ಸದಸ್ಯ:Jayanth1710153

ವಿಕಿಸೋರ್ಸ್ದಿಂದ

ನನ್ನ ಹೆಸರು ಜಯಂತ. ನನ್ನ ಹೆಸರಿನ ಅರ್ಥ ವಿಜಯಶಾಲಿ. ನಾನು ಹುಟ್ಟಿದ ಸ್ಥಳ ಗಣಿನಾಡು ಕೊಲಾರ. ನನ್ನ ತಂದೆಯ ಹೆಸರು ನರೇಂದ್ರ ಕುಮಾರ ಹಾಗು ತಾಯಿ ಮಮತ. ನನಗೆ ಒಬ್ಬ ತಮ್ಮನಿದ್ದಾನೆ. ಅವನ ಹೆಸರು ರೇವಂತ. ನಾವು ಈಗ ಬೆಂಗಳೂರಿನಲ್ಲಿಯೆ ವಾಸಿಸುತಿದ್ದೇವೆ. ನಾನು ನನ್ನ ೧೦ನೇ ತರಗತಿಯಲ್ಲಿ ಒಳ್ಳೆಯ ಅಂಕ ಪಡೆಯುದರ ಮೂಲಕ ಕ್ರೈಸ್ಟ್ ಕಾಲೇಜಿನಲ್ಲಿ ಸೀಟು ಸಿಕ್ಕಿತು. ನಂತರ ನಾನು ನಾನಾ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಿದ್ದೆ. ನನಗೆ ಕನ್ನಡ ಹಾಗು ಗಣಿತ ಎಂದರೆ ಅಚ್ಚು ಮೆಚ್ಚು. ನಂತರ ದ್ವಿತೀಯ ಪಿಯುಸಿಯಲ್ಲಿ ಒಳ್ಳೆಯ ಅಂಕ ಪಡೆಯುವುದರ ಮೂಲಕ ಕ್ರೈಸ್ಟ್ ವಿಶ್ವವಿದ್ಯಾಲಯದಲ್ಲಿ ಪದವಿ ಶಿಕ್ಷಣ ಪಡೆಯುತ್ತಿರುವೆನು. ನಾನು ನೇರ ಮನೋಭಾವ ಉಳ್ಳವನು. ನನಗೆ ಜೀವನದಲ್ಲಿ ತುಂಬಾ ದೊಡ್ಡ ಘಟ್ಟವನ್ನು ಏರಬೇಕೆಂಬ ಆಸೆಯಿದೆ.ನಾನು ನನ್ನ ಓದಿನ ಜೊತೆಗೆ ಕೆಪಿಎಸ್ಸಿ ಪರೀಕ್ಷೆಗೆ ತಯಾರಾಗುವ ಆಸೆಯಿದೆ. ನಾನು ಒಬ್ಬ ಕೆಎಎಸ್ ಅಧಿಕಾರಿಯಾಗಿ ನಮ್ಮ ರಾಜ್ಯಕ್ಕೆ ಸೇವೆ ಸಲ್ಲಿಸಬೇಕೆಂಬ ಆಸೆಯಿದೆ .ನನಗೆ ತುಂಬಾ ಸ್ನೇಹಿತರಿದ್ದಾರೆ. ಅವರಲ್ಲಿ ನನಗೆ ನನ್ನ ಬಾಲ್ಯ ಗಳಯ ಪ್ರತಾಪ್ ಬಹಳ ಆತ್ಮೀಯ. ನನಗೆ ಕ್ರಿಕೆಟ್ ಎಂದರೆ ಪ್ರಾಣ. ನನಗೆ ಸಚಿನ್ ತೆಂಡೂಲ್ಕರ್ ಹಾಗು ರೊಹಿತ್ ಶರ್ಮ ಇವರಿಬ್ಬರೂ ತುಂಬ ಇಷ್ಟ. ನನಗೆ ಚರ್ಚೆಗಳಲ್ಲಿ ಬಹಳ ಆಸಕ್ತಿಯಿದೆ. ನನಗೆ ಕ್ರೀಡಾ ಕ್ಷೇತ್ರದಲ್ಲಿ ಆಸಕ್ತಿಯಿದೆ. ನಾನು ನನ್ನ ಶಾಲಾ ದಿನಗಳಲ್ಲಿ ಕೊ-ಕೊ ತಂಡದ ನಾಯಕನಾಗಿದ್ದೆ ಹಾಗೂ ೪×೧೦೦ ರಿಲೇ ತಂಡದಲ್ಲಿಯೂ ಸಹ ಆಡುತ್ತಿದ್ದೆ. ನನಗೆ ಜವಾಬ್ದಾರಿ ಹೊರಲು ತುಂಬಾ ಇಷ್ಟ. ನಾನೊಬ್ಬ ಸರಳ ವ್ಯಕ್ತಿತ್ವದ ಮನಜ.


This user is a member of WikiProject Education in India

ಉಪಪುಟಗಳು[ಸಂಪಾದಿಸಿ]

In this ಸದಸ್ಯspace:

ಸದಸ್ಯ:
Jayanth1710153
ಸದಸ್ಯರ ಚರ್ಚೆಪುಟ: