ಪುಟ:ಶಂಕರ ಕಥಾಸಾರ.djvu/೩೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ



ಶಂಕರಕಥಾಸಾರ

೧೯

ಆ ಸನಂದನನ ಹಸ್ತಗಳಲ್ಲಿ ಶಂಖಚಕ್ರರೇಖೆಗಳೂ, ಹೃದಯದಲ್ಲಿ ವನಮಾ
ಲಾವೈಜಯಂತೀ ರೇಖೆಗಳೂ, ಪಾದಗಳಲ್ಲಿ ಪದ್ಮರೇಖೆಗಳೂ, ಇದ್ದವು. ಆತನ ವಕ್ಷ
ಸ್ಥಲವು ವಿಶಾಲವಾಗಿದ್ದಿತು; ಆತನು ಆಜಾನುಬಾಹುವಾಗಿದ್ದನು; ನೇತ್ರಗಳು ಪದ್ಮಗಳಂತೆ
ವಿಸ್ತಾರವಾಗಿದ್ದವು; ಈ ಮೇಲಿನ ಲಕ್ಷಣಗಳಿಂದ ಅವನನ್ನು ವಿಷ್ಣಂಶಸಂಭೂತನೆನ್ನ
ಬಹುದಾಗಿದ್ದಿತು.
ಆಚಾರ್ಯರು ಅಲ್ಲಿರುವಾಗ ಪ್ರತಿದಿನವೂ ಒಂದೊಂದು ದೇವರುಗಳನ್ನು ಸ್ತುತಿ
ಸುತ್ತಾ, ಅನೇಕಸಾವಿರ ಸ್ತೋತ್ರಗ್ರಂಥಗಳನ್ನೂ ,ಆತ್ಮಬೋಧ, ಅಪರೋಕ್ಷಾನುಭೂತಿ,
ಜ್ಞಾನವಾಸಿಷ್ಠ ಸಾರೋದ್ದಾರೇತ್ಯಾದ್ಯನೇಕಪ್ರಕರಣಗ್ರಂಥಗಳನ್ನೂ ರಚಿಸಿ, ಶಿಷ್ಯರಿಗೆ
ಕೊಡುತ್ತಾ, ದರ್ಶನಮಾತ್ರದಿಂದ ಕಾಶೀ ಜನಗಳ ಕಷ್ಟ ನಿವಾರಣೆಯಂಮಾಡುತ್ತಾ
ದುಷ್ಟನಿಗ್ರಹಶಿಷ್ಟಪರಿ ಪಾಲನಾಚಾರ್ಯ ರೆನಿಸಿಕೊಂಡು ವರ್ಣಾಶ್ರಮಧರ್ಮಗಳಂ ನ್ಯಾಯ
ದಿಂದ ಪರಿಪಾಲಿಸುತ್ತಿದ್ದರು.
ಶಂಕರರು ಅಲ್ಲಿಗೆ ಬಂದ ತೊಂಭತ್ತು ಸಹಸ್ರಮಂದಿ ದ್ವೈತಿಗಳನ್ನು ನಾಶಮಾಡಿ
ಗೋವಿಂದಭಗವತ್ಪಾದರು ತಮಗೆ ಕೊಟ್ಟಿದ್ದ ಶ್ರೀಚಂದ್ರಮೌಳೀಶ್ವರಲಿಂಗವನ್ನೂ
ರತ್ನಗರ್ಭಗಣಪತಿಯನ್ನೂ, ಶ್ರೀಚಕ್ರ, ನವಗ್ರಹಯಂತ್ರ, ನೃಸಿಂಹಸಾಲಗ್ರಾಮಾದಿಗ,
ಳನ್ನು ಸನಂದನರಿಗೆ ಪೂಜೆಮಾಡಿಕೊಂಡಿರುವಂತೆ ಕೊಡಲು ಅವರು ಅವುಗಳನ್ನು ಪೂಜಿ
ಸುತ್ತಾ ಜನರಿಗೆ ತನ್ಮಹಿಮೆಗಳಂ ಪೇಳುತ್ತಾ ಧರ್ಮರತರಾಗಿದ್ದರು.
ಒಂದುದಿನ ಶಂಕರಾಚಾರ್ಯರು, ಶಿಷ್ಯಸಹಿತರಾಗಿ, ಗಂಗಾಸ್ನಾನಕ್ಕೆ ಹೋಗಿಬರು
ತಿರುವಾಗ, ದಾರಿಯಲ್ಲಿ, ಓರ್ವಚಂದಾಲನು, ಮದ್ಯ ಘಟವನ್ನು ತಲೆಯಮೇಲೆ ಹೊತ್ತು
ಕೊಂಡು ನಾಲ್ಕು ನಾಯಿಗಳನ್ನು ಹಿಡಿದುಕೊಂಡೆದುರಿಗೆ ಬರುತ್ತಿರಲು, ಆಚಾರ್ಯರು,
'ಗಚ್ಛ ಗಚ್ಛ' ಎಂದು ಕೈಸನ್ನೆ ಮಾಡಲಾಗಿ, ಆ ಚಂಡಾಲನು ಅಲ್ಲಿಯೇ ನಿಂತು,"ಓ ಯತಿ
ವರನೇ! ಅನ್ನಮಯವಾದ ಶರೀರದ ಸುಮೀಪದಿಂದ ಅನ್ನ ಮಯವಾದ ಮತ್ತೊಂದು
ಶರೀರವನ್ನು ದೂರಹೋಗಹೇಳುತ್ತೀಯೋ ? ಒಂದೇಜಾತಿಯಲ್ಲಿ ಭೇದವು ಇಬ್ಬರಿಗೂ
ಯುಕ್ತವಲ್ಲವು. ಪರಮಾರ್ಥವಾದ ಅದ್ವೈತವನ್ನು ವಿಚಾರಿಸುವ ಪರಮಹಂಸರಿಗೆ
ಈ ಭೇದಗಣನೆಯು, ಸತ್ಯವಲ್ಲವಷ್ಟೆ? ಓರ್ವ ಸೂರ್ಯನೇ ಗಂಗೆಯಲ್ಲೂ, ಹೊಲಗೇ
ರಿಯ ಬಚ್ಚಲಿನಲ್ಲೂ ಪ್ರತಿಬಿಂಬಿಸಿ ಅನೇಕವಾಗಿ ತೋರಿದ ಮಾತ್ರಕ್ಕೆ ಅನೇಕ ಸೂರ್ಯ
ರು ದಿಟರಾಗಿಹರೋ?” ಎನ್ನಲು, ಆಚಾರ್ಯರು ಅವನ ವಾಕ್ಯಗಳಿಂದ ಸಂತುಷ್ಟ
ರಾಗಿ, "ಆಹಾ ! ವೇದಾಂತರಹಸ್ಯವು ಈ ಚಂಡಾಲನಿಗೆ ಹೇಗೆ ತಿಳಿಯುವುದು ! ಶರೀ
ರಕ್ಕಿಂತ ಜ್ಞಾನವೇ ಪ್ರಧಾನವಾದ್ದರಿಂದ ಇವನು ಪರಬ್ರಹ್ಮ ಸ್ವರೂಪವೇ ಸರಿ" ಎಂದು