ಮಿತ್ರ ದುಖಃ/iii

ವಿಕಿಸೋರ್ಸ್ದಿಂದ

ನಾನು ನನ್ನನ್ನು ಪ್ರನಃ ಸುಡಿಸಿಕೊಂಡು ದುಃಖಪಡಲೇನು? ಇದರ ಹೊರತು ನಿನಗೆ ಬೇಡೆನ್ನ ಲಿಕ್ಕೆ ಮತ್ತೂ ಒಂದು ಕಾರ ಣವಿರುತ್ತದೆ. ಅದೇನೆಂದರೆ, ನನ್ನ ಅಂತಃಶರೀರದಲ್ಲಿ ಈ ಮೊದಲೇ ಒಂದು ಅಗ್ನಿಯು ಸೇರಿಕೊಂಡಿರುತ್ತದೆ. ಆ ವಡವಾ ನಲದಿಂದ ನನ್ನ ಅಂತರಂಗವು ಸುಡುವದರಿಂದ ನಾನು ಪ್ರತಿ ನಿತ್ಯ ಎಷ್ಟು ವಿಹ್ವಲನಾಗುತ್ತೇನೆಂಬದು ಸರ್ವ ಶ್ರುತವಿದೆ. ಅಂದಮೇಲೆ ನಿನ್ನ ೦ಧ ಮತ್ತೊಂದು ಅಗ್ನಿ ಯ ಗುಂಡಿಗೆ ನನ್ನ ಅಂತರಂಗದಲ್ಲಿ ಇಂಬುಗೊಡಬೇಕೆಂಬದು ನನಗೆ ಕೊಂಚ ವೂ ಉಚಿತವೆನಿಸುವದಿಲ್ಲ.”

ಸಮುದ್ರಣಾಧನ ಈ ಪ್ರತ್ಯುತ್ತರವನ್ನು ಕೇಳಿ, ನಾನು ನಿರುತ್ತರನಾದೆನು. ನನ್ನಿಂದ ಪರರಿಗೆ ಈ ಪರಿ ಮರ ಣಾಂತ ದುಃಖವಾಗುತ್ತಿದ್ದರೆ, ನಾನು ಅವರನ್ನು ಆ ದುಃಖಕ್ಕೊಳಪಡಿಸದೆ, ನನ್ನ ದುಃಖವನ್ನು ನಾನೇ ಸಹಿಸುತ್ತ ಸುಮ್ಮನಿರುವದು ಲೇಸೆಂದು ಮನಸ್ಸಿನಲ್ಲಿ ಬಗೆದು, ಅಂದಿನಿಂದ ನಾನು ಸ್ನಾನದ ಆ ಉಸಾಬರಿಯನ್ನೇ ಬಿಟ್ಟು ಟ್ಟಿರುವೆನು, ಎಂದು ನುಡಿದ ಬಳಿಕ ದುಃಖಾತಿರೇಕದಿಂದ ಕೆಲಹೊತ್ತಿನವರೆಗೆ ಸೂರ್ಯನ ಬಾಯಿಂದ ಶಬ್ದಗಳೇ ಹೊರಡದಾದವು. ಆಗ ಅವನು ರಥದೊಳಗಿನ ತನ್ನ ಪೀಠದ ಲೋಡಿಗೆ ಒರೆದುಕೊಂಡು ಕುಳಿತು ತುಸು ವಿಶ್ರಾಂತಿಯನ್ನು ಅನುಭವಿಸಹತ್ತಿದನು.

iii

ಒಡೆಯನ ಆ ಅನುಕಂಪನೀಯ ಸ್ಥಿತಿಯನ್ನು ಕಂಡು ಅರುಣನು ಸೂರ್ಯನ ದುಃಸ್ಥಿತಿಯ ಆ ಕಥೆಯನ್ನು ಮುಂದೆ ಸಾಗಿಸಿದನು. ಆಗ ಅರುಣನು ಚಂದ್ರನನ್ನು ಕುರಿತು-----"ಶಶದ ರಾ, ಈ ಸಂಕಟಪರಂಪರೆಗಳಿಂದ ನಮ್ಮ ಒಡೆಯನ ಅವಸ್ಥೆ
ಏನಾಗಿದೆಯೆಂಬದನ್ನು ನೀನು ಕಣ್ಣಾರೆ ನೋಡುತ್ತಲೇ ಇರುವೆ, ಅವನ ಕೂಡ ನಾವೂ ಈ ಸಂಕಟಗಳಿಗೀಡಾಗಿದ್ದೇವೆ, ಅದರೆ ಮಾಡುವದೇನು? ಸ್ವತಃ ಯಜಮಾನನ ಕಷ್ಟಗಳೇ ನಿವಾರಣವಾಗದಿರುವಲ್ಲಿ, ನಮ್ಮ ೦ಧ ಆತನ ಸಾರಥಿ ಮೊದಲಾದ ವರ ಕಷ್ಟದ ಪರಿಮಾರ್ಜನ ಮಾಡುವವರಾರು? ನನ್ನ ಅವಸ್ಥೆ ಯನ್ನು ನೋಡು. ಹೇಳಿ ಕೇಳಿ ನಾನು ಹೆಳವನು; ಸುಮ್ಮ. ನೆ ರಥದಲ್ಲಿ ಕುಳಿತು ಕುದುರೆಗಳನ್ನು ಹೊಡೆಯುವ ಕೆಲಸವು ನನ್ನ ಕಡೆಗಿದೆ. ಅಂತೇ ನಾನು ರಾ ಗಾದರೂ ಈ ಕೆಲಸ ವನ್ನು ಈ ವರೆಗೂ ಮಾಡುತ್ತಿರುತ್ತೇನೆ; ಆದರೆ ರಧದಲ್ಲಿ ಒಂದೇ ಸವನೆ ಕೂತು ಕೂತು ಸಹ ನನ್ನ ವೆಯ್ಯು ತೀರ ನೋಂದು ಹೋಗಿದೆ. ಹೀಗಿದ್ದರೂ ನನಗೆ ಬರೇ ಕೂತು ಕೊಂಡೇ ಕೆಲಸ ಮಾಡುವದದೆ; ಆದರೆ ನಮ್ಮ ರಾದ ಈ. ಕುದುರೆಗಳ ಕಡೆಗೆ ನೋಡಿದರೆ, ನನ್ನ ಹೃದಯವು ವಿದಾರಣ ವಾಗಿ ಹೋಗುತ್ತದೆ; ದಾಗು ನನ್ನ ಹೃದಯವು ದುಃಖ ದಿಂದ ಹೇಗೆ ವಿದಾರಣವಾಗುತ್ತದೆ, ಹಾಗೆಯೇ ನನ್ನಿ ಕುದು ರೆಗಳ ಹೃದಯಗಳು ಸತತವಾಗಿ ಓದುವ ಪುಶ್ರಮದಿಂದ ವಿದಾರಣವಾಗುತ್ತಿರಬಹುದೆಂದು ನನಗೆ ತೋರುತ್ತದೆ. ಆ ಒಡಪ್ರಾಣಿಗಳಿಗೆ ಒಂದೇ ಸಮನೆ ಓಡಬೇಕಾಗುತ್ತದೆ. ಅವು ಗಳಿಗೆ ವಿಶ್ರಾಂತಿಯೆಂಬುದು ಗೊತ್ತೇ ಇಲ್ಲ; ಉಳಿದವರ ರಥ ಗಳ, ಹಾಗು ಟಾಂಗಾಗಳ ಕುದುರೆಗಳು ಕಾಲಕಾಲಕ್ಕೆ ನೀರು ಕುಡಿಯತ್ತವೆ, ಹುಲ್ಲು ತಿನ್ನುತ್ತವೆ; ಮತ್ತು ವಿಶ್ರಾಂ ತಿಯನಂತರ ಹೊಸ ಹುರುಪಿನಿಂದ ತಮ್ಮ ಕೆಲಸಕ್ಕೆ ಒಯ್ಯಲ್ಪ ಡುತ್ತವೆ. ಆದರೆ ಸೂರ್ಯನ ಈ ಕುದುರೆಗಳಿಗೆ ಮೇವು, ನೀರು ಮುಂತಾದವುಗಳೊಂದೂ ಸಿಗುವದಿಲ್ಲ. ಉ ದಯಾಚಲ ದ ತಪ್ಪಲಿನಲ್ಲಿ ಹುಟ್ಟಿದ ಎಳೆ ಎಳೆ ಕರಿಕೆಯನ್ನು ತಿನ್ನು ವದ
ಕ್ಕಾಗಿ, ಅವು ನನ್ನ ಕೈಯ ಲಗಾಮಿನ ಎಳತವನ್ನು ಕೂಡ ಲೆಕ್ಕಿಸದೆ ತಮ್ಮ ಗೋಣುಗಳನ್ನು ತುಸು ಬೊಗ್ಗಿ ಸ ಹತ್ತುತ್ತವೆ; ಆದರೆ ಸುಮಾರು ಮೂವತ್ತು ಗಳಿಗೆಗಳಲ್ಲಿ ಸಂ ಪೂರ್ಣ ಗೋಲಾರ್ಧವನ್ನು ದಾಟುವದಾಗಲಿಕ್ಕಿಲ್ಲೆಂಬ ಅಂಜಿ ಕೆಯಿಂದ ನಾನು-ಅವುಗಳ ನಿರ್ದಯನಾದ ಸಾರಥಿಯು - ಅವು ಗಳ ಬೆನ್ನ ಮೇಲೆ ಯಾವಾಗ ಈ ಚಬಕದಿಂದ ಚನ್ನಾಗಿ ಹೊಡೆ ಯುವೆನೋ, ಆ ಕಾಲಕ್ಕೆ ಈ ಕಬಕ ದ ಪೆಟ್ಟು ಕುದುರೆಗಳ ಮೈಗೆ ಎಷ್ಟು ಬಲವಾಗಿ ತಾಕುವದೋ, ಅದಕ್ಕಿಂತಲೂ ನೂ ರಾರು ಪಟ್ಟು ಹೆಚ್ಚು ಅದು ನನ್ನ ಅಂತರಂಗಕ್ಕೆ-ಹೃದಯಕ್ಕೆ ತಗಲುವದು! ಆದರೆ ಅದಕ್ಕೆ ನಾನೇನು ಮಾಡಲಿ? ಆ ಪಾತ ಕದ ದೋಷವು ನನ್ನ ಕಡೆಗೆ ಯತ್ನಿಂಹವೂ ಇಲ್ಲ; ಆದರೆ ಇದಕ್ಕೂ ಹೆಚ್ಚು ನಿಷ್ಟುರತೆಯನ್ನು ನಾನು ಪ್ರತಿದಿವಸ ಮಧ್ಯಾಹ್ನ ದಲ್ಲಿ ತಾಳಬೇಕಾಗುತ್ತದೆ. ಮಧ್ಯಾ: ಸ್ನ ದಲ್ಲಿ ಬಿಸಿಲು ತಾಸ ದಿಂದ ಸರ್ವತ್ರದಲ್ಲಿಯ ಉ೨ ಉರಿ ಆಗುತ್ತಿರುತ್ತದೆ. ಆ ಕಾಲಕ್ಕೆ..... ಹೀಗೆಂದು ನುಡಿದು ಅರುಣನು ತುಸು ತಡೆದು ತನ್ನ ಕುದುರೆಗಳ ಮೈ ಬೆವರನ್ನು ಒರಿಸಿ, ಅವುಗಳನ್ನು ಜಪ್ಪ ರಿಸಿ ಪುನಃ ಅವನು ಹೇಳುತ್ತಾನೆ. “ಚಂದ್ರಾ, ನಮ್ಮಿ ಕುದು ರೆಗಳ ಸ್ಥಿತಿಯು ಬಹಳ ಕರುಣಾಸ್ಪದವಾಗಿರುತ್ತದೆ. ಓಡು ವಾಗ ಅವು ತನ್ನ ಮೊಲೆಗಳನ್ನು ಸ್ವಾಭಾವಿಕವಾಗಿ ಕೆಳಗಡೆ ಭೂಮಿಯ ಕಡೆಗೆ ಮಾಡಿ ಓಡುತ್ತಿರುತ್ತವೆ; ಅದರಿಂದ ಸೃಥ್ವಿತಲದ ಮೇಲೆ ಏನೇನು ನಡೆದಿರುತ್ತದೆಂಬುದು ಸಹಜ ವಾಗಿಯೇ, ಅವುಗಳ ಕಣ್ಣಿಗೆ ಬೀಳುತ್ತದೆ. ಅವು ಮಧ್ಯಾಹ್ನ ಹೊತ್ತಿನಲ್ಲಿ ಭೂಮಿಯ ನಾಲ್ಕೂ ಕಡೆಗೆ ನೋಡುತ್ತವೆ; ಆ ಕಾಲಕ್ಕೆ ಎಲ್ಲಿಯ ರಥವಾಗಲಿ, ಟಾಂಗೆಯಾಗಲಿ, ಕುದು
ರೆಯಾಗಲಿ ಅಡ್ಡಾಡುತ್ತಿರುವದು ಅವುಗಳ ಕಣ್ಣಿಗೆ ಕಾಣು ವದಿಲ್ಲ. ಎಲ್ಲ ರಥಗಳೂ, ಟಾಂಗಗಳೂ ಮಧ್ಯಾಹ್ನ ಕಾಲ ದಲ್ಲಿ ಯಾವದೊಂದು ಗಿಡದ ನೆಳಲಿನಲ್ಲಿ, ಇಲ್ಲವೆ ನದೀ ತೀರದ ಲ್ಲಿ ವಿಶ್ರಾಂತಿಗಾಗಿ ಬಿಡಲ್ಪಟ್ಟಿರುತ್ತವೆ; ಮತ್ತು ಅವುಗಳ ಕುದು ರೆಗಳು ಮನದಣಿಯಾಗಿ ನೀರು ಕುಡಿಯುತ್ತಿರುತ್ತವೆ, ನೀರಲ್ಲಿ ಮುಳುಗಿ ಏಳು ತ್ತಿ ರು ವೆ; ಇಲ್ಲವೆ ಮೇವು-ದಾಣಿ ಗಳನ್ನು ತಿಂದು ಕಣ್ಣು ಮುಚ್ಚಿ, ವಿಶ್ರಾಂತಿ ಸೌಖ್ಯವನ್ನು ಪಡೆಯುತ್ತಿರುತ್ತವೆ. ಭೂಮಿಯ ಮೇಲಿನ ಆ ಪಶುಗಳ ಭಾಗ್ಯವನ್ನು ನೆನೆದು ಈ ನಮ್ಮ ಜಗತ್ರಕಾಶಕನಾದ ಸೂ ರ್ಯನಾರಾಯಣನ ರಥದ ಅಶ್ವಗಳು ತಮ್ಮ ದುರ್ಭಾಗ್ಯವನ್ನು ಸ್ಕರಿಸಿ, ಬಹು ದೀರ್ಘಗಳಾದ ಉಗುರುಗಳನ್ನು ಬಿಡಹತ್ತು ಇವೆ. ಭೂಮಂಡಲದೊಳಗಿನ ಕುದುರೆಗಳು ಮಧ್ಯಾಹ್ನ
ದಲ್ಲಿ ನೀರು ಕುಡಿಯುವದನ್ನು ಕಂಡು, ತಾವೂ ಆಗ ನೀರು ಕುಡಿಯಬೇಕೆಂದು ಈ ಬಡಪ್ರಾಣಿಗಳು ಇಚ್ಚಿಸುತ್ತವೆ. ಆದರೆ ಆ ಕಾಲಕ್ಕೆ ಇವು ಸೂರ್ಯನ ರಥದ ಕುದುರೆಗಳಾದರೂ ಒಟ್ಟಿನಲ್ಲಿ ಇವು ಪಶುಗಳೇ ಇರುವದರಿಂದ ಇವು ಸಹಜವಾ ಗಿಯೇ ಬಹು ಕಷ್ಟದಿಂದ ಮೋಸ ಹೋಗುತ್ತವೆ! ಈ ಕುದು ರೆಗಳು ಆಕಾಶದಲ್ಲಿ ಒತ್ತರದಿಂದ ಓಡುತ್ತಿರುವಾಗ ಇವುಗಳ ಸುತ್ತ ಮುತ್ತು ಈ ನೀಲಿಬಣ್ಣದ ಆಕಾಶವು ಸರ್ವತ್ರ ದಲ್ಲಿಯೂ ವ್ಯಾಪಿಸಿರುವದರಿಂದ, ಇದು ಯಾವದೊಂದು ವಿಸ್ತ್ರ ತಜಲಾಶಯವಿರುವದೆಂದು ಇವುಗಳಿಗೆ ಭ್ರಮೆಯುಂಟಾಗು ಇದೆ; ಮತ್ತು ನಮ್ಮಿ ಸೂರ್ಯನ ಕಿರಣಗಳಿಂದುಂಟಾ ಗುವ ಮೃಗಜಲದ ತೆರೆಗಳು ಭೂಮಿಯ ಮೇಲೆ ಹರಿಣಗ ಳನ್ನು ಹೇಗೆ ಮೋಸಗೊಳಿಸುವವೋ, ಹಾಗೆಯೇ ಆ ಮೃಗ ಜಲಗಳ ತೆರೆಗಳು ಈ ಆಕಾಶದಲ್ಲಿ ನಮ್ಮನ್ನೂ, ನಮ್ಮ ಕುದು
ಗಳನ್ನೂ ಆಗಾಗ್ಗೆ ಮೋಸಗೊಳಿಸಿ ನಿರಾಶೆಪಡಿಸುತ್ತವೆ. ಇಗೋ, ತೆರೆಗಳು ಕಾಣಹತ್ತಿದವು, ಈಗ ನೀರು ಬಂದಾವು, ಇನ್ನು ಮೇಲೆ ನಮ್ಮ ಬಾಯಾರಿಕೆಯು ಖಂಡಿತವಾಗಿ ಶಾಂತವಾದೀ ತೆಂದು ಅನ್ನು ಇನ್ನು , ಈ ಕುದುರೆಗಳು ಹ್ಯಾಗೆ ಹೆಚ್ಚು ಹೆಚ್ಚು ಓಡಹತ್ತುವವೋ, ಪಾಗೆ ಈ ನೀಲವರ್ಣದ ಆಕಾಶ ಸಮುದ್ರದೊಳಗಿನ ಮೃಗಜಲದ ತೆರೆಗಳಾದರೂ ಹಿಂದೆ ಹಿಂದ ಕೈ ಸರಿಯುತ್ತ ಹೋಗುತ್ತವೆ. ಈ ಪ್ರಕಾರ ಕುದುರೆಗಳು ಮೋಸಹೊಂದಿ ನಿರಾಶೆಪಡುತ್ತಿರುವಾಗ ಅವುಗಳ ಮೈಯ ಬೆವರ ಹನಿಗಳೂ, ನನ್ನ ಕಣ್ಣುಗಳೊಳಗಿನ ಅಶ್ರುಗಳೂ ಒಂದೇ ಸವನೆ ಧಾರೆಗಟ್ಟಿ ಹರಿಯುತ್ತಿರುತ್ತವೆ. ಆದರೆ ಮಾಡುವದೇನು? ದುರ್ದೈವವು ಯಾರಿಗೂ ಬಿಟ್ಟಿಲ್ಲ! ಸೂರ್ಯ ರಥದ ಕುದುರೆಗೆ ಳಾದ್ದರಿಂದ ತಾವು ಭೂಮಂಡಲದೊಳಗಿನ ಕುದುರೆಗಳಿಗಿಂತ ಅದ್ವಿತೀಯ ಪಶುಗಳೆಂಬ ಅಭಿಮಾನವು ಈ ಮೂರ್ಖಪಶುಗ ಆಗೆ ಆಗಾಗ್ಗೆ ಉಂಟಾಗುತ್ತದೆ. ಆದರೆ ಪೃಥ್ವಿಯ ಮೇಲಿನ ಕುದುರೆಗಳೇ ಅಲ್ಲ, ಕತ್ತೆಗಳಿಗೆ ಸಿಗುವಷ್ಟು ಮೇವು-ದಾಣಿ ಗಳು ಸಹ ಸಿಗದೆ, ಸೂರ್ಯನ ರಥದ ಕುದುರೆಗಳೆಂದು ರಣ ಗುಟ್ಟುವ ಬಿಸಿಲಿನಲ್ಲಿ ಒದ್ದಾಡುವ ಬಹುಮಾನವು ಮಾತ್ರ ತಮಗೆ ಸಂಪೂರ್ಣವಾಗಿ ಲಭಿಸಿರುವದೆಂಬದು ಪಾಪ! ಆ ಪಶುಗಳಿಗೇ ಗೊತ್ತು!! ನನ್ನ ಕುದುರೆಗಳು ಹೀಗೆ ಯಾವಾಗಲೂ ಪೇಚಾಡುತ್ತಿರುತ್ತವೆ. ಮಳೆಗಾಲದ ಯಾವ ದೊಂದು ದಿವಸ ಇವುಗಳಿಗೆ ತುಸು ನೀರಿನ ಸ್ಪರ್ಶವು ಆಗು ಇದೆ. ಎಲ್ಲ ಮೇಘಗಳು ಬಹುಶಃ ಅ೦ಜುಬುರುಕ ಸ್ವಭಾ ವದವೇ ಇರುತ್ತವೆ. ಅದರಿಂದ ಅವು ನಮಗೆ ಹೆದರಿ, ದೂರ ದೂರಿಂದಲೇ ಅಡ್ಡಾಡುತ್ತಿರುತ್ತವೆ. ಯಾವದೊಂದು ಘನ ವಾದ ಮೇಘದ ಕೆಲವು ಭಾಗವು ನಮ್ಮೆದುರಿಗೆ ಬಂದು ಅದ
ಕೈ ತಾಕಿ, ರಬರಧದ ಗಾಲಿಗಳ ಅಚ್ಚು ಕೊಂಕಬಾರದೆಂ ತ, ಇಲ್ಲವೆ ಆ ರಥವು ಒಗ್ಗಾಲಿಯಾಗಿ ಬೀಳಬಾರದೆ ತಲೂ, ನಮ್ಮ ಹಾದಿಯನ್ನು ಯಾವಾಗಲೂ ಸ್ವಚ್ಛ ಹಾಗು ನಿರ್ಧಾಸ್ಯವಾಗಿಡುವ ಕೆಲಸದ ಮೇಲೆ ನಿಯಮಿಸಿದ ಗಾಳಿದೇ ದನು ಆ ಮೇಘಗಳನ್ನು ತನ್ನ ಪರುಗಾಳಿಯೆಂಬ ಕಸಬೊರಿಗೆ ಯಿಂದಾಗಲಿ, ಸಂಕಿಯಿಂದಾಗಲಿ ದೂಡಿ ಬಿಡುವ ದಕ್ಷತೆ ಯನ್ನು ವಹಿಸಿರುತ್ತಾನೆ. ಆದರೆ ಅವನ ದೃಷ್ಟಿ ತಪ್ಪಿಸಿ ಯಾವ ದೊಂದು ಕಲ್ಲೆದೆಯು ಮೇಘವು ನಮ್ಮ ಸುದೈವದಿಂದ ನಮ್ಮ ದಾರಿಯಲ್ಲಿ ನಮಗೆ ಗಂಟು ಬಿದ್ದರೆ, ಹಾಗು ನಮ್ಮ ಸುದೈವ ದಿಂದ ನಮ್ಮ ಯಜಮಾನನ ದೃಷ್ಟಿಯು ಅದರ ಮೇಲೆ ಬೀಳದಿದ್ದರೆ, ಈ ನಮ್ಮ ರಥದ ಕುದುರೆಗಳು ಅತ್ಯಂತ ಹಸಿದ ಶಾಚಿಗಳಂತೆ ಆ ಮೇಘದ ಮೈ ಮೇಲೆ ಒಮ್ಮೆಲೆ ಏರಿ ಹೋಗುತ್ತವೆ; ಆ ಮೇಘದ ಶರೀರದಲ್ಲಿ ಸೇರುತ್ತವೆ; ಆದ ನ್ನು ತುಂಡು ತುಂಡಾಗಿ ಮಾಡಿಬಿಡುತ್ತವೆ; ಅದರೊಳಗಿನ ತಣ್ಣೀರನ್ನು ಗಟ ಗಟವೆಂದು ಕುಡಿಯುತ್ತವೆ; ಅದರಲ್ಲಿಯ ಆಣೇಕಲ್ಲುಗಳನ್ನು ಕೂಡ ಕಡವೆಂದು ಕಡಿದು ತಿನ್ನುತ್ತವೆ; ಮತ್ತು ಆ ಮೇಘದಿಂದ ಯವರೊಂದು ಕಾರಂಜಿಯ ತುಂ, ತುರವನಿಗಳಂತೆ ಬಹು ಎತ್ತರದಿಂದ ಸಳಸಳವೆಂದು ಸಾರುವ ಹಲವು ಜಲಧಾರೆಗಳ [ವಿರುದ್ಧ ಮಳೆಯ ಕೆಳಗೆ ಕ್ಷಣ ಹೊತ್ತು ನಿಂತು ಈ ಕುದುರೆಗಳು ತಮ್ಮ ಸಂತಸ್ತ ದೇಹಗಳಗೆ ಸಂತರ್ಪಣವನ್ನು ಮಾಡಿಸುತ್ತಿರುತ್ತವೆ! ಆ ವೇಳೆಯಲ್ಲಿ ಇವುಗಳ ಸಮಾಧಾನವಾಗುವದನ್ನು ನೋಡಿ, ನನಗೂ ಸಮಾ ಧಾನವಾಗುತ್ತದೆ. ಆಗ ಇವುಗಳ ವೇಗವು ತುಸು ಕಡಿಮೆ ಯಾದರೂ ನಾನು ಇವುಗಳಿಗೆ ಚ ಬಕದಿಂದ ಹೊಡೆಯುವದಿಲ್ಲ