ರಂಗಮ್ಮನ ವಠಾರ/೫

ವಿಕಿಸೋರ್ಸ್ದಿಂದ


ಆ ಮನುಷ್ಯ ವಠಾರಕ್ಕೆ ಬೀಡಾರ ಬರಲು ಒಪ್ಪಿದನೆಂದು ತಿಳಿದಾಗ ಅಹಲೈಗೆ
ತುಸು ಆಶ್ಚರ್ಯವೇ ಆಯಿತು.
"ಎಷ್ಟು ಬಾಡಿಗೆಗೆ ಒಪ್ಕೊಂಡ್ರು ರಂಗಮ್ನೋರೆ?"

ರಂಗಮ್ಮನಿಗೆ ಆ ಪ್ರಶ್ನೆ ಇಷ್ಟವಾಗಲಿಲ್ಲ.
"ನಿನಗ್ಯಾತಕ್ಕಮ್ಮ ಅದೆಲ್ಲ?ಒಪ್ಕೊಂಡ,ಹೋದ."
"ಇಪ್ಪತ್ತೊಂತ ತ್ತೋರುತೆ."
ಹತ್ತೊಂಭತ್ತು. ನೀವು ಮನೆ ಖಾಲಿ ಮಾಡಿದ್ರೆ ಮುಂದೆ ನಿಮ್ಮದಕ್ಕೂ
ಹತ್ತೊಂಭತ್ತು ರೂಪಾಯಿ ಬರುತ್ತೆ."
ರಂಗಮ್ಮ ರೇಗಿದರೆಂದು ಅಹಲ್ಯಾ ಸುಮ್ಮನಾದಳು.ಆದರೂ ಮೌನವಾಗಿ
ಕುಳಿತಿರಲಾರದೆ ವರದ ಬಾಗಿಲಿನಿಂದ ಬಾಗಿಲಿಗೆ ಸಂಚರಿಸಿ ಕೊನೆಯ ಮನೆಗೆ ಬಿಡಾರ
ಬರಲಿರುವ ವಿಷಯವನ್ನು ಪ್ರಸಾರ ಮಾಡಿದಳು.
"ಬಂದ್ಮೇಲೆ ತಾನೆ?"ಎಂದು ಒಬ್ಬಿಬ್ಬರು ಸಂದೇಹದ ರಾಗವೆಳೆದರು.
ಮರುದಿನ ಸಾಯಂಕಾಲ ಶಂಕರನಾರಾಯಣಯ್ಯ ಮುಂಗಡ ಬಾಡಿಗೆ ತೆತ್ತು
ಕರಾರು ಪತ್ರ ಮಡಿಕೊಳ್ಳಲು ಬರದೆ ಇರಲ್ಲಿಲ. ಈ ದಿನ ಅತ ಅಪರಿಚಿತನಂತೆ
ಅಂಗಳದಲ್ಲೇ ನಿಲ್ಲಲಿಲ್ಲ. ಕತ್ತಲೆಯ ನಡುಮನೆ ಹಾದಿಯಲ್ಲಿ ಬಂದು ರಂಗಮ್ಮನ
ಬಾಗಿಲಿನೆದುರು ಓಣೆಯಲ್ಲಿ ನಿಂತು,"ಇದೀರಾ?"ಎಂದು ಕೇಳಿದ.
ಸಂಜೆಯಾದರೂ ಈತ ಬರಲೇ ಇಲ್ಲವಲ್ಲಾ -ಎಂದು ಯೊಚನೆಯಲ್ಲೇ ಇದ್ದ
ರಂಗಮ್ಮ "ಬನ್ನಿ, ಬನ್ನಿ"ಎಂದರು.
ಹಿಂದಿನ ದಿನದ್ದೇ ವೇಷಭೂಷಣ . ಈ ದಿನವೂ ವೀಳ್ಯ ಜಗಿದು ತುಟಿಗಳು
ಕೆಂಪಾಗಿದ್ದುವು. ಹಿಂದಿನ ದಿವಸ ಮಾತು ನಿಲ್ಲಿಸಿದ್ದಲ್ಲಿಂದಲೇ ಮುಂದುವರಿಸಿದ ಹಾಗೆ
ಆತ ಹೇಳಿದ:
"ಅದೇನೋ ಕರಾರು ಪತ್ರ ಬರೀಬೇಕು ಅಂದ್ರಲ್ಲಾ."
"ಹೌದು,ಹೌದು. ಬಾಡಿಗೆ ಹಣ ತಂದಿದ್ದೀರಾ?"
"ತಗೊಳ್ಳಿ."
ಜುಬ್ಬದ ಪಾರ್ಶ್ವ ಜೇಬಿನಲ್ಲಿ ಮಡಚಿ ಇಟ್ಟಿದ್ದೊಂದು ಲಕೋಟೆಯನ್ನು ಆತ
ಹೊರತೆಗೆದ.ಹತ್ತು ರೂಪಾಯಿನದೊಂದು, ಐದು ರೂಪಾಯಿನದೊಂದು, ಒಂದು
ರೂಪಾಯಿನ ನಾಲ್ಕು ನೋಟುಗಳು_ಅದರೊಳಗಿದ್ದುದೇ ಅಷ್ಟು.ಅಷ್ಟನ್ನೂ ಆತ
ರಂಗಮ್ಮನ ಎದುರಿಟ್ಟ.
ಅವರು ಎಲ್ಲವನ್ನೂ ಎತ್ತಿಕೊಂಡು ಒಂದೂಂದನ್ನೂ ಬೆಳಕಿಗೆ ಹಿಡಿದು ಸೂಕ್ಷ್ಮ
ವಾಗಿ ನೋಡಿದರು.
"ದೃಷ್ಟಿ ಸ್ವಲ್ಪ ಮಂದ. ವಯಸ್ಸಾಯ್ತು" ಎಂದು ಅವರು ಆ ಸೂಕ್ಷ್ಮ ಪರೀ
ಕ್ಷೆಗೆ ಕಾರಣ ಕೂಟ್ಟರು.ಮಂದವೋ ಚುರುಕೋ ,ಎಷ್ಟೋ ವರ್ಷಗಳಿಂದ ನೋಟನ್ನು
ಅವರು ಹಿಡಿದು ನೋಡುತಿದ್ದ ರೀತಿಯೇ ಅಂಥದ್ದು. ಸುಬ್ಬುಕೃಷ್ಣಯ್ಯನಿಗೆ ಮನೆ
ಕೊಟ್ಟಾಗ ದೊರೆತ ಐದು ರೂಪಯಿನ ನೋಟನ್ನೂ_ಆ ಮೊದಲ ಬಾಡಿಗೆಯನ್ನೂ

6

ಅಷ್ಟೇ ಸೂಕ್ಶ್ಮವಾಗಿ ತಿರುತಿರುಗಿಸಿ ಅವರು ಪರೀಕ್ಷಿಸಿದ್ದರು. ಆಗಲೂ ಹೇಳಿದ್ದರು
'ದೃಷ್ಟಿ ಸ್ವಲ್ಪ ಮಂದ'ಎಂದು. 'ವಯಸ್ಸಾಯ್ತು' ಎಂದು ಮಾತ್ರ ಅಂದಿರಲಿಲ್ಲ.
ದೃಷ್ಟಿ ಎಂದೂ ಅವರಿಗೆ ತೊಂದರೆ ಕೊಟ್ಟಿರಲಿಲ್ಲವೆಂದಲ್ಲ. ಆದರೆ ನೇತ್ರ ವೈದ್ಯರ
ಬಳಿಗೆ ಹೋಗಿ ಕನ್ನಡಕ ಕೊಳ್ಳುವ ಗೋಜಿಗೆ ಅವರು ಹೋಗಿರಲಿಲ್ಲ.
"ಸರಿಯಾಗಿದೆ,"ಎಂದರು ರಂಗಮ್ಮ. ಮುಂದೆ ತಾವೇ ಮಾತು ಸೇರಿಸಿದರು:
"ನಿಮ್ಮಲ್ಲಿ ಕಾಗದ ಪೆನ್ನು ಏನೂ ಇಲ್ಲಾಂತ ತೋರುತ್ತೆ."
"ಪೆನ್ನಿದೆ."
"ಜುಬ್ಬದ ಎದೆ ಭಾಗದಲ್ಲಿ ಪೆನ್ನಿಗಾಗಿಯೇ ಮಾಡಿದ್ದ ಕಿರುಜೇಬಿನಿಂದ ಎರಡು
ರೂಪಾಯಿಯ ನಕಲಿ ಪಾರ್ಕರ್ ಪೆನ್ನನ್ನು ಹೊರತೆಗೆದು ಶಂಕರನಾರಾಯಣಯ್ಯ
ಕೈಯಲ್ಲಿ ಹಿಡಿದುಕೊಂಡ.
ರಂಗಮ್ಮ ಅಸ್ಪಷ್ಟವಾಗಿ ಏನನ್ನೋ ಗೊಣಗಿ, ಕೊರಳಿಗೆ ತೂಗಹಾಕಿದ್ದ ಬೀಗದ
ಕೈಯಿಂದ ಕಬ್ಬಿಣದ ಪೆಟ್ಟಗೆಯನ್ನು ತೆರೆದು, ಸ್ವಲ್ಪ ಮಾಸಿದ್ದ ಮಡಚಿದ್ದ ಕಾಗದದ
ಹಾಳೆಯೊಂದನ್ನು ಹೊರತೆಗೆದು,ಆತನ ಮುಂದಿಟ್ಟರು. ಒತ್ತಿಕೊಳ್ಳಲೆಂದು
ಯಾವುದೋ ಒಂದು ಹಳೆಯ ಪುಸ್ತಕವನ್ನೂ ಕೊಟ್ಟರು.
ಶಂಕರನಾರಾಯಣಯ್ಯ ಬರೆಯಲು ಸಿದ್ಧನಾದ. ರಂಗಮ್ಮನ ಮುಖ ನೋಡಿದ.
"ಹೇಳಿ ಬರಕೋತೀನಿ.
"ರಂಗಮ್ಮ ಹೇಳಲು ಸಿದ್ಧವಾದರು. ಎಷ್ಟೋ ಸಾರೆ ಹೇಳಿ ಬರೆಸಿ ಅಭ್ಯಾಸ
ವಾಗಿತ್ತು. ಪರಿಚಯ ಪದಗಳು ಅವರ ಮನಸ್ಸಿನಲ್ಲಿ ರೂಪುಗೊಂಡುವು.
"ಮಲ್ಲೇಶ್ವರ, ಶ್ರೀರಾಮಪುರ ರಂಗಮ್ಮನ ವಠಾರದ ಮಾಲಿಕರಾದ ರಂಗಮ್ಮ
ನವರಿಗೇ-ಆಮೇಲೆ ನಿಮ್ಮ ಹೆಸರು ಹಾಕಿ-ನಾದ ನಾನು ಬರೆದು ಕೊಡುವು
ದೇನೆಂದರೆ...
"ಶಂಕರನಾರಾಯಣಯ್ಯ ಅಷ್ಟನ್ನೂ ಬರೆದುಕೊಂಡ. ಆತನಿಗೆ ನಗು ಬಂತು.
ತುಟಿಗಳು ಬೇರ್ಪಟ್ಟು ಕೋಲುಮುಖ ಅಗಲವಾಯಿತು. ಆದರೆ ಆತನ ತಲೆ ಬಾಗಿದ್ದು
ದರಿಂದಲೂ ಮುಂದಿನ ಮಾತುಗಳನ್ನು ರಂಗಮ್ಮ ನೆನಪು ಮಾಡಿಕೊಳ್ಳುತ್ತಿದ್ದುದ
ರಿಂದಲೂ ಆಕೆಗೆ ಅದು ಕಾಣಿಸಲಿಲ್ಲ.
"ಅಷ್ಟೂ ಬರೆದಾಯ್ತೊ?"
"ಹೂಂ.ಮುಂದಕ್ಕೆ ಹೇಳಿ."
"ಮುಂದೆ ಇವತ್ತಿನ ತಾರಿಖು-ತಿಂಗಳು-ಇಸವಿ ಬರೀರಿ."
"ಹೂಂ."

"ಈ ದಿವಸ ನಾನು ಮೊಬಲಗು ರೂಪಾಯಿ ಹತೋಂಭತ್ತನ್ನು ಈ ವಠಾರದ
ಮನೆಯ-ನಂಬರು ಹದಿನಾರು ಐವತ್ತು-ಒಂದು ತಿಂಗಳ ಮುಂಗಡ ಬಾಡಿಗೆಯಾಗಿ
ಪೂರ್ತಾ ಪಾವತಿ ಮಾಡಿದ್ದೇನೆ....ಬರೆದಿರೋ?...ಮುಂದೆ ಪ್ರತಿ ತಿಂಗಳೂ ಮೊದಲ್ನೇ
ತಾರೀಖಿಗೆ- ಮೊದಲ್ನೇ ತಾರೀಖು ಅಂತ್ಲೇ ಹಾಕಿ, ಅವಧಿಯೇನೋ ಆಮೇಲೂ ಐದು
ದಿವಸ ಇರುತ್ತೆ-ತಾರೀಖಿಗೆ ಹತ್ತೊಂಭತ್ತು ರೂಪಾಯಿ ಬಾಡಿಗೆ ತಪ್ಪದೇ ಸಲ್ಲಿಸುವು
ದಾಗಿ ಈ ಮೂಲಕ ಬರೆದು ಕೊಡುತ್ತೇನೆ. ಈ ಸಲ ಮೊದಲೇ ತಾರೀಖಿಗೆ ಮಾತ್ರ
ನೀವು ಅರ್ಧ ತಿಂಗಳಿಂದು ಕೊಟ್ಟರಾಯ್ತು ... ಅದನ್ನ ಬರೀಬೇಡಿ... ಅದೇನೇನು
ಹೇಳಿದ್ನೋ. ಎಲ್ಲಿ ಸ್ವಲ್ಪ ಓದಿ."
ಸರಿಯಾಗಿ ಬರೆದುಕೊಂಡಿದ್ದುದನ್ನು ಶಂಕರನಾರಾಯಣಯ್ಯ ಓದಿದ.. ನಿಧಾನ
ವಾದ ಗಂಭೀರವಾದ ಆತನ ನಟನೆಯ ಧ್ವನಿ ರಂಗಮ್ಮನಿಗೆ ಮೆಚ್ಚುಗೆ
ಯಾಯಿತು.
“ಸರಿ. ಮುಂದಕ್ಕೆ ಬರೀರಿ."
"ಹೇಳಿ."
"ಮೂರು ಬಿಂದಿಗೆಗಿಂತ ಹೆಚ್ಚಿನ ಪ್ರತಿ ಮೂರು ಬಿಂದಿಗೆ ನೀರಿಗೂ ಎಂಟಾಣೆ
ಸಲ್ಲಿಸುತ್ತೇನೆ."
“ಹೂಂ."
"ಅವಸರ ಮಾಡ್ಬೇಡಿ. ನಿಧಾನವಾಗೇ ಬರೀರಿ...ಬಲ್ಬು ಕೆಟ್ಟು ಹೋದರೆ
ಹೊಸ ಬಲ್ಬು ನಾನೇ ಹಾಕುತ್ತೇನೆ. ಮನೆಯ ವಿಷಯದಲ್ಲಿ ಸಮಸ್ತ ಜವಾಬ್ದಾರಿಯೂ
ನನ್ನದೇ ಎಂದು ಈ ಮೂಲಕ ಒಪ್ಪಿಕೊಳ್ಳುತ್ತೇನೆ....ಬರೆದಿರಾ?"
"...ಈ ಮೂಲಕ ಒಪ್ಪಿಕೊಳ್ಳುತ್ತೇನೆ. ಬರೆದೆ."
"ಅಷ್ಟೆ. ಇನ್ನೊಮ್ಮೆ ಓದಿ."
ಶಂಕರನಾರಾಯಣಯ್ಯ, ನಿಧಾನವಾಗಿ, ಬರೆದುದೆಲ್ಲವನ್ನೂ ಓದಿದ.
"ಅದರ ಕೆಳಗೆ ರುಜು ಹಾಕಿ"
ಶಂಕರನಾರಾಯಣಯ್ಯ ಎಂದು ಇಂಗ್ಲಿಷಿನಲ್ಲಿ ಸಹಿಯಾಯಿತು.
"ರುಜು ಹಾಕಿದಿರೋ? ಅದರ ಕೆಳಗೆ ತಾರೀಖೂ ಹಾಕಿ."
"ಹಾಕ್ದೆ."
"ಸಂತೋಷ. ಅಷ್ಟೆ."
ಬಲು ಕಷ್ಟದ ಕೆಲಸವನ್ನು ಮಾಡಿ ಮುಗಿಸಿದ ಹಾಗೆ ರಂಗಮ್ಮ ಸಂತೃಪ್ತಿಯ
ನಿಟ್ಟುಸಿರು ಬಿಟ್ಟರು.
ಆದರೆ ಶಂಕರನಾರಾಯಣಯ್ಯನಿಗೆ ಅಷ್ಟು ತೃಪ್ತಿಯಾಗಿರಲಿಲ್ಲ.
"ಕರಾರು ಪತ್ರ ಎಂದಿರಿ. ಇದಕ್ಕೆ ನಿಮ್ಮ ಸಹಿಯೂ ಆಗೋದು ಬೇಡ್ವೆ ರಂಗ
ಮ್ನೋರೆ?"
ರಂಗಮ್ಮನಿಗೆ ಸಹಿ ಹಾಕಲು ಬರುತ್ತಿರಲಿಲ್ಲ. ಅವರ ಪಾಲಿಗಿದ್ದುದು ಎಡಗೈ
ಹೆಬ್ಬೆಟ್ಟಿನ ಗುರುತು. ಆದರೆ ಆ ವಿಷಯವನ್ನೇನೂ ಅವರು ಹೇಳಲಿಲ್ಲ.
"ಇಲ್ಲವಲ್ಲಪ್ಪಾ. ನಮ್ಮಲ್ಲಿ ಕರಾರುಪತ್ರಕ್ಕೆ ಒಬ್ಬರೇ ಸಹಿ ಹಾಕೋದು. ನೀವು

ಬರಕ್ಕೊಡೋದು, ನಾನು ತಗೊಳ್ಳೋದು."
ಶಂಕರನಾರಾಯಣಯ್ಯ ಸಣ್ಣಗೆ ನಕ್ಕ.
“ಹಾಗೆಯೇ ಆಗಲಿ. ಇನ್ನು ಬರ್ಲೇನು ನಾನು?"
“ಆಗಬಹುದಪ್ಪಾ. ನಾಳೇನೇ ಬರ್ತೀರೊ?"
“ಹೂಂ. ಸುಣ್ಣ ಹೊಡಿಸಿ ನೆಲ ಸಾರಿಸಿದೆ ತಾನೆ?"
ಆ ಕೆಲಸವಾಗಿರಲಿಲ್ಲ. ಮುಂಗಡ ಬಾಡಿಗೆ ಬಂದು ಕರಾರು ಪತ್ರವಾದ ಮೇಲೆ
ಮಾಡಿಸಿದರಾಯಿತೆಂದು ರಂಗಮ್ಮ ಸುಮ್ಮನೆ ಇದು ಬಿಟ್ಟಿದ್ದರು.
"ಅಯ್ಯೋ, ಅದೆಲ್ಲ ಎಷ್ಟರ ಕೆಲಸ! ಬೆಳಗ್ಗೆ ಮಾಡಿಸ್ತೀನಿ."
ಕರಾರು ಪತ್ರವನ್ನು ಪಡೆದುಕೊಂಡು ರಂಗಮ್ಮ ನಾಜೂಕಾಗಿ ಮಡಚಿ ಕೈಯಲ್ಲೆ
ಇರಿಸಿಕೊಂಡರು.
ಶಂಕರನಾರಾಯಣಯ್ಯನಿಗೆ ಒಂದು ತರಹೆಯಾಯಿತು. ಆತ ಹಣವನ್ನೂ
ಕೊಟ್ಟಿದ್ದ, ಸಹಿಯನ್ನೂ ಹಾಕಿದ್ದ. ಆದರೆ ಹಣ ತಲಪಿದುದಕ್ಕೆ ವಠಾರದ ಒಡತಿ
ಯಿಂದ ರಶಿತಿ ಬಂದಿರಲಿಲ್ಲ.
"ಹೊರಡ್ತೀರಾ ಹಾಗಾದರೆ?"
-ಎಂದು ರಂಗಮ್ಮ ಕೇಳಿದರು.
“ಹೂಂ."
ಆತ ಎದ್ದು ನಿಂತ. ಪೆಚ್ಚು ಮೋರೆಯ ಲಕ್ಷಣ ಮೊದಲ ಬಾರಿಗೆ ಮೂಡಿ
ಮರೆಯಾಯಿತು.
“ಹಣ ತಲಪಿದ್ದಕ್ಕೆ ರಶೀತಿ ಕೊಡ್ತೀರಾ ರಂಗಮ್ನೋರೆ?
"ರಶೀತೀನೆ? ಏನೂ ಪರವಾಗಿಲ್ಲ. ಹೋಗ್ಬಿಟ್ಟು ಬನ್ನಿ"
ಶಂಕರನಾರಾಯಣಯ್ಯ ಮನಸ್ಸಿನೊಳಗೇ ಅನುಮಾನಿಸಿದರೂ ಹೊರಗೆ ಒಣ
ನಗೆ ತೋರುತ್ತಾ ಹೊರಡಲು ಸಿದ್ಧನಾದ.
ಆತನ ಪ್ರಶ್ನೆಯಿಂದ ಸ್ವಲ್ಪ ನೊಂದುಕೊಂಡವರ ಹಾಗೆ ರಂಗಮ್ಮ ಮತ್ತೂ
ಹೇಳಿದರು:
"ಇಲ್ಲಿ ಯಾರನ್ನು ಬೇಕಾದರೂ ಕೇಳಿ ನೋಡಿ. ನಮ್ಮ ವಠಾರದಲ್ಲಿ ರಶೀತಿ
ಕೊಡೋ ಪದ್ದತಿನೇ ಇಲ್ಲ."
"ನನಗೆ ಗೊತ್ತಿರ್ಲಿಲ್ಲ, ಆದ್ದರಿಂದ ಕೇಳ್ದೆ...ನಾವು ಈಗಿರೋ ಮನೆಯ ಮಾಲಿ
ಕರು ರಶೀತಿ ಕೊಡ್ತಾರೆ. ನೀವು ಇಷ್ಟು ಹೇಳಿದ್ಯೆಲೆ ಏನೂ ಪರವಾಗಿಲ್ಲ, ಬರ್ತೀನಿ."
"ಆಗಲಪ್ಪಾ."
ಈ ದಿನ ಆತನೊಬ್ಬನೇ ಅಂಗಳ ದಾಟಿ ಬೀದಿಗಿಳಿದ. ರಂಗಮ್ಮ ಬೀಳ್ಕೊಡಲು
ಬರಲಿಲ್ಲ.
ಆತ ಹೋದೊಡನೆಯೇ ಅಹಲ್ಯಾ ರಂಗಮ್ಮನ ಮನೆ ಬಾಗಿಲಲ್ಲಿ ನಿಂತಳು.
"ಯಾವತ್ತು ಬರ್ತಾರಂತ್ರೀ?"
"ನಿನಗ್ಯಾಕೇ ಆ ಸಮಾಚಾರ? ಬರ್ತಾರೆ, ನಾಳೆ ಬಂದ್ಬಿಡ್ತಾರೆ."
ಎಷ್ಟು ಜನ? ದೊಡ್ಡವರೆಷ್ಟು-ಚಿಕ್ಕವರೆಷ್ಟು? ಕೆಲಸ ಏನು? ಅಹಲ್ಯೆಯ ಪ್ರಶ್ನೆ
ಗಳಿಗೆ ಅಂತ್ಯವಿರಲಿಲ್ಲ.
"ಸಾಕುಸಾಕಾಗಿ ಹೋಗುತ್ತಮ್ಮ ನಿನಗೆ ಉತ್ತರ ಕೊಟ್ಟು," ಎಂದು ರಂಗಮ್ಮ
ಬೇಸರದಿಂದಲೇ ಅಂದರು. ಆದರೆ ಕೇಳಿದ್ದಕ್ಕೆಲ್ಲ ಸಮರ್ಪಕ ಉತ್ತರ ಮಾತ್ರ ಕೊಡ
ದಿರಲಿಲ್ಲ.
"ತಿಂಗಳಿಗೆ ನೂರೈವತ್ತು ರೂಪಾಯಿ ಸಂಪಾದಿಸ್ತಾನೆ," ಎಂದು ಅಂತಹ ಬಾಡಿಗೆ
ದಾರನನ್ನು ದೊರಕಿಸಿಕೊಂಡ ತಮ್ಮ ಬಗೆಗೆ ಅಭಿಮಾನಪಡುತ್ತಾ ರಂಗಮ್ಮ ಹೇಳಿದರು.
ಅಹಲ್ಯಾ ಎದುರಲ್ಲೇ ಇದ್ದ ಕಾಮಾಕ್ಷಿಯ ಮನೆಗೆ ಜಿಗಿದಳು. ಅಲ್ಲಿಂದ ಹೊರ
ಹೋಗಿ "ಓ ರಾಧಾ, ಬಾರೇ" ಎಂದು ಮಹಡಿ ಮೇಲಿನ ಗೆಳತಿಯನ್ನು ಕೆಳಕ್ಕಿಳಿಸಿದಳು.
ಆ ಬಳಿಕ ಪ್ರತಿಯೊಂದೊಂದು ಮನೆಗೆ ಸುದ್ದಿ ಪ್ರಸಾರವಾಯಿತು.
_ನಾಳೆ ದಿವಸ ಕೊನೇ ಮನೆಗೆ ಬಿಡಾರ ಬರ್ತಾರಂತೆ.
_ಅವರು ಚಿತ್ರ ಬರೀತಾರಂತೆ.
ಉಪಾಧ್ಯಾಯರ ಹೆಂಡತಿಯ ಕುತೂಹಲ ಕೆರಳಿತು. ತಮ್ಮ ಸಂಸಾರದ್ದೊಂದು
ಭಾವಚಿತ್ರ ತೆಗೆಸಬೇಕೆಂದು ಆಕೆ ಬಹಳ ದಿನಗಳಿಂದ ಬಯಸಿದ್ದಳು. ಆ ಬಯಕೆ
ಈಡೇರಿಯೇ ಇರಲಿಲ್ಲ. ಗರ್ಭಿಣಿಯಾಗಿದ್ದಾಗ, 'ಈಗ ಚೆನ್ನಾಗಿರೋಲ್ಲ. ಬಾಣಂತಿ
ಯಾದ್ಮೇಲೆ ತೆಗೆಸೋಣ' ಎನ್ನುತ್ತಿದ್ದ ಗಂಡ ಲಕ್ಷೀನಾರಾಯಣಯ್ಯ. ಬಾಣಂತಿ
ಯಾದ ಮೇಲೆ, 'ಮಗು ಚಿಕ್ಕದು ಕಣೇ, ಅಲುಗುತ್ತೆ. ಚಿತ್ರ ಕೆಟ್ಟುಹೋಗುತ್ತೆ'
ಎನ್ನುತ್ತಿದ್ದ. ಮಗು ದೊಡ್ಡದಾಗುವುದರೊಳಗಾಗಿಯೇ 'ಈಗ ಚೆನ್ನಾಗಿರೋಲ್ಲ.
ಬಾಣಂತಿ ಯಾದ್ಮೇಲೆ__' ಬಾಣಂತಿಯಾದ ಮೇಲೆ ಹಿಂದಿನ ಕಥೆಯೇ. ಕ್ರಮೇಣ
ದಿನಕಳೆದಂತೆ ಭಾವಚಿತ್ರ ತೆಗೆಯುವ ವಿಷಯದಲ್ಲಿ ಉಪಾಧ್ಯಾಯರ ಆಸಕ್ತಿ ಕಡಮೆ
ಯಾಯಿತು. ಯಾವುದರಲ್ಲಿ ತಾನೆ ಆಸಕ್ತಿ ಇತ್ತು ಅವರಿಗೆ? ಮದುವೆಯಾದಾಗ ಒಂದು
ಭಾವಚಿತ್ರ ತೆಗೆಸಿತ್ತು_ಕುಳಿತ ಗಂಡನ ಹಿಂದೆ ನಿಂತು ತೆಗೆಸಿಕೊಂಡಿದ್ದ ಚಿತ್ರ. ಅವರ
ದುರದೃಷ್ಟ. ಕಟ್ಟು ಹಾಕಿಸಿದ್ದ ಚಿತ್ರದ ಗಾಜು ಒಡೆದುಹೋಯಿತು; ಚಿತ್ರದ ಹಿಂದಿದ
ರಟ್ಟಿಗೆ ಗೋಡೆಯ ಗೆದ್ದಲು ಹಿಡಿದು, ಚಿತ್ರದ ಕಾಲು ಭಾಗ_ಕಾಲುಗಳ ಭಾಗ_
ಅದಕ್ಕೆ ಆಹುತಿಯಾಯಿತು. ಮನೆಯೊಳಗೆ ಸಾಕಷ್ಟು ಬೆಳಕು ಇಲ್ಲದಿದ್ದುದರಿಂದ,
ಅಲ್ಲದೆ ಪರೀಕ್ಷಿಸಿ ನೋಡುವ ನೆಂಟರಿಷ್ಟರೂ ಬರುತ್ತಿರಲಿಲ್ಲವಾದ್ದರಿಂದ, ಅದೇ ಚಿತ್ರ
ವನ್ನು ಇನ್ನೂ ಗೋಡೆಯ ಮೇಲೆ ತೂಗಹಾಕಲು ಅಷ್ಟು ಸಂಕೋಚವೆನಿಸಿರಲಿಲ್ಲ.
ಆದರೂ ಹೊಸತೊಂದು ಭಾವಚಿತ್ರ ಇದ್ದಿದ್ದರೆ....
ಈಗ ಹೊಸ ಬಿಡಾರ ಬರಲಿರುವವರ ವಿಷಯ ಕೇಳುತ್ತ ಲಕ್ಷೀನಾರಾಯಣ
ಯ್ಯನ ಹೆಂಡತಿಯ ಆಸೆ ಮತ್ತೆ ಚಿಗುರಿತು. "ಚಿತ್ರ ಬರಿಯೋದು ಅಂದ್ರೇನೆ ಅಹಲ್ಯಾ?"
"ಹಾಗಂದ್ರೆ? ಚಿತ್ರ ಬರಿಯೋದು ಕಣ್ರೀ."
"ಫೋಟೋ ತೆಗೆಯೋದೇ?"
"ಉಹುಂ. ಕೈಲಿ ಚಿತ್ರ ಬರೆದು ಬಣ್ಣ ಹಾಕೋದು."
"ಅಷ್ಟೇನಾ?"
ಆ ನಿರಾಸಕ್ತಿಯ ಧ್ವನಿಯ ಕಾರಣ ಅಹಲ್ಯೆಗೆ ತಿಳಿಯಲಿಲ್ಲ.
ಬರಲಿರುವ ಸಂಸಾರದಲ್ಲಿ ತನ್ನ ಓರಗೆಯ ಹುಡುಗಿಯರು ಯಾರೂ ಇಲ್ಲವೆಂದು
ರಾಧೆಗೆ ವ್ಯಸನವಾಯಿತು. ರಾಧೆಯನ್ನಲ್ಲದೆ ಬೇರೆ ಗೆಳತಿಯರ ಯೋಚನೆಯನ್ನೇ
ಎಂದೂ ಮಾಡದ ಅಹಲ್ಯ ಮಾತ್ರ ಆ ಅಂಶವನ್ನು ಗಮನಿಸಲಿಲ್ಲ. ಆದರೆ, ಅಹಲ್ಯೆಯ
ತಾಯಿಯೂ ರಾಧೆಯ ತಾಯಿಯೂ ಹೊಸ ಸಂಸಾರದ ಸದಸ್ಯರು ಯಾರು ಯಾರೆಂಬು
ದನ್ನು ಕೇಳದಿರಲಿಲ್ಲ. ವಿವರ ತಿಳಿದಾಗ ಅವರು ಸಂತೋಷ ಸೂಚಿಸಲೂ ಇಲ್ಲ.
ಬೇರೆ ಮಾತುಗಳೂ ಕೇಳಿಸಿದುವು:
"ಆತನಿಗೆಷ್ಟೊ ವಯಸ್ಸು?"
"ಮೂವತ್ತೊ ನಾಲ್ವತ್ತೊ ಇರಬೇಕು."
"ಮಗು ಚಿಕ್ಕದಂತೆ."
"ಎಂಥವರೊ?"
ಈ ಮಾತುಕತೆಗಳೆಲ್ಲ ನಡೆದುದು ಎರಡು ನಿಮಿಷಗಳ ಕಾಲ ಮಾತ್ರ. ದಿನದ
ದುಡಿತದಿಂದ ಗಂಡಸರು ಹಿಂತಿರುಗಿದರು. ವಠಾರಕ್ಕೆ ಹೊಸ ಬಿಡಾರ ಬರಲಿದೆಯೆಂದು
ಅವರೇನೂ ಆಸಕ್ತಿ ತೋರಿಸಲಿಲ್ಲ. ಹೆಂಗಸರು ಮನೆಗೆಲಸಗಳಲ್ಲಿ ನಿರತರಾದರು.
ಪುಟ್ಟ ಮಕ್ಕಳು ದೀಪ ಹತ್ತಿಕೊಂಡ ಸ್ವಲ್ಪಹೊತ್ತಿನಲ್ಲೆ 'ಹಸಿವು ಹಸಿವು' ಎಂದು
ಕೂಗಾಡಿ ನಿದ್ದೆ ಹೋಗಿದ್ದುವು. ತಮ್ಮನ್ನು ಮಾತನಾಡಿಸಲು ಬಂದ ಹುಡುಗರನ್ನು
'ದೂರ ಹೋಗಿ' ಎಂದು ಗದರಿಸಿ ಗಂಡಸರು, ಹೊರಗಿನ ಗಾಳಿಯಾದರೂ ಮೈಗೆ
ತಗಲೀತೇನೋ ಎಂಬ ಅಸೆಯಿಂದ, ತಗಲಬಹುದೆಂಬ ಭ್ರಮೆಯಿಂದ, ಮನೆಬಾಗಿಲು
ಗಳಲ್ಲಿ ನಿಂತರು.
ರಂಗಮ್ಮ ಆ ವಠಾರದಲ್ಲಿ ಮನಸ್ಸು ಬಿಚ್ಚಿ ಏಕಾಂತದಲ್ಲಿ ಮಾತನಾಡುತ್ತಿದ್ದುದು
ಸುಬ್ಬುಕೃಷ್ಣಯ್ಯನೊಡನೆ ಮಾತ್ರ. ಆತ ವಠಾರದ ಮೊದಲ ಬಾಡಿಗೆದಾರ. ಆಂಗಡಿ
ಯಲ್ಲಿ ಶ್ರೀನಿವಾಸಶೆಟ್ಟರ ನಂಬಿಕೆಗೆ ಅರ್ಹನಾಗಿದ್ದಂತೆ, ವಠಾರದಲ್ಲಿ ರಂಗಮ್ಮನ ವಿಶ್ವಾ
ಸಕ್ಕೆ ಆತ ಪಾತ್ರನಾಗಿದ್ದ. ಇನ್ನೊಬ್ಬರಿಗೆ ವಿಧೇಯನಾಗಿ ನಿಷ್ಠಾವಂತನಾಗಿ ಬಾಳ್ವೆ
ನಡೆಸುವುದೇ ಸುಬ್ಬುಕೃಷ್ಣಯ್ಯನ ಬದುಕಿನ ಪರಮ ಗುರಿಯಾಗಿತ್ತೆಂದರೂ ತಪ್ಪಾಗ
ಲಾರದು. ತನ್ನ ಬಗ್ಗೆ ಮೆಚ್ಚಿಗೆ ಸೂಚಿಸಿ ಯಾರಾದರೂ ಬರಿದೆ ಮಾತಾಡಿದರೂ
ಸಾಕು. ಅಷ್ಟರಲ್ಲೇ ಅವನಿಗೆ ತೃಪ್ತಿಯಾಗುತ್ತಿತ್ತು.
ಮುಖ್ಯ ಕೆಲಸವೊಂದನ್ನು ಸಾಧಿಸಿದ ರಂಗಮ್ಮ ಈ ದಿನ ಸುಬ್ಬುಕೃಷ್ಣಯ್ಯನ
ಬರವನ್ನು ಇದಿರು ನೋಡುತ್ತಿದ್ದರು. ಪ್ರತಿ ಸಲವೂ ಪ್ರತಿಯೊಂದು ಕರಾರು ಪತ್ರ
ವನ್ನೂ ಸುಬ್ಬಕೃಷ್ಣಯ್ಯನಿಗೆ ತೋರಿಸಿ, ಓದಿಸಿ ಕೇಳಿ, 'ಸರಿಯಾಗಿದೆ' ಎಂದು ಆತನ
ಒಪ್ಪಿಗೆ ಪಡೆದ ಹೊರತು ಅವರಿಗೆ ಸಮಾಧಾನವಿರುತ್ತಿರಲಿಲ್ಲ.
"ನಾಣೀ, ಏ ನಾಣೀ ..." ಎಂದು ಮೀನಾಕ್ಷಮ್ಮನ ಮಗನನ್ನು, ಓಣಿಯಲ್ಲಿ
ನಿಂತುಕೊಂಡು, ರಂಗಮ್ಮ ಕರೆದರು.
“ಊಟ ಮಾಡ್ತಾ ಇದಾನೆ ರಂಗಮ್ನೋರೆ," ಎಂದು ವಠಾರಕ್ಕೆಲ್ಲ ಕೇಳಿಸುವ
ಹಾಗೆ ಮೀನಾಕ್ಷಮ್ಮ ಉತ್ತರ ಕೊಟ್ಟಳು.
"ಇಲ್ಲಿ ಬಾಮ್ಮಾ ಸ್ವಲ್ಪ."
ಮೀನಾಕ್ಷಮ್ಮನನ್ನೇ ರಂಗಮ್ಮ ಕರೆದರು. ಆಕೆ ಹತ್ತಿರ ಬರುತ್ತಲೆ ಅವರೆಂದರು;
"ನಿನ್ನ ಯಜಮಾನರು ಮನೆಗೆ ಬಂದಿಲ್ಲ, ಅಲ್ವೆ?"
"ಇನ್ನು ಎಂಟುವರೇನೇ ಇಲ್ಲ."
"ಹೌದು ಹೌದು."
ಒಂಭತ್ತು ಘಂಟೆಗೆ ಶೆಟ್ಟರ ಅಂಗಡಿ ಬಾಗಿಲು ಹಾಕುತ್ತಿದ್ದರು. ಅನಂತರ
ಹೊರಟ ಸುಬ್ಬುಕೃಷ್ಣಯ್ಯ ಮನೆ ಸೇರುತ್ತಿದ್ದುದು ಒಂಭತ್ತೂವರೆಯ ಸುಮಾರಿಗೆ.
ಗಂಡ ಹೆಂಡಿರ ಊಟವೇ ದೀಪ ಆರುವುದಕ್ಕೆ ಮುಂಚೆ ಆ ಮನೆಯಲ್ಲಿ ನಡೆಯುತ್ತಿದ್ದ
ಕೊನೆಯ ಕೆಲಸ, ಊಟವಾದ ತಕ್ಷಣ ಅವರು ಮಲಗಿಬಿಡುತ್ತಿದ್ದರು...
ಏನು ವಿಶೇಷ-ಎಂದು ಕೇಳಬಹುದಾಗಿತ್ತು ಮೀನಾಕ್ಷಮ್ಮ, ಅದು ಗೊತ್ತೇ
ಇದ್ದುದರಿಂದ ಆಕೆ ಕೇಳಲಿಲ್ಲ. ತನ್ನ ಯಜಮಾನರ ವಿಷಯವಾಗಿ ರಂಗಮ್ಮ ತೋರು
ತ್ತಿದ್ದ ವಿಶ್ವಾಸದಿಂದ ಮೀನಾಕ್ಷಮ್ಮನಿಗೆ ಸಾಭಾವಿಕವಾಗಿಯೇ ಹೆಮ್ಮೆ.
ಒಳಗಿನಿಂದ ನಾಣಿಯ ಸ್ವರ ಕೇಳಿಸಿತು:
"ಅಮ್ಮಾ ಬಾ ಅಮ್ಮ."
"ಹೋಗಮ್ಮ, ನಿನ್ನ ಕುಮಾರ ಕಂಠೀರವ ಕೂಗ್ತಿದ್ದಾನೆ. ನಿನ್ನ ಯಜಮಾನರು
ಬಂದ್ಕೂಡ್ಲೆ ಸ್ವಲ್ಪ ಕಳಿಸ್ಕೊಡಮ್ಮ."
"ಹೂಂ" ಎಂದು ಮೀನಾಕ್ಷಮ್ಮ ಹೊರಟು ಹೋದಳು.
ರಂಗಮ್ಮ ಮಾರನೆಯ ದಿನ ಬೆಳಗ್ಗೆ ಮಾಡಬೇಕಾದ ಕೆಲಸದ ವಿಷಯವನ್ನು
ಯೋಚಿಸಿದರು. ಅರ್ಧ ಸೇರಿನಷ್ಟು ಸುಣ್ಣ ಯಾವುದೋ ಕಾಲದ್ದು ಮಿಕ್ಕಿತ್ತು
ಅದನ್ನೇ ಒಂದಿಷ್ಟು ಕಲಕಿ ನೀರು ಮಾಡಿದರಾಯಿತೆಂದುಕೊಂಡರು. ಹಿಂದೆ ಮಗ
ಮನೆಯಲ್ಲೇ ಇದ್ದಾಗ, ಮನೆಗಳು ತೆರವಾದಾಗಲೆಲ್ಲ ಎಷ್ಟೋ ಸಾರೆ ಆತನೇ ಗೋಡೆಗೆ
ಸುಣ್ಣ ಬಳಿಯುತ್ತಿದ್ದ. ಆ ಕೆಲಸವನ್ನೀಗ ರಂಗಮ್ಮ ಮಾಡುವಂತಿರಲಿಲ್ಲ, ಬೀದಿಯ
ಆಚೆಗಿನ ಎದುರು ಮನೆಗೆ ಮುಸುರೆ ತಿಕ್ಕಲು ಒಬ್ಬಾಕೆ ಬರುತ್ತಿದ್ದಳು. ಆಕೆಗೆ ಹೇಳಿ
ಕೆಲಸ ಒಪ್ಪಿಸಬೇಕು; ಒಂದು ನಾಲ್ಕಾಣೆ ಕೂಲಿ ಕೊಟ್ಟರಾಯ್ತು-ಎಂದು ಅವರು

ನಿರ್ಧರಿಸಿದರು.
ಹೇಗೆ ಹೊತ್ತು ಕಳೆಯಬೇಕೆಂದು ತೋಚದೆ ತಮ್ಮ ಬಾಗಿಲೆಳೆದುಕೊಂಡು
ರಂಗಮ್ಮ ಹೊರ ಅಂಗಳಕ್ಕೆ ಬಂದರು. ಮಹಡಿಯ ಮೇಲಿನ ಮೊದಲ ಕೊಠಡಿಯಲ್ಲಿ
ಓದುವ ಹುಡುಗರು ಅದೇನೋ ಮಾತನಾಡುತ್ತ ನಗುತ್ತ ಗದ್ದಲವೆಬ್ಬಿಸುತ್ತಿದ್ದರು.
ಪ್ರಯಾಸಪಟ್ಟು ಮಹಡಿಯ ಮೇಲೇರಿದರು ರಂಗಮ್ಮ. ಸದ್ದು ಮಾಡಬಾರ
ದೆಂದು ಅವರೆಷ್ಟು ಪ್ರಯತ್ನ ಪಟ್ಟರೂ ಉಸಿರಿಗಾಗಿ ಏದಾಟ, ಗಂಟಲಿನಿಂದ ಹೊರಡು
ತ್ತಿದ್ದ ನರಳಿಕೆಯ ಸ್ವರ, ಮಹಡಿ ಏರಿದ ಮೇಲೆ ನಡೆಗೋಲಿನ ಟಕ್ ಟಕ್ ಮುಂಚಿತ
ವಾಗಿಯೇ ಅವರ ಆಗಮನದ ಸಂದೇಶವನ್ನು ಹುಡುಗರಿಗೆ ಮುಟ್ಟಿಸಿದುವು. ಉಪಾ
ಧ್ಯಾಯರು ತರಗತಿಗೆ ಬಂದೊಡನೆ ಒಮ್ಮೆಲೆ ತಣ್ಣಗಾಗುವಂತೆ ಸದ್ದೆಲ್ಲ ಅಡಗಿ
ಹೋಯಿತು.
ಸುಧಾರಿಸಿಕೊಂಡು ಹೊರಗಿನಿಂದಲೇ ರಂಗಮ್ಮ ಹೇಳಿದರು:
"ಪರಮೇಶ್ವರಪ್ಪ, ಅದೇನೋ ಗಲಾಟೆ? ಮನಸ್ನಲ್ಲೇ ಓದ್ಕೋಬಾರ್ದೇನೊ..."
ಒಳಗಿನಿಂದ ಉತ್ತರ ಬರಲಿಲ್ಲ.
ಅದರ ಪಕ್ಕದ ಕೊಠಡಿಗೆ ಬೀಗ ಹಾಕಿತ್ತು.
ಮೂರನೆಯ ಕೊಠಡಿ ಮನೆಯ ಬಾಗಿಲಲ್ಲಿ ರಾಧೆಯ ತಾಯಿ ನಿಂತಿದ್ದಳು.
"ಊಟ ಆಯ್ತೇ?" ಎಂದು ರಂಗಮ್ಮ ಮುಂದೆ ಹೋಗುತ್ತಾ ಕೇಳಿದರು.
"ಹುಡುಗರು ಕೂತಿದಾರೆ."
ಉಣ್ಣಲು ಕುಳಿತಿದ್ದ ಜಯರಾಮು ತುತ್ತು ಅನ್ನವನ್ನು ಬಾಯಿಯಲ್ಲಿರಿಸಿ
ಕೊಂಡೇ ಕೇಳಿದ:
"ಕೊನೇ ಮನೆಗೆ ಯಾರೋ ಬಂದ್ರು, ಅಲ್ವೆ ರಂಗಮ್ನೋರೆ?"
"ಹೂನಪ್ಪಾ. ನಾಳೆ ಬರ್ತಾರೆ."
ಜಯರಾಮುವಿನ ತಾಯಿ ಕ್ಷೀಣ ಸ್ವರದಲ್ಲಿ ಹೇಳಿದಳು:
"ಕೆಳಗೆ ಮನೆ ಖಾಲಿಯಾದಾಗ ಕೊಡ್ತೀನೀಂತ ಹಿಂದೆ ಹೇಳಿದ್ರಿ."
"ಆದರೆ ನೀವು ಕೇಳ್ಲೇ ಇಲ್ಲ."
"ಅವರು ಇರ್ಲಿಲ್ಲಾಂತ__"
"ನಾನು ಅದಕ್ಕೇ ಸುಮ್ಮನಾದೆ."
ಆ ಪ್ರಸ್ತಾಪದಿಂದ ರಂಗಮ್ಮನ ಮನಸ್ಸಿನಲ್ಲಿ ಕಸಿವಿಸಿಯಾಯಿತು. ಅವರು
ಹಾಗೆ ಹೇಳಿದ್ದುದು ನಿಜ. ಆದರೆ ಈ ಮನೆಯವರು ಈಗ ಕೊಡುವುದು ಹದಿನಾರೇ
ರೂಪಾಯಿ. ಕೆಳಗೆ ಬಂದರೆ ಜಾಸ್ತಿ ಕೊಡಬೇಕು. ಅಲ್ಲದೆ, ಇವರು ಕೆಳಕ್ಕೆ ಬಂದ
ಮೇಲೆ ಮಹಡಿಯ ಮೇಲಿನ ಕೊಠಡಿ ಮನೆಗೆ ಸುಲಭವಾಗಿ ಬಾಡಿಗೆದಾರ ಸಿಗುವ
ಸಂಭವವೂ ಇರಲಿಲ್ಲ. ಇದೆಲ್ಲ ಮನಸ್ಸಿನ ಆಳದಲ್ಲಿ ಇದ್ದುದರಿಂದಲೇ ರಂಗಮ್ಮ ಆ
ಯೋಚನೆ ಮಾಡಿರಲಿಲ್ಲ.
ಬಾಗಿಲಲ್ಲಿ ನಿಂತಿದ್ದ ಆ ತಾಯಿ ಸುಮ್ಮನಿದ್ದುದನ್ನು ಕಂಡು, ಆ ಸಂದರ್ಭದಲ್ಲೇ

ನಾದರೂ ಒಳ್ಳೆಯ ಮಾತನಾದಲು ರಂಗಮ್ಮ ಬಯಸಿದರು.
"ಅದಕ್ಕೆನಂತೆ ಈಗ? ಇನ್ನೊಂದ್ಸಲ ಖಾಲಿಯಾದಾಗ ನಿಮಗೇ ಕೊಡ್ತೀನಿ."
ಒಳಗೆ ಮೂಲೆಯ ಬಚ್ಚಲಲ್ಲಿ ಕೈ ತೊಳೆಯುತ್ತಿದ್ದ ಜಯರಮು ಹೇಳಿದ:
"ಇನ್ನೊಂದ್ಸಲ ಖಾಲಿಯಾದಾಗ?ಬೇರೆ ಯಾರನ್ನ ಕಳಿಸ್ಬೇಕೊಂತೆ ಮಾಡಿದೀರಿ
ರಂಗಮ್ನೇರೆ!"
ಕೆಟ್ಟ ಹುಡುಗ 'ಕಳಿಸು'ವ ಮಾತನ್ನಾಡಿ ನಾರಾಯಣಿಯ ನೆನಾಪು ಹುಟ್ಟಿಸಿದ.
"ಅದೆಂಥ ಮಾತೋ..." ಎಂದಳು ತಾಯಿ, ಮಗನನ್ನುದೇಶಿಸಿ, ಬೇಸರದ
ಧ್ವನಿಯಲ್ಲಿ.
"ನೋಡು, ನೋಡು-ಹ್ಯಾಗೆ ಆದಡ್ತನೇಂತ.ಬರ್ತ ಬರ್ತ ಯಾಕೋ ಅತಿ
ಆಘೋಯ್ತುಮ್ಮ ನಿನ್ಮಗಂದು," ಎಂದು ರಂಗಮ್ಮ ನೊಂದ ಧ್ವನಿಯಲ್ಲಿ ಅಂದರು.
ಮತ್ತೆ ಅಲ್ಲಿರಲು ಮನಸ್ಸಾಗದೆ ಹಿಂತಿರುಗಿ ಹೊರಟರು.
"ಬರ್ತೀನಮ್ಮ."
"ಹೊಂ ರಂಗಮ್ಮ್ನೋರೆ."
"ಕಾಗದ ಬಂದಿತ್ತೇನು ನಿಮ್ಮ ಯಜಮಾನರ್ದು? ಯಾವೂರಲ್ಲಿದಾರೆ ಈಗ?"
"ಹೂದ ವಾರ ದವಣಗೆರೆಯಿಂದ ಬ್ಂದಿತ್ತು."
"ಯಾವತ್ತು ಬರ್ತಾರಂತೆ?"
"ಈ ತಿಂಗಳ ಕೊನೇಲಿ ಬರ್ತಿನೀಂತ ಬರೆದಿದಾರೆ.
"ಚಂದ್ರಶೆಖರಯ್ಯನ ಕೊಠಡಿ ದಾಟುತ್ತ ರಂಗಮ್ಮ ಕೇಳಿದರು:
"ಏನು ಈತ ಊರಲ್ಲೆ ಇಲ್ವೋ ಹ್ಯಾಗೆ?"
"ನಿನ್ನೆಯಿಂದ ಬಂದಿಲ್ಲ.ಇಲ್ಲಂತ ತೋರುತ್ತೆ."
"ಇವನ್ನೊಬ್ಬ ಮನುಷ್ಯ.ಅದ್ಯಾಕೆ ಹೀಗಿದಾನೋ....
"ಮೆಟ್ಟಲು ಇಳಿಯತೊಡಗುತ್ತ ರಂಗಮ್ಮ ಹೇಳಿದರು;
"ಹೊಂ.ಬರ್ತಿನಮ್ಮ,ಊಟ ಮುಗಿಸಿ ದೀಪ ಆರಿಸಿ ಮಲಕೊಂಡ್ಬಿಡಿ.
"ಆ ಮಾತಿಗೆ ಉತ್ತರ ಬರಲಿಲ್ಲ. ಧಡಾರನೆ ಬಾಗಿಲು ಹಾಕಿದ ಸದ್ದು ಮಾತ್ರ
ಕೇಳಿಸಿತು.
ಬಲು ನಿಧಾನವಾಗಿ ರಂಗಮ್ಮ ಇಳಿಯುತ್ತಿದ್ದರು. ಇಪ್ಪತ್ತೈದು ವರ್ಷಗಳ
ಹಿಂದೆ ಅವರ ಗಂಡ ಕೃಷ್ಣಪ್ಪನವರು ಆ ಮಹಡಿ ಕಟ್ಟಿಸುತ್ತಿದ್ದ ಕಾಲ. ಆಗ ಎಷ್ಟೊಂದು
ಸುಲಭವಾಗಿ ಅವರು ಹತ್ತಿ ಇಳಿಯುತ್ತಿದ್ದರು! ಆಗಲೆ ಅವರಿಗೆ ನಾಲ್ವತ್ತು ವರ್ಷ
ವಯಸ್ಸು.ದೊಡ್ಡವರಾಗಿದ್ದ ಮೂವರು ಮಕ್ಕಳ ತಾಯಿ. ಆದರು ಅವರು ದೃಢ
ಕಾಯಕರಾಗಿದ್ದರು.ದಣಿವು ಎಂಬುದನ್ನೇ ಕಂಡಿರಿಯದ ದೇಹ ಅವರದು.
ಈಗ, ಒಮ್ಮೆ ಮಹಡಿ ಸಂದರ್ಶನ ಮಾಡಿಬರುವುದೆಂದರೆ ತಿರುಪತಿ ಬೆಟ್ಟವನ್ನು
ಏರಿ; ಇಳಿದ ಹಾಗೆ ಅವರಿಗೆ ಭಾಸವಾಗುತಿತ್ತು.
ಅಂಗಳ ತಲಪಿದ ಮೇಲೆ ರಂಗಮ್ಮ ಊರುಗೋಲನ್ನು ಆಧರಿಸಿ ದೇಹವನ್ನು
ನೇರೆಗೊಳಿಸಿ ಕ್ಷಣ ಕಾಲ ನಿಂತು, ತಂಪಾದ ಗಾಳಿಯನ್ನು ಒಳಕ್ಕೆಳೆದುಕೊಂಡರು;
ಬೀದಿಯ ಮೇಲಕ್ಕೂ ಕೆಳಕ್ಕೊ ಒಮ್ಮೆ ನೋಡಿದರು. ಮಹಡಿಯನ್ನೇರುವುದಕ್ಕೆ
ಮುಂಚೆ ಅವರ ಮನಸ್ಸು ಹಾಯಾಗಿತ್ತು. ಆದರ ಮೇಲೆ ನಡೆದ ಸಂಭಾಷಣೆ, ಏರಿ
ಇಳಿದ ಆಯಾಸ,ಎರಡೂ ಸೇರಿ ಅವರ ನೆಮ್ಮದಿಗೆ ಭಂಗ ತಂದಿದ್ದುವು.
ಎರಡು ನಿಮಿಷ ಆ ಕತ್ತಲಲ್ಲಿ ಒಬ್ಬರೇ ತಮ್ಮ ವಠಾರವನ್ನು ನೋಡುತ್ತ ತಂಪಾದ
ಗಾಳಿಯನ್ನು ಸೇವಿಸಿದ ಮೇಲೆ ಮನಸ್ಸು ಪ್ರಸನ್ನವಾಯಿತು.
ಏನೇನೋ ಬಯಕೆಗಳು ಅವರ ಹೃದಯದಿಂದ ಚಿಮ್ಮಿ ಬಂದುವು. ತಮ್ಮ
ಮಗನನ್ನು ಆ ಕ್ಷಣವೆ ನೋಡುವ ಹಂಬಲ ಕಿರಿದಾಗಿ ಮೂಡಿ,ಒಮ್ಮೆಲೆ ಬಲವಾಗಿ
ಬೆಳೆಯಿತು . ನಿತ್ಯ ರೋಗಿಯಾದ ಆ ಸೊಸೆ....ಎಳೆಯ ಮಕ್ಕಳಿಬ್ಬರು...ಗಂಡಂದಿರ
ಜತೆಯಲ್ಲಿದ್ದ ಇಬ್ಬರು ಹೆಣ್ಣುಮಕ್ಕಳ ನೆನಪಾಯೆತು...ಅವರ ಸಂತಾನ.ಲಕ್ಷ್ಮಿಯ
ಪುಟ್ಟ ಮಗು ಎಷ್ಟು ಮುದ್ದಾಗಿದ್ದ! ಅಜ್ಜಿಯದೇ ರೂಪು ಎಂದಿದ್ದರು ಎಲ್ಲರೂ.
ಅದೇನು ರುಪವೋ ತನ್ನದು...ಯುವತಿಯಾಗಿದ್ದಾಗ ಸಾಕಷ್ಟು ರೂಪವತಿಯೆಂದೇ
ಹೆಸರುವಾಸಿಯಾಗಿದರಲ್ಲವೆ? ಕಳೆದ ಸಾರೆ ಲಕ್ಷ್ಮಿ ಬಂದಾಗ ಆ ಪುಟ್ಟಾ ಕೂಸು ಹೇಗೆ
ತನಗೇ ಅಂಟಿಕೊಂಡಿತ್ತು! ಒಂದು ಕ್ಷಣವೂ ಬಿಟ್ಟಿರುತ್ತಿರಲಿಲ್ಲ ತನ್ನನ್ನು. ಸಣ್ಣ
ಮಗುವಿಗೆ ಕಜ್ಜಿಯಾಗಿದೆ ಎಂದು ಕಳೆದ ತಿಂಗಳು ಲಕ್ಷ್ಮಿ ಕಾಗದ ಬರೆಸಿದ್ದಳು. ಈಗ
ಹೇಗಿದೆಯೊ?...ದೊಡ್ಡ ಮಗಳನ್ನು ನವರಾತ್ರಿಯ ಹೊತ್ತಿಗಾದರೂ ಈ ಸಲ ಕರೆಸ
ಬೇಕು.ಆಗ ರಜಾ ತಗೆದುಕೊಂಡು ಮಗನೂ ಬರಬಹುದು.
ರಂಗಮ್ಮ ವಠಾರದತ್ತ ನೋಡಿದರು.ವಠಾರದಲ್ಲೇ ಅತಿ ದೊಡ್ಡಾದಾಗಿದ್ದ
ಮುಂಭಾಗದ ಎರಡು ಕಿಟಕಿಗಳಿಂದಲೂ ವಿದ್ಯುತ್ ಬೆಳಕು ಮಂದವಾಗಿ ಹೊರಬರು
ತ್ತಿತ್ತು.ಉಳಿದ ಮನೆಗಳಿಗೆಲ್ಲ ಇದ್ದುದು ಪುಟ್ಟ ಗೂಡು ಕಿಟಕಿ.
ಉಪಾಧ್ಯಾಯರ ಕಿಟಕಿಯತ್ತ ರಂಗಮ್ಮ ಸರಿದರು.
ಒಳಗೆ ಲಕ್ಷ್ಮೀನಾರಾಯಣಯ್ಯನ ಹೆಂಡತಿ ಮಕ್ಕಳನ್ನು ಮಲಗಿಸಿ ಹಸುಗೂಸಿಗೆ
ಮೊಲೆ ಹಾಲು ಕುಡಿಸುತ್ತ ಒರಗಿದ್ದಳು.ಕಿಟಿಕಿಯ ಬಳಿ ಯಾರೋ ಸರಿದಂತಾಗಲು,
ಆಕೆ ಅವಸರವಾಗಿ ಎದೆಯನ್ನು ಸೆರಗಿನಿಂದ ಹಡೆದುಕೊಂಡು "ಯಾರು?"ಎಂದಳು.
ಹೊರಗಿನಿಂದ ರಂಗಮ್ಮನ ಸ್ವರ ಕೇಳಿಸಿತು.
"ನಾನು ಕಣೆ ಮೇಷ್ಟ್ರಿನ್ನೂ ಬಂದಿಲ್ವಾ?"
"ಬಂದಿದ್ರು ರಂಗಮ್ನೋರೆ.ಅದೇನೋ ಸಭೆ ಇದೇಂತ ವಾಪ್ಸು ಹೋದ್ರು."
"ಎಲ್ಲಿ ನಿನ್ನ ನಾದಿನಿ?"
"ಅಡುಗೆ ಮನೇಲಿದೀನಿ ರಂಗಮ್ನೋರೆ...."ಎಂದು ಸುಮಂಗಳಾ ಒಳಗಿನಿಂದಲೇ
ಅಂದಳು.
"ಸುಮ್ನೆ ಕೊಗ್ದೆ ಅಗಲಿ, ಕೆಲಸ ಆಗಲಿ, "ಎಂದು ರಂಗಮ್ಮ ಇನ್ನೊಂದು
ಕಿಟಿಕಿಯತ್ತ ತೆರಳಿದರು.
ಹಾಗೆ ರಂಗಮ್ಮ ರಾತ್ರಿ ಹೊತ್ತು ಇನಕಿ ನೋಡುವುದೇನೂ ಯಾರಿಗೂ ಹೊಸ
ತಾಗಿರಲಿಲ್ಲ. ಎದುರು ಮನೆಯ ಕಿಟಕಿಯ ಬಳಿಯಿಂದಲೂ ರಂಗಮ್ಮ ಮಾತನಾಡು
ತ್ತಿದದು ಉಪಧ್ಯಾಯರು ಹೆಂಡತಿಗೆ ಕೇಳಿಸುತ್ತಿತ್ತು.
"ಇನಸ್ಪೆಕ್ಟ್ರು ಬಂದಿಲ್ವಾ ಇನ್ನೂ?"
"ಇಲ್ಲ ಕಣ್ರೀ "
ಅದು ಪೋಲೀಸನ ಹೆಂಡತಿ ಸರೋಜಮ್ಮನ ಸ್ವರ.
"ಹುಡುಗ್ರಿಗೆಲ್ಲಾ ಊಟ ಆಯ್ತೇನು?"
" ಮಲಕ್ಕೊಂಡ್ಬಿಟ್ಟಿವೆ ಆಗ್ಲೇ".
"ಏನು ಮಾಡ್ದೆ ಅಡುಗೆ?"
"ಏನೂ ಇಲ್ಲ್ ರಂಗಮ್ಮೋರೆ....ಮಧ್ಯಾಹ್ನ್ ದ್ದೇ ಇತ್ತು ಸ್ವಲ್ಪ...."
"ಆಗಲೀಮ್ಮ ಬರ್ತೀನಿ "
ರಂಗಮ್ಮ ಬೇರೆ ಬಾಗಿಲುಗಳ ಬಳ್ಳಿ ಬಂದರು. ಬಾಗಿಲು ಮುಚ್ಚಿದ್ದ ಕಡೆ ಕಿಟಕಿ
ಗಳ ಮೂಲಕ ಮಾತನಾಡಿದರು.
-"ಮಲಕ್ಕೊಂಡ್ಬಿಟ್ಯಾ ರಾಜಮ್ಮ?"
-"ಹುಡುಗರು ಇನ್ನೂ ಓದ್ತಾನೆ ಇದಾರೊ?ಓದೀಪಾ ಚ್ಚೆನ್ನಾಗಿ ಓದಿ."
-"ಏನು ಮೀನಾಕ್ಷೀ ...ಎಲ್ಲಿ ನಿನ್ನ ಗಂಡ ಬರೋದು ಹೋಗೋದು ಗೊತ್ತೇ
ಆಗಲ್ವೆ..."
-"ಏನಾಮ್ಮ, ಯಜಮಾನ್ರಿಂದ ಕಾಗ್ದ ಇದೆಯೋ?"
-"ಹಿಟ್ಟು ರುಬ್ಬಿದ್ದಾಯ್ತೆ ಕಮಲಮ್ಮ?"
-"ಇನ್ನೂ ಸವಾರಿ ಬಂದಿಲ್ವೆ ಪದ್ಮಾವತಿ ?"
-"ಮಲಕ್ಕೊಂಡ್ಬಿಟ್ಲೇನು ಅಹಲ್ಯಾ? ಎಲ್ಲಿ ಮಗ? ಅಂಗಡಿ ಬೀದಿಗೆ
ಹೋದ್ನೆ?"
ರಂಗಮ್ಮ ಅಲ್ಲಿಂದ ಮುಂದಕ್ಕೆ ಹೋಗಲಿಲ್ಲ. ಒಂದು ಖಾಲಿ ಮನೆ,ಆ ರಾತ್ರೆಯ
ಮಟ್ಟಿಗೆ.ನಾರಾಯಣಿ ಇದದ್ದು.ಇನ್ನೊಂದು ಮಿನಾಕ್ಷಮ್ಮನ ಮನೆ. ಸುಬ್ಬು
ಕೃಷ್ಣಯ್ಯ ಇನ್ನೂ ಬಂದಿರಲಿಲ್ಲ.
ತಮ್ಮ ಮನೆಗೇ ರಂಗಮ್ಮ ವಾಪಸು ಬಂದು ಕೈಕಾಲು ತೊಳೆದು, ಗೋಡ
ಗೊರಗಿ ಕುಳಿತು,ದೇವರ ಹೆಸರನ್ನು ಜಪಿಸತೊಡಗಿದರು... ನಾಲಿಗೆ ಮೌನವಾಗಿ ದೇವರ
ಹೆಸರನ್ನು ತೊದಲುತ್ತಿದ್ದರೂ ಯೋಚನೆ ವಠಾರದ ಬೇರೆ ಬೇರೆ ಸಂಸಾರಗಳ ಬಳಿ
ಸುಳಿಯತ್ತಲೇ ಇತ್ತು.. ಅಷ್ಟೊಂದು ಜನರೆಡೆಯಲ್ಲಿ ತಾವು ಏಕಾಕಿನಿ ಎಂಬ ಭಾವನೆ
ಅವರಲ್ಲಿ ಮೂಡಲಿಲ್ಲ.
ಅವರು ಬಾಗಿಲನ್ನು ಅಡ್ಡ ಮಾಡಿದರು. ಯಾರೋ ಒಳಕ್ಕೆ ಹಾದು ಒಳಕ್ಕೆ ಹಾದು ಒಣಿಗಿಳಿದು
ನಡೆದ ಹಾಗೆ ಭಾಸವಾಯಿತು. ಚಪ್ಪಲಿಯ ಕ್ರಮಬದ್ಧ ನಡಿಗೆಯ ಸಪ್ಪಳ. ಸುಬ್ಬು
ಕೃಷ್ಣಯ್ಯನೇ ಇರಬೇಕೆ೦ದು ರ೦ಗಮ್ಮ ಊಹಿಸಿದರು.
ಊಹೆ ಸರಿಯಾಗಿತ್ತು, ಐದು ನಿಮಿಷಗಳಲ್ಲೆ, ಅಡ್ಡ ಪ೦ಚೆಯುಟ್ಟ ಎದೆಯ
ಮೇಲೋ೦ದು ಅ೦ಗವಸ್ತ್ರ ಹಾಕಿಕೊ೦ಡು ಸುಬ್ಬು ಕೃಷ್ಣಯ್ಯ ಒಳಕ್ಕೆ ಬ೦ದ.
"ಕರೆದಿರ೦ತೆ."
"ಹೊನಪ್ಪಾ,ಬಾ...."
"ಯಾರೋ ಬಡವರ ಬರ್ತಾರ೦ತೆ ನಾಳೆ"
"ಹೌಹೌದು. ಅದಕ್ಕೆ ನಿನ್ನ ಕರೆದ,"
ಸುಬ್ಬುಕೃಷ್ಣಯ್ಯ ಕುಳಿತು ಸಿದ್ಧನಾದ. ರಂಗಮ್ಮ ಹಾಸಿಗೆಯ ಸುರುಳಿಯ ಕೆಳಗೆ
ಮಡಚಿ ಇರಿಸಿದ ಕರಾರು ಪತ್ರವನ್ನು ಹೊರ ತೆಗೆದು ಆತನ ಕೈಗಿತ್ತರು. ವಿದ್ಯುದ್ದೀಪದ
ಬೆಳಕು ಸಾಲದೆ ಹೋದರೂ ಸ್ವಲ್ಪ ಕಷ್ಟಪಟ್ಟು ಆತ ಓದಿ ಹೇಳಿದ. ಕಿವಿಗೊಟ್ಟು
ಕೇಳಿದ ಮೇಲೆ ರ೦ಗಮ್ಮ ಪ್ರಸ್ನಿದರು:
"ಸರಿಯಾಗಿದೆ ತಾನೆ?"
"ಓಹೋ. ಸರಿಯಾಗದೆ," ಅಲ್ಲಾ?"
"ಚೆನ್ನಾಗಿಯೇ ಇದೆ."
"ಒಳ್ಳೆಯವನೂಂತ್ಲೇ ತೋರುತ್ತಪ್ಪಾ."
ಮೊದಲ ನೋಟಕ್ಕೇ ಹಾಗೆ ತೀರ್ಮಾನಕ್ಕೆ ಬಂದು ಅಂತಹ ಪ್ರಮಾಣ ಪತ್ರ ಪತ್ರ
ರಂಗಮ್ಮ ಕೊಟ್ಟದು ಅದೇನೂ ಹೊಸತಾಗಿರಲಿಲ್ಲ.
ಶ೦ಕರನಾರಯಣ್ಣಯ್ಯ ತಮಾಷೆಯಾಗಿ ಆಡಿದ ಮಾತುಗಳು ನೆನಪಿಗೆ ಬ೦ದು
ರ೦ಗಮ್ಮ ನಸುನಕ್ಕರು.
"ಮಾತು ಎಷ್ಟು ಚೆನಾಗಿ ಆಡ್ತಾನೆ ಅಂತೀಯಾ."
ಸುಬ್ಬಕೃಷ್ಣಯ್ಯನಿಗೆ ಆಗಲೇ ಬೇಸರ ಬಂದಿತ್ತು. ಚುರು ಚುರೆನ್ನುತ್ತಿತ್ತು
ಹಸಿದ' ಹೊಟ್ಟೆ. ದಣಿದಿದ್ದ ವಿಶ್ರಾ೦ತಿಯನ್ನು ಯಾಚಿಸುತ್ತಿತ್ತು.
"ನಾಳೆ ಬರ್ತಾರೆ ಅಲ್ವೆ?" ಎಂದ ಸುಬ್ಬಕೃಷ್ಣಯ್ಯ, ಮಾತು ಮುಗಿಸ ಬಯ
ಸುತ್ತಾ.
ಹೂಂ. ನಾಳೇನೆ."
ಸುಬ್ಬುಕೃಷ್ಣಯ್ಯ ಕಣ್ಣುಗಳು ಜಡವಾದುವು. ಆತ ಬಾಯಿ ಆಕಳಿಸಿ ಚಿಟಕೆ
ಹೊಡೆದ.
"ಆಗಲಿ ಹೋಗಪ್ಪಾ...ನಿನಗೂ ಆಯಾಸವಾಗಿದೆ. ಇಷ್ಟೇ. ಇಷ್ಟಕ್ಕೇ ಕರೆದೆ."
ಅಷ್ಟು ಹೇಳಿ ರಂಗಮ್ಮ, ಅಮೂರ್ಣವಾಗಿದ್ದ ಕೆಲಸವೂ ಮುಗಿದಂತಾಯಿತೆಂದು,
ಸ೦ತೃಪ್ತಿಯ ನಿಟ್ಟುಸಿರುಬಿಟ್ಟರು.
ಸುಬ್ಬುಕೃಷಯ್ಯ ಆ ಬಾಗಿಲಿ೦ದ ಹೊರಬಿದ್ದು ತನ್ನ ಬಾಗಿಲಿಗೆ ಹೊರಟ.
ರ೦ಗಮ್ಮನ ಮಾತುಗಳು ಆತನನ್ನು ಹಿ೦ಬಾಲಿಸಿದುವು.
"ಹತ್ತು ಘ೦ಟೆ ಆಗೊಃಯಿತ೦ತ ಕಾಣುತ್ತೆ. ಊಟ ಆದ್ಮೇಲೆ ಹೇಳಪ್ಪಾ.
ದೀಪ ಆರಿಸ್ತಿನಿ."
ಸುಬ್ಬುಕೃಷಯ್ಯ ಊತ್ತರವೀಯಲಿಲ್ಲ. ನೇರವಾಗಿ ತನ್ನ ಮನೆಯೋಳಕ್ಕೆ ಬ೦ದು
ತಟ್ಟೆಯ ಮು೦ದೆ ಕುಳಿತ.
ತಮ್ಮ ಬಾಗಲಿಗೆ ಆಗಣಿ ಹಾಕಲೆ೦ದು ರ೦ಗಮ್ಮ ಎದ್ದರು.
ಅಷ್ಟರಲ್ಲಿ ಹಿತ್ತಿಲ ಬಾಗಿಲನಾಚೆಯ ಕೊಚ್ಚೆ ಹಾದಿಯಿ೦ದ ಸ್ವರ ಕೇಳಿಸಿತು:
"ಕವಳಾತ್ತಾಯಿ ....ಆಮ್ಮಾ..."
ನಾಭಿಯಲ್ಲೇ ನಡುಕ ಹುಟ್ಟಿಸುವ೦ತಹ ವಿಕಾರ ಕರ್ಕಶ ಧ್ವನಿ.
ಮಧ್ಯಾಹ್ನದ ఒ೦ದು ತುತ್ತು ಅನ್ನ ಮಿಕ್ಕಿತ್ತು, ರಂಗಮ್ಮ ಅದನ್ನೆತ್ತಿಕೊ೦ಡು
ಓಣಿಯುದ್ದಕ್ಕೂ ಹೋಗಿ ಹಿತ್ತಿಲ ಬಾಗಿಲು ತೆಗೆದು ಭಿಕ್ಷುಕಿಗೆ ಹಾಕಿದರು.
ಒಳಬಂದು ಕೈ ತೊಳೆದು, ಹಾಸಿಗೆ ಹಾಸಿದ ಸ್ವಲ್ಪ ಹೊತ್ತಿನಲ್ಲಿ ಮೀನಾಕ್ಷಮ್ಮನ
ಕೀರಲು ಸ್ವರ ಕೇಳಿಸಿತು:
"ದೀಪ ಆರಿಸಿ ರಂಗಮ್ಮೊರೇ..."
ರಂಗಮ್ಮ ವಿದ್ಯುತ್ ಹಿಡಿಯನ್ನು ಮೇಲಕ್ಕೆ ತಳ್ಳಿದರು.
ಅದು ಟಿಕ್ ಸದು ಮಾಡಿತು. ದೀಪ ಆರಿಹೋಯಿತು.



ఒంಟಿ ಎತ್ತಿನ ಗಾಡಿಯಲ್ಲಿ ಶಂಕರನಾರಾಯಣಯ್ಯನ ಸ೦ಸಾರ ರಂಗಮ್ಮನ
ವಠಾರಕ್ಕೆ ಸಾಗಿ ಬಂತು. ಹೊರಗೆ ಹುಡುಗರು ನಡೆಸಿದ್ದ ಗದ್ದಲದೊಡನೆ ಸ್ಪರ್ಧಿಸು
ತ್ತಿದ್ದವನ ಹಾಗೆ ಗುಂಡಣ್ಣ ಗೊರಕೆ ಹೊಡೆಯುತ್ತ ನಿದ್ದೆ ಹೋಗಿದ್ದ, ರಾಜಮ್ಮ
ಮಗನನ್ನು ಎಬ್ಬಿಸಿದರು;
"ಏಳೋ ಗು೦ಡ. ರಂಗಮ್ಮ ಕೂಗ್ತಿದಾರೆ ನೋಡು."
ಮುಖಕ್ಕಿಷ್ಟು ನೀರು ಹನಿಸಿ ಹೊರಬ೦ದ ಗುಂಡಣ್ಣನಿಗೆ ಕತ್ತಲೆಯ ನಡು
ಹಾದಿಯ ಆಚೆ ಅ೦ಗಳಕ್ಕಿಳಿಯುತ್ತಿದ್ದ ಸಾಮಾನುಗಳು ಗೋಚರಿಸಿದುವು. ರಂಗಮ್ಮ
ಕರೆದುದರ ಉದ್ದೆಶವೂ ಅರ್ಥವಾಯಿತು. ಅವರ ಬಳಿಗೆ ಹೋಗದೆ ಗುಂಡಣ್ಣ
ನೇರವಾಗಿ ಅಂಗಳಕ್ಕೇ ನಡೆದ.