ಪುಟ:ವೈಶಾಖ.pdf/೧೪೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಸಮಗ್ರ ಕಾದಂಬರಿಗಳು ೧೨೫ bc ಒಂದಿದ್ರೆ ಗೆಜ್ಜುಗಂಗೆ ಈ ಪರ್ಪಂಚದಾಗೆ ಬ್ಯಾರೆ ಯಾವೂ ಬ್ಯಾಡ. ನೀರು ಕಂಡ ಕಡೆ, ಅದರೊಳೀಕೆ ಬಿದ್ದು ಈಜು ವೊಡಿಯೊ ತೆವಲು. ಈ ತೆವಲು ಕಂಡೇ ನಮ್ಮೂರಿನೋರು” ಇವನೆಲ್ಲೊ ಇಂದಿನ ಜನ್ಮದಲ್ಲಿ ಎಮ್ಮೆ ಕ್ವಾನ ಆಗಿರಬೇಕು!” ಅಂತಿದ್ರು.... ಬೇಕಾರೆ-ಮೂಢಲ್ಲಿ ಸ್ವಾಮಿ ಉದಯವಾಗಿ, ಸಂದೆ ಕತ್ತಲಲ್ಲಿ ಕರಗೋಗುಂಟ ನೀರಿನಲ್ಲಿ ಬಿದ್ದಿರಿಯೇನ್ದ ಅಂದರೆ, ಓ-ಸೈ, ಬಿದ್ದಂಡೇ ಇತ್ತೀನಿ, ಅನ್ನಾ ಬೂಪ!... ಈಚೆ ದಡದಲ್ಲಿ ಮೂರು ನಾಕು ಜನ, ಆಚೆ ದಡದಲ್ಲಿ ಏಡೊ ಮೂರೂ ಆಳು ನ್ಯಾಡಿದ್ದಂಗೇಯ ಅಂಗಿ ಕಳುಚಿ ದಡದ ಮರಳಿನಲ್ಲಿ ಎಸ್ಸು, ಹೊಳೆ ನೀರಿಗೆ ದುಢುಂದೆ ಬಿದ್ದಿದ್ದೆ ಬಿದ್ದಿದ್ದು... ಇವನು ಈಜ ವೊಡೆಯೊ ಕುಸಾಲು ಕ್ವಾಡ್ರ ಏಡೂ ಕಡೆಗಿದ್ದ ಜನ, - “ಯಾವೋನಪ್ಪ ಇವನು? -ಈಟು ಸೊಕ್ಕಾಗಿ ಈಜ ವೋಡೀತಾ ಅವ್ವಲ್ಲ?”... ಅಂತ ಬೆರುಗಾಗಿ ಮೂಗಿನ ಮ್ಯಾಲೆ ಬೆಳ್ಳಿಟ್ಟುಗಂಡು ಗೊಂಬೆಗಳ ತರ ನಿಂತಿದ್ರಂತೆ.... ಅರ್ದ ಮುಕ್ಕಾಲು ಗಂಟೆ ಸ್ವಚ್ಚಾಗಿ ಈಜುತಾ ಇದ್ದೋನು, ಮೀನಿನಂಗೆ ನೀರಿನಲ್ಲಿ ಇಲ್ಲಿ ಮುಳುಗಿ ಅಲ್ಲಿದ್ದು, ಮುನಾ ಮುಳುಗಿ ವಸಿ ಸಮಯ ಯಲ್ಲೂ ಕಾಣಿಸ್ತ ಇದ್ದಾಗ, ಆಚೆ ಈಚೆ ದಡದ ಜನ ಮುಳುಗೋದೊ ಯೇನೊ ಅಂತ ಗಾಬರಿ ಆಗಿದ್ರಂತೆ, ದೂರದಲ್ಲಿ ಮುನಾ ನೀರಿನಿಂದ ಮ್ಯಾಕ್ಕೆ ಕಾನುಗ್ಗ ಅವನ ತಲೆ ಕಂಡು ಅವಿಗೆ ಸಮಾಧಾನ ಆಯ್ತಂತೆ... ಮತ್ತೆ ಈ ಮಾರಾಯ ನೀರಿನಲ್ಲಿಯೆನೇನೊ ಕಸರತ್ತು ಮಾಡಿದ್ದು, ವಸಿ ವೊತ್ತು, ಸತ್ತ ಹೆಣದಂಗೆ ಅಂಗಾತ್ತ ನೀರಿನ ಮ್ಯಲೆ ತೇಲಿದ್ದನಂತೆ... ಕಡೀಕೆ ಮುನಾ ಮಕಾಡೆ ಆಗಿ, ಕಯ್ಯಲ್ಲಿ ನೀರು ಬಡೀತ ಜೋರು ಜೋಗ್ನಿಂದ ಈಜಕ್ಕೆ ಸುರುಮಾಡಿದಂತೆ... ಇಂಗೆ ಕುಸಾಮತ್ನಿಂದ ಈಜುತಾ ಈಜುತಾ ಮುಂದು ಮುಂಬೈ ವೋಯ್ತಾ ಇದ್ದೋನಿಗೆ ಇದ್ದಕ್ಕಿದ್ದಂಗೆ ಏಡೂ ದಡದ ಕಡೆಗಿದ್ದ ಮಂದಿ ಕೂಗಿಕಂಡ್ರಂತೆ: “ಅದು ನಿರಿನ ಮಡು, ಅಲ್ಲಿ ಸೆಳುತ ಅದೆ. ಆ ಕಡೀಕೆ ವೋಗಬ್ಯಾಡ...” ಅವರು ಕೂಗು ಆಕದ್ದು ಅಣ್ಣಂಗೆ ಕ್ಯಾಳಿತೊ, ಇಲ್ಲವೊ... ಗಾಚಾರ, ಅಂಗೇ ಮಯ್ಯಮ್ಯಾಲೆ ಗ್ಯಾನ ಇಲ್ಲದೇಯ ಈಜುತ ಈಜುತ ಮಡು ಇದ್ದ ಜಾಕ್ಕೆ ವೋಗಿ, ಅಲ್ಲಿ ನೀರಿನ ಸೆಳುತಕ್ಕೆ ಸಿಕ್ಕಿ, ಅದು ಅವನ್ನ ವಳೀಕೆ ಎಳಕಂಡತಂತೆ. ಜಾಗ ಸ್ವಸದು. ಅಣ್ಣಂಗೆ ತಿಳೀನಿಲ್ಲ. ಎಂತಾ ಸುಳಿಗೆ ಸಿಕ್ಕಿದ್ರೂ ಪಾರಾಗೊ ಗಂಡೇಯ. ತಟ್ಟನೆ ಕಾಲ ಇಡುದು ಎಳದಂಗಾಗಿರಬೇಕು. ವಳಿಕೆ ವೊಂಟಡೋಗಿರಬೇಕು...