ಪುಟ:Rangammana Vathara.pdf/೧೩೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ರಂಗಮ್ಮನ ವಠಾರ

119

ಯಣಯ್ಯನೇ ಬೋರ್ಡನ್ನು ಅನಾವರಣಾ ಮಾಡಿದ.
"ಹಲಿಗೆಯಾದರೆ ಮಳೇಲಿ ನೆನೆದು ಹೊಗುತ್ತೆ. ಇದು ಡಬ್ಬ. ಮಿಸು
ಕೋದಿಲ್ಲ" ಎಂದು ಶಂಕರನಾರಾಯಣಯ್ಯ ವಿವರಿಸಿದ.
ರಂಗಮ್ಮನ ಸಂತೋ‌‌ಷಕ್ಕೆ ಪಾರವಿರಲಿಲ್ಲ. ಬಾಲ್ಯದಲ್ಲಿ ಅವರ ಮನೆಯಲ್ಲಿ
ಒಮ್ಮೆ ಹಸು ಈದಾಗ ಅದಷ್ಟೆ ಸಂತೋಷ ಇಲ್ಲಿ ಅವರಿಗಾಯಿತು.
ಹುಡುಗರೆಲ್ಲ ಚೆದರಿದ ಮೇಲೆ ಜಯರಾಮು ಕೆಳಗೆ ಬಂದವನು ಬೋರ್ಡನ್ನು
ನೋಡಿದ. ಅಕ್ಷರಗಳು ಮುದ್ದಾಗಿದ್ದುವು.
ಮರುದಿನ ಚಂದ್ರಶೇಖರಯ್ಯನ ಹೆಸರು_ಹಲಿಗೆ ಸಿದ್ದವಾಯಿತು .ಇಂಗ್ಲಿಷಿನಲ್ಲಿ
"ಚಂದರ್ ಶೇಖರ್" ಎಂದು ಶಂಕರನಾರಾಯಣಯ್ಯ ಬರೆದಿದ್ದ . ಅದು ಚಂದ್ರ
ಶೇಖರಯ್ಯನ ಕಿಟಿಕಿಯ ಪಕ್ಕದಲ್ಲಿ ವಿರಾಜಮಾನವಾಯಿತು.
ಸಂಜೆ ತಡವಾಗಿ ಮನೆಗೆ ಬಂದ ಜಯರಾಮು ಹೊಸ ಬೋರ್ಡನ್ನೂ ನೋಡಿದ.
ಆ ಅಕ್ಷರಗಳೂ ಸೊಗಸಾಗಿದ್ದುವು.
ತಾನು ಪೇಂಟರ್ ಶಂಕರನಾರಾಯಣಯ್ಯನನ್ನು ಮಾತನಾಡಿಸಲೇಬೇಕೆಂದು
ಜಯರಾಮು ತೀರ್ಮಾನಿಸಿದ.
ಅದಕ್ಕೆ ಮತ್ತೊಂದು ದಿನ ಕಳೆಯಬೇಕಾಯಿತು.ಆ ಸಂಜೆ ಜಯರಾಮು
ಗೇಟಿನ ಬಳಿ ನಿಂತು ಆತ ಬರುವುದನ್ನು ಇದಿರುನೋಡಿದ. ಸವೀಪ ಬರುತ್ತಲೆ
ಜಯರಾಮು ಕೈಮುಗಿದ.
"ನಮಸ್ಕಾರ."
"ನಮಸ್ಕಾರ."
ತಾನು ಮಾತನಾಡಿಸಿದ್ದನ್ನು ಕಂಡು ಶಂಕರನಾರಾಯಣಯ್ಯನಿಗೆ ಆಶ್ಚರ್ಯ
ವಾಗಬಹುದು ಎಂದುಕೊಂಡಿದ್ದ ಜಯರಾಮು. ಆದರೆ ಆತ ಹಳೆಯ ಸ್ನೇಹಿತರಿಗೆ
ಮರುವಂದನೆ ಮಾಡುವ ಹಾಗೆ ಮುಗುಳ್ನಕ್ಕ.
"ಹೊಸ ಪರಿಚಯ ," ಎಂದ ಜಯರಾಮು, ಸ್ವಲ್ಪ ಸಂಕೋಚದಿಂದಲೇ.
"ನೀವು ಜಯರಾಮು ಅಲ್ವೆ?"
"ಯಾರು ಹೇಳಿದ್ರು?"
"ಇಷ್ಟು ದಿವಸದಿಂದ ನೋಡ್ತಾ ಇದೀನಿ. ನನಗೆ ಆಷ್ಟೊ ಗೊತ್ತಾಗಲ್ವೇನ್ರಿ?....
ನೀವು ಕತೆ ಗಿತೆ ಬರೀತೀರಂತೆ."
"ಓ! ಇಲ್ಲಪ್ಪ!"
"ಸುಳ್ಳು!"
ಶಂಕರನಾರಾಯಣ್ಯನಿಗೆ ಇಷ್ಟೆಲ್ಲ ಹೇಗೆ ತಿಳಿಯಿತೆಂದು ಜಯರಾಮುಗೆ
ಆಶ್ಚರ್ಯ. ತನ್ನ ತಂಗಿ ಹೇಳಿರಬಹುದೆಂಬ ಸಂದೇಹ ಮೂಡಿತು. ಆದರೆ ಆ

ಸಂದೇಹ ಸರಿ ಎಂದು ಭಾವಿಸಲು ಮನಸ್ಸು ಒಪ್ಪಲಿಲ್ಲ.