ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಕ್ರಿಸ್ತು ಆಗಮನ ದೂತ

ವಿಕಿಸೋರ್ಸ್ದಿಂದ

ಕ್ರಿಸ್ತು ಆಗಮನ ದೂತ

ಸಿಕಂದರಾಬಾದಿನಿಂದ ಪ್ರಕಟವಾಗುತ್ತಿರುವ ತೆಲುಗು ಮಾಸಪತ್ರಿಕೆ. 1957ರಲ್ಲಿ ಆರಂಭವಾಯಿತು. ಧರ್ಮ ಹಾಗೂ ತತ್ತ್ವಶಾಸ್ತ್ರಕ್ಕೆ ಸಂಬಂಧಿಸಿದ ವಿಷಯಗಳಿಗೆ ಮೀಸಲಾಗಿದೆ. ಬಿ.ಎ. ಪ್ರಭಾಕರ್ ಸಂಪಾದಕ, ಜೆ.ಎಸ್. ಬೆನ್ನಿ ಮುದ್ರಕ. ಡಬ್ಲ್ಯೂ.ಸಿ.ಮೂರ್ ಮಾಲೀಕ. ಸಿಕಂದರಾಬಾದಿನ ಡೆಕನ್ ಲಿಟರೇಚರ್ ಪ್ರಿಂಟರ್ಸ್‍ನಲ್ಲಿ ಅಚ್ಚಾಗುತ್ತದೆ. ವಾರ್ಷಿಕ ಚಂದಾ ರೂ. 1. ಪತ್ರಿಕೆಯ ಪ್ರಸಾರ ಸುಮಾರು 18,000. (ಎನ್.ಕೆ.)