ಪುಟ:Duurada Nakshhatra.pdf/೫೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಮುಖ್ಯೋಪಾಧ್ಯಾಯರು ಸಾವಿತ್ರಮ್ಮನತ್ತ ನೋಡಿ ನಕ್ಕು ಅಂದರು:

“ನನಗೂ ಈ ಅಭ್ಯಾಸ ಇರ್ಲಿಲ್ಲ ಜಯದೇವ, ಆದರೆ ಈ ಅಮ್ಮ ಬಂದ್ಮೇಲೆ--"

"ಸಾಕು ತಮಾಷೆ"

ಹಾಗೆ ನುಡಿದು ಸಾವಿತ್ರಮ್ಮ ಒಳಕ್ಕೆ ಹೊರಟು ಹೋದರು.

ವಯಸ್ಸಾದ ಆ ದಂಪತಿಗಳ ಸರಸ ಕಂಡು ಜಯದೇವನಿಗೆ ನಗುಬಂತು. ಹಾಸಿಗೆಯ ಮೇಲೆ ಅಡ್ಡಾಗುತ್ತಾ ಆತ ತನ್ನಷ್ಟಕ್ಕೆ ಹೇಳಿಕೊಂಡ: ಆ ಅಮ್ಮ ಬಂದ್ಮೆಲೆ... ಯಾರಿಗೆ ಗೊತ್ತು? ನನಗೂ ಆ ಅಭ್ಯಾಸವಾಗುತ್ತೋ ಏನೊ...!'

ಹಳೆಯ ಆರಾಮ ಕುರ್ಚಿಯ ಮೇಲೆ ಕುಳಿತಿದ್ದ ರಂಗರಾಯರು ಏನನ್ನೋ ಸ್ಮರಿಸಿಕೊಳ್ಳುತ್ತ ಮಾತನಾಡಿದರು.

“ನಮ್ಮ ನಂಜುಂಡಯ್ಯ ಹೇಳಿದ್ದನ್ನೆಲ್ಲಾ ಕೇಳಿದ್ರೋ ಇಲ್ಲೋ?

“ಕೇಳ್ದೆ ಸಾರ್, ಇದೆಲ್ಲಾ ನನಗೆ ಹೊಸ ಅನುಭವ.”

“ಈಗಿನ್ನೂ ಷುರು ಜಯದೇವ!”

“ಇದ್ದೀತು. ರಾಜಕೀಯದಲ್ಲೇನೋ ಜಾತಿ-ಜಾತೀಂತ ಕಚ್ಚಾಡೋದು ಉಂಟಂತೆ, ವಿದ್ಯಾರ್ಥಿಗಳಿಗೆ ಸೀಟು ಸಿಗೋ ವಿಷಯದಲ್ಲಂತೂ ಈ ಗಲಾಟೆ ಇದ್ದದ್ದೆ, ಆದರೆ ಉಪಾಧ್ಯಾಯ ವೃತ್ತಿಲೂ ಹೀಗಿರುತ್ತೆ ಅಂತ ನಾನು ಭಾವಿಸಿರ್ಲಿಲ್ಲ"

“ನಿಮ್ಮ ಮಾತು ಕೇಳಿ ನಗಬೇಕೆನಿಸುತ್ತೆ.”

“ಅದು ನಿಜ..ನನಗೇನೂ ತಿಳೀದು.'

“ಹಾಗಲ್ಲ, ಏನೇನೋ ಒಳ್ಳೆಯ ಗುರಿ ಇಟ್ಕೊಂಡು ನೀವು ಬಂದಿದೀರಿ ಅಲ್ವೆ? -

ಆ ವಿಷಯ ಜಯದೇವನಿಗೆ ಅತ್ಯಂತ ಆತ್ಮೀಯವಾದುದು.

“ಹೌದು! ಉಪಾಧಾಯನಾಗ್ವೇಕು ಅನ್ನೋದು ನನಗೆ ಮೊದಲಿಂದಲೂ ಇದ್ದ ಆಸೆ. ನಾನು ಬೇರೆ ಕೆಲಸ ಹುಡುಕಲೂ ಇಲ್ಲ.”

ರಂಗರಾಯರು ಮಾತುಗಳಿಗೆ ತಡವರಿಸಿದಂತೆ ಕಂಡಿತು. "

“ಕನಸು ಕಾಣೋದು ಯಾವಾಗ್ಲೂ ಒಳ್ಳೆದು ಜಯದೇವ್, ಒಳ್ಳೆ ಕನಸು ಕಾಣೋ ಸಾಮರ್ಥ್ಯವಿಲ್ಲದೋರು ಬದುಕಿನಲ್ಲಿ ಹೆಚ್ಚೇನನ್ನೂ ಸಾಧಿ