ಶ್ರೀ ರಾಮಕೃಷ್ಣ ಪರಮಹಂಸರ
42
ಒಂದುದಿನ ಪರಮಹಂಸರೂ ಹೃದಯನೂ ದೇವಸ್ಥಾನದ
ಹತ್ತಿರ ತಿರುಗಾಡುತ್ತಿದ್ದರು. ಮಧುರಾನಾಥನು ದೇವರದರ್ಶನ ಮಾಡಿಕೊಂಡು ಬರುತ್ತ ಪರಮಹಂಸರನ್ನು ನೋಡಿ, ಅವರನ್ನು ಕರೆದುಕೊಂಡು ಬರುವಹಾಗೆ ತನ್ನ ಸೇವಕನೊಬ್ಬನನ್ನು ಕಳುಹಿ ಸಿದನು. ಮಧುರನು ಕಣ್ಣಿಗೆ ಬಿದ್ದ ಒಡನೆಯೇ ಅವರು ಆ ಜಾಗ ನನ್ನೆಬಿಟ್ಟು ಹೊರಟು ಹೋಗುತ್ತಿದ್ದರು. ಅಷ್ಟರಲ್ಲಿಯೇ ಮಧುರಾ ನಾಥನ ಸೇವಕನು ಬಂದು “ ಯಜಮಾನರು ತಮ್ಮನ್ನು ಕರೆಯು ತಾರೆ ” ಎಂದು ಹೇಳಿದನು. ಪರಮಹಂಸರು ಹೋಗಲು ಹಿಂಜರಿ ಯುತ್ತ ನಿಂತುಬಿಟ್ಟಿದ್ದನ್ನು ಕಂಡು,
ಹೃದಯ:- ಮಾವಾ, ಯಾಕೆ ಹೀಗೆ ಹಿಂದು ಮುಂದು
ನೋಡುತ್ತಿ?
ಪರಮ:- ಹೋಯಿತು ಅ೦ದರೆ ಇಲ್ಲೇ ಇರು ಅಂತ ಹೇಳು
ತ್ತಾನೆ, ಚಾಕರಿಗೆ ಸೇರಿಕೊ ಅಂತಾನೆ.
ಹೃದಯ: ...ಅದರಿಂದ ದೋಷವೇನು ? ಇಂಥ ಸ್ಥಳದಲ್ಲಿ
ಮಹದಾಶ್ರಯದಲ್ಲಿ ನೌಕರಿಗೆ ಸೇರುವುದು ಒಳ್ಳೆದೇ ಹೊರತು ಕೆಟ್ಟದ್ದೇನೂ ಅಲ್ಲ. ಇದಕ್ಕೇಕೆ ಹಿಂದು ಮುಂದು ನೋಡಬೇಕು ?
ಪರಮ:-ಇಲ್ಲಿ ಸುಮ್ಮನೆ ಚಾಕರಿಯಿಂದ ಕಟ್ಟುಬಿದ್ದಿರು
ವುದಕ್ಕೆ ನನಗೆ ಮನಸ್ಸಿಲ್ಲ. ಪೂಜೇ ಕೆಲಸಕ್ಕೆ ಒಪ್ಪಿಕೊಂಡರೆ ಆಭರಣಗಳ ಜವಾಬ್ದಾರಿ ಹೊತ್ತು ಕೊಬೇಕು, ಅದು ಮಹಾ ಹಂಗಿನ ಕೆಲಸ, ಅದು ನನ್ನಿಂದ ಸಾಧ್ಯವಲ್ಲ. ಆ ಭಾರ ನೀನು ಹೊತ್ತು ಕೊಳ್ಳುವಹಾಗಿದ್ದರೆ ನಾನು ಪೂಜೆ ಮಾಡುವುದಕ್ಕೆ ಅಡ್ಡಿಯಿಲ್ಲ. ಹೃದಯನು ಚಾಕರಿಗಾಗಿಯೇ ಬಂದಿದ್ದರಿಂದ ಅದಕ್ಕೆ
* ಹೃದಯ ರಾಮಮು ಖ್ಯೋಪಾಧ್ಯಾ ಯ, ಪ ರಮಹ೦ಸ ರ ಸೋದ
ರತ್ತೆಯ ಮಗಳ ಮಗ; ಏನಾದರೂ ಒ೦ದು ನೌಕರಿಯನ್ನು - ಸ೦ಪಾದಿಸ ಬೇಕೆಂದು ದಕ್ಷಿಣೇಶ್ವರಕ್ಕೆ ಬಂದಿದ್ದನು.