ಪುಟ:Ekaan'gini.pdf/೪೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೪೮ ಏಕಾಂಗಿನಿ ವಾಪಸು ಬಂದಿದಾರೆ. ಒಂದು ತಿಂಗಳಾಯ್ತು, ಅವರ ಯಜಮಾನರಿಗೆ ಒಂದು ಗಂಡು ಮಗುವಿನ ಕಾಣಿಕೆ ಒಪ್ಪಿಸಿದಾರೆ. ಮಗು ತುಂಬಾ ಮುದ್ದಾಗಿಗೆ ಕುಸುಮಾ ನಿಮ್ಮ ವಿಷಯ ಬಹಳ ಕೇಳಿದರು. ಅವರು ಕಾಗದ ಬರೀ ತೀನೀಂತ ಹೇಳಿದ್ದವರು ತವರು ಮನೆಯಿಂದ ನಿಮಗೆ ಬರೆಯಲೇ ಇಲ್ಲವಂತೆ. ಈಗ ವಿಳಾಸ ಬೇಕು ಎಂದರು. ನಾಳೆ ಅವರಿಗೆ ಕೊಡುತ್ತೇನೆ. ತುಂಬಾ ಒಳ್ಳೆಯವರು. ನಿಮ್ಮ ಸ್ನೇಹಿತ ಅಂದ ಮೇಲೆ ಕೇಳಬೇಕೆ? ಓದಿದವಳೂಂತ ಯಾವ ಜಂಭವೂ ಇಲ್ಲ ಈಗ ಇಲ್ಲಿ ನೀವಿಲ್ಲದೆ ತು೦ಬಾ ಬೇಸರ. ನೀವಿದ್ದ ಮನೆಗೆ ಬಿಡಾರ ಬಂದಿರೋದು ಹೈಸ್ಕೂಲು ಮೇಷ್ಟ್ರು ಮನೆತುಂಬಾ ಸಂಸಾರ. ಅಲ್ಲಿ ಹ್ಯಾಗಾದರೂ ಇರ್ತಾರೋಂತ ಆಶ್ಚರ್ಯವಾಗ್ತದೆ. ಮನೆ ಯಜಮಾನಿತಿ ಜಗಳಗಂಟ ಏನಲ್ಲ. ಆದರೂ ಹುಡುಗರನ್ನು ಸಮಜಾಯಿಸಿ ಮಾಡಿ ಸಾಕೋಸಾಕಾಗಿ ಸಂಕಟಪಡ್ತಾ ಇರ್ತಾರೆ .... ಮತ್ತೆ ಮುಕ್ತಾಯ. " ಈ ಪುರಾಣ ಎಷ್ಟು ಬರೆದರೂ ಮುಗಿಯುವಂಧಾದ್ದಲ್ಲ ನೀವೊಮ್ಮೆ ಬನ್ನಿ. ನಾಲ್ಕು ದಿವಸ ಹಗಲೂ- ರಾತ್ರೆ ಕೂತು ಹರಟೆ ಹೊಡೆಯೋಣ. ಪುನಃ ಹೇಳ್ತೇನೆ. ನೀವು ನಮ್ಮಲ್ಲೇ ಇಳೀಬೇಕು ಯಾವತ್ತು ಬರ್ತೀರಿ ಅನ್ನೋದಕ್ಕೆ ಕಾಗದ ಬರೀರಿ." ಉದ್ದನಾದ ಕಾಗದ. ಕೊನೆಯೇ ಇಲ್ಲದ ಕತೆಯ ಹಾಗೆ. ತನ್ನ ಬದುಕಿ ನಂಧದೇ." ಅವಸರವಾಗಿ ಒಮ್ಮೆ ಓದಿ, ಸಿಧಾನವಾಗಿ ಮತ್ತೊಮ್ಮೆ ಓದಿ,ನಿಟ್ಟುಸಿರು ಬಿಟ್ಟು ಸುನಂದ ಸುಮ್ಮನಾದಳು. ಅಂಚೆಯವನು ಬಂದುದನ್ನು ಆಕೆಯ ತಾಯಿ ಕಂಡಿರಲಿಲ್ಲವೆಂದು. " ಕಾಗದ ಯಾರದೇ” ಎ೦ಬ ಪ್ರಶ್ನೆಯಿಂದ ಮಗಳು ತಪ್ಪಿಸಿಕೊ೦ಡಿದ್ದಳೆ.ಆದರೆ ಕಾಗದ ಹೊತ್ತು ತಂದಿದ್ದ ಬೇಸರದ ದಟ್ಟನೆಯ ಮೋಡಗಳ ಮುಸುಕಿನಿ೦ದ ಮಾತ್ರ ತಪ್ಪಿಸಿಕೊಳ್ಳುವ ಹಾಗಿರಲಲ್ಲ. ಸ್ನೇಹಿತರ ಮನೆಗೆಂದು ಹೊರ ಹೋಗಿದ್ದ ತಂದೆ ಹಿಂತಿರುಗಿ ಬರುವುದನ್ನೇ ಸುನಂದಾ ಕಾದು ಕುಳಿತಳು. ಕೃಷ್ಣಪ್ಪನವರು ಬಂದಾಗ ಕಾಗದವನ್ನು ಅವರ ಕೈಗೆ ಆಕೆ ಹಾಕಿದಳು. ಆದನ್ನೋದುತ್ತಿದ್ದ ಅವರ ಮುಖಭಾವವನ್ನು ಪರೀಕ್ಷಿಸಿ ನೋಡುವ ಬಯ