ಪುಟ:ಶ್ರೀರಾಮಕೃಷ್ಣ ಪರಮಹಂಸರ ಚರಿತೆ.djvu/೧೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ಶ್ರೀ ರಾಮಕೃಷ್ಣ ಪರಮಹಂಸರ

ಒಂದೊಂದು ಪದ್ಧತಿಯೂ, ಒ೦ದೊ೦ದು ಆಚಾರವೂ ಧರ್ಮ ಮೂಲವಾಗಿದೆ.

'ಧರ್ಮ' ವೆಂದರೇನು ? ಯಾವುದು ಈಶ್ವರಸಾಕ್ಷಾತ್ಕಾರಕ್ಕೆ ಸಹಕಾರಿಯಾಗುವುದೋ ಅದೇ ಧರ್ಮ: ಈ ಈಶ್ವರಸಾಕ್ಷಾತ್ಕಾರವು ಇಂದ್ರಿಯಗಳ ಮೂಲಕ ಆಗತಕ್ಕದ್ದಲ್ಲ ವೆಂದು ವೇದಗಳಿಂದ ಗೊತ್ತಾ ಗುತ್ತದೆ. ಇಂದ್ರಿಯಾತೀತವಾದ ಆಧ್ಯಾತ್ಮಿಕಅನುಭವವನ್ನು ಪಡೆಯುವುದು ಬಹುಕಠಿಣ, ಮೇಲಿನಿಂದ ಕೆಳಕ್ಕೆ ಉರುಳುವುದು ಹೇಗೆ ಸುಲಭವೋ ಹಾಗೆ ಇಂದ್ರಿಯಪರವಶರಾಗಿ ಆ ಮೂಲಕ ಸುಖ ವನ್ನು ಪಡೆಯುವದು ಅತಿಸುಲಭ, ಆದರೆ ಇಂದ್ರಿಯ ನಿಗ್ರಹ ವನ್ನು ಮಾಡಿ ತನ್ಮೂಲಕ ಈಶ್ವರ ಸಾಕ್ಷಾತ್ಕಾರ ಮಾಡಿಕೊಳ್ಳು ವುದು ಕಡಿದಾದ ಬೆಟ್ಟವನ್ನು ಏರುವಂತೆ ಬಹುಕಷ್ಟ ಸಾಧ್ಯವಾದ ಕೆಲಸ. ಆದರೆ ಇದು ಅಸಾಧ್ಯವಲ್ಲವೆಂದೂ ಪ್ರಯತ್ನ ಮಾಡಿದರೆ ಸಾಧ್ಯ ವೆಂದೂ ಅನಾದಿಕಾಲದಿಂದ ಈಗಿನ ವರೆಗೂ ಅವತಾರಮಾಡಿದ ಮಹಾಪುರುಷರು ತಮ್ಮ ಜೀವನ ಚರಿತ್ರೆಯಿಂದ ಬೋಧಿ ಸಿದ್ದಾರೆ. ವೇದಕಾಲದಲ್ಲಿ ಹೀಗೆ ಈಶ್ವರ ಸಾಕ್ಷಾತ್ಕಾರ ಮಾಡಿ ಕೊಂಡವರನ್ನು ಖುಷಿಗಳೆಂದು ಕರೆಯುತ್ತಿದ್ದರು. ಅವರ ಮಾತೇ ವೇದಗಳು ; ಅವರ ಅನುಭವವೇ ಉಪನಿಷತ್ತು ; ಅವರು ವಿಧಿಸಿದ ವಿಧಿಗಳೇ ಶಾಸ್ತ್ರ, ಇವರಿಗೆ 'ಆಪ್ತ' ರೆಂದು ಹೆಸರು. ಇಂಥ (ಆಪ್ತ ವಾಕ್ಯ' ವೇ ಆಧ್ಯಾತ್ಮಿಕ ವಿಚಾರಗಳಲ್ಲಿ ಪ್ರಮಾಣ, 'ಆಪ್ತ' ರೆಂದರೆ ಪಡೆದವರೆಂದರ್ಥ. ಇಂಥವರೇ ಪ್ರಪಂಚದ ತತ್ವವನ್ನು ಸ್ವಾನುಭವ ದಿಂದ ತಿಳಿದುಕೊಂಡವರಾದ್ದರಿಂದ ಆಧ್ಯಾತ್ಮಿಕ ಧರ್ಮಕ್ಕೆ ಮೂಲಾ ಧಾರ. ಅಂಥವರನ್ನೇ ಷಡ್ಡರ್ಶನ ಕಾಲದಲ್ಲಿ ಅಧಿಕಾರಿಕ ಪುರು ಷರು, ಪ್ರಕೃತಿಲೀನರು, ಈಶ್ವರಕೊಟಿಗಳೆಂದು ಮುಂತಾಗಿ ಕರೆಯು ತಿದ್ದರು. ಅದಾದ ಮೇಲೆ ಪುರಾಣಗಳ ಕಾಲದಲ್ಲಿ ಅಂಥವರನ್ನು ಅವತಾರ ಪುರುಷರೆಂದು ಕರೆಯುತ್ತಿದ್ದರು. ಇಂಥ ಮಹಾ ಪುರು ಷರು ಧರ್ಮಕ್ಷೇತ್ರವಾದ ಈ ಭರತ ಖಂಡದಲ್ಲಿ ಪುನಃ ಪುನಃ ಜನ್ಮ