ಪುಟ:ಶ್ರೀರಾಮಕೃಷ್ಣ ಪರಮಹಂಸರ ಚರಿತೆ.djvu/೮೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.



ಒಂಬತ್ತನೆಯ ಅಧ್ಯಾಯ.

24

ಕಾಮಾರಪುಕುರಕ್ಕೆ ಹೋಗಿ ಒಂದು : ತೀರ್ಥಯಾತ್ರೆ.

ಆರುತಿ೦ಗಳಕಾಲ ಸರಿಯಾದ ಅನ್ನಾಹಾರಗಳಿಲ್ಲದೆ ನಿರ್ವಿಕಲ್ಪ ಸಮಾಧಿಯಲ್ಲಿ ಇದ್ದದ್ದರಿಂದಲೋ ಏನೋ ಪರಮಹಂಸರಿಗೆ ಈ ಸಮಯದಲ್ಲಿ ಒಂದು ಭಯಂಕರವಾದ ಹೊಟ್ಟೆಯನೋವು ಪ್ರಾಪ್ತ ನಾಯಿತು. ಏನೇನೋ ಚಿಕಿತ್ಸೆ ಮಾಡಿದರು. ರೋಗವು ಯಾವು ದಕ್ಕೂ ಜಗ್ಗದೆ ಸುಮಾರು ಆರು ತಿಂಗಳ ಕಾಲ ಅದನ್ನು ಅನುಭವಿಸ ಬೇಕಾಯಿತು. ಈಗ ಸ್ವಲ್ಪ ಶಮನವಾಯಿತ.. ಮನಸ್ಸು ಭಾವ ಮುಖದಲ್ಲಿ ದೈತಾದ್ರೆತ ಭೂಮಿಯಲ್ಲಿರುವುದಕ್ಕೆ ಅಭ್ಯಾಸವಾ ಗುತ್ತ ಬಂತು. ಆದರೆ ದೇಹಸ್ಥಿತಿ ಮಾತ್ರ ಮೊದಲಿನಂತೆ ಇರಲಿಲ್ಲ. ಮಳೆಗಾಲ ಬಂದು ಗಂಗಾನದಿಯ ನೀರೆಲ್ಲ ಕದಡಿಹೋಗಿ ಆ ನೀರನ್ನು ಕುಡಿದರೆ ಮತ್ತೆ ಹೊಟ್ಟೆ ನೋವು ಕಾಣಿಸಿಕೊಳ್ಳ ಬಹು ದೆಂಬ ಹೆದರಿಕೆಯಾಯಿತು. ಆದ್ದರಿಂದ 1867 ನೇ ಇಸವಿಯಲ್ಲಿ ಇನ್ನೂ ವರ್ಷಾಕಾಲ ಹುಟ್ಟುವುದಕ್ಕೆ ಸ್ವಲ್ಪ ಮುಂಚೆಯೇ ಪರನ ರಂಸರು ಜೊತೆಯಲ್ಲಿ ಹೃದಯನನ್ನೂ ಭೈರವಿ ಬ್ರಾಹ್ಮಣಿ+ಯನ್ನೂ ಕರೆದುಕೊಂಡು ಕಾಮಾರಪುಕುರಕ್ಕೆ ಹೋದರು. - - - - ....... - ... ಭೈರವಿಬ್ರಾಹ್ಮಣಿಯು ಪ ರಮಹ೦ಸರನ್ನು ಇನ್ನೂ ಬಿಟ್ಟು ಹೋ ಗಿರಲಿಲ್ಲ ವೇದಾ೦ತ ಸಾಧನೆಯ ಕಾಲದಲ್ಲಿಯೂ ಆಕ ದಕ್ಷಿಣೇಶ್ವರ ದಲ್ಲಿಯೇ ಇದ್ದಳು; ಆದರೆ ವೇದಾ೦ತ ಮಾರ್ಗವು ಶುಷ್ಕ ಮಾರ್ಗ ವೆ೦ದೂ ಅದನ್ನು ಅಭ್ಯಾಸ ಮಾಡಲು ತೋತಾಪುರಿಯ ಹತ್ತಿ ರಕ್ಕೆ ಹೋಗ ಕೂಡದೆ೦ದೂ ಪರಮಹಂಸರಿಗೆ ಹೇಳುತ್ತಿದ್ದಳು, ಅವರು ಶ್ರೀ ಶಾರದಾ ದೇವಿಗೆ ಶ್ರದ್ಧೆ ವಹಿಸಿ ಶಿಕ್ಷಣವನ್ನು ಕೊಡುತ್ತಿದ್ದರೆ ಅದನ್ನು ಕ೦ಡು ಅವರ ಬ್ರಹ್ಮಚರ್ಯದಲ್ಲಿ ಸಂಶಯ ಹುಟ್ಟ ತ೦ತೆ. ಇದು ತನ್ನ