ಈ ಪುಟವನ್ನು ಪರಿಶೀಲಿಸಲಾಗಿದೆ
ಬನಶೇಕರಿ
ಪಾತ್ರೆಯಲ್ಲಿಯೇ ಇರುವ ತೊತುಗಳೆಷ್ಟೆಯಿಂದು ಅವರಿಗೆ ಗೊತ್ತಿರಲಿಲ್ಲವೆ? ಎದುರೆದುರು ನಿಂತಾಗ ತಮ್ಮ ವಿರುದ್ಧ ಚಕಾರವೆತ್ತದ ಸ್ವಾಮಿಗಳೊಡನೆ ಒಮ್ಮೆ ನಾರಾಯಣರಾದರು ಸೂಚ್ಯವಾಗಿ ಹೇಳಿದ್ದರು : "ಮ ದ ಕೆಲವು ಜನ ಏನೇನೋ ಮಾತಾಡ್ತಿರೊಂದು ಸ್ವಾಮಿಗಳ ಗಮನಕ್ಕೆ ಬಂದಿರ್ಬೇಕು " ಏನು! ಏನೂ ಇಲ್ವಲ್ಲಾ ! ಹೇಳಿ ಸಂಕೋಚ ಯಾಕೆ ? ಹೇಳಿ " "ಬಾಯಿ ಬಿಟ್ಟು ಹೇಳ್ಭೇಕಾದ್ದಿಲ್ಲ. ಸ್ವಮಿಗಳಿಗೆ ಗೊತ್ತಿದೆ ಇದರಿಂದ ಯಾರಿಗೂ ಹಿತವಾಗೋದ್ದಿಲ್ಲ ಅನ್ನೋದನ್ನ ಮಾತ್ರ ಗಮನಿಸಬೇಕು " ಆ ಎಚ್ಚರಿಕೆಯಿಂದ ಸ್ವಲ್ಪ ಮಟ್ಟಗೆ ಪ್ರಯೋಜನವಾಯಿತು ಪೂರ್ತಿ ನಿಲ್ಲದಿದ್ದರೂ ಕಡಿಮೆಯಾಯಿತು. ಅದರೆ ನಾರಾಯಣರಾಯರ ಮನಸ್ಸಿನ ನೆಮ್ಮದಿ ಕೆಡದೆ ಹೋಗಲ್ಲಿಲ ಬನಶಂಕರಿಯನ್ನು ಅವರು ಪ್ರೀತಿಸುತ್ತಿದ್ದರು , ಬಯಸುತ್ತಿದ್ದರು - ಮಾನವ ಜೀವಿಯಾಗಿ ಹೆಣ್ಣಾಗಿ, ಆಕೆ ನೊಂದರು ಅವರಿಗೆ ಬೇಸರವಾಗುತ್ತಿತ್ತು . ಆಕೆಗೆ ಯಾವ ಕೊರತೆಯೂ ಆಗದಂತೆ ಅವರು ನೋಡಿಕೊಳ್ಳುತ್ತಿದ್ದರು. ಈಗ ?ಬನಶಂಕರಿ ತಾಯಿಯಾಗಿರುವ ಹೊಸ ಸನ್ನಿವೇಶ .... ರಾಯರಿಗನಿಸಿತ್ತು ಇವರಿಬ್ಬರಲ್ಲಿ ಮಗು ಯಾರು? ಏನು ಅಬಯದ ಆ ಎಳೆಯ ಕೂಸೆ? ಅಥವಾ ಆ ಕೂಸಿನ ಹೊರಕಾಗಿ ಉಳಿವಿಲ್ಲವನ್ನೂ ಮರೆತುರುವ ಅದರ ತಾಯಿಯೆ? ಅಮ್ಮ ಬಾಣಾಂತಿಯಾದ ಬಳಿಕ ಆ ಮನೆಯಲ್ಲಿ ತಿಮ್ಮಪ್ಪನೊಬ್ಬನೇ ಇರಲ್ಲಿಲ್ಲ. ಒಡತಿಯ ಆರೈಕೆಗಾಗಿ ತಿಮ್ಮಪ್ಪನ ಮಗಳು ಬಿದು ಅಲ್ಲೆ ನೆಲೆಸಿದ್ದಳು ರಾಯರು ರಾತ್ರೆ ಈಗ ಅಲ್ಲಿರುತ್ತಲೇ ಇರಲಿಲ್ಲ . ಸ್ವಲ್ಪ ಹೊತ್ತಿದ್ದು ತಮ್ಮ ಮನೆಗೇ ಹೊರಟುಹೋಗುತ್ತಿದ್ದರು, ಇಲ್ಲವೆ ದೇವಸ್ಥಾನದ ಹೊರ ಮಹಡಿಯ ಮೇಲೆ ಇದ್ದು ಬರುತ್ತಿದ್ದರು. ಅವನ್ನು ತನ್ನ ಜತೆಯಲ್ಲೇ ರಾತ್ರೆ ಇರು ಎಂದು ಒತ್ತಾಯಿಸಿಲೇ ಇಲ್ಲ ಮಗು ರಾತ್ರೆ ಎಷ್ಟೂ ಸಾರೆ ಎಚ್ಚರುತ್ತದೆ ? ತಾನು ಅದರಷ್ಟೌ ಸಾರಿ ಹಾಲೂಡುತ್ತೇನೆ ಮಗುವಿಗೆ ತೊಂಡಾರೆಯಾಗಬಾರದು ತಾನೆಷ್ಟೂ ಸಾರಿ ಎಚ್ಚರವಾಗಿಯೆ ಇರುತ್ತೇನೆ ? ಎಂದು ಅಮ್ಮ ಮತ್ತೆ ಮತ್ತೆ ಹೆಳಿದ್ದನೆ ಹೆಳುತಾಳೆ ಕೊರಳು ,ಆಸೆಯ ಆಹ್ಹ್ವಾನದ ದ್ರುಷ್ಟೀಂದ ಇಲ್ಲದೆ ಸಮ್ಮಿತ್ತಿಯ ದ್ರುಷ್ಟೀಯಿಂದ ರಾಯರನ್ನು ನೋಡುತ್ತಲೇ ಇರಲಿಲ್ಲ ಊಟ ಮಾಡಿಯೋ ಇಲ್ಲದೆ ಹ್ಹಗೆಯೊ ರಾಯರು ಹೊರಡುತ್ತ ಹೆಳುತ್ತಿದ್ದರು; "ಬರಲಾ ಶಂಕರಿ ?" ಹೊಗಿ ನಾಳೆ ಬೇಗ್ಬನ್ನ್ನಿ " ಆ ಉತ್ತರ ಕೇಳಿ ,ಕತ್ತಲೆಯಲ್ಲಿ ಬೀದಿಗೆಳೆಯೂಕ್ತ ರಾಯರು ನೋವಿನಿಂದ ನಿರಸೆಯಿಂದ ನಸುನಗುತ್ತಿದ್ದರು ಒಂದು ಸಂಜೆ ಊಟಬೇಡವೆಂದ ರಾಯರಿಗೆ ಅಮ್ಮ ಒಂದು ಲೋಟ ಹಾಲು ಕೊಟ್ಟ್ಳ್ಳೂ ಆದನ್ನು ಕುಡಿಯುತ್ತ ಅವರೆಂದರು;