ಪುಟ:ಶ್ರೀರಾಮಕೃಷ್ಣ ಪರಮಹಂಸರ ಚರಿತೆ.djvu/೩೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ಚರಿತ್ರೆ

ಒಬ್ಬ ದಿವ್ಯಪುರುಷನು ಕಾಣಿಸಿಕೊಂಡು ವೀಣಾಧ್ವನಿಯಂತೆ ಮಧುರ ನಾದ ಸ್ವರದಿಂದ ಅವನನ್ನು ಕುರಿತ “ ಖುದಿರಾಮ, ನಿನ್ನ ಭಕ್ತಿಗೆ ನಾನು ಬಹಳವಾಗಿ ಮೆಚ್ಚಿದೆ. ನಾನು ನಿನ್ನ ಮನೆಯಲ್ಲಿ ಪುತ್ರ ರೂಪದಿಂದ ಅವತಾರಮಾಡಿ ನಿನ್ನ ಸೇವೆಯನ್ನು ಸ್ವೀಕರಿಸು ವೆನು” ಎಂದು ಹೇಳಿದನು. ಈ ಮಾತನ್ನು ಕೇಳಿ ಆನಂದವಾ ದರೂ ಖುದಿರಾಮನು ಉತ್ತರಕ್ಷಣದಲ್ಲಿ ಯೇ ಚಿರ ದರಿದ್ರನಾದ ತಾನು ಭಗವಂತನಿಗೆ ತಿನ್ನುವುದಕ್ಕೆ ಏನು ಕೊಡಲಿ ಹೇಗೆ ಕಾಪಾ ಡಲಿ ಎಂದು ಮುಂತಾಗಿ ಚಿಂತಿಸುತ್ತ “ ಬೇಡ, ಬೇಡ, ಪ್ರಭೋ ! 'ನನಗೆ ಅಷ್ಟು ಸೌಭಾಗ್ಯ ಬೇಡ : ನನ್ನ ಮೇಲೆ ಕೃಪೆಮಾಡಿ ದರ್ಶನ ಕೊಟ್ಟು ನನ್ನನ್ನು ಕೃತಾರ್ಥನಾಗಿ ಮಾಡಿ ಈವಿಧವಾದ ನಿನ್ನ ಅಭಿಪ್ರಾ ಯವನ್ನು ಪ್ರಕಾರಮಾಡಿದೆಯಲ್ಲಾ, ಇದೇ ನನಗೆ ಯಥೇಚ್ಛವಾ ಯಿತು. ನೀನು ನನ್ನ ಹೊಟ್ಟೆಯಲ್ಲಿ ಹುಟ್ಟಿದರೆ ದರಿದ್ರನಾದ ನಾನು ನಿನ್ನ ಸೇವೆಯನ್ನು ಹೇಗೆವಾಡೇನು?” ಎಂದು ಹೇಳಿದನು. ಆ ದಿವ್ಯ ಪುರುಷನು ಖುದಿರಾಮನ ಈ ವಿಧವಾದ ದೈನ್ಯವನ್ನು ನೋಡಿ ಪ್ರಸನ್ನನಾಗಿ * ಭಯಪಡಬೇಡ, ಖುದಿರಾಮ, ನೀನು ಏನುಕೊಟ್ಟರೆ ಅದನ್ನೇ ಸ್ವೀಕರಿಸಿ ತೃಪ್ತಿ ಹೊಂದುವನು. ನನ್ನ ಅಭಿಲಾಷೆ ಪೂರ್ಣವಾಗುವುದಕ್ಕೆ ಅಡ್ಡಿ ಮಾಡಬೇಡ." ಎಂದನು. ಈ ಮಾತನ್ನು ಕೇಳಿ ಖುದಿರಾಮನು ಏನೂ ಹೇಳಲಾರದೆಹೋದನು. ಅದರಿಂದ ಆನಂದದುಃಖ ಮೊದಲಾದ ಪರಸ್ಪರವಿರುದ್ದವಾದ ಭಾವ ಗಳು ಅವನ ಹೃದಯದಲ್ಲಿ ಏಕಕಾಲದಲ್ಲಿ ಪ್ರವಹಿಸುತ್ತಾ ಅವನನ್ನು ಸ್ವಂ ಭಿತನನ್ನಾಗಿ ಮಾಡಿದುವು. ಇಷ್ಟು ಹೊತ್ತಿಗೆ ಎಚ್ಚರವಾಗಲು ಹಾಸಿಗೆಯ ಮೇಲೆ ಎದ್ದು ಕುಳಿತು ಏನೇನೋ ಯೋಚನೆ ಮಾಡುತ್ತಾ ಕೊನೆಗೆ ಯಾವನೋ ಒಬ್ಬ ಮಹಾ ಪುರುಷನು ತನ್ನ ಮನೆಯಲ್ಲಿ ಅವತಾರ ಮಾಡುವನೆಂದು ದೃಢಮಾಡಿಕೊಂಡನು. ಆದರೆ ಈ ಅದ್ಭುತ ಸ್ವಪ್ನದ ಸಾಫಲ್ಯವನ್ನು ಪರೀಕ್ಷೆ ಮಾಡುವವರೆಗೂ ಯಾರ ಎದುರಿಗೂ ಈ ಸುದ್ದಿಯನ್ನು ಎತ್ತುವುದಿಲ್ಲವೆಂದು ನಿಶ್ಚಯಮಾಡಿ ಕೊಂಡು ಊರಿಗೆ ಹಿಂತಿರುಗಿ ಹೊರಟನು.