ಧರಿಸಿ ಕೊಂಡಿದ್ದನು. ಒಂದಾನೊಂದು ದಿನ ತೋಫಖಾನನು ತನ್ನ ಸುಸಜ್ಜಿತವಾದ ಭವನದಲ್ಲಿ ಕುಳಿತುಕೊಂಡು ತನಗಿರುವ ಕುಂದು ಯಾವಾಗ ಕಳೆದುಹೋ ಗುವುದೋ ಎಂದು ಯೋಚಿಸಿಕೊಳ್ಳುತ್ತಿದ್ದನು. ಆ ಸಮಯಕ್ಕೆ ಸರಿ ಯಾಗಿ ದ್ವಾರಪಾಲಕನೊಬ್ಬನ ಬಂದು “ ರಾಮಯಮಂತ್ರಿ ಯರ್ವು ಬಂದಿ ರುವರು. ಅಪ್ಪಣೆಯಾದರೆ, ಕರೆತರುವೆನು ” ಎಂದು ಹೇಳಲು, 14 ಆಗ ಬಹುದು ಎಂದನು. ರಾಮಯಮಂತ್ರಿಯು ಬಂದು ಉಚಿತಾಸೀನನಾದ ತರುವಾಯ, < ರಾಮಯಮಂತ್ರಿಗಳ ... ನೀವು ಹೋದ ಕೆಲಸ ಎಷ್ಟು ಮಟ್ಟಿಗೆ ಕೈಗೂಡಿತು ? ” ಎಂದು ಕೇಳಿದನು. ರಾಮಯ-“ ಸ್ಥಿರಸಂಕಲ್ಪನಾಗಿ, ರಾಮಯಮಂತ್ರಿಯು ಕೆಲಸಕ್ಕೆ ತೊಡಗಿದಾಗ ಸಫಲವಾಗದ ಕಾಗ್ಯವೂ ಇರುವುದೆ ? ?” ತೋಫ‌ರ್ಖಾ- ಶಾಬಾಸ", ಮಂತ್ರಿಷ್ಟರೇ ! ನಿಮ್ಮ ಸಾಮ ರ್ಥವೇ ಸಾಮರ್ಥ್ಯ ನಿಮ್ಮ ಪ್ರಜ್ಞಾವಾತ೦ದ ಮುಂದೆ ಮಿಕ್ಕವರ ಉಪಾಯಗಳೆಲ್ಲವೊ ತೂಲರಾಶಿಯಂತೆಯೆ.. ಆ `ಅಲಾಮವು ಯಾವ ಸ್ಥಳವನ್ನು ಅಲಂಕಾರಭೂತವನ್ನಾಗಿ ಮಾಡಿರುವುದು ? ಎಂದು ಅಧಿಕ ಸಂತೋಷದಿಂದ ಪ್ರಶ್ನಿಸಿದನು ರಾಮಯ-“ ಆ ಸುಂದರಿಯು ತನ್ನ ಒಬ್ಬಳು ಸಖಿಯೊಡನೆ ತಮ್ಮ ದುರ್ಗದಲ್ಲಿಯೇ ಇರುವ ಧಮ್ಮಸತ್ರದಲ್ಲಿ ರುವಳು, ಈ ಶುಭವರಮಾನ ವನ್ನು ತಮಗೆ ತಿಳಿಸಬೇಕೆಂದೇ ಬಂದೆನು.” - @ ಆ ಣ