ಪುಟ:ಸಾಹಿತ್ಯ ಪರಿಷತ್ ಪತ್ರಿಕೆ.djvu/೧೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕಾದಂಬರೀ ಸಂಗ್ರಹ \ F AR \ + 1 +

  • \ \ / \ \ +1

1 2 1 # 1

  1. \/ \

Y Y Y

_y + 1 + + + 1 ಅದಕ್ಕಾಗಿ ನಾನು ಅವರಿಗೆ ಎಷ್ಟು ಕೃತಜ್ಞನಾಗಿದ್ದರೂ ಸಾಲದಾಗಿರುವುದು. ಪ್ರಭು ಗಳೇ ! ಇತ್ತ ನೋಡಿ, ಆ ರಾಜಕುಮಾರಿಯ ಚಿತ್ರಪಠದ ಪ್ರತಿಯೊಂದು ಇಲ್ಲಿಯೇ ಇರುವುದು. ತಾವು ಈ ಗರೀಬನಮೇಲೆ ದಯವಿಟ್ಟು ಅದನ್ನು ಪರಿಕಿಸಿ ತಮ್ಮ ಅಭಿ ಪ್ರಾಯವನ್ನು ತಿಳುಕೋಣಾಗಲಿ ಎಂದು ಹೇಳಿ, ಅಂಬಾಲಿಕೆಯ ಚಿತ್ರಪಠವೊಂದನ್ನು ಮುಜಫರಖಾನನ ಹಸ್ತದಲ್ಲಿಟ್ಟು, ನವ್ರಭಾವದಿಂದ ದೂರದಲ್ಲಿ ನಿಂತುಕೊಂಡು, ಖಾನನ ಉತ್ತರಾಪೇಕ್ಷಿಯಾಗಿ, ತನ್ನಲ್ಲಿತಾನೇ, ಭಗವತೀದಾಸನ ಮೇಲಿನ ಸೂಡನ್ನು ತೀರಿಸಿ ಕೊಳ್ಳುವುದಕ್ಕೊಂದು ಸುಲಭವಾದ ಮಾರ್ಗವು ಸಮಾಗತವಾಯಿತೆಂದುಕೊಂಡು ಆನಂದಿಸುತ್ತಿದ್ದನು. ಆ ಚಿತ್ರವನವನ್ನು ನೋಡಿದ ಕೂಡಲೇ ಮುಜಫರನ ಮನಸ್ಸು ಅನೇಕ ವಿಕಾರ ಗಳಿಗೊಳಗಾಯಿತು. ಅವನ ಮನದಲ್ಲಿ ಏನೇನೋ ಭಾವನೆಗಳುಂಟಾದುವು. ಹಾಗೆಯೇ ಸ್ವಲ್ಪಹೊತ್ತಿನವರೆಗೂ ಚಿತಾಪಿತಳಾದ ಆ ರಮಣಿಯ ಸೌಂದರ್ಯವನ್ನು ಚಂಚಲ ದೃಷ್ಟಿಯಿಂದ ನೋಡುತ್ತಿದ್ದನು. ಆಗ, ಮುಜಫರನು, ಚಿತ್ರಗತಳಾದ ರಾಜಕುಮಾರಿ ಯನ್ನು ವಿವಾಹಮಾಡಿಕೊಂಡು ಸುಖಿಸಬೇಕೆಂಬ ಉತ್ಕಟವಾದ ಇಚೆ ಯುಳ್ಳವನಾ ದನು. ಅನಂತರ ಅವನು ಮೋಹನನನ್ನು ಕುರಿತು, ( ಅಯ್ಯಾ ! ಚಿತ್ರಗಾರ, ನಿನ್ನ ನಾಮಧೇಯವೇನು ? ಎಂದು ಪ್ರಶ್ನಿಸಿದನು. ಮೋಹನ :- ಮಹಾಪ್ರಭು ! ನನ್ನ ಹೆಸರು-ಮೋಹನಸಿಂಹನೆಂದಿರುವುದು,” ಮುಜಫರಖಾನ್ :-ಒಳ್ಳಿತು ಮೋಹನಸಿಂಹ; ನಾನು ಈ ಚಿತ್ರಪಠವನ್ನು ಕ್ರಯಕ್ಕೆ ತೆಗೆದುಕೊಳ್ಳುವೆನು. ಇದರ ಬೆಲೆಯೇನು ?-ಹೇಳು, ಮೋಹನಸಿಂಹ :-ಹುಜೂರ್' ! ಅದಕ್ಕೆ ಪ್ರತಿಫಲವಾಗಿ ನನಗೇನೂ ಬೇಡ. ನನ್ನನ್ನು ತಮ್ಮ ಬಳಿ ಆವುದಾದರೊಂದು ಚಾಕರಿಯಲ್ಲಿಟ್ಟು ಕೊಂಡರೆ ಸಾಕು. ಮುಜಫರ:-ಒಳ್ಳೆಯದು. ಇಂದಿನಿಂದಲೇ ನೀನು ನನ್ನ ಅಂಗರಕ್ಷಕಲ್ಲೋರ್ವ ನಾಗಿರು. ಇದನ್ನು ಕೇಳಿ ಅಲ್ಲಿದ್ದ ಒಬ್ಬ ಯವನ ಚಾಕರನು, ( ಹುಜೂರ್' ! ನನ್ನ ಮನ ವಿಯನ್ನು ಪಾಲಿಸಬೇಕು.” ಎಂದನು. ಮುಜಫರ :----ಅದೇನೋ? ಗುಲಾಮ ! ಬೇಗ ಹೇಳು.