ಪುಟ:Rangammana Vathara.pdf/೩೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

28

ಸೇತುವೆ

ಗಳನ್ನು ತಡವಿ ನೋಡಿ ಮುಖದ ಮೇಲಿಷ್ಟು ನೀರು ಹನಿಸಿದ. ಮಗನನ್ನು ಮೈ
ಮುಟ್ಟಿ ಎಚ್ಚರಿಸಿದ.
"ಲೋ...ಪುಟ್ಟೂ...ಪುಟ್ಟೂ...ಲೋ..."
ಗಡಬಡಿಸಿ ಎದ್ದು ಹುಡುಗ ಹೆದರಿಕೊಂಡೇ ಕೇಳಿದ:
"ಏನಾಯ್ತಪ್ಪಾ, ಅಪ್ಪಾ...."
"ಏನೂ ಇಲ್ಲ ಕಣೋ. ನಾನು ಒಂದಿಷ್ಟು ಹೊರಗೆ ಹೋಗ್ಬಿಟ್ಟು ಬರ್ತೀನಿ...
ಇವತ್ತು ನೀನೇ ಗಂಜಿ ಬೇಯಿಸ್ತೀಯಾ?"
"ಹೂಂ. ಹೂಂ...ಎಷ್ಟೊತ್ತಿಗೆ ಬರ್ತಿಯಪ್ಪಾ?"
"ಮಧ್ಯಾಹ್ನವೇ ಬಂದ್ಬಿಡ್ತೀನಿ ಕಣೋ....ಇನ್ನು ಮಲಕ್ಕೋ."
"ಹೂಂ..."
ಯಾರಿಗೂ ತಿಳಿಯದಂತೆ ಹೊರಹೋಗಬೇಕೆಂದು ಆತ ಬಯಸಿದ್ದರೂ ಕಮ
ಲಮ್ಮ ತನ್ನ ಮನೆಯ ಬಾಗಿಲಲ್ಲೆ ನಿಂತಿದ್ದಳು. ತಂದೆ ಮಗನ ಗುಸುಗುಸು ಮಾತನ್ನು
ಕೇಳಿದ ಮೇಲೆ ಆಕೆ ಸುಮ್ಮನಿರುವುದು ಸಾಧ್ಯವಿರಲಿಲ್ಲ.
"ಏನೂ ಬೇಗ್ನೆ ಹೊರಟ್ಬಿಟ್ಟಿದೀರಲ್ಲಾ?"
"ಹೂಂ ಕಣ್ರೀ....ಬೇರೆ ಬಿಡಾರ ಗೊತ್ಮಾಡ್ಬೇಕು."
_ಗದ್ಗದಿತ ಕಂಠ.
"ಆಗಲಿ ಹೋಗ್ಬಿಟ್ಟು ಬನ್ನಿ."
"ಮಕ್ಕಳ್ನ ಒಂದಿಷ್ಟು_"
" ನೋಡ್ಕೋತೀನಿ. ಹೋಗಿ. "
ಬೆಳಗಾಯಿತು. ರಂಗಮ್ಮ ನಡೆಗೋಲಿನ ಸದ್ದು ಮಾಡುತ್ತ ಒಂದು ಸುತ್ತು
ಬಂದು ಹೋದರು.
ಪುಟ್ಟ ಒಲೆ ಹಚ್ಚಲಿಲ್ಲ. ಕಮಲಮ್ಮನೇ ಬೇಯಿಸಿ ಹಾಕಿದಳು. ಕಾಮಾಕ್ಷಿ
ಎಳೆಯ ಮಗುವನ್ನೆತ್ತಿಕೊಂಡು ಆಡಿಸಿದಳು.
ಈ ದಿನ ಮನೆ ಖಾಲಿಯಾಗುವುದೋ ಇಲ್ಲವೋ ಎಂಬ ಸಂದೇಹ ರಂಗಮ್ಮ
ನನ್ನು ಬಾಧಿಸುತ್ತಲೇ ಇತ್ತು. ಅವರು ದಿನವೆಲ್ಲ ಸಿಡಿದುಕೊಂಡೇ ಮಾತನಾಡಿದರು.
ಗಟ್ಟಿಯಾಗಿಯೇ ಗೊಣಗಿದರು.
ನಾಲ್ಕು ಘಂಟೆಗೆ ನಾರಾಯಣಿಯ ಗಂಡ ಬಂದ. ಎರಡು ಗೋಣಿ ಚೀಲಗಳಲ್ಲಿ
ಮನೆಯ ಎಲ್ಲಾ ಸಾಮಾನುಗಳನ್ನು ತುರುಕಿದ. ಆಗಲೆ ಮೂಲೆ ಸೇರಿದ್ದ ಹಣತೆ
ಯನ್ನೂ ಬಿಡಲಿಲ್ಲ.
ಅವರನ್ನು ಕರೆದೊಯ್ಯಲು, ಕುಂಟುತ್ತಿದ್ದ ಬಡಕಲು ಕುದುರೆಯ ಹರಕು
ಜಟಕಾ ಗಾಡಿಯನ್ನು ‌ತಂದುದಾಯಿತು.
ಮೀನಾಕ್ಷಮ್ಮನ ಮಗ ಕೊನೆಯ ಘಳಿಗೆವರೆಗೂ ಪುಟ್ಟನನ್ನು ಬಿಡಲಿಲ್ಲ.