ಪುಟ:ಶ್ರೀರಾಮಕೃಷ್ಣ ಪರಮಹಂಸರ ಚರಿತೆ.djvu/೯೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಹನ್ನೊಂದನೆಯ ಅಧ್ಯಾಯ. ಶ್ರೀ ಶ್ರೀರಾಮಕ್ಷ್ಯಜ್ಞಪರಮಹಂಸರ ಗುರುಭಾವ. ಅವಜಾನಂತಿಮಾಂ ಮೂಢಾ ಮಾನುಷೀ೦ತನು ಮಾತಂ ! ಪರ೦ಭಾವ ಮಳಾನಂತೋ ಮನಭೂತ ಮಹೇಶ್ವರಂ ! ಗೀತಾ ೯-೧೧. ಹೂ ಅರಳಿತು, ಅರಳಿ ಮಕರಂದದಿಂದ ತುಂಬಿ ತುಳುಕಾಡುತ್ತ ದುಂಬಿಗಳ ಆಗಮನವನ್ನು ಎದುರುನೋಡುತ್ತ ಕಾದುಕೊಂಡು ಕುಳಿತಿದ್ದು ಅವು ಬಂದಹಾಗೆಲ್ಲ ವಿಶ್ವಾಸದಿಂದ ಬರಮಾಡಿಕೊಂಡು, ತಾಯಿಯು ಮಕ್ಕಳನ್ನು ಆದರಿಸುವಂತೆ ಅವುಗಳಿಗೆ ಮಕರಂದ ವನ್ನು ಊಡಿ ತೃಪ್ತಿಗೊಳಿಸಿತು. ಅವೂ ಮಕರಂದಪಾನಮಾಡಿ ಆನಂದದಿಂದ ಝೇಂಕರಿಸುತ್ತ ನಾನಾ ಕಡೆಗೆ ಹಾರಿ ಹೊfi ಆ ಮಧುಮಾಹಾ ತೈಯನ್ನು ವಿವರಿಸಿದುವು. ಹೂ ಎಷ್ಟು ದೊಡ್ಡದಾದರೆ ಅರಳುವುದಕ್ಕೆ ಅಷ್ಟು ಹೆಚ್ಚು ಕಾಲಬೇಕು. ಆದ್ದರಿಂದ ರಾಮಕೃಷ್ಣ ಮಹಾಕುಸುಮವು ಚೆನ್ನಾಗಿ ಅರಳುವುದಕ್ಕೆ ಹನ್ನೆರಡು ವರ್ಷಕಾಲ ಹಿಡಿಯಿತು. ಈಗ ಅರಳಿ, ಕಳಿತ ಆ ಕುಸುಮವು ಹೊರಲಾರದಷ್ಟು, ಹಿಡಿಸಲಾರದಷ್ಟು ಜ್ಞಾನ ಮಕರಂದವು, ಅದರಲ್ಲಿ ಶೇಖರಿಸಲ್ಪಟ್ಟಿದ್ದಿತು. ಶಿಷ್ಯ ಭಂಗಗಳೂ ವಾಸನೆಯನ್ನು ಹಿಡಿದು ಒಂದೊಂದಾಗಿ, ನಾಲ್ಕು ನಾಲ್ಕಾಗಿ ಗುಂಪು ಗುಂಪಾಗಿ ಬರಲು ಮೊದಲುಮಾಡಿದುವು, ಸ್ತನ್ಯವುಸೇರಿ ಅದನ್ನು ಇನ್ನೂ ಶಿಶುವು ಕುಡಿಯದೇ ಇದ್ದದ್ದರಿಂದ ಉತ್ಪನ್ನವಾಗುವ ಒಂದು