ಶಿವಪ್ರಭುವಿನ ಪುಣ್ಯ, wwwx ಅದಕ್ಕೆ ಸಂಭಾಜಿಯು-ಬಾದಶಹಾ ಅಲಮಗೇರ, ನೀನು ನಾಲಿಗೆಯನ್ನು ಕೊಯ್ದು ಕಣ ನ್ನು ಕಿತ್ತಿಸು, ಮೈದೊಗಲು ಸುಲಿದ್ದು, ಇನ್ನು ಬೇಕಾದದ್ದು ಮಾಡು! ಬ್ರಹ `ಹತ್ಯೆಯಿಂದ ದೂಷಿತನಾದ ಈ ಅಧಮನಿಗೆ, ಪಾತಿವ್ರತ್ಯ ಭಂಗಮಾಡಿದ ಈ ಚಾಂಡ ಲನಿಗೆ ಮಂತ್ರ ಧರ್ಮದ ಮೈಲಿಗೆಯಾದರೂ ಆಗಬೇಡ, ನಡೆಯಿರಿ, ಮುಳಬ .ಖಾನ, ನಡೆಯಿರಿ! ನಾಯಿಯೂ ಕೂಡ ಆಬಾಸಾಹೇಬರ ಜತೆಯಲ್ಲಿ ಹಾರಿಕೊಂಡಿತು! ಆ ಪಶುವು ಕೂಡ ತನ್ನ ಕೃತಜ್ಞತೆಯನ್ನು ತೋರಿಸಿತು! ಆದರೆ, ಆಬಾಸಾಹೇಬ ಜೈಪುತ್ರನೆನಿಸುವ ನಾನು, ಆಬಾಸಾಹೇಬರು ಜೀವದಿಂದಿರುವಾಗಲೇ ಅವರ ಮೇಲೆ ತಿರುಗಿ ಬಿದ್ದು, ಅವರು ಸತ್ತಮೇಲೆ ಮನಸ್ಸಿಗೆ ಬಂದಂತೆ ಕುಣಿದು, ಅವರ ಹಸಿ ರಿಗೆ ಕುಂದನ್ನುಂಟುಮಾಡಿದೆನು! ಧಿಕ್ಕಾರವು! ನನ್ನ ಜನ್ಮಕ್ಕೆ ಧಿಕ್ಕಾರವು!! ಈ ಮೇರೆಗೆ ತನ್ನನ್ನು ತಿರಸ್ಕರಿಸಿಕೊಳ್ಳುತ್ತ ಸಂಭಾಜಿಯು ಮುಕರ್ಬಖಾನ ನನ್ನು ಕುರಿತು-ಖಾನಸಾಹೇಬ, ನೀವೇ ನನಗೆ ಮಹೋಪಕಾರಿಗಳು, ನಿದೇ ನನಗೆ ಮೋಕ್ಷವನ್ನು ಒದಗಿಸಿಕೊಡುವವರು! ಇಗೋ, ಹಾಕಿರಿ ಕಣ್ಣುಗಳಲ್ಲಿ ಸಲಾಕೆ ಯನ್ನು, ಎಂದು ಕಣ್ಣು ಕೆಕ್ಕರಿಸಿ ಕುಳಿತುಕೊಂಡನು. ಆಗ ಮುಕರ್ಬಖಾನನು ಕಾದ ಕಬ್ಬಿಣದ ಸಲಾಕೆಯನ್ನು ಎಡಗಣ್ಣಲ್ಲಿ ಇರಿಯಲು, ಸಂಭಾಜಿಯ 'ಹಾ! ನನ್ನ ಒಂದು ಕಣ್ಣು ಹೋಯಿತು, ಇನ್ನೊಂದು ಕಣ್ಣು ಹೋಗಿಬಿಟ್ಟರೆ ಪರಸ್ತ್ರೀಯರನ್ನು ಪಾಪದೃಷ್ಟಿಯಿಂದ ನೋಡಿದ ನನ್ನ ಕೆಟ್ಟಕಣ್ಣುಗಳಿಗೆ ಪ್ರಾಯ ಇವು ದೊರೆತಂತಾಗುವದು ! ಜೋತ್ಯಾ, ಜೋತಾ! ಮಹಾರಾಷ್ಟ್ರದೊಳಗಿನ ಕರ್ತೃ ತ್ಯಶಾಲಿಗಳಾದ ಪುರುಷರಿಗೆ ನನ್ನ ಸಂದೇಶವನ್ನು ಹೇಳು ಹೋಗು, ಮಹಾರಾಜರು ನಿಮ್ಮೆಲ್ಲರಿಗೆ ರಾಜ್ಯವನ್ನು ಅರ್ಪಿಸಿರುವರೆಂದು ಹೇಳು ನಡೆ! ನೀವೆಲ್ಲರೂ ಸಾಮೂಹಿಕ ವಾಗಿ ಕಷ್ಟಪಟ್ಟು, ಆ ರಾಜ್ಯವನ್ನು ಸಂಪಾದಿಸಿರುವಿರಿ! ಅದರೆ ಅಹಂಭಾವದ ಸಂಭಾ 'ಜಿಯು ದೈವರೂಪದವರಾದ ನಿಮ್ಮಿಂದ ಆ ರಾಜ್ಯವನ್ನು ಕಸಿದುಕೊಂಡು, ಸ್ವಂತ ದವಿಷಯೋಪಭೋಗಕ್ಕಾಗಿ ಅದನ್ನು ಉಪಯೋಗಿಸಿ, ಈಗ ಪ್ರಾಯಶ್ಚಿತ್ತವನ್ನು ಭೋಗಿಸುವನು! ಆತನ ಅವತಾರ ಸಮಾಪ್ತಿಯು ಆಯಿತೆಂದು ಆಬಾಸಾಹೇಬರ ಅಭಿಮಾನಿಗಳಿಗೆ ನೀನು ಮರೆಯದೆ ಹೇಳು ಹೋಗು! ನನ್ನ ಅವತಾರಸವಾಡು ಸಂಗಡ ನನ್ನ ಲೋಭ ಕ್ರೋಧಗಳ ಪರಿಸಮಾಪ್ತಿಯ ಆಯಿತು! ಜೋತ್ಯಾ, ನಿಮ್ಮ ಸ್ವಾಮಿಯ, ನಿಮ್ಮ ಮಹಾರಾಷ್ಟ್ರಪ್ರಭುವಿನ, ನಿಮ್ಮ ಆರಾಧ್ಯದೈವವಾದ ಶಿವಪ್ರಭ ವಿನ ಜೇಷ ಪುತ್ರನ, ಈ ಅಪಮಾನಕಾರಕವಾದ ಮರಣದ ಘೋರ .ಯಾತನೆಯನ್ನು ಮರಾಟರರೆಚ್ಚು ಹೆಚ್ಚಾಗುವಂತೆ ಹಿಂದೂ ಬಿಡದೆ ಹೇಳು ಹೋಗು! ಇನ್ನು ಮೇಲೆ