ಪುಟ:Mysore-University-Encyclopaedia-Vol-6-Part-6.pdf/೫೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ಗುಂತಗೋಳ ಪಾಳೆಯಗಾರರು

    ಅವರೆ, ಹರಳು ಇತ್ಯಾದಿಗಳ ವ್ಯವಸಾಯ ಸಹ ಇದೆ. ಕೆರೆಗಳಿಂದ ಸ್ವಲ್ಪಮಟ್ಟಿಗೆ ಬತ್ತದ ಬೆಳೆ 

ಆಗುತ್ತದೆ. ತೋಟಗಳೂ ಇವೆ. ಇಲ್ಲಿಯ ವೀಳ್ಯದ ಎಲೆ ಪ್ರಸಿದ್ಧ.

    ಗುಂಡ್ಲುಪೇಟೆ ಈ ತಾಲ್ಲೂಕಿನ ಕೇಂದ್ರ. ಗುಂಡ್ಲುಹೊಳೆಯ ಎಡದಂಡೆಯ ಮೇಲಿರುವ ಈ ಊರು

ಮೈಸುರು-ಉದಕಮಂಡಲ (ಊಟಿ) ಹೆದ್ದಾರಿಯಲ್ಲಿ ಮೈಸೂರಿನ ದಕ್ಷಿಣಕ್ಕೆ ೬೧ಕಿಮೀ ದೂರದಲ್ಲಿದೆ. ಗುಂಡ್ಲುಪೇಟೆಯಿಂದ ಪುರ್ವಕ್ಕಿರುವ ಚಾಮರಾಜನಗರಕ್ಕೆ, ಪಶ್ಚಿಮದೆಡೆ ಕೇರಳದ ಸುಲ್ತಾನ ಬತ್ತೇರಿ ಮತ್ತು ಮುಂದೆ ಕಣ್ಣಾನೂರಿಗೆ, ವಾಯವ್ಯದಲ್ಲಿ ಹೆಗ್ಗಡದೇವನಕೋಟೆ ಕಡೆಗೆ ರಸ್ತೆಗಳಿವೆ.

    ಈ ಊರಿನ ಪ್ರಾಚೀನನಾಮ ವಿಜಯಪುರ. ಇದು ತೆರಕಣಾಂಬಿ ಅರಸರ ವಶದಲ್ಲಿ ಬಹಳ ಕಾಲ ಇತ್ತೆಂದು ತೋರುತ್ತದೆ. ೧೬೭೪ರಲ್ಲಿ ಮೈಸೂರಿನ ಚಿಕ್ಕದೇವರಾಜ ಒಡೆಯರು ಈ ಸ್ಥಲ ಬೆಳೆಯಲು ಕಾರಣ.ಇವರು ತಮ್ಮ ಬಾಲ್ಯವನ್ನು ಗುಂಡ್ಲುಪೇಟೆಯ ಸಮೀಪದಲ್ಲಿನ ಹಂಗಳದಲ್ಲಿರುವ ಒಂದು ಕೋಟೆಯಲ್ಲಿ

ಬಂಧನದಲ್ಲಿ ಕಳೆಯುತ್ತಿದ್ದಾಗ ಇವರ ತಂದೆ ವಿಧಿವಶರಾಗಲು ಅವರ ಅಂತ್ಯಕ್ರಿಯೆಯನ್ನು ವಿಜಯಪುರದ ಬಳಿ ಇರುವ ಗುಡ್ಲುಹೊಳೆ ಬಳಿ ನೆರವೇರಿಸಿ ಮತ್ತೆ ಸೆರೆಮನೆಗೆ ಹಿಂದಿರುಗಿದರು. ಕಾಲಾನಂತರ ತಂದೆಯ ಅಂತ್ಯಕ್ರಿಯೆ ನಡೆದ ಸ್ಥಳದ ಬಳಿ ಒಂದು ಆಗ್ರಹಾರವನ್ನು ಕಟ್ಟಿಸಿ, ವಿಜಯಪುರದ ಕೋಟೆಯನ್ನು ವಿಸ್ತರಿಸಿ ಭದಪಡಿಸಿ ಸಮಾಧಿಯ ಮೇಲೆ ಪರವಾಸುದೇವ ದೇವಾಲಯವನ್ನು ಕಟ್ಟಿಸಿದರು. ಅಂದಿನಿಂದ ವಿಜಯಪುರ ಪೇಟೆ ಸ್ಥಳವಾಗಿ ಬೆಳೆದು ಗುಂಡ್ಲುಪೇಟೆ ಎಂಬ ಹೆಸರನ್ನು ಗಳಿಸಿತು.ಈಗ ಅಗ್ರಹಾರವಾಗಲಿ ಕೋಟೆಯಾಗಲಿ ಉಳಿದಿಲ್ಲ. ಪರವಾಸುದೇವ ದೇವಾಲಯ ಟಿಪ್ಪು ಸುಲ್ತಾನನ ಆಳಿಕೆಯವರೆಗೂ ಉತ್ತಮ ಸ್ಥಿತಿಯಲ್ಲಿತ್ತು. ಅನಂತರದ ವರ್ಷಗಳಲ್ಲಿ ಸರಿಯಾದ ರಕ್ಷಣೆಯಿಲ್ಲೆದೆ ಪಾಳುಬೆದ್ದಿದೆ. ಕಣಶಿಲೆಯಿಂದ ಕಟ್ಟಿರುವ ಈ ದೇವಾಲಯ ಸಾಕಷ್ಟು ವಿಶಾಲವಾಗಿದ್ದು ಗರ್ಭಗೃಹ , ಪ್ರದಕ್ಷಿಣಾಪಥ, ಸುಕನಾಸಿ, ವಿಶಾಲವಾದ ಮತ್ತು ಚೌಕಟ್ಟಾದ ೧೩ ಕಂಬಗಳಿರುವ ನವರಂಗ ಮತ್ತು ಅದಕ್ಕೆ ಉತ್ತರ ಹಾಗೂ ದಕ್ಷಿಣದ ಕಡೆ ಒಂದೊಂದು ಸಣ್ಣ ಕೋಣೆ ಇವೆ ದೇವಾಲಯದ ಮುಂದುಗಡೆ ಒಂದು ಮುಖಮಂಟಪವಿತ್ತು. ಈಚೆಗೆ ಅದನ್ನು ವಿಜಯನಾರಾಯಣ ದೇವಾಲಯದ ಮುಂಭಾಗಕ್ಕೆ ಸ್ಥಳಾಂತರಿಸಲಾಗಿದೆ. ದೇವಾಲಯದ ವಿನ್ಯಾಸ, ಅಲಂಕೃತವಾದ ಸುಕನಾಸಿಯ ದ್ವಾರ, ಶಿಲ್ಪಗಲು ಮತ್ತು ಕಂಬಗಳು ವಾಸ್ತುಶಿಲ್ಪದ ದೃಷ್ಟಿಯಿಂದ ವಿಶೇಷವಾದದ್ದು. ಈ ದೇವಾಲಯದ ಎಡಪಾರ್ಶ್ವದಲ್ಲಿ ಪರವಾಸುದೇವನ ದೇವಿಯಾದ ಕಮಲವಲ್ಲಿಯ ದೇವಾಲಯವಿದೆ. ಈ ಎರಡೂ ದೇವಾಲಯಗಳ ವಿಗ್ರಹಗಳನ್ನು ಈಗ ವಿಜಯನಾರಾಯಣ ದೇವಾಲಯಕ್ಕೆ ಸ್ತಳಾಂತರಿಸಲಾಗಿದೆ.

      ವಿಜಯನಾರಾಯಣ ದೇವಾಲಯ ಕೋಟೆಯ ಒಳಗಿದೆ. ಇದನ್ನು ಹೊಯ್ಸಳ ವಿಷ್ಣುವರ್ಧನ ಕಟ್ಟಿಸಿದನೆಂದು ಪ್ರತೀತಿ. ಆದರೆ ಇದು ವಿವಿಧ ಹಂತಗಳ ರಚನೆ. ಮುಖಮಂಟಪ ಈಚಿನದು.ನವರಂಗದ ಮೇಲ್ಛಾವಣಿ ವಿಜಯನಗರ ಶೈಲಿಯಂತೆ ಒಳಭಾಗದಲ್ಲಿ ಸಮತಟ್ಟಾಗಿದ್ದು ಮಧ್ಯದಲ್ಲಿ ಕಮಲವನ್ನು ಕೆತ್ತಲಾಗಿದೆ. ನವರಂಗದ ದಕ್ಷಿಣ ಭಾಗದಲ್ಲಿ ಈಗ ಮೂರು ಕೋಣೆಗಳನ್ನು ಮಾಡಿ ಪರವಾಸುದೇವ ಮತ್ತು ಆತನ ಪತ್ನಿಯರ ವಿಗ್ರಹಗಳನ್ನು ಮತ್ತು ಆಳ್ವಾರರ ವಿಗ್ರಹಗಳನ್ನು ಇಡಲಾಗಿದೆ. 13-14ನೆಯ ಶತಮಾನಕ್ಕೆ ಸೇರಿದ ಮೂಲ ವಿಜಯನಾರಾಯಣ ದೇವಾಲಯ ತಲಕಾಡಿನ ವೈದ್ಯೇಶ್ವರ ದೇವಾಲಯದಂತೆ ಮೂಲತಃ ಗರ್ಭಗೃಹ ಮತ್ತು ಸುಕನಾಸಿಯನ್ನು ಮಾತ್ರ ಹೊಂದಿತ್ತು. ಅನಂತರ ಶ್ರೀರಂಗಪಟ್ಟಣ ಹಾಗೂ ತೊಣ್ಣೂರಿನಲ್ಲಿರುವಂತೆ ಮುಚ್ಛಿರುವ ಪ್ರದಕ್ಷಿಣಾಪಥವನ್ನು ಕಲ್ಪಿಸಲಾಯಿತು. 
     
      ಗರ್ಭಗೃಹದ ದ್ವಾರ ಪರವಾಸುದೇವ ದೇವಾಲಯದಲ್ಲಿರುವಂತೆಯೇ ಸುಂದರವಾಗಿದೆ. ಇಲ್ಲಿಯ ಮೂರ್ತಿ ಅಭಯ ಮುದ್ರೆಯಲ್ಲಿ ನಿಂತಿದ್ದು ಬಲಗೈಯಲ್ಲಿ ಕಮಲವನ್ನು ಹಿಡಿದಿದೆ. ಇದರ ಹಿಂಭಾಗದಲ್ಲಿರುವ ತೋರಣದಲ್ಲಿ ದಶಾವತಾರವನ್ನು ಕೆತ್ತಲಾಗಿದ್ದು ಈ ಶಿಲ್ಪ ಹೊಯ್ಸಳರ ಶಿಲ್ಪರಚನೆಯ ಅನುಕರಣೆಯಂತೆ ಕಾಣುತ್ತದೆ. ಇದು ವಿಜಯನಗರದ ಆರಂಭ ಕಾಲಕ್ಕೆ ಸೇರಿದ್ದೆಂದು ಹೇಳಬಹುದು. ಇಲ್ಲಿಯ ಪರವಾಸುದೇವ ವಿಗ್ರಹ ಸುಂದರವೂ ಆಗಿದೆ. ತಲೆಯ ಮೇಲ್ಭಾಗದಲ್ಲಿ ಬಿಚ್ಚಿರುವ ಹೆಡೆಯುಳ್ಳ ಆದಿಶೇಷನ ಸುರುಳಿಯ ಮೇಲೆ ಶಂಖಚಕ್ರ ಧಾರಿಯಾದ ವಾಸುದೇವ ಸುಖಾಸೀನನಾಗಿದ್ದಾನೆ. ಪರವಾಸುದೇವನ ಉತ್ಸವಮೂರ್ತಿಯೂ ಒಳ್ಳೆಯ ಶಿಲ್ಪ. ಹಸ್ತಿನಾವತಿಯಲ್ಲಿದ್ದ ಈ ವಿಗ್ರಹವನ್ನು ಶಿವಸಮುದ್ರಕ್ಕೆ ತಂದು ಅನಂತರ ಇಲ್ಲಿಗೆ ತರಲಾಯಿತೆಂದು ಪ್ರತೀತಿ.
       ಈ ದೇವಾಲಯಕ್ಕೆ ಒಂದೂವರೆ ಕಿಮೀ ಈಶಾನ್ಯದಲ್ಲಿ ರಾಮೇಶ್ವರ ದೇವಾಲಯವಿದೆ. ಈಗ ಶಿಥಿಲವಾಗಿರುವ ಈ ಗುಡಿಯನ್ನು 1337ರಲ್ಲಿ ಕುಮಾರ ಕಂಪಣ್ಣನೆಂಬುವನು ಕಟ್ಟಿಸಿದ. ಇದರ ರಚನೆ ತಲಕಾಡಿನ ವೈದ್ಯೇಶ್ವರ ದೇವಾಲಯ ದಂತಿದೆ. ಚೌಕಟ್ಟಾದ ಗರ್ಭಗೃಹ, ಸುಕನಾಸಿ, ನಾಲ್ಕು ಕಂಬಗಳಿರುವ ನವರಂಗ ಮತ್ತು ಪೂರ್ವ ಹಾಗು ದಕ್ಷಿಣ ದಿಕ್ಕುಗಳಲ್ಲಿ ಕೈಸಾಲೆ ಹಾಗೂ ಪ್ರವೇಶ ದ್ವರಗಳಿವೆ. ಈ ದೇವಾಲಯವನ್ನು ಕಣಶಿಲೆಯಿಂದ ಕಟ್ಟಿ ಗೋಪುರವನ್ನು ಮಾತ್ರ ಇಟ್ಟಿಗೆಯಿಂದ ರಚಿಸಲಾಗಿದೆ. ದೇವಾಲಯದ ಅಧಿಷ್ಠಾನ ಪಟ್ಟಿಕೆಗಳ ಮೇಲೆ ಅನೇಕ ಕನ್ನಡ ಶಸನಗಳಿವೆ. 
                                                           (ಎಂ.ಎಸ್.ಕೆ.)

ಗುಂತಗೋಳ ಪಾಳೆಯಗಾರರು : 1491-1948. ಮೂಲತಃ ಕಂಚಿಯಿಂದ ಬಂದ ಇವರು ಬಿಜಾಪುರದ ಆದಿಲ್ ಶಾಹಿಗಳ ಆಡಳಿತಾವಧಿಯಲ್ಲಿ (1489-1686) ಒಂದು ಸಂಸ್ಥಾನವನ್ನು ಸ್ಥಾಪಿಸಿ ಬ್ರಿಟಿಷ್ ಮತ್ತು ಹೈದರಾಬಾದ್ ನಿಜಾಮರ