ಈ ಪುಟವನ್ನು ಪ್ರಕಟಿಸಲಾಗಿದೆ
ರೂಲ್ಸ್ ಮೇಷ್ಟ್ರು
೪೫
ಈರಣ್ಣಗೌಡ
ನಿನ್ನಿಸ್ಕೋಲ್ ನೀನೆ ಮಡಕ್ಕೋ.
( ಹೊರಡುವುದರಲ್ಲಿರುವನು)
೧ನೇ ಗೌಡ
ಈರಣ್ಣ, ಅಂಗೆಲ್ಲ ಹೋಗ್ಬೇಡ ಬಾ. ಸ್ವಾಮೇರತಾವ ಇಸ್ಕೋಲ್ ಕಟ್ಟಡ ಇತ್ತರ್ಥ ಮಾಡೋಣ.
ಈರಣ್ಣಗೌಡ
ನಿಮ್ಮ ಪಾಳೇಗಾರ ಬಂದವ್ನಲ್ಲ. ನಂಗ್ಯಾಕ ಇನ್ ಮಾತು, ಗದ್ದೆ ಕಡೆಗೆ ಹೋತಿವ್ನಿ.
( ಹೊರಟುಹೋಗುವನು )
ರಾಮಣ್ಣ ಗೌಡ
ಸ್ವಾಮಿ, ಕಟ್ಟಡ ಕೆಲಸಕ್ಕೆ ಸಾಮಾನೆಲ್ಲ ಜಮಾಯಿಸಿದ್ದೇವೆ. ಈಗ ಕಣಗಾಲ. ರೈತರು ಕೆಲಸಕ್ಕೆ ಬರೋದಿಲ್ಲ. ಈ ವರ್ಷ ಎಂಗಾದರೂ ಕಟ್ಸಿಕೊಡ್ತೇನೆ, ಸ್ವಲ್ಪ ಸುಧಾರಿಸಿ. ಖಂಡಿತ ಈ ವರ್ಷ ನಿಲ್ಲಿಸೋದಿಲ್ಲ. ಮೇಸ್ಟ್ರೆ ! ಇನ್ಚ್ಪೆಟ್ರನ್ನ ಅಂಗೇ ಕಳಿಸಬೇಡ್ರಿ. ನಮ್ಮ ಹಳ್ಳಿಗೆ ಬಂದು ಅಂಗೇ ಹೋಗೋದು ಚೆನ್ನಾಗಿಲ್ಲ.
( ಉಪಾಧ್ಯಾಯರು ಹೋಗುವರು)