ಪುಟ:Rangammana Vathara.pdf/೨೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

14

ಸೇತುವೆ

ಹೆಂಡತಿ ಮತ್ತು ಮಗುವನ್ನು ಬಚ್ಚಲು ಮನೆಯ ಮತ್ತು ನೀರಿನ ಸಂಕಷ್ಟಗಳಿಗೆ ಬಿಟ್ಟು
ಕೊಟ್ಟು, ಆತ ಮಲ್ಲೇಶ್ವರದ ಈಜು ಕೊಳದಲ್ಲಿ ಸ್ನಾನ ಮಾಡಿ ಬರಲು ಎದ್ದು
ಬಿಡುತ್ತಿದ್ದ.
ಸಾಲು ಮನೆಗಳು ಕವಲೊಡೆದಿದ್ದ ಕಟ್ಟಡಕ್ಕೆ ಒಂದು ಮಹಡಿಯಿತ್ತು.ರಂಗ
ಮ್ಮನ ಮಹಡಿಯ ಮಹಲು!ಕೆಳ ಭಾಗದಲ್ಲಿ ನಾಲ್ಕು ಸಂಸಾರಗಳಿದ್ದುವು. ಮೇಲೆ
ಮೂರು.ಕೆಳಗೆ ರಂಗಮ್ಮನ ಮನೆಯ ಭಾಗಕ್ಕೇ ಅಂಟಿಕೊಂಡು ಒಬ್ಬ ತಾಯಿ ಮತ್ತು
ಇಬ್ಬರು ಮಕ್ಕಳಿದ್ದರು. ಕೋಲಾರದವರು. ದೊಡ್ಡವನು ಎಂಜನಿಯರಿಂಗ್
ಕಾಲೇಜಿನಲ್ಲಿ ಓದುತ್ತಿದ್ದ. ಅವನ ಜತೆಗೆಂದು ಚಿಕ್ಕವನೂ ಇಲ್ಲಿಗೇ ಬಂದಿದ್ದ, ಇಂಟರ್
ಪರೀಕ್ಷೆ ಕಟ್ಟಲು. ಬೆಂಗಳೂರಿನಲ್ಲಿ ಹುಡುಗರು ಕೆಟ್ಟು ಹೋಗಬಹುದೆಂದು ತಾಯಿಯೂ
ಒಟ್ಟಿಗೆ ಬಂದಿದ್ದಳು. ಎಂದಾದರೊಮ್ಮೆ ಮಕ್ಕಳಿಗೆ ಪಿತೃದರ್ಶನವೂ ಆಗುತ್ತಿತ್ತು.
ತಾಯಿ ಆ ಮಕ್ಕಳನ್ನು ಬೆಳಗ್ಗೆ ಬೇಗನೆ ಎಬ್ಬಿಸುತ್ತಿದ್ದಳು. ವಿದ್ಯುದ್ದೀಪ ಅವರಿಗೂ
ಇರಲಿಲ್ಲ. ಆದರೆ ಶುಭ್ರ ಪ್ರಕಾಶ ಬೀರುತ್ತಿದ್ದ ಕಂದೀಲಿತ್ತು.
ಆ ಕಂದೀಲಿನ ಬೆಳಕು ಎದುರು ಭಾಗದಲ್ಲಿದ್ದ ತಮ್ಮ ಮನೆಯ ಬಾಗಿಲಿನ ಬಿರುಕು
ಗಳೆಡೆಯಿಂದ ಒಳಬಿದ್ದೊಡನೆಯೇ ರಾಜಮ್ಮನಿಗೆ ಎಚ್ಚರವಾಗುತ್ತಿತ್ತು. ರಂಗಮ್ಮನ
ಬಳಿಕ, ಆಕೆ ಆ ವಠಾರದ ಇನ್ನೊಬ್ಬ ವಿಧವೆ. ದೊಡ್ಡ ಮಗ ಗುಂಡಣ್ಣ ಉಂಡಾಡಿ;
ಎರಡನೆಯವನಿಗೆ ಒಳ್ಳೆಯ ಡಾಕ್ಟರೊಬ್ಬರ ಬಳಿಯಲ್ಲಿ ಕೆಲಸವಿತ್ತು. ವಾಸ್ತವವಾಗಿ
ಅದು ಜವಾನನ ಕೆಲಸ. ಅಷ್ಟೇ ಸಂಬಳ. ಆದರೆ ಜವಾಬ್ದಾರಿ ಕಂಪೌಂಡರನದು.
ಆ ಕಾರಣದಿಂದ ರಾಜಮ್ಮ ತನ್ನ ಮಗನಿಗೆ 'ಕಂಪೋಂಡ್ರು ಕೆಲಸ'ವೆಂದೇ ಹೇಳು
ತ್ತಿದ್ದಳು. 'ಕಂಪೋಂಡ್ರು' ಮನೆ ಬಿಡುವುದು ಏಳು ಘಂಟೆಗಾದರೂ ರಾಜಮ್ಮನಿಗೆ
ಬೆಳಗಿನ ಜಾವ ನಿದ್ದೆ ಬರುತ್ತಿರಲಿಲ್ಲ. 'ಅವರು' ಇದ್ದಾಗ ನಸುಕಿನಲ್ಲೆ ಎದ್ದು
ಅಭ್ಯಾಸ.
ರಾಜಮ್ಮನ ಮನೆಯ ಬಲ ಭಾಗಕ್ಕೆ, ಹೊರ ಅಂಗಳಕ್ಕೆ ತಗಲಿಕೊಂಡಿದ್ದುದು
ಪೋಲೀಸ್ ಕಾನ್ ಸ್ಟೇಬಲ್ ರಂಗಸ್ವಾಮಿಯ ಮನೆ. ಪೋಲೀಸನೊಬ್ಬ ಮನೆಯ
ಎದುರು ಭಾಗದಲ್ಲೇ ಇರುವುದು ಮೇಲೆಂಬುದು ರಂಗಮ್ಮನ ಅಭಿಪ್ರಾಯವಾಗಿತ್ತು.
ವಠಾರದ ನಸುಕಿನ ಗದ್ದಲ ಕೇಳುತ್ತಲೆ ರಂಗಸ್ವಾಮಿಯ ಹೆಂಡತಿಗೆ ಎಚ್ಚರವಾಗುತ್ತಿತ್ತು.
ಆಕೆ ಗೂರಲು ರೋಗಿ. ಎದ್ದು ಕುಳಿತು ಕೆಮ್ಮುತ್ತಿದ್ದಳು. ಮೂವರು ಮಕ್ಕಳ
ಮೇಲಿನ ಹೊದಿಕೆ ಸರಿಪಡಿಸಿ ಮತ್ತೂ ಕೆಮ್ಮುತ್ತಿದ್ದಳು. ರಂಗಸ್ವಾಮಿ ಮಾತ್ರ ಏಕ
ಪ್ರಕಾರವಾಗಿ ಗೊರಕೆ ಹೊಡೆಯುತ್ತಿದ್ದ.

ಆ ಮನೆಗೆ ಎದುರಾಗಿ ಮಾಧ್ಯಮಿಕ ಶಾಲೆಯ ಉಪಾಧ್ಯಾಯರೊಬ್ಬರಿದ್ದರು_
ಲಕ್ಷ್ಮೀನಾರಾಯಣಯ್ಯ. ಆ ಬಡ ಸಂಸಾರದ ಸದಸ್ಯರ ಸಂಖ್ಯೆ ಒಟ್ಟು ಏಳು.
ಸಣ್ಣಪುಟ್ಟ ಮಕ್ಕಳು ಐವರು. ಅವರನ್ನು ಹೊತ್ತು ಹೆತ್ತಿದ್ದ ತಾಯಿ. ಮಕ್ಕಳಾಗ
ಲಿಲ್ಲವೆಂಬ ಕಾರಣದಿಂದ ಗಂಡನ ಮನೆಯಿಂದ ಓಡಿಸಲ್ಪಟ್ಟಿದ್ದ ಉಪಾಧ್ಯಾಯರ