ನಾವೂ ಮನುಷ್ಯರು!/ಭಾರತೀಯ ಜನತಾ ರಂಗಭೂಮಿ' ಮತ್ತು ಪ್ರಗತಿಶೀಲ ಲೇಖಕರು

ವಿಕಿಸೋರ್ಸ್ದಿಂದ


ಭಾರತೀಯ ಜನತಾ ರಂಗಭೂಮಿ' ಮತ್ತು

ಪ್ರಗತಿಶೀಲ ಲೇಖಕರು

ಕುಳುಕುಂದ ಶಿವರಾಯ ಕಾರ್ಯದರ್ಶಿ, ಜನತಾ ರಂಗಭೂಮಿ ಮಂಗಳೂರು ಸವಿುತಿ


ಹೊಸ ವ್ಯವಸ್ಥೆಯ ಪ್ರಸವಕಾಲವಾದ ಈ ಸಂದಿಗ್ಧ ಪರಿಸ್ಥಿತಿಯಲ್ಲಿ

ಜನಜೀವನವನ್ನು ಅಲ್ಲೋಲಕಲ್ಲೋಲ ಮಾಡುತ್ತಿರುವ ಹಲವು ಶಕ್ತಿಗಳಲ್ಲಿ ಭಾರತೀಯ ಜನತಾ ರಂಗಭೂಮಿಯ ಆಂದೋಲನವೂ ಒಂದು. ಹತ್ತಾರು ಮಹಾರಾಜರ-ಹತ್ತಾರು ಶ್ರೀಮಂತರ-ಆಸೆ ಲಾಲಸೆಗಳಿಗೆ ಪೋಷಕವಾಗಿರು ತ್ತಿದ್ದ ಭಾರತೀಯ ಕಲೆಯಿಂದು-ಅಧಃಪತನದ ಗಂಡಾಂತರದಲ್ಲಿದೆ. ಮಿಲಿ ಯಾಂತರ ಜನ ಆ ಕಲೆಯನ್ನು ಉಳಿಸಲೆತ್ನಿಸುತ್ತಿದ್ದಾರೆ.

ಅವರು ಉಳಿಸುತ್ತಿರುವ ಕಲೆ ಮಾತ್ರ ಹೊಸ ರೂಪವನ್ನು ತಳೆಯು

ತ್ತಿದೆ!

ನಾಲ್ಕಾರು ಗವಿ ಗುಹೆಗಳಲ್ಲಿ, ಶಾಸ್ತ್ರೀಯ ವಿಜ್ಞಾನದ ಬಂಧನದಲ್ಲಿ

ಹೇಳುವ-ಕೇಳುವರಿಲ್ಲದೆ, ನಶಿಸಿಹೋಗುತ್ತಿದ್ದ ನೃತ್ಯಕಲೆಯನ್ನು ಜನತೆ ತನ್ನ ದಾಗಿ ಸ್ವೀಕರಿಸಿದೆ. ಬಂಗಾಲದ ಜನಜೀವನದ ದುರಂತ ಚಿತ್ರಪ್ರಸಾದ, ಸುಧೀರ ಕಾಷ್ತ್ ಗಿರರಂತಹ ಚಿತ್ರಕಾರರನ್ನು ಬೆಳಕಿಗೆ ತಂದಿದೆ. ಪ್ರೇಮ ಆಲಾಪನೆಗಳ 'ಸಂಗೀತರತ್ನ ಆಸ್ಥಾನವಿದ್ವಾನ್'ರ ಸಂಗೀತ ಮುಂಬಯಿ ಬಂಗಾಳಗಳ ಮಜೂರರ, ಆಂಧ್ರ-ಕೇರಳಗಳ ಕಿಸಾನರ ದಲಿತಧ್ವನಿಯಲ್ಲಿ

1. Indian People's Theatre Association : IPTA.

2.1944ರಲ್ಲಿ ಅ. ನ. ಕೃಷ್ಣರಾಯರು 'ಪ್ರಗತಿಶೀಲ ಸಾಹಿತ್ಯ' ಎoಬ ಲೇಖನ ಸಂಕಲನವನ್ನು ಪ್ರಕಟಿಸಿದರು. ಅದರಲ್ಲಿ ಜನತಾ ರಂಗಭೂಮಿಯನ್ನು ಕುರಿತ ನನ್ನ ಈ ಲೇಖನವಿತ್ತು. ಆ ಮೂರು ಪುಟಗಳನ್ನು ಕ್ಸೆರೋಕ್ಸ್ ಮಾಡಿಸಿ ನೆನಗೆ ಕೊಟ್ಟು ನೆರವಾದವರು ಆ ಅಲಭ್ಯ ಪ್ರತಿಯ ಒಡೆಯರಾದ ಪ್ರೊ| ಚಿ. ಶ್ರೀನಿವಾಸ ರಾಜು ಅವರು. ನಾನು ಅವರಿಗೆ ಋಣಿ. -ನಿರಂಜನ ವರಾರ್ದನಿಗೊಳ್ಳುತ್ತಿದೆ. ಆ ಇತಿಹಾಸದ ಚಿತ್ರಗಳು ನಾಟಕಗಳ ವಸ್ತು ಗಳಾಗತೊಡಗಿವೆ. ಚೀನೀಯ ನಾಟಕಗಳ ಅಪೂರ್ವ ಶಕ್ತಿ-ಸಾಮರ್ಥ್ಯ,ರಷ್ಯದ ಸ್ವತಂತ್ರ ಕಲಾವಿದರ ಪ್ರದರ್ಶನ ನೈಪುಣ್ಯ ನಮ್ಮ ಪುರೋಗಾಮಿಗಳ ಮನಸ್ಸಿಗೆ ತಟ್ಟಿದೆ!ವಿಚಾರ ಕ್ರಾಂತಿಗೆ ಎಡೆಗೊಟ್ಟಿದೆ.

ಇನ್ನೂ ನಮ್ಮ ಕಲಾಸಂಪತ್ತು ಶ್ರೀಮಂತರ ಮಹಾರಾಜರ ಕಾಲಕ್ಷೇ

ಪದ ಸಾಧನವಾಗಬೇಕೆ?

ಇನ್ನೂ ದೇಶದ ಸ್ವಾತಂತ್ರ್ಯ ಸಂಗ್ರಾಮ-ಅಂತರರಾಷ್ಟ್ರೀಯ ಮಹಾ

ಸಮರಗಳಲ್ಲಿ, ಹೊಸ ಜಗತ್ತಿನ ನಿರ್ಮಾಣದ ಬೃಹದ್ಯ ತ್ನದಲ್ಲಿ, ನಮ್ಮ ಕಲಾಸಂಪತ್ತು ಸಹಾಯಕವಾಗದೆ ಹೋಗಬೇಕೆ?

ಭಾರತದ ಮೂಕ ಮಿಲಿಯಗಳಲ್ಲಿ ಅಲ್ಲೊಂದು ಇಲ್ಲೊಂದು ಸ್ವರ

ಹೀಗೆ ನೂರಾರು ಸ್ವರ-ಮುಷ್ಟಿಯೆತ್ತಿ "ಇಲ್ಲ!" ಎನ್ನುತ್ತಿದೆ.

“ಕಲೆ ಕಲೆಗಾಗಿಯಲ್ಲ! ಜನತೆಗಾಗಿ" ಎಂಬ ಘೋಷ ಜನತಾ ರಂಗ

ಭೂಮಿಯ ಸ್ಥಾಪನೆ-ಬೆಳವಣಿಗೆಗಳಿಗೆ ಕಾರಣವಾಗಿದೆ.

ಅರೆ ಹೊಟ್ಟೆಯ ಕೂಗನ್ನು ಕುರಿತು ಕವಿತೆ ಬರೆಯಬಲ್ಲ ಕವಿ ಜನತಾ

ರಂಗಭೂಮಿಯ ಅಂಗಣದಿಂದ ತನ್ನ ಕೃತಿಯನ್ನು ಹಾಡಿಸುತ್ತಾನೆ: ಜನತೆಯ ಜೀವನವನ್ನು ಚಿತ್ರಿಸಿ, ವಿಚಾರ ಕ್ರಾಂತಿಯನ್ನು ಕೆರಳಿಸಿ ಪ್ರಗತಿಶೀಲ ಲೇಖಕನು ಭರೆದ ನಾಟಕವನ್ನು ಜನತಾ ರಂಗಭೂಮಿ ಆಡುತ್ತಿದೆ!.'ಜನರ ಸಂಕಷ್ಟವನ್ನು ಚಿತ್ರಿಸುತ್ತ ಉಷಾರಾಣಿ ಅನುದಾಸಗುಪ್ತರು ನರ್ತಿಸುತ್ತಿದ್ದಾರೆ.

ಹೀಗೆ ಪ್ರಗತಿಶೀಲ ಲೇಖಕರ ಸಹಾಯ-ಸಹಕಾರಗಳಿಂದ ಭಾರತೀಯ

జನತಾ ರಂಗಭೂಮಿ ಬೆಳಯುತ್ತಿದೆ.

"ಇದೆಲ್ಲ ಬರಿಯು ಕಲ್ಪನೆ-ಮರುಳು" ಎನ್ನುವ ಕಲಾಶಾಸ್ತ್ರಿಗಳಿಗೆ

ನಮ್ಮ ದೇಶದಲ್ಲಿ ಬರಗಾಲವಿಲ್ಲ.ಕೊಚ್ಚಿ ಮಹಾರಾಜರ ಅಡಿಯಾಳಾಗಿ ತಮ್ಮ ಕಲಾಮಂಡಲವನ್ನು ನಡೆಸುತ್ತಿದ್ದು, ಅವರ ದಾಕ್ ಕಟ್ಟುಬಿದ್ದು ದೇವದಾಸಿ ಪದ್ಧತಿಯನ್ನು ಎತ್ತಿ ಹಿಡಿದ ಮಹಾಕವಿ ವಲ್ಲತ್ತೋಳರೇ ಈಗ ಜನತೆಯ ಬಳಿಗೆ ಬಂದಿರುವುದು; ಆಲ್ಮೊರದ ಮಹಾ ಶಿಖರದಿಂದಿಳಿದ್ದು ಉದಯಶಂಕರರು ಜನನಿವಾಸಕ್ಕೆ ಸಮೀಪದಲ್ಲಿ ಇರತೊಡಗಿರುವುದು - ಈ ಎರಡು ದೃಷ್ಟಾಂತಗಳು ಶಾಸ್ತ್ರಿಗಳ ಬಾಯಿ ಮುಚ್ಚಿಸಬಲ್ಲುವು.

ಇಲ್ಲ: ಯಥಾರ್ಥ-ವಾಸ್ತವ ವಿಷಯವೆಂದರೆ, ಕೆರಳುತ್ತಿರುವ

ಜನತೆಯ ವಿಚಾರಶಕ್ತಿಯೊಡನೆ ನಮ್ಮ ಕಲೆಗಳು ಹೊಸರೂಪವನ್ನು ತಾಳುತ್ತಿವೆ.

ಭಾರತೀಯ ಜನತಾ ರಂಗಭೂಮಿ

೧೯೪೨ರಲ್ಲಿ ಭಾರತೀಯ ಜನತಾ ರಂಗಭೂಮಿ ಸಮಿತಿ ಮುಂಬಯಿ

ಯಲ್ಲಿ ರೂಪುಗೊಂಡಿತು. ಜವಾಹರರು ಆಗ ಸಂದೇಶ ಕಳುಹಿಸಿ,ಆ ಹೊಸ ಆಂದೋಲನಕ್ಕೆ ಯಶಸ್ಸನ್ನು ಕೋರಿದರು. ಆದರೆ ಆ ವರ್ಷ ಆಗಸ್ಟಿನ ಬಳಿಕ ದೇಶದಾದ್ಯಂತ ಉಂಟಾದ ಅನಾಹುತ, ಸರಕಾರದ ಅಮಾನುಷ ಮರ್ದನ, ಸಮಿತಿಯನ್ನು ಶಕ್ತಿಗುಂದಿಸಿದುವು. ದೇಶವು ತನ್ನ ಮೇಲೆ ಬಿದ್ದ ಅಘಾತದಿಂದ ಚೇತರಿಸಿದಂತಯೇ ಜನತಾ ರಂಗಭೂಮಿ ಸಮಿತಿಯೂ బల ಗೊಂಡು ೧೯೪೩ ಮೇ ತಿಂಗಳ ೨೫ರಂದು ಪ್ರಥಮ ಸಮ್ಮೇಳನವನ್ನು ಜರಗಿಸಿತು. ಕರ್ಣಾಟಕವನ್ನೂ 2 ಕೂಡಿ ವಿವಿಧ ಪ್ರಾಂತಗಳವರು ಅದರಲ್ಲಿ ಭಾಗವಹಿಸಿದರು. ಮುಂಬಯಿ, ಬಂಗಾಳ, ಪಂಜಾಬ್, ಆಂಧ್ರ ಸಂಯುಕ್ತ ಪ್ರಾಂತ ಮತು ಮಲಬಾರ್ ಪ್ರತಿನಿಧಿಗಳು ವರದಿಗಳನ್ನೊಪ್ಪಿಸಿದರು. ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದ ಪ್ರೊ| ಹಿರೆನ್ ಮುಖರ್ಜಿಯವರು ಜನತಾ ರಂಗಭೂಮಿಯ ಮುರಿದಿದ್ದ ಕಷ್ಟದ ಹಾದಿಯನ್ನು ತೋರಿಸಿಕೊಟ್ಟ, ಸುಂದರ ಭವಿಷ್ಯತ್ತನ್ನು ಚಿತ್ರಿಸಿದರು.

ಆಗಲೇ ಭಾರತೀಯ ಪ್ರಗತಿಶೀಲ ಲೇಖಕರ ಸಮ್ಮೇಳನ ಜರಗು

ತ್ತಿದಾಗ, ಜನತಾ ರಂಗಭೂಮಿಯವರು ಕಾರ್ಮಿಕ ವಸತಿ ಪ್ರದೇಶವಾದ ಪರೇಲಿನಲ್ಲಿ ತಮ್ಮ ನಾಟಕಗಳನಾಡಿದರು. - -

ಪ್ರಗತಿಶೀಲ ಲೇಖಕರ ನೆರವಿನಿಂದ ಮುಂದೊತ್ತಬೇಕೆಂಬುದು ಜನತಾ

ರಂಗಭೂಮಿ ಸಮಿತಿಯ ತನ್ನ ಸಮ್ಮೇಳನದಲ್ಲಿ ಸ್ವೀಕರಿಸಿದ ಪ್ರಧಾನ ನಿರ್ಣಯಗಳಲ್ಲೊಂದು.


೧.ಕರ್ನಾಟಕವನ್ನು ಪ್ರಾಧಿಸಿದ್ದು ಕುಳುಕು೦ದ ಶಿವರಾಯ.

ಕರ್ಣಾಟಕದಲ್ಲಿ ಈ ಚಳವಳ

ಅ.ಭಾ. ಜನತಾ ರಂಗಭೂಮಿ ಕಾರ್ಯಕಾರಿ ಸಮಿತಿಯ ಸದಸ್ಯ

ರಲ್ಲೊಬ್ಬರಾದ ಕುಮಾರ ವೆಂಕಣ್ಣ ಅವರು ಬೆಂಗಳೂರಿನಲ್ಲಿರುವರು. ಮೈಸೂರಿನ ಸಮಿತಿಗೆ ಶ್ರೀಮತಿ ಕೇಸರಿ ಕೇಶವನ್ ಅವರು ಕಾರ್ಯದರ್ಶಿನಿ ಯಾಗಿದ್ದಾರೆ. ಬೆಂಗಳೂರಿನಲ್ಲಿ ಹಿಂದೊಮ್ಮೆ ತಾವೇ ಆರಂಭಿಸಿದ ಕಾರ್ಯ ವನ್ನು ಅವರೀಗ ಮೈಸೂರಲ್ಲಿ ಮುಂದುವರಿಸುತ್ತಿದ್ದಾರೆ. ಶ್ರೀ ಶಿವರಾಮಕಾರಂತರು 1 ಮಂಗಳೂರು ಸಮಿತಿಯ ಉದ್ಘಾಟನೆಯನ್ನು ೧೯೪೩ ರ ಆಗಸ್ಟಿನಲ್ಲಿ ನೆರವೇರಿಸಿದರು. ಅದೀಗ ತನ್ನ ಕಾರ್ಯಕಲಾಪಗಳನ್ನು ಮಾಡುತ್ತಿದೆ.

ಕರ್ಣಾಟಕದಲ್ಲಿ ಪ್ರಗತಿಶೀಲ ಲೇಖಕರ ಚಳವಳವೂ ಹೊಸತು;

ಎಳೆಯದು.ಈ ನಾಡಿನಲ್ಲಿ ಇನ್ನೂ ಶಿಶುವಾಗಿರುವ ಜನತಾ ರಂಗಭೂಮಿ ಪ್ರಗತಿಶೀಲ ಲೇಖಕ-ಕಲಾವಿದರ ಯತ್ನದಿಂದ ಮುಂದೆ ಸಾಗಲಿದೆ-೧೯೪೪





೧.ಉದ್ಘಾಟನೆಗೆ ಕೋ. ಶಿ. ಕಾರಂತರನ್ನು ಕರೆದವನು ಈ ಲೇಖಕನೇ.