ಪುಟ:ಶ್ರೀಮದ್ರಾಮಾಯಣವು ಅಯೋಧ್ಯಾಕಾಂಡವು .djvu/೧೫೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸರ್ಗ, ೧೩.} ಅಯೋಧ್ಯಾಕಾಂಡವು. ೩೯ ಮೈಗೆ ಲೇಪಿಸಿಕೊಂಡಿದ್ದನು. ಸೀತೆಯ ಪಕ್ಕದಲ್ಲಿ ಕುಳಿತು ಬೀಸಣಿಗೆಯನ್ನು ಕೈಯಲ್ಲಿ ಹಿಡಿದು ಆತನಿಗೆ ಬೀಸುತಿದ್ಧಳು ಹೀಗೆ ಚಿತ್ತಾ ನಕ್ಷತ್ರದೊಡಗೂ ಡಿದ ಚಂದ್ರನಂತೆ ಸೀತಾಸಮೇತನಾಗಿ ಪ್ರಕಾಶಿಸುತ್ತ, * ತೇಜೋವಿಶೇಷ ದಿಂದ ಸೂ‌ನಂತೆ ಜ್ವಲಿಸುತ್ತಿರುವ ರಾಮನನ್ನು ನೋಡಿ, ಸುಮಂತ್ರನು, ಇಲ್ಲಿ ಚಾಪಿ” ಎಂಬ ನಿಪಾತಗಳು ಹಿಂದಿನ ವಿಷಯಗಳೊಡನೆ ಸಮುಚ್ಛಯವನ್ನು ತಿಳಿಸುವುದು, ಇದರಿಂದ ಸೀತೆಯು ರಾಮನಿಗೆ ಮೊದಲು ಚಂದನವನ್ನು ಪೂಸಿ, ಆಮೇಲೆ ಚಾಮರವನ್ನೂ ಹಿಡಿದು ಪಕ್ಕದಲ್ಲಿ ನಿಂತಿರುವಳೆಂದು ಭಾವವು(ಚಿತ್ರಯಾ ಶಶಿನಂಯಭಾ) ಚೈತ್ರಪೂರ್ಣಿಮೆಯಲ್ಲಿ ಚಿತ್ರಾನಕ್ಷತ್ರದೊಡಗೂಡಿ ಉದಿಸಿದ ಚಂದ್ರನಂತೆ ಸೀತಾಯೊ ಗದಿಂದ ಒಂದು ವಿಧವಾದ ವಿಶೇಷಶೋಭೆಯನ್ನು ಹೊಂದಿದವನೆಂದು ಭಾವವು. ಇದ ರಿಂದ ಚಂದ್ರನು ಉದಿಸುವಕಾಲದಲ್ಲಿ ಸಂಧ್ಯಾರಾಗದಿಂದ ಕೂಡಿ ಕೆಂಪಾಗಿರುವಂತೆ, ರಾಮನೂ ವರಾಹರಕದಂತೆ ಕೆಂಪಾದ ಗಂಧಧಿಂದ ಶೋಭಿಸುತ್ತಿದ್ದನೆಂದು ಆ ಸಾಮ್ಯ ಕ್ಕೆ ಪುಷ್ಟಿಯುಂಟಾಗುವುದು, (ದದರ್ಶ) ಸುಮಂತ್ರನು ನೋಡಿದನೆಂದವ್ವಯವು, ಸು ಮಂತ್ರನು ತನ್ನ ದೃಷ್ಟಿ ಸಾಫಲ್ಯವನ್ನು ಹೊಂದಿದನೆಂದು ಭಾವವು.

  • ಇಲ್ಲಿ 'ತಂ ತಪನ್ನ ಮಿವಾದಿತ್ಯಮುಪಸನ್ನಂ ಸ್ವತೇಜಸಾ | ವವನ್ನೇ ವರದಂ ವನ್ದಿ : ವಿನಯಜ್ಯೋ, ವಿನೀತವತ*11 ಎಂಬುದು ಮೂಲವು. ಇದರಲ್ಲಿ 'ಆದಿತ್ಯಮಿವಸೂರ್ ನಂತೆ ಎಂಬುದಾಗಿ ಏಕವಚವನ್ನು ಹೇಳಿದ್ದರೂ, ಒಂದೇ ಸೂರನೆಂದು ಗ್ರಹಿಸಕೂ ಡಿದು ದಿವಿ ಸೋರಸಹಸ್ರಸ್ಯ' ಇತ್ಯಾದಿವಾಕ್ಯಗಳಿಗೆ ವಿರುದ್ಧವಾಗುವುದು “ ಅದಿ ತ್ಯಂ' ಎಂಬುದರಿಂದಲೇ ಸವ್ಯಸಹಸ್ರವೆಂಬ ಅರವು ಸಿದ್ದಿಸದಿದ್ದರೂ, 'ತಪಾಮಾದಿ ತಮಿವ” ಎಂದು ಸಾಕಲ್ಯದಿಂದ ಹೇಳುವಾಗ, ಸೂರೈಸಹಸ್ರಜನ್ಯವಾದತೇಜಸ್ಸಮೂಹ ದಂತೆ ತಪಿಸುವವನೆಂದು ಅರ್ಥವು ಸಿದ್ಧಿಸುವುದು. (ಸ್ವತೇಜಸಾ) ಕೃತ್ರಿಮವಲ್ಲದ ಸ್ಮಾ ಭಾವಿಕತೇಜಸ್ಸಿನಿಂದ (ಉಪಪನ್ನ೦) ಕೂಡಿದವನು ಇಂದೀವರಶ್ಯಾಮಂ) ಶ್ಯಾಮವರ್ಣ ವುಳ್ಳವನು, ದೀಪದ ಕುಡಿಯಲ್ಲಿ ನಡುವೆ ಶ್ಯಾಮಲವರ್ಣವಾದ ಜ್ಯೋತಿಯ.ಅದರಸುತ ಲೂ ತೇಜಃಪ್ರಸರಣವೂ ಕಾಣುವಂತೆ, ಶ್ರೀರಾಮನ ವಿಗ್ರಹವು ಸ್ವಭಾವಶ್ಯಾಮಲವಾ ಗಿದ್ದು, ಅದರಸುತ್ತಲೂ ಬಿಳುಪಾದ ತೇಜಃಪ್ರಸರಣವೂ ಕಾಣುತ್ತಿತ್ತೆಂದು ವ್ಯಕ್ತವಾಗು ವುದು. ಇಲ್ಲಿ ತಂ ವೈಶ್ರವಣ ಸಂಕಾಶಂ” ಎಂಬುದು ಮೊದಲಾಗಿ 'ತೇಜಸಾ” ಎಂಬ ವರೆಗೂ ಶುಭಾಶಯವಾದ ಶ್ರೀರಾಮನ ದಿವ್ಯ ಏಗ್ರಹಏಶೇಷವು ವ್ಯಂಜಿತವಾಗಿರುವು ದು,ಇಲ್ಲಿ ಸುಮಂತ್ರನಿಗೆದದರ್ಶ”ಎಂಬುದರಿಂದ ದೃಷ್ಟಿ ಸಾಫಲ್ಯವೂ, “ವವಂದೇ”ಎಂ ಬುದರಿಂದ ಶಿರಸ್ಕಾಫಲ್ಯವೂ “ವಂದೇ” ಎಂಬುದರಿಂದ ವಾಕ್ಸಾಫಲ್ಯವೂ ಹೇಳಲ್ಪಟ್ಟಿದೆ.