ರಂಗಮ್ಮನ ವಠಾರ/೧೬

ವಿಕಿಸೋರ್ಸ್ದಿಂದ

ಬಯಕೆ ಹೆಚ್ಚುತ್ತಿತ್ತು. ಆದರೆ ಈ ಸಲ ಯಾರೂ ಬರಲಿಲ್ಲ.
ಮಂಜು ಕವಿದ ಒಂದು ಮುಂಜಾನೆ ರಂಗಮ್ಮನೆಂದರು:
"ಮಳೆ ಹೋಯ್ತೂಂತ ಕಾಣುತ್ತೆ."
ಹೊರಗೆ ತೋರಿಸದೆ ಇದ್ದರೂ ಒಳಗೆ ,ಮಳೆ ನಿಂತಿತಲ್ಲಾ ಎಂದು ಅವರೆಗೆಷ್ಟೋ
ಸಮಾಧಾನವೆನಿಸಿತ್ತು.
ನಾದಿನಿ ಹೋದಂದಿನಿಂದ ಉಪಾಧ್ಯಾಯರ ಹೆಂಡತಿ ಕಷ್ಟಕ್ಕೆ ಒಳಗಾಗಿದ್ದಳು.
ಐದು ಜನ ಮಕ್ಕಳಿದ್ದ ಆ ಸಂಸಾರದ ಗೃಹಕೃತ್ಯವನ್ನು ಒಬ್ಬಳಿಂದಲೇ ನೆರವೇರಿಸಿ
ಕೊಂಡು ಹೋಗುವುದು ಸುಲಭವಾಗಿರಲಿಲ್ಲ. ಸಾಲದುದಕ್ಕೆ ಅವಳ ಆರೋಗ್ಯವೂ
ಸರಿಯಾಗಿರಲಿಲ್ಲ. ಈ ವರ್ಷ ವರ್ಗ ಬೇರೆ ಆಗುವುದೆಂದು ಕಿಂವದಂತಿ ಹುಟ್ಟಿಕೊಂಡು
ಲಕ್ಷ್ಮೀನಾರಾಯಣಯ್ಯ ಗಾಬರಿಯಾಗಿದ್ದರು. ಈ ಸಲ ಬೀಸುತ್ತಿದ್ದ ದೊಣ್ಣೆಯಿಂದ
ತಪ್ಪಿಸಿಕೊಳ್ಳಲಾಗುವುದಿಲ್ಲವೆಂಬುದು ಅವರಿಗೆ ಸ್ಪಷ್ಟವಾಗಿತ್ತು.
"ಮುಂದಿನ ಏಪ್ರಿಲ್ ಹೊತ್ತಿಗೆ ವರ್ಗವಾದರೂ ಆಗಬಹುದು" ಎಂದು ಲಕ್ಷ್ಮೀ
ನಾರಾಯಣಯ್ಯ ರಂಗಮ್ಮನಿಗೆ ಸುದ್ದಿ ತಿಳಿಸಿದರು.
"ವರ್ಗವಾದರೂ ಎಲ್ಲಾದರೂ, ಹತ್ತಿರಕ್ಕೇ ಆಗುತ್ತೆ. ಸಂಸಾರವನ್ನೆಲ್ಲಾ ಇಲ್ಲೇ
ಬಿಟ್ಟಿರ್ರ್ತೀನಿ," ಎಂದು ಮುಂದಿನ ಯೋಜನೆಯನ್ನೂ ಲಕ್ಷ್ಮೀನಾರಾಯಣಯ್ಯ ತಿಳಿ
ಸಿದ್ದರಿಂದ, 'ಮನೆ ಬಾಡಿಗೆಗೆ ಇದೆ' ಬೋರ್ಡಿನ ವಿಚಾರ ರಂಗಮ್ಮ ಯೋಚಿಸಿಲಿಲ್ಲ.
............
ಈ ನಡುವೆ ವಠಾರದ ನೆಮ್ಮದಿಯನ್ನು ಕದಡಿದೊಂದು ಪ್ರಕರಣ ನಡೆದು
ಹೋಯಿತು.
ಅದು ಆರಂಭವಾದುದು ನೀರಿನ ನಲ್ಲಿಯ ಬಳಿ. ರಾಧೆಯ ಬಕೀಟಿನ ಹಿಂದೆ
ರಾಜಮ್ಮನ ಬಿಂದಿಗೆ ಇತ್ತು, ಆನಂತರ ಅಹಲೈಯ ಸರದಿ.
"ಒಂದು ರಾಶಿ ಬಟ್ಟೆ ಬಿದ್ದಿದೆ ಒಗೆಯೋಕೆ. ನಾನು ಮೊದಲು ನೀರು ಹಿಡಕೋ
ತೀನಿ ಕಣೇ," ಎಂದು ಅಹಲ್ಯಾ ರಾಧೆಗೆ ಹೇಲಿದರು. ರಾಧೆ ಬೇಡವೆನ್ನಲಿಲ್ಲ. ಅವ
ರಿಬ್ಬರೂ ಸ್ಥಳ ಬದಲಿಸಿಕೊಂಡರು. ತಟ್ಟೆಯಲ್ಲಿ ಉಪ್ಪಿಟ್ಟು ತುಂಬಿ ವೆಂಕಟೇಶನಿಗೆ
ಕೊಟ್ಟು ಬಂದ ರಾಜಮ್ಮನಿಗೆ, ಅಹಲ್ಯಾ ತನಗಿಂತ ಮುಂದಾಗಿ ನಿಂತಿದ್ದುದು ಕಂಡಿತು.
ಆಕೆ ಏನಾಗಿತ್ತೆಂಬುದನ್ನು ಗಮನಿಸದೆ ಅಹಲ್ಯೆಯತ್ತ ಧಾವಿಸಿದಳು.
"ಅಹಹಹಾ ನೀನೇ! ನಡಿ ಹಿಂದೆ!" ಎಂದು ಅಹಲ್ಯೆಯ ತೋಳು ಹಿಡಿದು ಆಕೆ
ಎಳೆದಳು.
ಆಗ ಕೊಳಾಯಿಯ ಬಳಿ ಇದ್ದ ಪದ್ಮಾವತಿಯೆಂದಳು:
"ನನ್ನದಾಯ್ತು. ಇನ್ನು ಹಿಡಕೊಳ್ಳೀಮ್ಮಾ."
ಅಹಲ್ಯಾ ತನ್ನ ಬಿಂದಿಗೆ ಇಡಬೇಕು. ಆದರೆ ರಾಜಮ್ಮ ಬಿಡಲೊಲ್ಲಳು. ಅಹಲ್ಯಾ

20

ದೃಷ್ಟಿದಾಳಿ ಏಕಪ್ರಕಾರವಾಗಿ ನಡೆಯಿತು.
ಒಂದು ದಿನ ಆತ ವಠಾರದ ಮೆಟ್ಟಲುಗಳ ಮೇಲೆ ನಿಂತು ನೋಡುತ್ತಿದ್ದಂತೆ
ಒಬ್ಬಾಕೆ ಒಳಬಂದು "ಅಮ್ಮಣ್ಣೀ"ಎಂದು ರಂಗಮ್ಮನನ್ನು ಕರೆದಳು. ಆಕೆ ಆ ದೊಡ್ಡ
ಮನೆಯ ಕೆಲಸದವಳೆಂಬುದು ದೇವಯ್ಯನಿಗೆ ಗೊತ್ತಾಗಲಿಲ್ಲ.
ಆಕೆ ತಂದ ಸಂದೇಶ ಕೇಳಿ ರಂಗಮ್ಮ ಕಿಡಿಕಿಡಿಯಾದರು.
"ಎಂಥಾ ಹಲ್ಕಾ ಹುಡುಗ್ರು ಸೇರ್ಕೊಂಡುವಪ್ಪಾ ಈ ವರ್ಷ.."ಎಂದು ಆಕೆ
ಆಕ್ರೋಶ ಮಾಡಿದರು.
ಆ ಸದ್ದು ಕೇಳುತ್ತಲೇ ಗಾಬರಿಯಾಗಿ ದೇವಯ್ಯ ಕೊಠಡಿಯೊಳಕ್ಕೆ ಓಡಿದ.
ರಂಗಮ್ಮ ಬಲು ಪ್ರಯಾಸದಿಂದ ಮೆಟ್ಟಲೇರಿ ಬಂದರು.
"ಯಾರೋ ಅದು?ಯಾಕಪ್ಪಾ ಹೀಗ್ಸಾಯ್ತೀರಾ? ನಿಮಗೆ ಅಕ್ಕ ತಂಗಿ ಇಲ್ವೇ
ನಪ್ಪಾ ಯಾರಿಗೂ?ನಮ್ಮ ವಠಾರಕ್ಕೆ ಕೆಟ್ಟ ಹೆಸರು ತರ್ತೀರಲ್ಲಪ್ಪಾ ನೀವು!"
ದೇವಯ್ಯನ ಮುಖ ಕಪ್ಪಿಟ್ಟಿತ್ತು. ಚಿಕ್ಕ ಹುಡುಗ ಆಶ್ಚರ್ಯದ ನೋಟದಿಂದ
ದೊಡ್ಡವನನ್ನು ನೋಡಿದ್ದ. ರಂಗಮ್ಮ ಹೇಳುತ್ತಿದ್ದು ದು ಜಯರಾಮುಗೆ ಕೇಳಿಸುತ್ತಿದೆ
ಯಲ್ಲ. ಈ ವಠಾರದಲ್ಲಿನ್ನು ತಲೆ ಎತ್ತದ ಹಾಗೆ ಆಯಿತಲ್ಲಾ ಎಂದು ರಾಜಶೇಖರ
ಮನಸ್ಸಿನೊಳಗೆ ಗೋಳಾಡಿದ.
ನಾಲ್ಕೈದು ನಿಮಿಷ ಹೇಳಿದ್ದನ್ನೆ ಹೇಳಿ ರಂಗಮ್ಮ ಕೊನೆಯ ಎಚ್ಚರಿಕೆ
ಕೊಟ್ಟರು:
"ಇದೇ ಆಖೈರು. ಇನ್ನೊಂದ್ಸಲ ಹೀಗೇನಾದ್ರೂ ಆದ್ರೆ ಈ ರೂಮು ಬಿಟ್ಟು
ನೀವು ಹೊರಟ್ಹೋಗ್ಬೇಕು. ತಿಳೀತಾ?ಹುಷಾರಾಗಿರಿ!"
ರಂಗಮ್ಮ ಮೆಲ್ಲನೆ ಕೆಳಕ್ಕಿಳಿದರು. ಗದ್ದಲ ಕೇಳಿ ಹೊರಬಂದಿದ್ದ ಚಂಪಾವತಿ
ಯನ್ನು ನೋಡಿ ಅವರೆಂದರು:
"ನನಗೆ ಗೊತ್ತು, ಆ ಜನವೇ ಹಾಗೆ."
ವಿಷಯ ಏನೆಂದು ತಿಳಿದ ಚಂಪಾ ಅಂದಳು:
"ಆ ಜನ ಅಂತ ಏನು ರಂಗಮ್ನೋರ? ಬ್ರಾಹ್ಮಣ ಹುಡುಗರೇನು ಕಡಿಮೇನೇ?
ಹುಡುಗರು ಅಂದ್ರೆ ಯಾವಾಗಲೂ ಅಷ್ಟೇ. ಈಗಿನೋರಲ್ಲಿ ಸ್ವಲ್ಪ ಪೋಲಿತನ
ಜಾಸ್ತಿ."
"ಪೋಲಿತನ ಅಲ್ಲ ಚಂಪಾ, ಭಂಡತನ-ಭಂಡತನ!"

೧೬


ಜಯರಾಮುವಿನ ಪರೀಕ್ಷೆ ಮುಗಿದು ನವರಾತ್ರಿ ಹಬ್ಬ ಬಂತು.
ಹಬ್ಬ ಬಂದಾಗಲೆಲ್ಲ ರಂಗಮ್ಮನಿಗೆ ಮಕ್ಕಳು ಮೊಮ್ಮಕ್ಕಳನ್ನು ನೋಡುವ