ಪುಟ:ರಾಯಚೂರು ವಿಜಯ ಭಾಗ ೧ .djvu/೨೯೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ರಾಯರು ವಿಜಯ ೧೫ ಜಗ್ಗದೆ ಹೋರಾಡುತ್ತಿದ್ದರು. ಅಷ್ಟರಲ್ಲಿ ರಾಯರ ಅಪ್ಪಣೆಯ ಮೇರೆಗೆ ರೆಕ್ಕೆಯ ಭಾಗದಲ್ಲಿದ್ದ ಸೈನ್ಯವು ಮುಂದಕ್ಕೆ ನುಗ್ಗಿ, ಶತ್ರುಗಳಮೇಲೆ ಬಿದ್ದರು, ಇದನ್ನು ಕಂಡೇ ಶತ್ರುಸೈನ್ಯವು ಹೆಚ್ಚಾಗಿದೆಯೆಂದು ಮಹಮ್ಮ ದೀಯರು ನಿರ್ಧರಿಸಿದರು, ಹೀಗೆ ಮೂರು ದಿಕ್ಕುಗಳಲ್ಲಿ ಗೋಡೆಯ ಹಾಗೆ ಇದ್ದ ಸೈನ್ಯವನ್ನು ದಾಟಿ ಹೋಗುವುದಕ್ಕೆ ಆದಿಲ್‌ಪಹನ ಆಶ್ರಿತ ಸೈನ್ಯಕ್ಕೆ ಅವಕಾಶ ಸಿಕ್ಕಲಿಲ್ಲ. ರಾಯರ ಸೈನ್ಯದಲ್ಲಿದ್ದ ಆನೆಗಳ ಸಾಲು ಆಶ್ಚಿಕ ಸೈನಿಕರ ಕಾಲಾಟವನ್ನು ನಿಲ್ಲಿಸಿಬಿಟ್ಟಿತು. ಆದುದರಿಂದ, ತನ್ನ ಮುಖ್ಯ ಬಲವಾದ ಆಕ್ಸಿಕರ ಆಟವು ನಿಂತುಹೋದುದನ್ನು ಬಿಜಾಪು ರದ ದೊರೆಯು ನೋಡಿ, ತನ್ನ ಪದಾತಿವರ್ಗವನ್ನೂ ಹಸ್ತಿ ಬಲವನ್ನೂ, ಹಿಂದಕ್ಕೆ ಕರೆಯಿಸಿಕೊಂಡು ರಾಸುರ ಸೈನ್ಯದ ಹಿಂಭಾಗದ ಮೇಲೆ ಬೀಳು ವಂತೆ ಆಜ್ಞಾಪಿಸಿದನು. ಸಾಧಾರಣವಾಗಿ ಹಿಂಭಾಗದಲ್ಲಿ ಅಶಕ್ತರಿರುವ ರೆಂದು ಭಾವಿಸಿ ಅವರನ್ನು ಸುಲಭವಾಗಿ ಜಯಿಸಿಬಿಟ್ಟರೆ ತನ್ನ ಸೈನ್ಯದವ ರಿಗೆ ಆ ಜಯದಿಂದ ಉತ್ಸಾಹ ಹೆಚ್ಚುವುದೆಂದೂ ಶತ್ರುಗಳು ಧೈರಗುಂದುವ ರಂದೂ ಊಹಿಸಿ ಆದಿಲ'ಗಹನು ಹಾಗೆ ಅಪ್ರಣೆ ಮಾಡಿದ್ದನು. ಆದರೆ ಆ ಭಾಗದಲ್ಲಿದ್ದ ವೀರರ ಹೊಡೆತವನ್ನು ತಾಳಲಾರದೆ ಮಹಮ್ಮದೀಯ ಸೈನ್ಯವು ಹಿಂದಕ್ಕೆ ಬರುತ್ತಿತ್ತು. ಆದಿಲ್‌ಪಹನ ಪ್ರೋತ್ಸಾಹಗಳು ಈ ಸಮಯದಲ್ಲಿ ಪ್ರಯೋಜನಕರವಾಗಲಿಲ್ಲ. ಸ್ವಲ್ಪ ಹೊತ್ತಿನಲ್ಲಿ ಮಹಮ್ಮ ದೀಯ ಸೈನಿಕರಲ್ಲಿ ತುಳಿದಾಟವು ಹೆಜ್ಜೆತು. ಆದರೂ ಮಹಮ್ಮದೀಯರ ಆಶಿಕ ಸೈನ್ಯವೆಲ್ಲಾ ಒಂದುಕಡೆ ಇದ್ದುದರಿಂದ, ಆ ಸೈನ್ಯವು ರಾಯರ ಸೇನೆ ಯನ್ನು ಹಿಂದಕ್ಕೆ ನೂಕಿತು. ಹೀಗೆ ಹಿಂದಕ್ಕೆ ಬರುತ್ತಿದ್ದ ತಮ್ಮ ಸೈನ್ಯದವ ರನ್ನು ನೋಡಿ ರಾಯರು, ಹಿಮ್ಮೆಟ್ಟುವವರನ್ನು ಕೊಲ್ಲಿ ಸಿಬಿಡುವೆವೆಂದು ಸಾರಿಸಲು, ಅವರು ಧೈರ್ಯದಿಂದ ಮಹಮ್ಮದೀಯರ ಮೇಲೆಬಿದ್ದ ರು. ಇದೇ ಕಾಲದಲ್ಲೇ ಅವರನ್ನು ಪ್ರೋತ್ಸಾಹಿಸುವುದಕ್ಕಾಗಿ ರಾಯರು ತಮ್ಮ