ಪುಟ:Chirasmarane-Niranjana.pdf/೩೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಚಿರಸ್ಮರಣೆ ೩೯

ಸಂಚಾರ ಮಾಡಿದುವು.

ಚಹಧಂಗದಡಿಯಲ್ಲಿ ತಮ್ಮನ್ನು ನೋಡುತ್ತಿದ್ದ ಹಾಗೆಯೇ ಈಗಲೂ ತಿವಿದು ನೋಡುತ್ತಿದ್ದ, ಆ ಧಾಂಡಿಗ. ಮುದುಕ ರೈತನ ಮುಖದ ಮೇಲೆ ನಗೆ ಕುಣಿಯುತ್ತಿತ್ತು. ಈ ಮಕ್ಕಳನ್ನು ಕಂಡು ఆತ ಬೀರುತ್ತಿದ್ದುದು ವಾತ್ಸಲ್ಯದ ದೃಷ್ಟಿ. ಆತನ ನಗೆಗೆ ಪ್ರತ್ಯುತ್ತರವಾಗಿ ಗಾಂಭೀರ್ಯ ಸಲ್ಲದೆಂದು ಹುಡುಗರು ಮುಗುಳು ನಕ್ಕರು. ಆದರೆ ಧಾಂಡಿಗನತ್ತ ಅವರು ನೋಡಲಿಲ್ಲ. ಆ ಇನ್ನೊಬ್ಬರೂ ಯುವಕರಾಗಿಯೇ ಇದ್ದರು. ಶುಭ್ರವಾಗಿದ್ದ ಬಿಳಿಯ ಅಡ್ಡಪಂಚೆ-ಷರಟು. ತೆಳ್ಳಗಿನ ಕರಿಯ ದೇಹ, ಕೆನ್ನೆಯ ಮೂಳೆಗಳು ಎದ್ದು ಕಾಣಿಸುತ್ತಿದ್ದ ಕ್ಷೀಣ ಪ್ರಕೃತಿ. ಶಾಂತವಾದ ಮುಖಮುದ್ರೆ. ಕಣ್ಣುಗಳು ಚಂಚಲವಾಗಿ ಸಜೀವವಾಗಿ, ನೋಟ ಆತ್ಮೀಯವಾಗಿತ್ತು. ಅವರ ಮುಖದ ಮೇಲೆ ಸದಾ ನೆಲೆಸಿತ್ತು-ಸೂಕ್ಷ್ಮವಾದೊಂದು ಮುಗುಳುನಗು. 'ಇವರು ಮಾಸ್ತರರ ಸ್ನೇಹಿತರಿರಬೇಕು. ಅವರು ಇನ್ನು ಬರಬೇಕಷ್ಟೆ' ಎಂಬ ತೀರ್ಮಾನಕ್ಕೆ ಹುಡುಗರು ಬಂದರು. ಹುಡುಗರನ್ನು ಕರೆದು ತಂದ ಯುವಕನನ್ನು ಉದ್ದೇಶಿಸಿ ಆ ಮಾಸ್ತರರ 'ಸ್ನೇಹಿತ'ರು ಕೇಳಿದರು: "ನಡೆದು ನಡೆದು ಕಾಲು ಸೋತಿರಬೇಕು, ಅಲ್ವ ಪ್ರಭು?" "ಹಾಗೇನೂ ಇಲ್ಲ!" ಆ ಯುವಕ ನಗುತ್ತ ಉತ್ತರವಿತ್ತ. ಆ ಸ್ವರದಲ್ಲಿ ವಿನಯವಿತ್ತು. ಇಂತಹ ಪರೀಕ್ಷೆಯಲ್ಲೆಲ್ಲ ತಾನು ಸೋಲುವವನಲ್ಲ ಎಂಬ ಆತ್ಮಾ ಭಿಮಾನವಿತ್ತು. ಅಪ್ಪು ಮತ್ತು ಚಿರುಕಂಡ ಪ್ರಭುವನ್ನು ನೋಡಿದರು. ಪ್ರಭು. ಈತ ತಮ್ಮ ಜನವಲ್ಲವೆಂದು-ರೈತನಲ್ಲವೆಂದು ಚಿರುಕಂಡ-ಸುಲಭವಾಗಿ ತಿಳಿದುಕೊಂಡ. ಪರೀಕ್ಷಿಸಿ ನೋಡಿದಾಗ, ಆ ಯುವಕನ ನಡೆನುಡಿಯಲ್ಲಿ ನಯನಾಜೂಕನ್ನು ಆತ ಕಂಡ. ಪಟ್ಟಣವಾಸಿ, ಸಂದೇಹವಿಲ್ಲ, ಆದರೂ ತಮ್ಮ ಪಕ್ಷದವನು...! ಆ ಇನ್ನೊಬ್ಬರು, ಹುಡುಗರನ್ನು ಸೂಕ್ಷ್ಮವಾಗಿ ದಿಟ್ಟಿಸಿ ನೋಡುತ್ತಿದ್ದು, ಮಾಸ್ತರರತ್ತ ತಿರುಗಿ ಅ೦ದರು: "ಶಿಷ್ಯರು ನಿಮಗೆ ತುಂಬಾ ಅಂಟಿಕೊಂಡಿದ್ದಾರೆ." ಮಾಸ್ತರು ನಕ್ಕರು. ಆ ನಗೆಯಲ್ಲಿ ಸಲಿಗೆಯಿದ್ದರೂ ಅವರ ಮುಖಭಾವದಲ್ಲಿ ವಿನಯವಿತ್ತು. ಆ ಮಾತಿಗೆ ಉತ್ತರವಾಗಿ ಮಾಸ್ತರು ಏನಾದರು ಹೇಳುವರೆಂದು ಹುಡುಗರು ನಿರೀಕ್ಷಿಸಿದ್ದರು. ಆದರೆ ಏನೂ ಹೇಳದೆ ಸುಮ್ಮನಿದ್ದುದನ್ನು ಕಂಡಾಗ