ಈ ಪುಟವನ್ನು ಪ್ರಕಟಿಸಲಾಗಿದೆ
೪೬
ರೂಲ್ಸ್ ಮೇಷ್ಟ್ರು
ಇನ್ ಸ್ಪೆಕ್ಟರ್
ಇಲ್ಲ ರಾಮಣ್ಣಗೌಡರೇ, ಹೊತ್ತಾಗಿ ಹೋಯ್ತು. ಅವೆಲ್ಲ ಏನೂ ಬೇಡ. ನಾನು ಹೋಗುತ್ತೇನೆ.
ರಾಮಣ್ಣಗೌಡ
ಬೇಡ ಸ್ವಾಮಿ, ಮದ್ಯಾನ್ನ ಆಗೋಯ್ತು. ದಣಿಕೊಂಡು ಬಂದಿದ್ದಿರಿ ಅಳ್ಳೀಗೆ. ಎಲಾ, ಎಳನೀರು ತಾ ಹೋಗು, ಬಿರೀನ ಬಾ. ಸ್ವಾಮಿ, ಮೇಷ್ಟ್ರು ಕಷ್ಟಪಟ್ಟು ಕೆಲಸ ಮಾಡ್ತಿದ್ದಾರೆ,ಅವರಿಗೇನಾದರೂ ಪರ್ ಮೋಷನ್ ಕೊಡಿಸಿ ಸ್ವಾಮಿ.
ಇನ್ ಸ್ಪೆಕ್ಟರ್
ಕಾಮಣ್ಣಗೌಡರೇ, ಈಗ ಸರ್ಕಾರದವರು ಮೇಷ್ಟ್ರ ಸಂಬಳಗಳನ್ನೆಲ್ಲ ಹೆಚ್ಚಿಸಿದ್ದಾರೆ. ಆರ್ಡರ್ ಬಂದಿದೆ. ಲಾಗಾಯ್ತು ಹೊಸ ಗ್ರೇಡುಗಳು ಜಾರಿಗೆ ಬರುತ್ತವೆ. ಸರ್ಕಾರದವರು ಲಕ್ಷ ರೂಪಾಯಿ ಹೆಚ್ಚಾಗಿ ಮಂಜೂರು ಮಾಡಿದ್ದಾರೆ.
ರಾಮಣ್ಣ ಗೌಡ
ಬಹಳ ಸಂತೋಷ ಸ್ವಾಮಿ. ಮುಖ್ಯ ಪೈಮರಿ ಸ್ಕೂಲು ಉದ್ಧಾರ ಆಗಬೇಕು. ಮೇಷ್ಟ್ರರಿಗೆ ಚೆನ್ನಾಗಿ ಸಂಬಳ ಕೊಡಬೇಕು, ಅವರೂನೂವೆ ಚೆನ್ನಾಗಿ ಕೆಲಸಮಾಡ್ತಾ ಇದ್ದಾರೆ ಸ್ವಾಮಿ.
ಇನ್ ಸ್ಪೆಕ್ಟರ್
ಬರೀ ಮೇಷ್ಟರಿಂದ ಏನಾಗುತ್ತೆ ರಾಮಣ್ಣ ಗೌಡರೇ. ಗ್ರಾಮಸ್ಥರು ಮುತುವರ್ಜಿ ವಹಿಸಬೇಕು. ಪಂಚಾಯತಿಯವರು