ಪುಟ:ಶ್ರೀಮತಿ ಪರಿಣಯಂ.djvu/೧೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶ್ರೀಮತೀಪರಿಣ್ಯಂ (ವಿದೂಷಕನು ಸಂಭ್ರಾಂತನಾಗಿ ಓಡಿಬರುವನು.) ವಿದೂ-ಭರತಾಚಾಯ್ಯಾ ! ಏನು ! ಏನು : ಏನಾಯಿತು ? ಹೀಗೇಕೆ ಕೂಗಿ ಕೊಳ್ಳುವೆ ? ಆಪಾಯವೇನೂ ಇಲ್ಲವಷ್ಟೆ? ಸೂತ್ರ-(ನಗುತ್ತ) ಆರ ಮಾಣವಕಾ ! ಏನಿದು? ನಿಷ್ಕಾರಣವಾಗಿ ನಿನಗೆ ಇಷ್ಟು ಸಂಭ್ರಮವೇಕೆ ? ಏನಾದರೂ ದುಸ್ಸಪ್ರವನ್ನು ಕಂ ಡೆಯೇನು ? ವಿದೂ-ಆಚಾರಾ ! ಅದೇನೂ ಇಲ್ಲ' ಈಗಲೇ ನೀನು ಏನೋ ಒಂದು ವಿಧವಾದ ಆರ್ತಧ್ವಸಿಯಿಂದ ಕೂಗಿಕೊಂಡಂತೆ ಕೇಳಿಸಿತು. ಆ ಗ «ಲವನ್ನು ಕೇಳಿಯೇ ನಾನು ಭಯಪಟ್ಟು ಓಡಿಬಂದೆನು. ಸೂತ್ರ-ಆಧ್ಯಾ ! ಸೀನಲ್ಲವೇ ರಸಿಕ ಶಿಖಾಮಣಿ ! ನಾನು ಈ ತಳಮೃದಂ ಗಗಳೊಡನೆ ಹಾಡಿದ ಆಲಾಪನಧ್ವನಿಯನ್ನು ನೀನು ಆರ್ತಧ್ವ ಸಿಯೆಂದು ತಿಳಿದೆಯಾ ? ವಿದೂ-ತಲೆಯನ್ನು ಚಚ್ಚಿಕೊಳ್ಳುತ್ರ ಅಯ್ಯೋ ! ನಿಜವಾಗಿ ನೀನು ಆಲಾಪನವನ್ನು ಮಾಡಿದೆಯಾ ? ಸ್ವಲ್ಪವಾದರೂ ಸಂಗೀತಜ್ಞಾ ನವಿಲ್ಲದ ಮೊದ್ದು ಬುದ್ಧಿಯುಳ್ಳ ನಾನು, ಫಟಫಳನೆ ಹೊಡೆ ಯುತಿದ್ದ ಈ ಮೃದಂಗಧ್ವಸಿಯನ್ನೂ , ನಿನ್ನ ಕೂಗಾಟವನ್ನೂ ಕೇಳಿ, ಯಾರೂ ನಿನ್ನ ಕಪಾಲಕ್ಕೆ ಹೊಡೆದುದರಿಂದ ನೀನು ಆಳುತ್ತಿರುವೆಯೆಂದು ಭ್ರವಿಸಿ, ಮಲಗಿದ್ದವನು ಹಾಗೆಯೇ ಇ ಸ್ಥೆಗೆ ಓಡಿಬಂದೆನು. ಸೂತ್ರ-ಮಿತ್ರನೆ ! ಈ ಪರಿಹಾಸವು ಸಾಕು ! ಈಗ ನಮ್ಮ ಮೇಲೆ ದೊ ಈ ಕಾರಭಾರವು ಬಿದ್ದಿರುವುದು, ಆ ವಿಚಾರವನ್ನು ಕುರಿತು ಆಲೋಚಿಸುವುದಕ್ಕಾಗಿ ನಿನ್ನನ್ನೇ ನಿರೀಕ್ಷಿಸುತಿದ್ದೆನು, ನೀನಾಗಿ ಬಂದುದು ಮುಂದಿನ ಕಾಠ್ಯಕ್ಕೆ ಅನುಕೂಲವಾಯಿತು, ವಿದೂ-ಭರತಾಚಾ‌ಾ ! ಮುಂದಿನ ಕಾರವೇನಿದೆ?ಬಾಯಿತುಂಬ ಊಟ! ಕಣ್ಣು ತುಂಬ ನಿದ್ರೆ! ಊಟವಾದಮೇಲೆ ನಿದ್ರೆ ! ನಿದ್ರೆಯಿಂದೆದ್ದ