ಈ ಪುಟವನ್ನು ಪ್ರಕಟಿಸಲಾಗಿದೆ
೨೪
ರೂಲ್ಸ್ ಮೇಷ್ಟ್ರು
ಅಮಲ್ದಾರ್ರು
ಇದು ಪಂಚಾಯ್ತಿ ಕಟ್ಟಡ. ಇಲ್ಲಿ ಸ್ಕೂಲ್ಗೀಲ್ ಮಾಡಕೂಡದು.
ಉಪಾಧ್ಯಾಯ
ಅಪ್ಪಣೆ ಮಹಾಸ್ವಾಮಿ. ಗ್ರಾಮಸ್ಥರು ಹೇಳಿದರು. ನಾನು ಮಾಡ್ತಿದ್ದೇನೆ. ಬೇರೆ ಕಟ್ಟಡ ಕಟ್ಟಿಸಿಕೊಡಿ ಎಂತ ಎಷ್ಟು ತಗಾದೆ ಕೊಟ್ಟರೂ ಕಟ್ಟಿಸಿಲ್ಲ. ' ಇಲ್ಲೇ ಮಾಡಿ ಮೇಷ್ಟ್ರೇ ' ಅಂದರು. ನಾಳೆಯಿಂದ ಸ್ಕೂಲು ಎಲ್ಲಿ ಮಾಡಲಿ ಮಹಾಸ್ವಾಮಿ ?
ಅಮಲ್ದಾರ್ರು
ಎಲ್ಲಾದರೂ ಮಾಡು, ಮರದ ಕೆಳಗೆ ಮಾಡು.
ಉಪಾಧ್ಯಾಯ
ಬೆಂಚು, ಬೋರ್ಡು, ಸಾಮಾನು ಎಲ್ಲಿಟ್ಟು ಕೊಳ್ಳಲಿ ಸ್ವಾಮಿ ?
ಅಮಲ್ದಾರ್ರು
ತಲೇಮೇಲಿಟ್ಟುಕೋ.
ಉಪಾಧ್ಯಾಯ
ಮಹಾಸ್ವಾಮಿ, ನಾನು ಸರ್ಕಾರಿ ನೌಕರ. ರೂಲ್ಸು ಇದ್ದ ಹಾಗೆ ನಾನು ಚಾಕರಿ ಮಾಡ್ತೇನೆ. ನನ್ನಮೇಲೆ ಕೋಪ ಮಾಡ್ತೀರಿ. ನನಗೇನು ಸ್ವಾಮಿ, ಎಲ್ಲಿ ಪಾಠ ಮಾಡು ಅಂದರೆ ಅಲ್ಲಿ ಮಾಡ್ತೇನೆ.