ಪುಟ:ಶ್ರೀರಾಮಕೃಷ್ಣ ಪರಮಹಂಸರ ಚರಿತೆ.djvu/೩೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ



ಎರಡನೆಯ ಅಧ್ಯಾಯ.

ರಾಮಕೃಷ್ಣನ ಜನನ ಮತ್ತು ಬಾಲ್ಯ


(1೮೪೬-೧೮೫೩)

ಚಂದ್ರಾದೇವಿಗೆ ನವಮಾಸತ.೦ಬಿತ.. ಒಂದುದಿನ ಬೆಳಿಗ್ಗೆ

ದೇಹದಲ್ಲಿ ಅಶಕ್ತಿ ತೋರಿ ಪ್ರಸವವೇದನೆಯ ಚಿಹ್ನೆಗಳು ಕಂಡು ಬಂದುವು. ಆಗ ಆಕೆಯು ಖುದಿರಾಮನಬಳಿಗೆ ಹೋಗಿ ಈ ವಿಷಯವನ್ನು ತಿಳಿಸಿ “ ಮನೆಯಲ್ಲಿ ಮತ್ತೊಬ್ಬರೂ ಇಲ್ಲ; ನಾನು ಈಗ ಹೆತ್ತರೆ ಇಂದು ರಘುವೀರನಪೂಜೆ ನಿ೦ತುಹೋಗುತ್ತದೆಯಲ್ಲ, ಏನುಮಾಡೋಣ? " ಎ೦ದು ಕೇಳಿದಳು. ಖುದಿರಾಮನು ಅದಕ್ಕೆ 'ನಾವೇಕೆ ಯೋಚಿಸಬೇಕು? ನಿನ್ನ ಕೋಟಿ ಯಲ್ಲಿ ಹುಟ್ಟುವ ಮಹಾ ಪುರುಷನು ರಘುವೀರನ ಪೂಜೆಗೆ ನಿಷ್ಟವನ್ನು ಎಂದಿಗೂ ಉಂಟುಮಾಡುವುದಿಲ್ಲ. ಈದಿನ ಎಂದಿನಂತೆ ರಘುವೀರನ ಸೇವೆ ಯನ್ನು ಮಾಡು. ನಾಳೆ ಇನ್ನೇನಾದರೂ ಏರ್ಪಾಡನ್ನು ಮಾಡೋಣ. ಸಾಯಂಕಾಲಕ್ಕೆ ಧನಿಯನ್ನು ಕರೆದು ಇಲ್ಲಿಯೇ ಮಲಗಿರುವಾಗೆ ಹೇಳೋಣ ” ಎಂದು ಹೇಳಿದನು. ಈ ಮಾತನ್ನು ಕೇಳಿ ಚ೦ದ್ರ ದೇವಿಗೆ ದೇಹದಲ್ಲಿ ಬಲಬಂದಂತಾಗಿ ಮತ್ತೆ ಮನೆ ಕೆಲಸಗಳನ್ನು ಮಾಡತೊಡಗಿದಳು. ರಘುವೀರನಿಗೆ ಮಧ್ಯಾಹ್ನವೂ ಸಾಯಂ ಕಾಲವೂ ನಡೆಯಬೇಕಾದ ಪೂಜೋಪಚಾರಗಳೆಲ್ಲಾ ಕ್ರಮವಾi) ನಡೆದುವು. ರಾತ್ರಿಯ ಊಟವಾದಮೇಲೆ ಖುದಿರಾಮನು ಹೋಗಿ ಧನಿ ¥ ಯನ್ನು ಕರೆದುಕೊಂಡು ಬಂದನು. ಮರುದಿನ ಸೂರ್ಯೋ

*ಅವರ ನೆರೆಯಲ್ಲಿ ಪರಿಚಿತಳಾಗಿದ್ದ ಒಬ್ಬ ಕಮ್ಮಾರ ಜಾತಿಯ

ಹೆ೦ಗಸು.