ವಿಷಯಕ್ಕೆ ಹೋಗು

ಪುಟ:ಸಂದೇಶದ ಕಥೆಗಳು.pdf/೧೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
12
ಸಂದೇಶದ ಕಥೆಗಳು

ಅವಧೂತ ಕಥಾ

ಮತ್ತೆ ಮೇನೆ ತುಳುಕಾಡತೊಡಗಿದಾಗ ರಹೂಗಣನಿಗೆ ಸ್ವಲ್ಪ ಸಿಟ್ಟು ಬಂತು ಕೆಳಗೆ ಬಗ್ಗೆ ಆ ಯುವಕನತ್ತ ನೋಡಿದ ದಷ್ಟಪುಷ್ಟ ಶರೀರದ ಯುವಕ ಹದವಾದ ಮೈಕಟ್ಟು ಮುಖದಲ್ಲಿ ಭಯವಿದ್ದಂತೆ ಇರಲಿಲ್ಲ ಎತ್ತಲೋ ಮನಸ್ಸು! ರಾಜನಿಗೆ ಸ್ವಲ್ಪ ಹೆಚ್ಚೇ ಸಿಟ್ಟು ಬಂತು ಒಮ್ಮೆ ಹೇಳಿದರೂ, ಮತ್ತೆ ಅದೇ ತಪ್ಪೆನುಗುತ್ತಿರುವ ಈತನಿಗೆ ತಾನಾರೆಂಬುದು ತಿಳಿದಂತಿಲ್ಲ ಎಂದೆನಿಸಿತು ಗಟ್ಟಿಯಾಗಿ ಗುಡುಗಿದ

"ಏಯ್! ಹುಡುಗ! ನಾನಾರೆಂದು ತಿಳಿದಿರುವ ಈ ದೇಶದ ಒಡೆಯ ನನ್ನ ಮಾತು ಕಡೆಗಣಿಸುವಷ್ಟು ಧೈರ್ಯವೇ ನಿನಗೆ? ನಿನ್ನ ಉನ್ನತ ತೆಗೆ ತಕ್ಕ ಚಿಕಿತ್ಸೆ ಮಾಡಿದರೆ ನೀನು ನರಿಹೋಗುವೆಯೆಂದು ತೋರುತ್ತದೆ!"

ಈ ಮೊದಲೊಮ್ಮೆ ಮೇನೆ ಕುಲುಕಿದಾಗ ಒಳಗೆ ಕುಳಿತು ಪಯಣಿಸುತ್ತಿದ್ದ ರಹೂಗಣ ಮಹಾರಾಜ ಆ ಯುವಕನನ್ನು ಸ್ವಲ್ಪ ಛೇಡಿಸಿದ್ದ! ಮೂದಲಿಸಿದ್ದು ಆಗಲೂ ತರುಣನ ಮುಖದಲ್ಲಿ ನಿರ್ವಿಕಾರ ಭಾವ ಈಗಲೂ ಅಷ್ಟೆ!!

ರಹೂಗಣ ಸಿಂಧುಸೌವೀರದೇಶದ ಮಹಾರಾಜ ಒಮ್ಮೆ ದೇಶವರ್ಯಟನೆಗೆ ಹೋದ ಅವನ ಮೇನೆಯನ್ನು ಹೊರಲು ಒಬ್ಬ ವ್ಯಕ್ತಿಯ ಕೊರತೆ ಬಿತ್ತು ವ್ಯವಸ್ಥಾಪಕರು ಅತ್ತಿತ್ತ ಒಬ್ಬ ನಮರ್ಧ ತರುಣನಿಗಾಗಿ ಅಲೆದರು ದಾರಿಯಲ್ಲಿ ಎತ್ತಲೋ ನೋಡುತ್ತ ತಿರುಗುತ್ತಿದ್ದ ಬ್ರಾಹ್ಮಣ ತರುಣನೋರ್ವ ಅವರ ಕಣ್ಣಿಗೆ ಬಿದ್ದ ಆ ತರುಣ ಕೊಬ್ಬಿದ ಗೂಳಿಯಂತೆ ಇದ್ದ ಅವನಿಗೆ ರಾಜನ ಮೇನೆ ಹೊರಲು ಆದೇಶಿಸಲಾಯಿತು ಆ ಯುವಬ್ರಾಹ್ಮಣ ಶಿಬಿಕೆಯನ್ನು ಹೊತ್ತು ನಡೆಯತೊಡಗಿದ

ಹತ್ತು ಹೆಜ್ಜೆನಾಗಿರಲಿಲ್ಲ ಮೇನೆ ಅತ್ತಿತ್ತ ಓಲಾಡತೊಡಗಿತು ಒಳಗೆ ಕುಳಿತು ಪಯಣಿಸುತ್ತಿದ್ದ ರಾಜಾ ರಹೂಗಣನಿಗೆ ಕಿರಿಕಿರಿಯಾಯಿತು ತನ್ನ ಭಟರಿಗೆ ಕೂಗಿ ಸರಿಯಾಗಿ ನಡೆಯಲು ಹೇಳಿದ

ರಾಜಭಟರು ರಾಜನಲ್ಲಿ ವಿನಮ್ರವಾಗಿ ವಿನಂತಿಸಿಕೊಂಡರು