ಪುಟ:Rangammana Vathara.pdf/೧೭೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ರಂಗಮ್ಮನ ವಠಾರ

159

ಅರಚಿದ:
"ನಡಿಯಮ್ಮಾ ಒಳಗೆ. ನಿನಗೆ ಹುಚ್ಚು!"
"ನನಗೆ ಹುಚ್ಚು!ಹುಚ್ಚು!ತಾಯಿಗೇ ಹೊಡೆಯೋಕೆ ಬರ್ತಿಯಲ್ಲೋ ಪಾಪಿ!"
ರಾಜಮ್ಮ ಅಳತೊಡಗುತ್ತಾ ಕೈಯಲ್ಲಿದ್ದ ಪೊರಕೆಯಿಂದ ಮಗನಿಗೆ ಬಾರಿಸಿ
ದಳು.......
ಇನ್ನು ತಾವು ಓಣಿಗೆ ಪ್ರವೇಶಿಸಬಹುದೆಂದು ನಿರ್ಧರಿಸಿ ರಂಗಮ್ಮ ಹೊರಕ್ಕೆ
ಬಂದು, ಎತ್ತರದ ಧ್ವನಿಯಲ್ಲಿ ಗದರಿದರು:
"ಏನಿದು ಗಲಾಟೆ? ವಠಾರಕ್ಕೆ ಪೋಲೀಸ್ನೋರ್ನ ಕರಕೊಂಡು ಬರ್ಬೇಕೂಂತ
ಮಾಡಿದೀರೋ ಹ್ಯಾಗೆ? ಇಷ್ಟು ಬುದ್ಧಿ ಇಲ್ದೆ ಹೋಯ್ತೆ ನಿಮಗೆ? ಏನು ಸಮಾ
ಚಾರ? ಬನ್ನಿ ಇಲ್ಲಿ__ನಮ್ಮನೇಗೆ ಬನ್ನಿ...ರಾಜಮ್ಮ,ಅಹಲ್ಯಾ_ಎಲ್ರೂ ಬನ್ನಿ."
ರಂಗಮ್ಮನ ಮನೆ ತುಂಬಿ ಹೋಯಿತು. ಅಹಲ್ಯೆಯನ್ನು ಎಳೆದುಕೊಂಡು
ಬಂದರು. ವೆಂಕಟೇಶ, ಉಟ್ಟ ಬಟ್ಟೆಯಲ್ಲೆ_ಬರಿಗಾಲಲ್ಲೆ "ರಾಕ್ಷಸರು! ಪಿಶಾಚಿಗಳು!"
ಎಂದು ಶಪಿಸುತ್ತ ವಠಾರದಿಂದ ಹೊರಹೋದ.
ಅಹಲ್ಯಾ ಅಳುತ್ತಳುತ್ತ ಹೇಳಿದಳು:
"ಏನೂ ಇಲ್ಲ ರಂಗಮ್ನೋರೆ ನನ್ನ ಸ್ನೇಹಿತೆ ಇಂದಿರಾ ಮನೆಗೆ ಹೋಗಿದ್ದೆ.
ಸೇತುವೆ ದಾಟ್ತಿದ್ದಾಗ ರಾಜಮ್ಮನ ಮಗನೂ ಬಂದ್ರು......ಇಷ್ಟು ದೂರ ಒಂದೇ
ರಸ್ತೇಲಿ ನಡಕೊಂಡು ಬಂದ್ವಿ."
'ರಾಜಮ್ಮನ ಮಗ' ಎಂದಿದ್ದಳು ಹುಡುಗಿ ;'ವಂಕಟೇಶ' ಎಂದಲ್ಲ.
ಸ್ವಲ್ಪ ದೂರ ನಡೆದು ಬಂದರೆಂಬುದೇನೋ ನಿಜವೇ.
"ಅಷ್ಟಕ್ಕೆ ಇಷ್ಟೆಲ್ಲಾ ರಂಪ ಮಾಡ್ಬೇಕೆ?" ಎಂದು ಚಂಪಾವತಿ ಸಂಧಿ ಸಾಧಿಸಿ
ಒಳ್ಳೆಯ ಮಾತನ್ನು ಆಡಿದಳು.
"ಔಷಧಿ ತರೋಕೆ ಅವತ್ತೆಲ್ಲಾ ಜತೇಲೆ ಕಳಿಸ್ತಿರ್ಲಿಲ್ವೇನೊ?" ಎಂದು ಕಾಮಾ
ಕ್ಷಿಯೂ ಅಹಲ್ಯೆಯ ಬೆಂಬಲಕ್ಕೆ ಬಂದಳು.
ಅಹಲ್ಯೆ ಆಡಿದುದು ಸತ್ಯವಿರಲಿ ಸುಳ್ಳಿರಲಿ, ಆ ಪ್ರಕರಣವನ್ನು ಮುಂದಕ್ಕೆ
ಬೆಳೆಯಗೊಡಲು ರಂಗಮ್ಮ ಬಿಡುವಂತಿರಲಿಲ್ಲ. ವಠಾರದ ಒಳ್ಳೆ ಹೆಸರಿಗೆ ಮಸಿ ಬಳೆಸಿ
ಕೊಳ್ಳಲು ಅವರು ಸಿದ್ಧರಿರಲಿಲ್ಲ. ಅಷ್ಟರಲ್ಲೇ ಬೇರೊಂದು ಯೋಚನೆಯೂ ಅವರಿಗೆ
ಹೊಳೆಯಿತು. ಅದನ್ನು ಕಾರ್ಯಗತಗೊಳಿಸುವುದಕ್ಕೆ ಪೂರ್ವಭಾವಿಯಾಗಿ ವಠಾರ
ದಲ್ಲಿ ಶಾಂತಿ ನೆಲೆಸುವಂತೆ ಮಾಡಲು ಅವರು ಉದ್ಯುಕ್ತರಾದರು.
"ಅಹಲ್ಯಾ,ಬಾಮ್ಮ ಇಲ್ಲಿ. ಇದು ದೇವರ ಪಠ. ಇದನ್ನು ಮುಟ್ಟಿ ಆಣೆ
ಮಾಡಿ ಹೇಳು."
ಅಹಲ್ಯಾ ಹಾಗೆ ಮಾಡಿದಳು.

"ರಾಜಮ್ಮ, ಇಷ್ಟಕ್ಕೆ ಸಾಕು. ಆಗಿರೋದ್ನೆಲ್ಲಾ ಎಲ್ಲರೂ ಮರೆತ್ಬಿಡಿ...ಹೋಗಿ