೧೦೮
ಯಶೋಧರ ಚರಿತೆ
ನಿರವಿಸಿದ ಚಂದ್ರಮತಿಯೆಂ-
ಬರಸಿಯೆ ನಾಯುರಗಿ ಮೊಸಳೆ ಆಡು ಲುಲಾಯಂ
ಚರಣಾಯುಧವಧುವಾದಳ್
ಗುರುವಚನದಿನೀಗಳಭಯಮತಿಯಾಗಿರ್ದಳ್ 58
ನಿನಗಂ ಕುಸುಮಾಳಿಗಂ
ಜಯಿಸಿದಮಳೆಂಬುವಭಯರುಚಿಮತಿಗಳ್ ಮು-
ನ್ನಿನ ಜನ್ಮಮನಿತುಮಂ ನೆ-
ಟ್ಟನೆ ಬಲ್ಲರ್ ಕೇಳ್ದುನಂಬು ನೀನ್ ಧರಣಿಪತೀ 59
ನೀನರೆವೆ ಕೊಂದ ಘೋರಮ-
ನಾನಿಗ್ರಹವಧೆಯಿನಂದು ಸತ್ತವರೆವರ್
ಮೀನುಂ ಮೊಸಳೆಯುಮಾಡಂ-
ತಾ ನೆಗಳ್ದ ಜಪೋತಮಹಿಷಮಾದಂದರಸಾ 60
_____
ಪಡೆದು ಅಭಯರುಚಿಯಾಗಿದ್ದಾನೆ 58. ಚಂದ್ರಮತಿಯೆಂಬ ಆರಸಿ ಕ್ರಮವಾಗಿ ನಾಯಿ, ಹಾವು, ಮೊಸಳೆ, ಆಡು, ಕೋಣ, ಹೇಂಟೆಯಾಗಿ ಹುಟ್ಟಿದ್ದಳು. ಈಗ ಗುರುವಿನ ವಚನವನ್ನು ಕೇಳಿದುದರಿಂದಾಗಿ ಅಭಯಮತಿಯಾಗಿ ಜನಿಸಿದ್ದಾಳೆ. 59. ನಿನಗೂ ಕುಸುಮಾವಳಿಗೂ ಹುಟ್ಟಿದ ಅಭಯರುಚಿ ಅಭಯಮತಿಗಳೆಂಬ ಅವಳಿ ಮಕ್ಕಳು ಹಿಂದಿನ ಇಷ್ಟೂ ಜನ್ಮಗಳನ್ನು ಚೆನ್ನಾಗಿ ಬಲ್ಲರು. ಅವರನ್ನೇ ಕೇಳು ನಿನಗೆ ವಿಶ್ವಾಸವಾದೀತು. 60. ನೀನು ಕೊಂದ ಆ ಘೋರಕಾರ್ಯದ ವಿಷಯ ನಿನಗೇ ಗೊತ್ತಿದೆ. ನಿನ್ನ ಭೀಕರ ಹಿಂಸಾಘಾತದಿಂದ ಮಿÁನು, ಮೊಸಳೆ, ಆಡು, ಹೋತ, ಕೋಣ ಎಂಬ ಜನ್ಮಗಳಲ್ಲಿದ್ದು ಸತ್ತವರೂ ತಿಳಿದಿದ್ದಾರೆ.