ಪುಟ:ಶ್ರೀರಾಮಕೃಷ್ಣ ಪರಮಹಂಸರ ಚರಿತೆ.djvu/೫೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ



 ಶ್ರೀ ರಾಮಕೃಷ್ಣ ಪರಮಹಂಸರ

42

ಒಂದುದಿನ ಪರಮಹಂಸರೂ ಹೃದಯನೂ ದೇವಸ್ಥಾನದ

ಹತ್ತಿರ ತಿರುಗಾಡುತ್ತಿದ್ದರು. ಮಧುರಾನಾಥನು ದೇವರದರ್ಶನ ಮಾಡಿಕೊಂಡು ಬರುತ್ತ ಪರಮಹಂಸರನ್ನು ನೋಡಿ, ಅವರನ್ನು ಕರೆದುಕೊಂಡು ಬರುವಹಾಗೆ ತನ್ನ ಸೇವಕನೊಬ್ಬನನ್ನು ಕಳುಹಿ ಸಿದನು. ಮಧುರನು ಕಣ್ಣಿಗೆ ಬಿದ್ದ ಒಡನೆಯೇ ಅವರು ಆ ಜಾಗ ನನ್ನೆಬಿಟ್ಟು ಹೊರಟು ಹೋಗುತ್ತಿದ್ದರು. ಅಷ್ಟರಲ್ಲಿಯೇ ಮಧುರಾ ನಾಥನ ಸೇವಕನು ಬಂದು “ ಯಜಮಾನರು ತಮ್ಮನ್ನು ಕರೆಯು ತಾರೆ ” ಎಂದು ಹೇಳಿದನು. ಪರಮಹಂಸರು ಹೋಗಲು ಹಿಂಜರಿ ಯುತ್ತ ನಿಂತುಬಿಟ್ಟಿದ್ದನ್ನು ಕಂಡು,

ಹೃದಯ:- ಮಾವಾ, ಯಾಕೆ ಹೀಗೆ ಹಿಂದು ಮುಂದು

ನೋಡುತ್ತಿ?

ಪರಮ:- ಹೋಯಿತು ಅ೦ದರೆ ಇಲ್ಲೇ ಇರು ಅಂತ ಹೇಳು

ತ್ತಾನೆ, ಚಾಕರಿಗೆ ಸೇರಿಕೊ ಅಂತಾನೆ.

ಹೃದಯ: ...ಅದರಿಂದ ದೋಷವೇನು ? ಇಂಥ ಸ್ಥಳದಲ್ಲಿ

ಮಹದಾಶ್ರಯದಲ್ಲಿ ನೌಕರಿಗೆ ಸೇರುವುದು ಒಳ್ಳೆದೇ ಹೊರತು ಕೆಟ್ಟದ್ದೇನೂ ಅಲ್ಲ. ಇದಕ್ಕೇಕೆ ಹಿಂದು ಮುಂದು ನೋಡಬೇಕು ?

ಪರಮ:-ಇಲ್ಲಿ ಸುಮ್ಮನೆ ಚಾಕರಿಯಿಂದ ಕಟ್ಟುಬಿದ್ದಿರು

ವುದಕ್ಕೆ ನನಗೆ ಮನಸ್ಸಿಲ್ಲ. ಪೂಜೇ ಕೆಲಸಕ್ಕೆ ಒಪ್ಪಿಕೊಂಡರೆ ಆಭರಣಗಳ ಜವಾಬ್ದಾರಿ ಹೊತ್ತು ಕೊಬೇಕು, ಅದು ಮಹಾ ಹಂಗಿನ ಕೆಲಸ, ಅದು ನನ್ನಿಂದ ಸಾಧ್ಯವಲ್ಲ. ಆ ಭಾರ ನೀನು ಹೊತ್ತು ಕೊಳ್ಳುವಹಾಗಿದ್ದರೆ ನಾನು ಪೂಜೆ ಮಾಡುವುದಕ್ಕೆ ಅಡ್ಡಿಯಿಲ್ಲ. ಹೃದಯನು ಚಾಕರಿಗಾಗಿಯೇ ಬಂದಿದ್ದರಿಂದ ಅದಕ್ಕೆ


* ಹೃದಯ ರಾಮಮು ಖ್ಯೋಪಾಧ್ಯಾ ಯ, ಪ ರಮಹ೦ಸ ರ ಸೋದ

ರತ್ತೆಯ ಮಗಳ ಮಗ; ಏನಾದರೂ ಒ೦ದು ನೌಕರಿಯನ್ನು - ಸ೦ಪಾದಿಸ ಬೇಕೆಂದು ದಕ್ಷಿಣೇಶ್ವರಕ್ಕೆ ಬಂದಿದ್ದನು.