ಪುಟ:Rangammana Vathara.pdf/೧೩೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

126

ಸೇತುವೆ

ಐದನೆಯ ದಿನ ಮಳೆ ಗುಡುಗು ಮಿಂಚುಗಳ ಆರ್ಭಟದೊಡನೆ ಬಂತು.ಬೆಂಗ
ಳೂರಿನ ತುಂತುರು ಹನಿಯಾಗಿ ಬರದೆ ಮಲೆನಾಡಿನ ಘನಘೋರ ಮಳೆಯಾಗಿ ಸುರಿ
ಯಿತು. ರಂಗಮ್ಮ ಸಪ್ಪೆಮೋರೆ ಹಾಕಿಕೊಂಡು, ತಮ್ಮ బలದೊಳಗೆ ಸೋರದೇ
ಇದ್ದ ಜಾಗದಲ್ಲಿ ಬೆಚ್ಚಗೆ ಕುಳಿತರು.
ರಂಗಮ್ಮನ ವಠಾರದಲ್ಲಿ ಹೆಚ್ಚಿನ ಮನೆಗಳೆಲ್ಲಾ ಸೋರುತ್ತಿದ್ದುವು. ಮಳೆ ಸುರಿ
ಯುತ್ತಿದ್ದಾಗಲೆಲ್ಲಾ 'ಥೂ! ಹಾಳು ಮನೆ...ಬೇಗನೇ ಬೇರೆಲ್ಲಿಗಾದರೂ ಹೋಗ್ಬೇಕು'
ಎಂದು ಉದ್ಗಾರ ತೆಗೆಯದವರು ಇರಲಿಲ್ಲ.
ಈ ಸಲವೂ ಅಷ್ಟೆ, ಹಾವಳಿ ಮಾಡುತ್ತ ಸುರಿದುದು ಪ್ರತಿ ವರ್ಷಕ್ಕಿಂತ
ಬೇರೆಯಲ್ಲದ ಮಳೆ.
ಜಯರಾಮು, ರಾಧಾ, ಅವರ ತಾಯಿ ಸೋರುತ್ತಿದ್ದ ನಾಲ್ಕಾರು ಕಡೆಗೆಲ್ಲ
ಪಾತ್ರೆಗಳನ್ನಿಟ್ಟರು. ಪಕ್ಕದ ಕೊಠಡಿ-ಮನೆಯ ಚಂದ್ರಶೇಖರಯ್ಯ ಹೊರ
ಹೋಗಿದ್ದ.
"ಪಕ್ಕದ್ಮನೆಯೊಳಗೆ ಮಳೆ ನೀರು ಬಿದ್ದು ಎಲ್ಲಾ ಒದ್ದೆಯಾಗಿ ಹೋಗುತ್ತೆ
ಅಲ್ವೆ ಅಣ್ಣ?”
ಆ ಪ್ರಶ್ನೆಯೊಡನೆ ರಾಧಾ ಜಯರಾಮುವಿನ ಮುಖ ನೋಡಿದಳು. ಆದರೆ
ಆತನ ಪ್ರಶ್ನಾರ್ಥಕ ದೃಷ್ಟಿಯನ್ನು ಎದಿರಿಸಲಾರದೆ, ನೀರು ಸುರಿಯುತ್ತಿದ್ದ ಛಾವಣಿ
ಯತ್ತ దిಟ್ಟಿಸಿದಳು.
ತಾಯಿ ರಾಧೆಯ ಮಾತಿಗೆ ಅರ್ಥ ಕಲ್ಪಿಸುವ ಗೊಡವೆಗೆ ಹೋಗದೆ
ಹೇಳಿದಳು:
"ಅದೇನೇನು ಹರವಿದಾನೋ ಮಹಾರಾಯಾ.."
ಮಹಡಿಯ ಕೆಳಗಿನ ನಾಲ್ಕು ಮನೆಗಳಷ್ಟೇ ಮಳೆಯನ್ನು ಸ್ವಲ್ಪ ಮಟ್ಟಿಗಾದರೂ
ತಡೆಹಿಡಿದು ಇದಿರಿಸುತ್ತಿದ್ದುವು.
ರಂಗಸ್ವಾಮಿ 'ಡ್ಯೂಟಿ'ಯ ಮೇಲೆ ಹೋಗಿದ್ದ. ಉಪಾಧ್ಯಾಯರು ತಂಗಿ
ಸುಮ೦ಗಳೆಯನ್ನು ಕರೆದುಕೊಂಡು ಭಾವನ ಊರಿಗೆ ತೆರಳಿದ್ದರು. ಆ ಎರಡೂ ಮನೆ
ಗಳ ಒಡತಿಯರು ಗಾಳಿ ಬೀಸಿದಾಗ ಒಳಬರುತ್ತಿದ್ದ ಮಳೆಯನ್ನು ತಡೆಯಲೆಂದು ಕಿಟಿಕಿ
ಗಳನ್ನು ಮುಚ್ಚಿದರು. ಹಾಗೆ ಮುಚ್ಚಿದ ಮೇಲೂ ಕಿಟಿಕಿಯ ಎಡೆಗಳಿಂದ ಇಳಿದು
ಒಳಕ್ಕೆ ಹರಿಯುತ್ತಿದ್ದ ನೀರನ್ನು ಅವರು ಬಟ್ಟೆ ಅದ್ದಿ ಪಾತ್ರೆಗೆ ಹಿಂಡಿದರು.
ಅವಾಂತರವಾಗುತ್ತಿದ್ದುದು ಓಣಿ ಮನೆಗಳಲ್ಲಿ. ನೀರು ಓಣಿಯಿಂದ ಸರಿಯಾಗಿ
ಹೊರಗೆ ಹರಿಯದೆ ಮನೆಗಳೊಳಕ್ಕೆ ಬರುತ್ತಿತ್ತು. ಹೆಂಚಿನ ಬಿರುಕುಗಳಿಂದೆಲ್ಲ ನೀರು
ಸುರಿಯುತ್ತಿತ್ತು. ಎದುರಿನ ಎರಡು ಮನೆಗಳಿಗಾದರೆ, ಗಾಳಿ ಬೀಸುತ್ತ ಮಳೆ ಬಂದಾಗ
ಮಾತ್ರ ತೊಂದರೆ. ಓಣಿ ಮನೆಗಳಲ್ಲಿ, ಗಾಳಿ-ಮಳೆ ಜತೆಯಾಗಿಯೇ ಬಂದರೆ
ಅಷ್ಟೊಂದು ಅಪಾಯವಿರಲಿಲ್ಲ. ಹೆಚ್ಚಿನ ನೀರು ಛಾವಣಿ ಹೊರಕ್ಕೆ ಹರಿಯು