ಪುಟ:Mysore-University-Encyclopaedia-Vol-1-Part-3.pdf/೩೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೮೯೯

                                                                ಆರ್ಥಿಕ ಬೆಳೆವಣಿಗೆ

ಈ ಸಮಸ್ಯೆ ಹುಟ್ಟುಲು ಕಾರಣ ಮನುಷ್ಯನ ಅಪೇಕ್ಷೆಗಳಿಗೂ ಅವನ ಸಾಧನ ಸಾಮಗ್ರಿಗಳಿಗೂ ಇರುವ ಅಪಾರ ಆಂತರ.ಅಪೇಕ್ಷೆಗಳು ಅಮಿತವಾಗಿದ್ದರೂ ಸಾಧನ ಸಾಮಗ್ರಿಗಳು ಮಾತ್ರ ಅತ್ಯಂತ ಮಿತವಾಗಿದ.ಆದುದರಿಂದ ಮಿತಿ ಸಾಧನ ಸಾಮಗ್ರಿಗಳಿಂದ ತನ್ನ ಅಪೇಕ್ಷೆಗಳನ್ನು ತೃಪ್ತಿಪಡಿಸಲು ಅತ್ಯುತ್ತಮ ಮಾರ್ಗ ಯಾವುದೆಂಬುದನ್ನು ನಿರ್ಧರಿಸುವುದೇ ಮನುಷ್ಯ ಸತತವೂ ಎದುರಿಸಬೇಕಾದ ಮಹಾ ಆರ್ಥಿಕ ಸಮಸ್ಯೆ.

ಆರ್ಥಿಕ ಪದ್ಥತಿ ಕಾಲ ದೇಶಗಳಿಗನುಗುಣವಾಗಿ ವ್ಯತ್ಯಾಸ ಹೊಂದುವುದು.ಇದನ್ನು ಮಾರ್ಕ್ಸ್ ವಾದಿಗಳು ೧.ಆದಿ-ಸಮುದಾಯಿಕ,೨.ಪ್ರಾಚೀನ-ಗುಲಾಮಗಿರಿ,೩.ಮಧ್ಯಕಾಲಿಕ-ಜೀತಗಾರಿಕ,೪.ಆಧುನಿಕ-ಬಂಡವಾಳಗಾರಿಕ ಮತ್ತು ೫.ಭವಿಷ್ಯ-ಸಮಾಜಸ್ವಾಮ್ಯ ಎಂದು ಐದು ಬಗೆಯಾಗಿ ವಿಂಗಡಿಸಿರುವರು.

ಆರ್ಥಿಕ ಪದ್ಧತಿ ಯಾವುದೇ ಆದರೂ ಅದು ಉತ್ಪಾದನೆ,ಅನುಭೋಗ ಮತ್ತು ಹಂಚಿಕೆಗೆ ಸಂಬಂಧಿಸಿದ ಮೂಲಭೂತ ಪ್ರಶ್ನೆಗಳನ್ನು ತೀರ್ಮಾನಿಸಬೇಕಾಗುವುದು.ಈ ತೀರ್ಮಾನಗಳಿಗೆ ಸಂಪ್ರದಾಯ,ನಿರ್ಬಂಧ,ವೈಯಕ್ತಿಕ ಪ್ರತಿಫಲದ ಆಕರ್ಷಣೆ ಮುಂತಾದವು ಆಧಾರವಾಗಿರುವುವು.

ಪ್ರಾಚೀನ ಕಾಲದ ಆರ್ಥಿಕ ಜೀವನದ ವ್ಯವಸ್ಥೆ ಸುಲಭವಾಗಿತ್ತು ಕುಟುಂಬ ಆರ್ಥಿಕ ಘಟಕವಾಗಿ,ಸ್ವಪರಿಪೂರ್ಣತೆಯ ಗುರಿಯನ್ನು ಹೊಂದಿತ್ತು.ಕುಟುಂಬದ ಜನರಲ್ಲಿಯೇ ಅತಿ ಸರಳ ರೀತಿಯ ಕಾರ್ಯವಿಭಜನೆ ರೂಢಿಯಲ್ಲಿತ್ತು.ಇಂಥ ಪರಿಸ್ಥಿತಿಯಲ್ಲಿ ಆರ್ಥಿಕ ಜೀವನನ್ನು ವ್ಯವಸ್ಥೆಗೊಳಿಸುವುದು ಕಷ್ಟವಿರಲಿಲ್ಲ.

ಆದರೆ ಆಧುನಿಕ ಕಾಲದಲ್ಲಿ,ಅದರಲ್ಲೂ ೧೮ನೆಯ ಶತಮಾನದ ಕೈಗಾರಿಕಾ ಕ್ರಾಂತಿಯಿಂದೀಚಿಗೆ,ಆರ್ಥಿಕ ಜೀವನ ವ್ಯವಸ್ಥೆ ಅತಿ ತೊಡಕಾಯಿತು.ಈ ಪರಿಸ್ಥಿತಿಯಲ್ಲಿ ಆರ್ಥಿಕ ಜೀವನವನ್ನು ಸುವ್ಯವಸ್ಥೆಗೊಳಿಸಲು ಮಾಡಿದ ಏರ್ಪಾಡುಗಳೇ ವಿವಿಧ ಆರ್ಥಿಕ ಪದ್ಥತಿಗಲೆನಿಸಿಕೊಂಡಿವೆ.ಅವುಗಳಲ್ಲಿ ಮುಖ್ಯವಾದವು:೧.ಸ್ವತಂತ್ರ ಉದ್ಯಮ ಅಥವಾ ಬಂಡಾವಳಿ ಪದ್ಥತಿ ೨.ಸಮಾಜವಾದಿಪದ್ಥತಿ ೩.ಮಿತ್ರ ಆರ್ಥಿಕ ಪದ್ಥತಿ ೪.ಸಹಕಾರ ಪದ್ಥತಿ.

ಸ್ವತಂತ್ರ ಉದ್ದಪ್ಪಗಿನ ಅಕ್ಷರಯಮ ಪದ್ಥತಿ ಆರ್ಥಿಕಕ್ಷೇತ್ರದಲ್ಲಿ ವ್ಯಕ್ತಿಸ್ವಾತಂತ್ರ್ಯವನ್ನು ಪ್ರತಿಪಾದಿಸುವುದು.ಪ್ರತಿಯೊಬ್ಬ ವ್ಯಕ್ತಿಯೂ ತನ್ನ ಆರ್ಥಿಕ ಕೆಲಸ ಕಾರ್ಯಗಳನ್ನು ತನಗೆ ಅತ್ಯಂತ ಹೆಚ್ಚಿನ ಪ್ರತಿಫಲ ಬರುವ ರೀತಿಯಲ್ಲಿ,ತನ್ನ ಇಚ್ಛೆ ಬಂದಂತೆ ನಡೆಸಬಹುದು.ಸರ್ಕಾರದ ನಿರ್ಬಂಧವಾಗಲೀ,ಇತರ ಅಡಚಣೆಯಾಗಲೀ ಇರುವುದಿಲ್ಲ.ಪ್ರತಿಯೊಬ್ಬನ ಗಮನವೂ ತನ್ನ ಏಳಿಗೆಯ ಕಡೆ ಮಾತ್ರ ಇರುವುದು,ಇತರರ ಮೇಲೆ ಅದರ ಪರಿಣಾಮವೇನೆಂಬುದನ್ನು ಲೆಕ್ಕಿಸುವುದಿಲ್ಲ.

ಈ ಬಗೆಯ ವ್ಯಕ್ತಿ ಸ್ವಾತಾಂತ್ರ್ಯ ಸ್ಪರ್ಧೆಗೆ ಎಡೆಕೊಡುವುದು.ಸ್ಪರ್ಧೆಯ ಬೆದರಿಕೆ ಮತ್ತು ವೈಯಕ್ತಿಕ ಪ್ರತಿಫಲದ ಆಕರ್ಷಣೆ ದಕ್ಷತೆಯನ್ನು ಹೆಚ್ಚಿಸುವುದು. ಇದರಿಂದ ಉತ್ಪಾದನಾ ವೆಚ್ಚಕಡಿಮೆಯಾಗಿ ಬಳಕೆದಾರನಿಗೆ ಪದಾರ್ಥಗಳು ಅತ್ಯಂತ ಕಡಿಮೆ ಬೆಲೆಗೆ ದೊರಕುವುವು.ಅಲ್ಲದೆ ಸ್ಪರ್ಧೆಯ ಫಲವಾಗಿ ಸರಬರಾಜು ಮತ್ತು ಬೇಡಿಕೆಗಳ ಸಮತೋಲನ ತಾನಾಗಿಯೇ ಉಂಟಾಗುವುದು.ಯೋಜನಾ ಮಂಡಲಿ ಮುಂತಾದ ಬಾಹ್ಯಸಂಸ್ಥೆಗಳ ಆವಶ್ಯಕತೆಯಿರುವುದಿಲ್ಲ.

ಸ್ವಾತಂತ್ರ ಉದ್ಯಮ ಪದ್ಥತಿಯಲ್ಲಿ ಎಲ್ಲ ಉದ್ಯಮಗಳ ಒಡೆತನ ಮತ್ತು ಮೇಲ್ವಿಚಾರಣೆಯೊ ಖಾಸಗಿ ವ್ಯಕ್ತಿಗಳಿಗೆ ಸೇರುವುದು.ಹೀಗೆ ಎಲ್ಲ ಆರ್ಥಿಕ ಅಧಿಕಾರವೂ ಖಾಸಗಿ ಬಂಡಾವಳಗಾರರ ಕೈಯಲ್ಲಿರುವುದರಿಂದ ಇದನ್ನು ಬಂಡವಾಳ ಪದ್ಥತಿಯೊಂದೂ ಕರೆಯುವರು.

೧೯ನೆಯ ಶತಮಾನದಲ್ಲಿ ಸ್ವತಂತ್ರ ಉದ್ಯಮ ಪದ್ಥತಿ ಬಹಳ ಜನಪ್ರಿಯವಾಗಿತ್ತು.ಆದರೆ ಕಾಲಕ್ರಮದಲ್ಲಿ ಅದರ ನ್ಯೂನತೆಗಳು ಗೋಚರವಾದವು.

ವ್ಯಕ್ತಿ ತನ್ನ ಹಿತದಲ್ಲಿ ಅತಿಯಾದ ಆಸಕ್ತಿ ವಹಿಸಿ ಸಮಾಜದ ಹಿತವನ್ನು ಕಡೆಗಣಿಸುವುದು,ಖಾಸಗಿ ಲಾಭಗಳಿಕೆಯನ್ನು ಪ್ರೋತ್ಸಾಹಿಸಿ ಐಶ್ವರ್ಯದ ಅಸಮಾನ ಹಂಚಿಕೆಗೆ ಅವಕಾಶ ಕೊಡುವುದು,ಉದ್ಯಮ ಸ್ವಾತಂತ್ರ್ಯದ ಹೆಸರಿನಲ್ಲಿ ಸರ್ವಸ್ವಾಮ್ಯಗಳಿಗೆ ಅವಕಾಶ ಕೊಡುವುದು,ವ್ಯಾಪಾರದ ಕಾಲಕಾಲಿಕ ಏರುಪೇರುಗಳಿಂದ ಆರ್ಥಿಕ ಜೀವನದ ಸಮಸ್ಥಿತಿಯನ್ನು ಕೆಡಿಸುವುದು,ಸಮಾಜವನ್ನು ಛಿದ್ರಗೊಳಿಸುವ ವರ್ಗ ಕಲಹಕ್ಕೂ ಕಾರ್ಮಿಕರ ಶೋಷಣೆಗೂ ಅವಕಾಶ ಕೊಡುವುದು-ಇವು ಸ್ವತಂತ್ರ ಉದ್ಯಮ ಪದ್ಥತಿಯ ಮೂಖ್ಯ ನ್ಯೂನತೆಗಳು.

ಈ ನ್ಯೂನತೆಗಳನ್ನು ಹೋಗಲಾಡಿಸಲು ಕೆಲವು ದೇಶಗಳು ಸಮಾಜವಾದ ಪದ್ಥತಿಯನ್ನು ಆಚರಣ್ಗೆ ತಂದಿವೆ.ಇದು ಸ್ವತಂತ್ರ್ಯ ಉದ್ಯಮ ಪದ್ಥತಿಗೆ ವಿರುದ್ಧವಾದುದು.ಇಲ್ಲಿ ವ್ಯಕ್ತಿ ಹಿತಕ್ಕಿಂತಲೂ ಸಮಾಜದ ಹಿತಕ್ಕೇ ಪ್ರಾಧಾನ್ಯ ಆದುದರಿಂದ ಖಸಗಿ ಒಡೆತನಕ್ಕೆ ಪ್ರತಿಯಾಗಿ ಸಾರ್ವಜನಿಕ ಒಡೆತನವಿರುವುದು.ಸಂಪತ್ತಿನ ಉತ್ಪಾದನೆ ಮತ್ತು ಹಂಚಿಕೆ ಇಡೀ ಸಮಾಜವನ್ನು ಪ್ರತಿನಿಧಿಸುವ ಸರ್ಕಾರದ ಹತೋಟಿಯಲ್ಲಿರುವುದು.ಸರ್ಕಾರ ತನ್ನ ಗುರಿಸಾಧನೆಗೆ ಯೋಜಿತ ಕಾರ್ಯಕ್ರಮವನ್ನು ಹಾಕಿಕೊಳ್ಳುವುದು.

ಸಮಾಜವಾದ ಪದ್ಥತಿಯಲ್ಲಿ ಸರ್ಕಾರ ಸದಾ ಸಮಾಜದ ಹಿತವನ್ನು ಗಮನದಲ್ಲಿಟ್ಟು ತನ್ನ ಆರ್ಥಿಕ ಕಾರ್ಯಕ್ರಮಗಳನ್ನು ನಿರ್ಧರಿಸುವುದು.ಉತ್ಪನ್ನ ಸಾಧನಗಳನ್ನು ಸಮಾಜಕ್ಕೆ ಅತ್ಯಂತ ಉಪಯುಕ್ತವನಿಸುವ ಉದ್ಯಮಗಳಿಗೆ ಒದಗಿಸುವುದು.ಸಂಪತ್ತಿನ ಅಸಮಾನ ಹಂಚಿಕೆಯನ್ನು ಹೋಗಲಾಡಿಸಿ ಸರ್ವರಿಗೂ ಸಮಾನ ನ್ಯಾಯ ಮತ್ತು ಆರ್ಥಿಕ ಸ್ವಾತಂತ್ರ್ಯವನ್ನು ದೊರಕಿಸಲು ಪ್ರಯತ್ನಿಸುವದು.ಆದುದರಿಂದಲೇ ಸಮಾಜವಾದವನ್ನು ಪ್ರಜಾಪ್ರಭುತ್ವದ ಆರ್ಥಿಕ ಪೂರಕವೆನ್ನುವರು.ಕಾರ್ಮಿಕ ವರ್ಗಕ್ಕೆ ಗೌರವ ಸ್ಥಾನವನ್ನು ಯೋಗ್ಯ ಪ್ರತಿಫಲವನ್ನು ದೊರಕಿಸಿ ಶೋಷಣೆಯನ್ನು ತಪ್ಪಿಸುವುದು.ಇದರಿಂದ ಪ್ರೋತ್ಸಾಹಿತರಾಗಿ ಕಾರ್ಮಿಕರು ಶ್ರದ್ಧೆಯಿಂದಲೂ ಆಸಕ್ತಿಯಿಂದಲೂ ಕೆಲಸ ಮಾಡಿ ಉತ್ಪಾದನೆಯನ್ನು ಹೆಚ್ಚಿಸುವರು.ಈ ಅಧಿಕ ಉತ್ಪಾನೆಯ ಫಲ ಇಡೀ ಸಮಾಜಕ್ಕೇ ದೊರಕುವುದು.

ಆದರೆ ಸಮಾಜದಲ್ಲಿ ಸರ್ಕಾರದ ಹತೋಟ ಅತಿಯಾಗಿ ವ್ಯಕ್ತಿಸ್ವಾತಂತ್ರ್ಯ ನಾಶವಾಗುವುದು.ಎಲ್ಲ ಆರ್ಥಿಕ ನಿರ್ಧಾರಗಳನ್ನು ಸರ್ಕಾರವೇ ಕೈಗೊಳ್ಳುವುದರಿಂದ ವೈಯುಕ್ತಿಕ ಪ್ರತಿಭೆಗೆ ಅವಕಾಶವಿರುವುದಿಲ್ಲ.ಆದುದರಿಂದ ಸಮಾಜವಾದ ಪದ್ಥತಿಯನ್ನು ದಾಸ್ಯಕ್ಕೆ ಹೆದ್ದಾರಿಯೆಂದು ಕೆಲವರು ಟೀಕಿಸುವರು.ಅಧಿಕಾರಿಗಳ ಪ್ರಾಬಲ್ಯ ಅಧಿಕವಾಗಿ ನೌಕರಶಾಹಿಯ ದುಷ್ಟವೃತ್ತಿಗಳಾದ ಲಂಚಗುಳಿತನ,ಸ್ವಜನ ಪಕ್ಷಪಾತ,ವೈಯಕ್ತಿಕ ನಿರಾಸಕ್ತಿ,ಆಡಳಿತ ವಿಳಂಬ ಮುಂತಾದವು ತಲೆದೋರುವುವು.ಇದರಿಂದ ದಕ್ಷತೆ ಕ್ಷೀಣಿಸಿ ಉತ್ಪಾದನೆ ಕಡಿಮೆಯಾಗುವುದು.ಈ ನಪ್ಪದ ಹೊರೆ ಎಡೀ ಸಮಾಜದ ಮೇಲೆ ಬೀಳುವುದು.

ಸ್ವತಂತ್ರ್ಯ ಉದ್ಯಮ ಮತ್ತು ಸಮಾಜವಾದ ಪದ್ಧಿತಿಗಳೆರಡರ ಪ್ರಯೋಜ್ನಗಳನ್ನೂ ಸಾಧ್ಯವಾದಮಟ್ಟಿಗೆ ಪಡೆಯಲು ಅನಿಸರಿಸುವ ಮಧ್ಯಮಾರ್ಗಕ್ಕೆ ಮಿಶ್ರ ಆರ್ಥಿಕ ಪದ್ಥತಿಯೆಂದು ಹೆಸರು.ಇಲ್ಲಿ ಖಾಸಗಿ ಮತ್ತು ಸಾರ್ವಜನಿಕ ಹಿತರಕ್ಷಣೆಗೆ ಅವಶ್ಯವೆನಿಸುವ ಮತ್ತು ಖಾಸಗಿಯವರಿಂದ ಅಭಿವೃದ್ಧಿಪಡಿಸಲಾಗದ ಉದ್ಯಮಗಳನ್ನು ಸಾರ್ವಜನಿಕವಲಯದಲ್ಲಿಟ್ಟುಕೊಂಡು ಉಳಿದವರನ್ನು ಖಾಸಗಿ ವಲಯಕ್ಕೆ ಬಿಡಲಾಗುವುದು.ಖಾಸಗಿ ಉದ್ಯಮಗಳ ಮೇಲೆ ಸರ್ಕಾರ ಸಾಮಾನ್ಯ ಹತೋಟಿಯನ್ನು ಮಾತ್ರ ಇಟ್ಟುಕೊಂಡಿರುವುದು.ಇವಕ್ಕೆ ಅವಶ್ಯವೆನಿಸುವ ನೆರವು ಮತ್ತು ಪ್ರೋತ್ಸಾಹವನ್ನು ಸರ್ಕಾರ ನೀಡುವುದು.ಯಾವುದೇಖಾಸಗಿ ಉದ್ಯಮವೆನ್ನಾಗಲೀ ಸಾರ್ವಜನಿಕ ಹಿತದೃಷ್ಟಿಯಿಂದ ರಾಷ್ಟ್ರೀಕರಣ ಮಾಡಿದಲ್ಲಿ ಸೂಕ್ತ ಪರಿಹಾರ ನೀಡಲಾಗುವುದು.

ಮಿತ್ರ ಆರ್ಥಿಕ ಪದ್ಧತಿ ಉತ್ತಮವೆನಿಸಿದರೂ ಆಚರಣೆಗೆ ತರುವುದು ಬಹು ಕಷ್ಟ ಖಾಸಗಿ ಮತ್ತು ಸಾರ್ವಜನಿಕ ವಲಯಗಳಲ್ಲಿ ಪರಸ್ಪರ ಸಂಶಯ ಮತ್ತು ಅಹಿತ ಸ್ಪರ್ಧೆಯ ಪ್ರವೃತಿ ಕಾಣಬರುವುದು.ಆದುದರಿಂದ ಇವು ಉದ್ಯಮಗಳ ದಕ್ಷತೆಗೆ ಗಮನ ಕೊಡುವುದಕ್ಕಿಂತಲೂ ತಮ್ಮ ಕ್ಷೇತ್ರವಿಸ್ತರಣೆಯಲ್ಲಿಯೇ ಹೆಚ್ಚು ಆಸಕ್ತಿ ವಹಿಸುವ ಸಂಭವವಿದೆ.

ವ್ಯಕ್ತಿಸ್ವಾತಂತ್ರ್ಯ ಮತ್ತು ಪ್ರಜಾಪ್ರಭುತ್ವ ನಿಯಮಗಳನ್ನು ಸಂಪೂರ್ಣವಾಗಿ ಪ್ರತಿಪಾದಿಸುವ ಆರ್ಥಿಕ ಪದ್ಥತಿಯೇ ಸಹಕಾರಿ ಪದ್ಥತಿ.ಸ್ಪರ್ಧೆಯ ದುಷ್ಪರಿಣಾಮಳಿಗೂ ಕೇರಿದ್ರೀಕೃತ ಸರ್ಕಾರಿ ಆಡಳಿತದ ದಬ್ಬಾಳಿಕೆಗೂ ಅವಕಾಶ ಕೊಡದೆ,ಜನಸಾಮಾನ್ಯರೂ ಸಮಾನ ಹಕ್ಕು ಬಾಧ್ಯತೆಗಲ ಆಧಾರದ ಮೇಲೆ ಸ್ವಪ್ರಯತ್ನದಿಂದಲೇ ತಮ್ಮ ಭೌತಿಕ ಹಾಗೂ ನೈತಿಕ ಜೀವನದ ವಿಕಾಸವನ್ನು ಸಾಧಿಸಲು ಸಹಕಾರ ಸರ್ವಶ್ರೇಷ್ಠಮಾರ್ಗವೆಂದು ನಂಬಲಾಗಿದೆ.ಸ್ವಸಹಾಯ ಮತ್ತು ಪರಸ್ಪರ ಸಹಾಯ,ಸ್ವಯಮಾಡಳಿತ,ಮಿತವ್ಯಯ,ಪ್ರಾಮಾಣಿಕತೆ ಮುಂತಾದ ಉನ್ನತ ಧ್ಯೇಯಗಳನ್ನು ಸಹಕಾರ ಪ್ರತಿಪಾದಿಸುವುದು.ಸಹಕಾರ ಜನಪ್ರಿಯ ಚಳುವಳಿಯಾಗಿದ್ದರೆ ಮಾತ್ರ ಪ್ರಯೋಜನ.ಸರ್ಕಾರದ ಮಾರ್ಗದರ್ಶನವಿದ್ದರೂ ಹತೋಟಿಯಿರಬಾರದು.ಸಹಕಾರದ ಯಶಸ್ಸಿಗೆ ವಿದ್ಯಾಪ್ರಗತಿ ಅತ್ಯಾವಶ್ಯಕ.ಸಹಕಾರ ಪದ್ಥತಿಯನ್ನು ನಾನಾ ಕ್ಷೇತ್ರಗಳಲ್ಲಿ ಆಚರೆಣೆಗೆ ತರಲಾಗಿದೆ.ಪದಾರ್ಥಗಳ ಮಾರಾಟ,ಲೇವಾದೇವಿ ಮುಂತಾದ ಕ್ಷೇತ್ರಗಳಲ್ಲಿ ಇದು ವಿಶೇಷ ಪ್ರಗತಿಯನ್ನು ಸಾಧಿಸಿದ್ದರೂ ಉತ್ಪಾದನಾ ಕ್ಷೇತ್ರದಲ್ಲಿ ಅದರಲ್ಲಿಯೂ ಅಧಿಕ ಬಂಡವಾಳ ಹೂಡಬೇಕಾದ ಆಧುನಿಕ ಕೈಗಾರಿಕಾ ಕ್ಷೇತ್ರದಲ್ಲಿ ಇದರ ಪ್ರಗತಿ ತೃಪ್ತಿಕರವಗಿಲ್ಲ.ಆದರೆ ರೈತರ ಹಿತಸಾಧನೆಗೆ ಸಹಕಾರ ಅತ್ಯುತ್ಯಮ ಮಾರ್ಗವೆಂದು ಹೇಳಲಾಗಿದೆ. (ಕೆ.ಎನ್.ಎಂ)

ಆರ್ಥಿಕ ಬೆಳೆವಣಿಗೆ : ವ್ಯಕ್ತಿಯ ಜೀವನ ಮಟ್ಟ ಸುಧಾರಿಸಿ,ದೇಶದ ಸಂಪನ್ಮೂಲಗಳು ಹೆಚ್ಚಿದಲ್ಲಿ ಅದನ್ನು ಆರ್ಥಿಕ ಬೆಳೆವಣೆಗೆ(ಎಕನಾಮಿಕ್ ಗೋತ್ರ)ಎನ್ನಬಹುದು.ಇದು ಮಾನವನ ಅನೇಕ ಆಕಾಂಕ್ಷೆಗಳ ಸಾಧನೆಗೆ ಕೀಲಕೈನಂತಿದೆಯೆಂಬ ದೃಢನಂಬಿಕೆ ಎಲ್ಲೆಡೆ ಬೆಲೆಯುತ್ತಿದೆ.ಇಂಥ ನಂಬಿಕೆ ಕೇವಲ ಆರ್ಥಿಕ ಪ್ರಗತಿಯಲ್ಲಿ ಹಿಂದುಳಿದ ದೇಶಗಳಿಗಷ್ಟೇ ಸೀಮಿತವಾಗಿಲ್ಲ.ಪ್ರಗತಿ ಹೊಂದಿದ ರ್ರಷ್ಟ್ರಗಳೂ ಆರ್ಥಿಕ ಬಿಳೆವಣಿಗೆಗೆ ನಿರ್ಯಾತಮೌಲ್ಯವಿದೆಯೆಂದು ಕಂಡುಕೊಂಡಿರುವರು.

ಆರ್ಥಿಕ ಬೆಳೆವಣಿಗೆಯ ವಿಷಯ ಕೇವಲ ಒಂದು ದೇಶದ ಆರ್ಥಿಕ ಬೆಳೆವಣಿಗೆಯ ಪ್ರಶ್ನೆಯಾಗಿರದೆ ಅಂತಾರಾಷ್ಟ್ರೀಯದಲ್ಲಿಯೂ ಇಂದು ಮಹತ್ವದ ಪ್ರಶ್ನೆಯಾಗಿದೆ.೧೯ನೇ ಶತಮಾನದಂತೆಯೇ ದೀರ್ಘಕಾಲೀನ ಆರ್ಥಿಕ ಬದಲವಣೆಯ ಸಮಸ್ಯೆಯನ್ನು