ಪುಟ:ಸಾಹಿತ್ಯ ಪರಿಷತ್ ಪತ್ರಿಕೆ.djvu/೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಪಾಠಕವರ್ಗ ! ಇದು ( ರಾಜಾಸ್ಥಾನದ ಇತಿಹಾಸ ಮಂಜರಿ' ಯಲ್ಲಿನ ಒಂದು ಸಣ್ಣ ಕಥೆಯ ಅವಲಂಬನವಾಗಿರುವುದು, ಗ್ರಂಥವು ಚಿಕ್ಕದಾದರೂ ಹಲವು ನೀತಿಗಳು ಅಡಕವಾಗಿ ರುವುವು. ವಿದ್ಯಾರ್ಥಿಯಾದ ನನ್ನ ಈ ಅಲ್ಪ ಲೇಖನವು ಪಾಠಕ ಪಾಠಕಿಯರೆಲ್ಲರಿಂದ ಸಮಾಹೃತವಾದುದಾದರೆ ನಾನು ಕೃತಾರ್ಥನೇ ಸರಿ. ಇದರಲ್ಲಿನ ಸ್ಟಾಲಿತ್ಯಗಳನ್ನು ಆರಾದರೂ ತಿಳಿಯಪಡಿಸುವುದಾದರೆ ಅವುಗಳನ್ನು ಮುಂದಣ ಮುದ್ರಣದಲ್ಲಿ ಸರಿ ಪಡಿಸುವೆನು. ಇದನ್ನು ಅನತಿಕಾಲದಲ್ಲೇ ಪ್ರಚುರಗೊಳಿಸಿದ ವೇ|| ಬ್ರ|| ಚಾಮರಾಜನಗರದ ವೆಂಕಟರಮಣ ಶಾಸ್ತ್ರಿಗಳವರ ಮಹೋಪಕಾರವು ನನ್ನ ಹೃದಯದಲ್ಲಿ ಚಿರಸ್ಥಾಯಿ ಯಾಗಿರುವುದು. ಇದರಂತೆಯೇ ಎಲ್ಲರೂ ನನ್ನ ಇತರ ಗ್ರಂಥಗಳಿಗೂ ಉತ್ತೇಜನ ಕೊಡುವರೆಂ ಬುದೇ ನನ್ನ ನಂಬುಗೆ, ಮತ್ತು ಕಂ|| ಸದಯೇ "ಕುತರ ಸಿರಿಯೇ | ಸದಮಲ ಹೃದಯೇ ಸಮನ್ವಿತತುಲ ಸಹಾಯೇ || ಹದುಳಿ ನನಿಲಯೇ, ವಿನಯೇ | ಮುದದಿಂ ಪೊರೆಯುವುದು ಸಂಗ್ರಹನ ವಿಧಿಜಾಯೇ || ಇತಿ ಬೆಂಗಳೂರು 1 ೧-೧೦-೧೯೧೬ . ಜೆ ಕೃಷ್ಣಮೂರ್ತಿ,