ರಂಗಮ್ಮನ ವಠಾರ/೧೮

ವಿಕಿಸೋರ್ಸ್ದಿಂದ

162

ಸೇತುವೆ

ಬಾಡಿತು. ಗೆಳತಿ ಹೊರಟುಹೋದಳೆಂದು ಅಳುತ್ತಲಿದ್ದ ರಾಧೆಯನ್ನು ಅವಳ ಪಾಡಿಗೆ
ಬಿಟ್ಟು, ಕೆರೆಯಾಚೆ ಇದ್ದ ಬಂಡೆ ಕಲ್ಲುಗಳ ಗುಡ್ಡದತ್ತ ಆತ ಸಾಗಿದ.
ವಠಾರದ ಇತಿಹಾಸದಲ್ಲಿ ಇದು ಮೂರನೆಯ ಮದುವೆಯಾದರೂ, ಇಂತಹ
ಹಿನ್ನೆಲೆಯಲ್ಲಿ ಸಮಾರಂಭ ಹೀಗೆ ಜರಗಿದ್ದು ಇದೇ ಮೊದಲು. ಹೀಗಾಗಿ ರಂಗಮ್ಮ
ನಿಗೆ ತುಂಬಾ ಬೇಸರವಾಯಿತು. ಆ ದಿನವೆಲ್ಲಾ ಅವರು ಏನನ್ನೋ ಗೊಣಗುತ್ತಲೇ
ಇದ್ದರು.
ರಾಜಮ್ಮ ಅಡುಗೆ ಮನೆಯಿಂದ ಹೊರಗೆ ಬರಲಿಲ್ಲ.
ಜಯರಾಮುವಿನ ತಾಯಿ ರಾಧೆಯನ್ನು ನೋಡುತ್ತ ಜೋಲುಮೋರೆ ಹಾಕಿ
ಕುಳಿತಳು.
ವೆಂಕಟೇಶ ಆ ಬಳಿಕ ಸ್ವಲ್ಪ ದಿನ ಮೌನವಾಗಿದ್ದ. ಕ್ರಮೇಣ ಚೇತರಿಸಿಕೊಂಡು
ಹಿಂದಿನಂತೆ ಓಡಾಡಿದ. ಆದರೆ ಸಿಡುಕುತನವೊಂದು ಆತನಿಗೆ ಗಟ್ಟಿಯಾಗಿ ಅಂಟಿ
ಕೊಂಡಿತು. ಆತ ತಾಯಿಯೊಡನೆ ಸದಾ ಕಾಲವೂ ಒರಟಾಗಿಯೇ ವರ್ತಿಸಿದ.

೧೭
ಬೇರು ಕಿತ್ತು ಬೇರೆ ಕಡೆ ಮಣ್ಣು ಪಾತ್ರೆಯಲ್ಲಿ ನೆಟ್ಟ ಗಿಡ ಎಷ್ಟೆಂದರೂ ಅಷ್ಟೆ.
ಸರಿಯಾದ ಆರೈಕೆ ಇಲ್ಲದ ಮೇಲಂತೂ ಅವರ ಅವಸ್ಥೆ ಹೇಳುವುದು ಬೇಡ.
ವಠಾರದ ಹೆಚ್ಚಿನ ಸಂಸಾರಗಳೆಲ್ಲ ಅಂಥವು. ಹಲವರು ಕೆಲವು ತಲೆಮಾರು
ಗಳಿಂದ ಬೆಂಗಳೂರಲ್ಲೇ ಒಂದಲ್ಲ ಒಂದು ಕಡೆ ಬದುಕಿದವರು. ಕೆಲವರು ಹಳ್ಳಿಗಳಿಂದ
ಬಂದು ನೆಲೆಸಿದವರು. ಆದರೆ ಅಂಥವರಲ್ಲಿ ಹೆಚ್ಚಿನವರು ತಮ್ಮಹಿಂದೆ ಏನನ್ನೂ
ಬಿಟ್ಟು ಬಂದವರಲ್ಲ.
ಇದಕ್ಕೆ ಅಪವಾದವಾಗಿದ್ದ ಒಂದು ಸಂಸಾರವೆಂದರೆ ರಂಗಮ್ಮನ ಬಲಬದಿಗೆ
ಇದ್ದ ತಾಯಿ_ಮಕ್ಕಳು. ಕೋಲಾರದ ಕಡೆಯ ಆ ಕುಟುಂಬ ತೇಲುತ್ತಿದ್ದ ದೋಣಿ
ಯಾಗಿರಲಿಲ್ಲ. ಅವರಿಗೆ ಒಂದಿಷ್ಟು ಜಮೀನಿತ್ತು. ಆದರೆ ಅವರು ಶ್ರೀಮಂತರೇನೂ
ಅಲ್ಲ.
ಶ್ರೀಮಂತರು ಆ ವಠಾರದಲ್ಲಿ ನೆಲೆಸುವುದಿಲ್ಲವೆಂಬುದು ರಂಗಮ್ಮನಿಗೂ
ಗೊತ್ತಿತ್ತು. ಇತರ ಸಂಸಾರಗಳಿಗೂ ಗೊತ್ತಿತ್ತು. ಆದರೆ ವೆಂಕಟಸುಬ್ಬಮ್ಮನದು
ಜಮೀನ್ದಾರರ ಕುಟುಂಬ ಎಂಬ ಅಂಶವನ್ನು ಅವರು ಗನಮನಿಸಿದ್ದರು. ಆ ಜಮೀನು
ದಾರಿಕೆ ವೆಂಕಟಸುಬ್ಬಮ್ಮನ ಸೀರೆಯಲ್ಲಿ ಆಭರಣದಲ್ಲಿ ಕಂಡು ಬರದೆ, ಅವರೆಲ್ಲರಿಗೆ

ನಿರಾಸೆಯಾಗಿತ್ತು.

ರಂಗಮ್ಮನ ವಠಾರ

163

ಶ್ರೀರಾಮಪುರದವರೇ ಒಬ್ಬರು ಬಂದು ಬಾಡಿಗೆಗೆ ಗೊತ್ತುಮಾಡಿ ಹೋಗಿದ್ದರು.
ವೆಂಕಟಸುಬ್ಬಮ್ಮನ ವ್ಯಕ್ತಿತ್ವ ಇತರರ ದೃಷ್ಟಿಯಲ್ಲಿ ಸ್ವಲ್ಪ ವಿಚಿತ್ರವಾಗಿತ್ತು.
ಆಕೆ ವಠಾರದ ಹೆಂಗಸರೊಡನೆ ಬೆರೆಯುತ್ತಿರಲಿಲ್ಲ. ಹರಟೆಗೆ ಬರುತ್ತಿರಲಿಲ್ಲ. ಇನ್ನೊ
ಬ್ಬರ ವಿಷಯ ತಿಳಿದುಕೊಳ್ಳಲು ಕುತೂಹಲ ತಳೆಯುತ್ತಿರಲಿಲ್ಲ. ಒಂದು ಮಾತಿಗೆ
ಒಂದೇ ಉತ್ತರ. ಎಷ್ಟು ಬೇಕೋ ಅಷ್ಟು. ಆಕೆ ಒಂದು ದಿನವಾದರೂ ಸ್ವರವೇರಿಸಿ
ಮಾತನಾಡಿದ್ದನ್ನು ಇಲ್ಲವೆ ಗಟ್ಟಿಯಾಗಿ ನಕ್ಕುದನ್ನು ಯಾರೂ ಕಂಡಿರಲಿಲ್ಲ. ಮನೆ
ಯೋಳಗೂ ಅಷ್ಟೆ. ಮಕ್ಕಳ ಜತೆಯಲ್ಲೂ ಮೃದುವಾಗಿಯೆ ಮಾತನಾಡುತ್ತಿದ್ದಳು.
ಅಲ್ಲಿ ತಾಯಿ ಮಕ್ಕಳು ಜಗಳವಾಡುವುದನ್ನು ನೋಡಿದವರೇ ಇಲ್ಲ.
"ವೆಂಕಟಸುಬ್ಬಮ್ಮನೋರೇ, ಇದೀರೇನು?" ಎಂದು ಕೇಳುವ ಪ್ರಮೇಯವೇ
ಇರಲಿಲ್ಲ. ಆಕೆ ಯಾವಾಗಲೂ ಮನೆಯಲ್ಲೇ ಇರುತ್ತಿದ್ದಳು.
ಹೀಗಾಗಿ ಬಾಗಿಲ ಬಳಿ ನಿಂತು ಯಾವಳಾದರೂ ಹೆಂಗಸು ಕೇಳುತ್ತಿದ್ದುದಿತ್ತು:
"ಏನ್ಮಾಡ್ತಿದೀರಿ ವೆಂಕಟಸುಬ್ಬಮ್ಮ?"
ಈ ಪ್ರಶ್ನೆಯನ್ನು ಕೇಳಿದಾಗಲೆಲ್ಲ ಸಮಯಕ್ಕೆ ಅನುಸರಿಸಿ ಉತ್ತರಗಳು ಬದ
ಲಾಗುತ್ತಿದ್ದುವು.
"ಕಾಫಿಗೆ ಇಟ್ಟಿದೀನಿ. ಹುಡುಗರು ಬರೋ ಹೊತ್ತಾಯ್ತು."
ಇಲ್ಲವೆ___
"ಹುಡಗರಿಗೆ ಊಟಕ್ಕಿಡ್ತಾ ಇದೀನಮ್ಮ."
ಅಥವಾ___
"ಹುಡುಗರಿಗೆ ಹಾಸಿಗೆ ಹಾಸ್ತಾ ಇದೀನಿ, ರಂಗಮ್ನೋರೆ."
ಯಾವಾಗ ನೋಡಿದರೂ ಹುಡುಗರು-ಹುಡುಗರು. ಮಕ್ಕಳನ್ನು ಬಿಟ್ಟರೆ ಬೇರೆ
ಬದುಕೇ ಇರಲಿಲ್ಲ ಆ ಜೀವಕ್ಕೆ. ಆಕೆಯದು ಸೊರಗಿದ ಶರೀರ, ಮುಖ ಸದಾ
ಕಾಲವೂ ಬಾಡಿರುತ್ತಿತ್ತು. ಬೇರೆ ಬೇರೆ ಕಾಲೇಜುಗಳಲ್ಲಿ ಓದುತ್ತಿದ್ದರೂ ಅಣ್ಣ
ತಮ್ಮಂದಿರು ಜತೆಯಾಗಿಯೇ ಮನೆಗೆ ಮರಳುತ್ತಿದ್ದರು . ಅವರು ಹಿಂತಿರುಗಲು
ಇನ್ನೂ ಅರ್ಧ ಗಂಟೆ ಇದೆ ಎನ್ನುವಾಗಲೇ ವೆಂಕಟಸುಬ್ಬಮ್ಮ ಹೊರ ಅಂಗಳದ ಗೇಟಿಗೆ
ಆತುಕೊಂಡು ನಿಂತುಬಿಡುತ್ತಿದ್ದಳು. ದೂರದಲ್ಲಿ ಮಕ್ಕಳನ್ನು ಕಂಡೊಡನೆಯೆ ಆಕೆಯ
ಬಾಯಿಯಿಂದ ಮಾತು ಹೊರಡುತ್ತಿತ್ತು:
"ಹುಡುಗ್ರು ಬರ್ತಾ ಇದಾರೆ."
ಹತ್ತಿರ ಯಾರಾದರೂ ಇರಲಿ, ಇಲ್ಲದೆ ಇರಲಿ, ಆ ಮಾತನ್ನು ಆಕೆ ಹೇಳಿಯೇ
ಹೇಳುತ್ತಿದ್ದಳು. ಮೊದಮೊದಲು ದಿನವೂ ಅದನ್ನು ಕೇಳಿ ಇತರ ಹೆಂಗಸರಿಗೆ ತಮಾಷೆ
ಎನಿಸುತ್ತಿತ್ತು. ಕ್ರಮೇಣ ವೆಂಕಟಸುಬ್ಬಮ್ಮನ ಆ ಮಾತಿಗೆ ಲಕ್ಷ್ಯ ಕೊಡುವುದನ್ನೇ
ಹೆಂಗಸರು ಕಡಮೆ ಮಾಡಿದರು.

ಪ್ರತಿ ತಿಂಗಳೂ ಐದನೆಯ ತಾರೀಕಿಗೆ ಸರಿಯಾಗಿ ವೆಂಕಟಸುಬ್ಬಮ್ಮ ಬಾಡಿಗೆ

164

ಸೇತುವೆ

ಕೊಡುತ್ತಿದ್ದಳು. ಆಕೆ ಹಿಡಿಯುತ್ತಿದ್ದ ಮೂರು ಬಿಂದಿಗೆ ಹೆಚ್ಚಿನ ನೀರಿನ ಎಂಟಾಣೆಯೂ.
ರಂಗಮ್ಮನಿಗೆ ಬರುತ್ತಿತ್ತು.
"ಎಲ್ಲರೂ ಹೀಗೆಯೇ ಹೊತ್ತಿಗೆ ಸರಿಯಾಗಿ ಬಾಡಿಗೆ ಕೊಟ್ಟರೆ ಎಷ್ಟು ಚೆನ್ನಾ
ಗಿರುತ್ತೆ," ಎಂದು ರಂಗಮ್ಮ ಇತರರ ಕಿವಿಗೆ ಬೀಳುವಂತೆ ವೆಂಕಟಸುಬ್ಬಮ್ಮನನ್ನು
ಹೊಗಳುತ್ತಿದ್ದರು.
ಮೌನದ ಚಿಪ್ಪಿನೊಳಗೆ ಮುದುಡಿಯೇ ಇರುತ್ತಿದ್ದ ವೆಂಕಟಸುಬ್ಬಮ್ಮನನ್ನು ಮನಸ್ಸಿನ
ಹಿಂದೆ ಏನೇನಿದೆಯೆಂದು ತಿಳಿಯಲು ಆರಂಭದಲ್ಲಿ ರಂಗಮ್ಮ ಕುತೂಹಲಿಯಾಗಿದ್ದರು.
ಬಹಳ ಕಾಲದ ಸಾಮಿಪ್ಯದ ಬಳಿಕ ಮಾತ್ರ. ವೆಂಕಟಸುಬ್ಬಮ್ಮನ ಬಾಯಿ ಬಿಡಿಸುವುದು
ಸಾಧ್ಯವಾಯಿತು. ಒಂದು ದಿನ ಮಧ್ಯಾಹ್ನ ಅಳುತಳುತ ಆ ಹೆಂಗಸು ಹೇಳಿದ ಸ್ವಪರಿ
ಚಯವೆಲ್ಲ ಕಣ್ಣೀರಿನ ಕಥೆಯೇ.
ಸ್ವಲ್ಪ ಜಮೀನು ಇತ್ತೆಂಬುದು ನಿಜ. ಎಚ್ಚರಿಕೆಯಿಂದಿದ್ದರೆ ಸುಖವಾಗಿ ದಿನ
ಕಳೆಯಲು ಆದು ಸಾಕಾಗುತ್ತಿತ್ತು. ಆದರೆ ಅವರ ಯಜಮಾನರು ದುಂದು ವೆಚ್ಚಕ್ಕೆ
ಪ್ರಖ್ಯಾತರಾಗಿದ್ದರು. ಹಳ್ಳಿಯಲ್ಲಿರುವುದರ ಬದಲು ಅವರು ಪೇಟೆಯಲ್ಲಿ ಮನೆ
ಮಾಡಿದರು.
"ಅಷ್ಟೇ ಅಲ್ಲ ರಂಗಮ್ನೋರೆ, ಎರಡ್ನೆ ಮದುವೇನೂ ಮಾಡ್ಕೊಂಡ್ರು."
“ಹಾಗೇನು?" ಎಂದರು ರಂಗಮ್ಮ, 'ನಿನ್ನ ಹಾಗೆ ಸಪ್ಪಗಿದ್ದರೆ ಬೇರೆ ಮದುವೆ
ಮಾಡಿಕೊಳ್ಳದೇನು ಮಾಡಿಯಾರು? ಎಂದು ಮನಸಿನೊಳಗೇ ಅಂದುಕೊಂಡರು.
"ಆಕೆಗೆ ಎಷ್ಟು ಜನ ಮಕ್ಕಳು?"
"ಇಬ್ಬರು, ರಂಗಮ್ನೋರೆ. ಎರಡೂ ಹೆಣ್ಣು.”
ಸವತಿಯ ಸಂತಾನ ಹೆಣ್ಣೆoದು ಸಮಾಧಾನಪಡುವುದಷ್ಟೇ ಉಳಿದಿದ್ದುದು
ವೆಂಕಟಸುಬ್ಬಮ್ಮನಿಗೆ!
"ಹೋಗಲಿ, ಎಲ್ಲಾ ಅನ್ಯೋನ್ಯವಾಗಿ ಇದೀರಿ ತಾನೆ?"
“ಹೂಂ.”
ಅದು ನಿಜವಾಗಿರಲಿಲ್ಲ, ಗಂಡನ ಮನೆಯಲ್ಲಿ ವೆಂಕಟಸುಬ್ಬಮ್ಮ ಬರಿಯ
ಪರಿಚಾರಿಕೆಯ ಮಟ್ಟಕ್ಕೆ ಇಳಿದಿದ್ದಳು.
"ಧರ್ಮಾತ್ಮ ಮಕ್ಕಳು ಓದೋಕಾದರೂ ವ್ಯವಸ್ಥೆ ಮಾಡಿದಾನಲ್ಲ."
“ಹೂಂ."
ಅದು ನಿಜವಾಗಿರಲಿಲ್ಲ. ಹಿರಿಯ ಹೆಂಡತಿ ತನ್ನ ಆಭರಣಗಳನ್ನೆಲ್ಲ ಮಾರಿ
ಮಕ್ಕಳ ವಿದ್ಯಾಭ್ಯಾಸದ ವೆಚ್ಚವನ್ನು ನಿರ್ವಹಿಸುತ್ತಿದ್ದಳು.
ಮಕ್ಕಳ ಪ್ರಸ್ತಾಪ ಬಂದಾಗ ಆಕೆಯೆಂದಳು;
"ದೊಡ್ಡ ಹುಡುಗನ ಮೇಲೆ ಯಜಮಾನರಿಗೆ ತುಂಬಾ ಪ್ರೀತಿ."

ಎಂತಹ ಅಲ್ಪ ಸಂತೋಷಿ ಆ ವೆಂಕಟಸುಬ್ಬಮ್ಮ!

"ದೇವರಿದಾನಮ್ಮ, ಮುಪ್ಪಿನಲ್ಲಿ ಮಕ್ಕಳೇ ಅಲ್ವೆ ನಮ್ಮನ್ನ ನೋಡಿ
ಕೊಳ್ಳೋದು?"
ರಂಗಮ್ಮನ ಮಾತು ಕೇಳಿದರೆ, ಆಕೆಗಂತೂ ಮುಪ್ಪು ಇನ್ನೂ ಬಂದೇ ಇಲ್ಲ
ವೇನೋ ಎನ್ನಬೇಕು ಯಾರಾದರೂ! ಆದರೂ ವಾಡಿಕೆಯ ಒಳ್ಳೆಯ ಮಾತೆಂದು
ರಂಗಮ್ಮ ಅದನ್ನು ಅಂದರು.
ವೆಂಕಟಸುಬ್ಬಮ್ಮನನ್ನು ಕುರಿತು ಅಷ್ಟೆಲ್ಲವನ್ನೂ ರಂಗಮ್ಮ ಬೇರೆ ಹೆಂಗಸರಿಗೆ
ಹೇಳಲಿಲ್ಲ. ಆದರೂ ದಿನ ಕಳೆದಂತೆ ಹೇಗೋ ಹೇಗೋ ಒಂದೊಂದೇ ಅಕ್ಷರವಾಗಿ
ಆ ವಿಷಯ ವಠಾರದಲ್ಲಿ ಹರಡಿಕೊಂಡಿತು.
"ಅಯ್ಯೋ ಪಾಪ!"
-ಎಂದರು ಎಷ್ಟೋ ಹೆಂಗಸರರು. ತನ್ನ ಗಂಡನನ್ನು ಹತೋಟಿಯಲ್ಲಿಟ್ಟು
ಕೊಳ್ಳಲಾರದೇ ಹೋದ ಆ ಹೆಂಗಸಿನ ಬಗೆಗೆ ಅವರೆಲ್ಲರಿಗೂ ಕನಿಕರವೆನಿಸಿತು.
ಒಂದು ದಿನ ಪೋಲೀಸ್ ರಂಗಸ್ವಾಮಿಯ ಹೆಂಡತಿ ಒಂದು ಬಟ್ಟಲು ಬೇಳೆ
ಸಾಲ ಕೇಳಲೆಂದು ವೆಂಕಟಸುಬ್ಬಮ್ಮನ ಬಾಗಿಲ ಮುಂದೆ ನಿಂತಳು. ಎಂಜಿನಿಯರಿಂಗ್
ಕಾಲೇಜಿನಲ್ಲಿ ಓದುತ್ತಿದ್ದ ಹುಡುಗ ಆಗಲೆ ಹೊರಟು ಹೋಗಿದ್ದ. ಚಿಕ್ಕವನು ಹೊರ
ಡಲು ಹೊತ್ತಾಯಿತೆಂದು ಅವಸರ ಅವಸರವಾಗಿ ಉಣ್ಣುತ್ತಿದ್ದ.
"ಏನ್ಮಾಡ್ತಿದೀರಿ ವೆಂಕಟಸುಬ್ಬಮ್ಮ?" ಎಂದು ರಂಗಸ್ವಾಮಿಯ ಹೆಂಡತಿ
ಅಂದಳು.
"ಬಡಿಸ್ತಾ ಇದ್ದೀನಿ, ಬಂದ್ಬಿಟ್ಟೆ ಕಣ್ರೀ.
ಆದರೆ ಆಕೆ ಹೊರಬರುವುದರೊಳಗೇ ವಠಾರದೆದುರು ಒಂದು ಜಟಕಾ ಗಾಡಿ
ನಿಂತಿತು. ಮಧ್ಯ ವಯಸ್ಸು ದಾಟಿದ್ದ ಭಾರೀ ಗಾತ್ರದ ಬಿಳಿ ಮೀಸೆಯ ದೊಡ್ಡ
ರುಮಾಲಿನ ಗೃಹಸ್ಥರೊಬ್ಬರು ಕೆಳಕ್ಕಿಳಿದು ಗಾಡಿಯನ್ನು ಕೇಳಿದರು.
"ಇದೇ ಏನಯ್ಯ?"
"ಹೂಂ ಸಾಮಿ."
ಎಡಗೈಯಲ್ಲಿ ಕೊಡೆ ಬಲಗೈಯಲ್ಲಿ ಧೋತರದ ಅಂಚು.ಎಕ್ಕಡ ಮೆಟ್ಟಿ
ಕೊಂಡು ಅವರು ಅನುಮಾನಿಸುತ್ತಾ ಅಂಗಳ ಸೇರಿದರು.
'ಯಾರೋ ಬಂದ್ರು,' 'ಯಾರೋ ಬಂದ್ರು' ಎಂದು ಸುದ್ದಿ ವಠಾರ ತುಂಬ
ಕುಪ್ಪಳಿಸಿತು.
ರಂಗಸ್ವಾಮಿಯ ಹೆಂಡತಿಯನ್ನು ನೋಡಲು ಬಾಗಿಲಿಗೆ ಬಂದ ವೆಂಕಟಸುಬ್ಬ
ಮ್ಮನೂ ಹೊರಕ್ಕೆ ಇಣುಕಿದಳು. ಒಮ್ಮೆಲೆ ಅವಳ ಮುಖ ಅಷ್ಟಗಲವಾಯಿತು.
"ಅಯ್ಯೋ ! ನಮ್ಮ ಯಜಮಾನ್ರು." ಎಂದು ಆಕೆ ಪಿಸುದನಿಯಲ್ಲಿ ಅಂದು,
ಉಣ್ಣುತ್ತಿದ್ದ ಮಗನಿಗೆ ಕೇಳಿಸುವಂತೆ ಹೇಳಿದಳು.

"ನಿಮ್ಮಪ್ಪ ಬಂದ್ರು ಕಣೋ".

ಹಾಗೆ ಹೇಳಿ ಸೆರಗು ಸರಿಪಡಿಸಿಕೊಳ್ಳುತ್ತ ಆಕೆ ಹೆಬ್ಬಾಗಿಲಿನತ್ತ ಸರಿದಳು.
ಬಂದ 'ಯಜಮಾನರು' ಹೆಂಡತಿಯನ್ನು ನೋಡಿದರು. ಮುಗುಳುನಗೆ ಆ ಮುಖವನ್ನು
ಅಲಂಕರಿಸಿದಂತೆ ತೋರಿತು. ಹೆಂಡತಿಯನ್ನು ಹಿಂಬಾಲಿಸಿ ಅವರು ಒಳಕ್ಕೆ ಕಾಲಿರಿ
ಸಿದರು.
ಸಾಲ ಕೇಳಲು ಬಂದಾಕೆ ಆಗ ಬಾಗಿಲಲ್ಲಿರಲಿಲ್ಲ. ವೆಂಕಟಸುಬ್ಬಮ್ಮನ ಗಂಡ
ಬಂದ ಸುದ್ದಿಯನ್ನು ಮನೆ ಮನೆಗೂ ತಿಳಿಸುವ ಕಾರ್ಯದಲ್ಲಿ ನಿರತಳಾಗಿದ್ದಳು.
ಯಜಮಾನರು ರುಮಾಲು ತೆಗೆದಿರಿಸಿ ಹೆಂಡತಿ ಹಾಸಿದ ಚಾಪೆಯ ಮೇಲೆ ಕುಳಿ
ತರು. ಮಗನತ್ತ ನೊಡುತ್ತ ಕೇಳಿದರು:
"ಸ್ಕೂಲ್ಗೆ ಹೋಗೋ ಹೊತ್ತಾಗ್ಲಿಲ್ವೇನೋ?"
ಅವರ ದೃಷ್ಟಿಯಲಿ ಸ್ಕೂಲು_ಕಾಲೇಜು ಎಲ್ಲಾ ಒಂದೇ.
"ಇನ್ನು ಹೊರಟ್ಬಿಡ್ತಾನೆ. ಕಂಠಿ ಆಗ್ಲೇ ಹೋದ," ಎಂದು ತಾಯಿಯೇ
ಉತ್ತರವಿತ್ತಳು.
ಮಗ ಕೈ ತೊಳೆದು, ಪುಸ್ತಕಗಳನ್ನೆತ್ತಿಕೊಂಡು, "ಬರ್ತ್ತಿನಪ್ಪಾ-ಅಮ್ಮಾ
ಬರ್ತೀನಿ," ಎಂದು ಹೀಳಿ ಹೊರಕ್ಕೆ ಧಾವಿಸಿದ.
ವೆಂಕಟಸುಬ್ಬಮ್ಮನ ಯಜಮಾನರು ಮನೆಯೊಳಗಿನ ಕತ್ತಲೆಯನ್ನು ಕಂಡು
ಮೂಗು ಮುರಿದರು.
"ಇದೊಳ್ಳೇ ಮನೆ!" ಎಂದು ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದರು.
"ಇಲ್ಲಿ ಒಳ್ಳೇ ಮನೆ ಸಿಗೋದೇ ಕಷ್ಟ," ಎಂದಳು ವೆಂಕಟಸುಬ್ಬಮ್ಮ.
ಆ ಬಾಗಿಲಿನ ಎದುರಿನೆಂದ ಆತ್ತಿತ್ತ ಹಾದು ಹೋಗುವ ಹೆಂಗಸರ ಸಂಖ್ಯೆ
ಒಮ್ಮೆಲೆ ಹೆಚ್ಚಿತು. ಅವರೆಲ್ಲ ಒಳಗೆ ಕುಳಿತ್ತಿದ್ದ ಗಂಡಸಿನತ್ತ ದೃಷ್ಟಿ ಬೀರಿದರು. ಹೆಂಗ
ಸರ ದೃಷ್ಟಿರನ್ನು ಎದುರಿಸುವುದರಲ್ಲಿ ವೆಂಕಟಸುಬ್ಬಮ್ಮನ ಯಜಮಾನರು ಎಂದೂ
ಹಿಂದಾದವರಲ್ಲ
"ಅಂತೂ ಪರವಾಗಿಲ್ಲ ವಠಾರ!" ಎಂದರು ಯಜಮಾನರು, ಅಷ್ಟೊಂದು ಜನ
ತಮ್ಮನ್ನು ನೋಡುತ್ತಾ ಅತ್ತಿತ್ತ ಹೋದ ಬಳಿಕ.
ನಡೆಗೋಲಿನ ಸದ್ದಾಯಿತು. ರಂಗಮ್ಮ ಬಂದು ಬಾಗಿಲ ಬಳಿ ನಿಂತರು.
"ಇವರೇ ರಂಗಮ್ನೋರು," ಎಂದಳು ವೆಂಕಟಸುಬ್ಬಮ್ಮ. ಆಕೆಯ ಯಜ
ಮಾನರು ಮುಗುಳ್ನಕ್ಕರು. ಅವರನ್ನು ನೋಡಿ ರಂಗಮ್ಮನೂ ನಕ್ಕರು.
"ಯಾವಾಗ ಬರೋಣವಾಯ್ತು?"
"ಇದೇ ಈಗ ಬಸ್ನಲ್ಲಿ ಬಂದೆ."
"ವಠಾರಕ್ಕೆ ಬರ್ತಿರೋದು ಇದು ಮೊದಲ್ನೇ ಸಲ."
"ಹೌದು."

ರಂಗಮ್ಮ, ಆ ಗಂಡಸನ್ನು ಮಾತಿನಿಂದ ತಿವಿದು ನೋಡಲು ಬಯಸಿದರು.

"ಹೋದ ವರ್ಷವೆಲ್ಲಾ ಬೆಂಗಳೂರಿಗೆ ಬರ್ಲೇ ಇಲ್ವೇನೋ?"
"ಇಲ್ಲ, ಒಂದೂವರೆ ವರ್ಷದ ಮೇಲಾಯ್ತು ಬೆಂಗಳೂರಿಗೆ ಬಂದು."
ಹೆಂಡತಿ ಮಕ್ಕಳನ್ನು ಹೀಗೆ ಬಿಟ್ಟಿದ್ದ ಈತನಿಗೆ ನಾಚಿಕೆ ಎಂಬುದೇನೂ ಇಲ್ಲ
ವೆಂಬುದು ಸ್ಪಷ್ಟವಾಗಿತ್ತು. 'ಒಳ್ಳೇ ಗಂಡಸು! ಎಂದು ಮನಸ್ಸಿನಲ್ಲೇ ಅಂದುಕೊಂಡು
ರಂಗಮ್ಮ ಏನನ್ನೋ ಗೊಣಗಿದರು.
"ಆಗಲಿ, ಈಗಲಾದರೂ ಬಂದಿರಲ್ಲ, ಸಂತೋಷ," ಎಂದು ನುಡಿದು ರಂಗಮ್ಮ
ಟೀಕೆ ಅಷ್ಟು ಸಾಕೆಂದು ಮುಂದೆ ನಡೆದರು. ಹೆಬ್ಬಾಗಿಲು ಸಮೀಪಿಸುವುದರೊಳಗೇ
ಅವರ ಸ್ವರ ಕೇಳಿಸಿತು.
"ಯಾವುದೋ ಹಸು ಒಳಕ್ಕೆ, ಬಂದ್ಬಿಟ್ಟಿದೆ! ಯಾರೇ ಅದು ಗೇಟು ತೆರ್ದಿಟ್ಟು
ಬಂದಿರೋದು? ಹೈ....ಹೈ....!"
ತನ್ನ ಗಂಡ ತೆರೆದಿಟ್ಟು ಬಂದಿರಬೇಕೆಂದು ವೆಂಕಟಸುಬ್ಬಮ್ಮನಿಗೆ ಹೊಳೆಯಿತು.
ಆದರೆ ಆ 'ಯಜಮಾನ'ರಿಗೆ ಅದು ಅರ್ಥವಾಗಲಿಲ್ಲ. ಹೆಂಗಸರ ಅಂತಹ ಕೂಗಾಟ
ಗಳಿಗೆ ಗಮನ ಕೊಡುವ ಅಭ್ಯಾಸವೇ ಅವರಿಗೆ ಇರಲಿಲ್ಲ.
"ಕೋಟು ಬಿಚ್ಬಾರ್ದೆ? ಸ್ನಾನಕ್ಕೆ ನೀರಿಡ್ತೀನಿ...." ಎಂದು ವೆಂಕಟಸುಬ್ಬಮ್ಮ
ಗಂಡನನ್ನು ಉದ್ದೇಶಿಸಿ ಹೇಳಿದಳು.
"ಏನೂ ಬೇಡ, ಸ್ನಾನಮಾಡ್ಕೊಂಡೇ ಬಂದೆ."
ಹುಡುಗರ ಊಟವಾಗಿತ್ತು. ಆಕೆ ಇನ್ನೂ ಏನನ್ನೂ ತೆಗೆದುಕೊಂಡಿರಲಿಲ್ಲ.
"ಊಟಕ್ಕೇಳಿ ಹಾಗಾದರೆ."
ತನ್ನ ಪಾಲಿನ ಊಟವನ್ನು ಹೆಂಡತಿ ಕೊಡುತ್ತಾಳೆಂದು ಆ ಗಂಡನಿಗೆ ಗೊತ್ತಿತ್ತು.
'ನಿನಗೇನು ಮಾಡ್ತೀಯಾ?' ಎಂದು ಆತ ಕೇಳಲಿಲ್ಲ. ಮತ್ತೊಮ್ಮೆ ಬೇಯಿಸುತ್ತಾಳೆ
ಎಂಬುದನ್ನೂ ಅವರು ತಿಳಿದಿದ್ದರು.
ತಂಬಿಗೆ ನೀರನ್ನೆತ್ತಿಕೊಂಡು ಓಣಿಯುದ್ದಕ್ಕೂ ಅವರು ಅತ್ತಿತ್ತ ದೃಷ್ಟಿ ಹಾಯಿ
ಸುತ್ತ ಹೋಗಿ ಬಂದರು. ಮಾತಿಲ್ಲದೆಯೇ ಅವರ ಊಟ ಮುಗಿಯಿತು. ಹೆಂಡತಿ
ಕೊಟ್ಟ ಅಡಿಕೆ ಪುಡಿಯನ್ನಷ್ಟು ಬಾಯಿಗೆ ಹಾಕಿಕೊಂದು ಅವರು ಮತ್ತೆ ಕೋಟಿಗೆ ಕೈ
ಹಾಕಿದರು.
"ಇದೇನು ಹೊರಟೇಬಿಟ್ರಾ?"
"ಹೂಂ. ಕೋರ್ಟಿಗೆ ಹೋಗ್ಬೇಕು. ಆ ದಿವಸ ಡಿಕ್ರಿ ಆಗಿರ್ಲಿಲ್ವೆ? ಅದರ
ಅಪೀಲು ಇವತ್ತು."
"ಆಮೇಲೆ ಬರ್ತೀರಿ ತಾನೆ?"
"ಇಲ್ಲ. ಸಾಯಂಕಾಲ ಐದು ಘಂಟೆ ಬಸ್ಸಿಗೇ ಹೋಗ್ಬೇಕು."
ವೆಂಕಟಸುಬ್ಬಮ್ಮನಿಗೆ ಅಳು ಚಿಮ್ಮಿ ಬಂದು, ಸ್ವರ ಗಂಟಲಲ್ಲೆ ಉಡುಗಿತು.

ಆದರೂ ಪ್ರಯಾಸಪಟ್ಟು ಆಕೆ ಸುಧಾರಿಸಿಕೊಂಡಳು. ತನಗೋಸ್ಕರ ಆತ ರಾತ್ರೆ ನಿಲ್ಲು

ವುದಿಲ್ಲ ಎಂಬುದಂತೂ ಗೊತ್ತೆ ಇತ್ತು. ಸವತಿ ಆತನಿಗಾಗಿ ಅಲ್ಲಿ ಕಾಯುತ್ತಿದ್ದಳು.
ಕಣ್ಣಿಗೆ ಕತ್ತಲ್ಲು ಕವಿದ ಹಾಗಾಯಿತು ಆಕೆಗೆ.
"ಕಂಠೀನ ನೋಡೋಲ್ವೆ?"
"ಎಷ್ಟು ಹೊತ್ತಿಗೆ ಬರ್ತಾನೆ?"
"ಆರು ಘಂಟೆಗೆ."
"ಮತ್ತೆ! ಕಡೆ ಬಸ್ಸು ಐದು ಘಂಟೆಗೇ ಹೊರಡುತ್ತ."
ವೆಂಕಟಸುಬ್ಬಮ್ಮನ ಬತ್ತಳಿಕೆ ಬರಿದಾಗಿತು. ಒಂದು ಕಾಲದಲ್ಲಿ ತನ್ನೊಬ್ಬಳ್ಳ
ಸೊತ್ತೇ ಆಗಿದ್ದ ಆ ಜೀವವನ್ನು ಕಾತರದ ದೃಷ್ಟಿಯಿಂದ ಆಕೆ ನೋಡಿದಳು.
ಆಕೆಯ ಗಂಡ ಕೊಡೆಯನ್ನು ಕೈಗೆತ್ತಿಕೊಂಡರು. ಚಪ್ಪಲಿಗಳತ್ತ ಪಾದಗಳು
ಚಲಿಸಿದುವು.
"ಏನಾದರೂ ದುಡ್ಡು ಬೇಕೇನು?"
ಈ ಪ್ರಶ್ನೆಯಿಂದ ವೆಂಕಟಸುಬ್ಬಮ್ಮನ ಸ್ವಾಭಿಮಾನ ಕೆರಳಿತು.
"ಬೇಡಿ. ಇದೆ."
"ಸರಿ ಹಾಗಾದರೆ. ಬರ್ತೀನಿ."
"ಹುಡುಗರು ಇದ್ದಿದ್ದರೆ ಜಟಕಾ ತರಿಸಬಹುದಾಗಿತ್ತು."
"ಬೇಡ, ಹಾದಿ ಗೊತ್ತಿದೆ. ಅಂಗಡಿ ಬೀದಿಗೆ ನಡೆಕೊಂಡು ಹೋಗಿ ಅಲ್ಲಿಂದ
ಬಸ್ನಲ್ಲಿ ಹೋಗ್ತೀನಿ."
ಅಷ್ಟು ಹೇಳಿ ವೆಂಕಟಸುಬ್ಬಮ್ಮನ ಯಜಮಾನರು ಬೀದಿಗಿಳಿದು ಹೊರಟೇ
ಹೋದರು."
ಕುಸಿದು ಬೀಳುವ ಹಾಗಾಯಿತೆಂದು ಆ ಹೆಂಗಸು ಕ್ಷಣಕಾಲ ಬಾಗಿಲಿಗೊರಗಿ
ನಿಂತುಕೂಂಡಳು. ಆಮೇಲೆ ಅಡುಗೆ ಮನೆಗೆ ಹೋಗಿ, ಸೀರೆಯ ಸೆರಗನ್ನು ಕಣ್ಣು
ಗಳಿಗೆ ಒತ್ತಿಕೊಂಡು ಎರಡು ನಿಮಿಷ ಮೌನವಾಗಿ ಅತ್ತಳು. ಆಗ ಮತ್ತೆ ಅನ್ನ
ಬೇಯಿಸುವ ಗೋಜಿಗೆ ವೆಂಕಟಸುಬ್ಬಮ್ಮ ಹೂಗಲ್ಲಿಲ್ಲ. ಊಟ ಮಾಡಬೇಕೆಂದೇ
ಆಕೆಗೆ ಅನಿಸಲ್ಲಿಲ್ಲ.
ವೆಂಕಟಸುಬ್ಬಮ್ಮನ ಯಜಮಾನರು ಅಷ್ಟು ಬೇಗ ಹೊರಟು ಹೋದರೆಂದು
ತಿಳಿದು ರಂಗಮ್ಮನಿಗೆ ಅಶ್ಚರ್ಯವಾಯಿತು. ಹೊರಟಾಗ ತನಗೊಂದು ಮಾತು ಹೇಳಿ
ಹೋಗಲಿಲ್ಲವೆಂದು ಮನಸ್ಸಿನೊಳಗೆ ಕುಟುಕಿತು. ತಾನು ಎನು ಹೇಳಿದರೂ ವೆಂಕಟ
ಸುಬ್ಬಮ್ಮನಿಗೆ ನೋವಾಗುವುದೆಂದು ತಿಳಿದು, ರಂಗಮ್ಮ ನಿಟ್ಟುಸಿರನ್ನಷ್ಟೆ ಬಿಟ್ಟು ಸುಮ್ಮ
ನಾದರು.
ಅದಾಗಿ ಬಹಳ ದಿನಗಳು ಕಳೆದರೂ, ಊರಿನಿಂದ ಬಂದ ವೆಂಕಟ್ಟಸುಬ್ಬಮ್ಮನ
ಯಜಮಾನರು ರಾತ್ರೆ ನಿಲ್ಲದೆ ಸಂಜೆಯೇ ಹೊರಟು ಹೋದ ವಿಷಯ ಮಾತ್ರ

ವಠಾರದ ಯಾರಿಗೂ ಮರೆತು ಹೂಗಲ್ಲಿಲ್ಲ. ಅವರೆಲ್ಲ ತಮ್ಮ ತಮ್ಮಮ್ಮೊಳಗೇ ವೆಂಕಟ

ಸುಬ್ಬಮ್ಮನ ವಿಷಯವಾಗಿ ಸಹಾನುಭೂತಿಯ ಮಾತನ್ನಾಡಿದರು.
ಆ ತಾಯಿ ಮಾತ್ರ ಮಕ್ಕಳ ಸೇವೆಯಲ್ಲಿ ಎ೦ದಿನ೦ತೆಯೇ ನಿರತಳಾದಳು.
....ಮತ್ತೊಮ್ಮೆ ಒ೦ದು ಜಟಕಾ ವಠಾರದೆದುರು ಬ೦ದು ನಿ೦ತಿತು. ನಡು
ಮಧ್ಯಾಹ್ನ ಆಗ. ತಲೆಯ ಮೇಲೆ ಜರಿ ರುಮಾಲು, ಉಣ್ಣೆಯ ಕೋಟು, ಕಚ್ಚೆಪ೦ಚೆ,
ಕೈಯಲ್ಲಿ ಛತ್ರಿ, ಕಾಲಲ್ಲಿ ಚುರುಚುರು ಸದ್ದಾಗುತ್ತಿದ್ದ ಭಾರೀ ಎಕ್ಕಡ. ದೇಹ ಎತ್ತರ
ವಾಗಿದ್ದರು ಕ್ಷೀಣವಾಗಿತ್ತು. ಬಿಳಿ ಮೀಸೆ ಇದ್ದರೂ ಅದನ್ನು ಮಾಟವಾಗಿ ಎರಡು
ಬದಿಗಳಿಗೆ ವಿ೦ಗಡಿಸಿರಲಿಲ್ಲ.
ಆತ ಜಟಕಾ ಗಾಡಿಯಿ೦ದಿಳಿದು ಅತ್ತಿತ್ತ ನೋಡುತ್ತಿದುದ್ದನ್ನು ಮೊದಲು ಕ೦ಡ
ರಾಜಮ್ಮ, 'ನಮ್ಮ ಜನವಲ್ಲ, ಯಾರೋ ಬೇರೆ.ವಿಳಾಸ ತಪ್ಪಿದೆಯೇನೋ'ಎ೦ದು
ಕೊ೦ಡಳು.
ಆದರೆ ಆ ಸದ್ಗೃಹಸ್ಥ ವಠಾರದ ಗೇಟನ್ನೇ ಸಮೀಪಿಸಿದರು:
"ಅಮ್ಮಣ್ಣಿ,ರ೦ಗಮ್ನೋರ ವಠಾರ ಅ೦ದರೆ ಇದೇ ಅಲ್ಲವ್ರಾ?"
ಅಮ್ಮಣಿ ಎ೦ಬ ಪದ ಕೇಳಿ ರಾಜಮ್ಮ ಸುಪ್ರಸನ್ನಳಾದಳು.
"ಹೌದು. ಇದೇ. ಯಾರು ಬೇಕಾಗಿತ್ತು?"
"ರ೦ಗಮ್ನೋರ್ನ ರವಷ್ಟು ನೋಡ್ಬೇಕು."
"ತಾಳಿ. ಹೋಗಿ ಹೇಳ್ತೀನಿ"
ರಾಜಮ್ಮ ಸುದ್ದಿ ಮುಟ್ಟಿಸಿದವಳು. "ನಿಮ್ಮ ಮಗನ ಕಡೆಯಿ೦ದ ಬ೦ದಿದಾರೋ.
ಏನೋ" ಎ೦ದು ತನ್ನ ಸ್ವ೦ತದ ಊಹೆಯನ್ನೂ ಮು೦ದಿಟ್ಟಳು.
ರ೦ಗಮ್ಮ ಬೇಗ ಬೇಗನೆ ನಡೆಗೋಲನ್ನೂರಿಕೊ೦ಡು ಬ೦ದರು.
"ಯಾರಪ್ಪಾ. ಎಲ್ಲಿ೦ದ್ಬ೦ದ್ರಿ?"
"ಇಲ್ಲಿ ರಾಜಶೇಖರ ಅ೦ತ ಒಬ್ಬ ಹುಡುಗ ಇಲ್ಲವ್ರಾ?"
"ಹೌದು, ಇದಾನೆ."
"ಅವನ ಜತೇಲಿ ದೇವಯ್ಯ ಅ೦ತ ಒಬ್ಬ-"
"ಹೌದು, ದೇವಯ್ಯಾ೦ತಿದಾನೆ."
"ನಾನು ದೇವಯ್ಯನ ತ೦ದೆ."
"ಹಾಗೋ? ಬನ್ನಿ-ಬನ್ನಿ-"
ಆದರೆ ಬ೦ದಿದ್ದ ಗೌಡರು ಕುಳಿತುಕೊಳ್ಳುವುದಕ್ಕೂ ಸರಿಯಾದ ಜಾಗವಿರಲಿಲ್ಲ.
ಅಧಿಕಾರಿಗಳು ಯಾರಾದರೂ ಬಂದರೆ, ಜಾತಿ ಮತ ಯೋಚನೆ ಮಾಡದೆ ರ೦ಗಮ್ಮ
ಅವರನ್ನು ತಮ್ಮ ಮನೆಗೆ ಕರೆದೊಯ್ಯುವುದಿತ್ತು. ಬ೦ದವರನ್ನು ಹಾಗೆಯೇ ನಿಲ್ಲ
ಗೊಡುವುದು ಸರಿಯಲ್ಲವೆ೦ದು ರ೦ಗಮ್ಮ ಈಗಲೂ ಕರೆದರು:
"ಒಳಗ್ಬನ್ನಿ."

22

ಆದರೆ ಗೌಡರು ಬರಲಿಲ್ಲ.
"ಬ್ಯಾಡಿ. ಇಲ್ಲೇ ಇರ್ತೀನಿ. ನಮ್ಮ ದೇವಯ್ಯ..."
ರಂಗಮ್ಮ ಆತನ ಮಾತಿಗೆ ಕಿವಿಗೊಡದೆ, ಪೋಲೀಸ್ ರಂಗಸ್ವಾಮಿಯ ಹುಡುಗ
ನನ್ನು ಕಳುಹಿಸಿ ಚಂಪಾವತಿಯ ಮನೆಯಿ೦ದ ಕುರ್ಚಿ ತರಿಸಿದರು. ಗೌಡರು ಹೆಬ್ಬಾಗಿಲ
ಬಳಿಯಲ್ಲೆ ಕುರ್ಚಿಯ ಮೇಲೆ ಆಸೀನರಾದರು. ರಂಗಮ್ಮನೂ ಗೋದಡೆಗೊರಗಿ ಬಾಗಿಲ
ಬಳಿ ಕುಳಿತುಕೊ೦ಡರು.
ಆಗ ಹುಡುಗ ದೇವಯ್ಯನ ತಂದೆಯಲ್ಲವೆ ಈತ? ಎಷ್ಟೊಂದು ಸಾರಿ ತಮ್ಮ
ಮನಸ್ಸಿನ ನೆಮ್ಮದಿಯನ್ನು ಕದಡಿತ್ತು ಆ ವಿಧ್ಯಾರ್ಥಿಗಳ ಕೊಠಡಿ! 'ನನಗೆ ಯಾಕೆ
ಇದೆಲ್ಲ? ಹಾಳಾಗಿ ಹೋಗಲಿ' ಎಂದು ಅವರೆಗೂ ರಂಗಮ್ಮ ಸುಮ್ಮನಾಗಿದ್ದರು.
ಆದರೆ ಈಗ, ಹೆತ್ತ ತಂದೆಯೇ ಕೇಳುತ್ತಿದ್ದಾಗ, ತಮ್ಮ ಹೃದಯದಲ್ಲಿದುದನ್ನೆಲ್ಲ ಆತ
ನೆದುರು ತೋಡಿಕೊಳ್ಳಲು ರಂಗಮ್ಮನಿಗೆ ಅಪೇಕ್ಶೆಯಾಯಿತು. ಅಲ್ಲದೆ ಆ ಹುಡುಗ
ನನ್ನು ಒಳ್ಳೆಯ ಹಾದಿಗೆ ತರಲು ಸ್ವತಃ ತಾವೂ ಎಷ್ಟೊಂದು ಪ್ರಯತ್ನಪಟ್ಟೆವೆ೦ಬು
ದನ್ನು-ಸ್ವಲ್ಪ ಉಪ್ಪು ಖಾರ ಹಚಿಯೇ- ಆತನಿಗೆ ತಿಳಿಸಲು ಅವರು ಬಯಸಿದರು.
"ನಿಮ್ಮ ಹುಡುಗನ ವಿಷಯ ಏನಪ್ಪ ಹೇಳ್ಲಿ ನಾನು?" ಎಂದು ಆರ೦ಭಿಸಿ
ರ೦ಗಮ್ಮ , ಸ್ವಲ್ಪ ಹೊತ್ತು ತಡೆದು, ಹೇಳುತ್ತಿರುವುದೊ೦ದೂ ತಮಗೆ ಪ್ರಿಯವಲ್ಲ
ವೆ೦ಬ೦ತೆ ತಲೆಯಾಡಿಸಿ, ಮನಸ್ಸಿನಲ್ಲಿದ್ದುನ್ನೆಲ್ಲ ಹೇಳಿಯೇ ಬಿಟ್ಟರು.
ಅದನ್ನು ಕೇಳುತ್ತಿದ ಆ ಸದ್ಗೃಹಸ್ಥರ ಮುಖ ಸಪ್ಪಗಾಯಿತು. ಹೃದಯ
ಭಾರವಾಯಿತು; ಅವರು ದೀರ್ಘವಾಗಿ ಶ್ವಾಸವೆಳೆದರು.
ಗೌಡರು ಮಾತಿಲ್ಲದೆ ಕುಳಿತಿದ್ದುದನ್ನು ಕ೦ಡು, ತಾವು ಆಡಿದುದು ಅತಿಯಾಯಿ
ತೇನೋ ಎ೦ದು ರ೦ಗಮ್ಮನಿಗೇ ವ್ಯಾಕುಲವಾಯಿತು.
"ಆದರೆ ಇದನ್ನೆಲ್ಲ ಮನಸ್ಸಿಗೆ ಹಚ್ಕೋಬಾರ್ದು. ಚಿಕ್ಕ ಹುಡುಗ, ಇನ್ನೂ ಬುದ್ಢಿ
ತಿಳೀದು....ಒ೦ದೆರಡು ಸಾರೆ ಬಯ್ದು ಬುದ್ಢಿವಾದ ಹೇಳಿದ್ರೆ ತಿದ್ಕೋತಾನೆ."
"ಅದೇನು ತಿದ್ಕೋತಾನೋ," ಎ೦ದಷ್ಟೇ ಉತ್ತರ ಬ೦ತು.
ಒ೦ದು ಕ್ಷಣ ತಡೆದು, ಏನೋ ನಿರ್ಧಾರಕ್ಕೆ ಬ೦ದವರ೦ತೆ ಗೌಡರೆ೦ದರು:
"ಎಷ್ಟೊತ್ತೊಗೆ ಬತ್ತವೆ ಹುಡುಗ್ರು?"
"ಸಾಯ೦ಕಾಲ ಆರು ಘ೦ಟೆಗೆಲ್ಲಾ ಸಾಮಾನ್ಯವಾಗಿ ಬ೦ದ್ಬಿಡ್ತಾರೆ. ರಾಜ
ಶೇಖರನೇನೋ ತಪ್ಪದೆ ಬರ್ತಾನೆ. ನಿಮ್ಹುಡುಗ__"
ಗೌಡರು ಕುಳಿತಲ್ಲಿ೦ದ ಎದ್ದರು:
"ಆಗಲ್ರಮ್ಮ. ಸಿಟ್ಟೀ ಕಡೆ ಒಸಿ ಕೆಲಸ ಇದೆ. ಮುಗಿಸ್ಕೊ೦ಡು ಬತ್ತೀನಿ.
"ಅಷ್ಟು ಎತ್ತರವಾಗಿದ್ದ ಗೌಡರು ರ೦ಗಮ್ಮನ ಮಾತು ಕೇಳಿ ಅಷ್ಟರಲ್ಲೆ ಸ್ವಲ್ಪ
ಕುಗ್ಗಿ ಹೋಗಿದ್ದರು. ಅವರು ಬೀದಿಗಿಳಿದು ಮರೆಯಾದುದನ್ನು ನೋಡುತ್ತಲಿದ್ದ

ರ೦ಗಮ್ಮನಿಗೆ ಕಸಿವಿಸಿ ಎನಿಸಿತು.

"ನಾನು ಇಷ್ಟೆಲ್ಲಾ ಹೇಳಾಬಾರದಿತ್ತೇನೋ. ಆ ಎದುರುಮನೆ ಹುಡುಗಿ
ವಿಷಯಾನಾದರೂ ಬಿಡಬಹುದಾಗಿತ್ತು. ಓದ್ಸೋದನ್ನೇ ನಿಲ್ಲಿಸಿ ಬಿಡ್ತಾನೋ ಏನೋ,"
ಎಂದು ಅವರು ಮನಸ್ಸಿನಲ್ಲೆ ಪರಿತಪಿಸಿದರು.
ವೆಂಕಟಸುಬ್ಬಮ್ಮನ ಯಜಮಾನರು ಬಂದಾಗ ತೋರಿದಷ್ಟು ಕುತೂಹಲವನ್ನು
ದೇವಯ್ಯನ ತಂದೆ ಬಂದಾಗ ವಠಾರದ ಹೆಂಗಸರು ತೋರಲಿಲ್ಲ. ಆದರೂ ರಂಗಮ್ಮನ
ಮಾತಿಗೆ ಕಿವಿಗೊಡುತ್ತಾ ಕುಳಿತಿದ್ದ ವಯಸ್ಸಾಗಿದ್ದ ಗೌಡರನ್ನು-ಮಹಡಿಯ ಮೇಲಿನ
ಹುಡುಗರಲ್ಲೊಬ್ಬನ ತಂದೆಯನ್ನು-ನೋಡುವ ಕೆಲಸವನ್ನಷ್ಟು ಮಾಡಿದರು.
ಅಷ್ಟೇ ಆಗಿದ್ದರೆ, ಆ ಸಂದರ್ಶನವನ್ನು ಅವರು ಮರೆತು ಬಿಡುತ್ತಿದ್ದರು. ಆದರೆ
ದೇವಯ್ಯನ ತಂದೆ ಅದಕ್ಕೆ ಅವಕಾಶ ಕೊಡಲಿಲ್ಲ.
ವೆಂಕಟಸುಬ್ಬಮ್ಮನ ಯಜಮಾನರು ತಮ್ಮ, ಹುಡುಗರನ್ನು ಸರಿಯಾಗಿ ಮಾತ
ನಾಡಿಸದೆಯೇ ಹೊರಟು ಹೋದರು. ಆದರೆ ದೇವಯ್ಯನ ತಂದೆ ತಮ್ಮ ಹುಡುಗ
ನನ್ನು ಸರಿಯಾಗಿಯೆ ಮಾತನಾಡಿಸಲೆಂದು ಸಂಜೆ ವಾಪಸು ಬಂದರು.
ಆಗ ಕೊಠಡಿಯಲ್ಲಿದ್ದವರು ರಾಜಶೇಖರ ಮತ್ತು ಚಿಕ್ಕ ಹುಡುಗ ಮಾತ್ರ.
ದೇವಯ್ಯನ ತಂದೆಯ ಆಗಮನ ವಾರ್ತೆಯನ್ನು ರಂಗಮ್ಮನಿಂದ ತಿಳಿದ ರಾಜಶೇಖರ
ನಿಗೆ ಗಲಿಬಿಲಿ ಎನಿಸಿತ್ತು. ನವರಾತ್ರಿಯ ಹಬಕ್ಕೆ ದೇವಯ್ಯನೂ ಚಿಕ್ಕ ಹುಡುಗನೂ
ಊರಿಗೆ ಹೋಗಿದ್ದರು. ಊರಿನಿಂದ ಹಿಂತಿರುಗಿದ ಮೇಲೆ ದೇವಯ್ಯನ ಹಾರಾಟ
ಸ್ವಲ್ಪ ಕಡಿಮೆಯಾಗಿತ್ತು. ಕಾಲೇಜ್ ಹಾಸ್ಟೆಲಿಗೆ ಸೇರುವ ಪ್ರಸ್ತಾಪವನ್ನು ಮತ್ತೆ
ಮಾಡಲಿಲ್ಲ. ಆದರೆ ಕೆಟ್ಟ ಅಭ್ಯಾಸಗಳನ್ನು ಆತ ಬಿಟ್ಟುಕೊಡಲೂ ಇಲ್ಲ.
ದೇವಯ್ಯ ಸೇದಿ ಎಸೆದಿದ್ದ ಸಿಗರೇಟು ಚೂರುಗಳನ್ನು ರಾಜಶೇಖರ ಹೆಕ್ಕಿ
ತೆಗೆದು ಕೊಠಡಿಯನ್ನು ಶುದ್ಧಗೊಳಿಸಿದ್ದ.
ಕೊಠಡಿಗೆ ಬಂದ ಗೌಡರು ಮೌನವಾಗಿದ್ದರು. ಆ ಮೌನವನ್ನು ಕಂಡು ರಾಜ
ಶೇಖರನ ಭಯ ಹೆಚ್ಚಿತು.
"ಆಯ್ಯೊ, ಇವರು ಮಾತನ್ನಾದರೂ ಆಡಬಾರದೆ?"
-ಎಂದು ರಾಜಶೇಖರ ಮನಸಿನೊಳಗೇ ಸಂಕಟಪಟ್ಟ.
ಗೌಡರು ಕೊಠಡಿಯಲ್ಲಿದ್ದ ಕನ್ನಡ ಪಠ್ಯ ಪುಸ್ತಕವನ್ನೋದುತ್ತ ಮಗನ ಚಾಪೆಯ
ಮೇಲೆ ಕುಳಿತರು. ಮಗನ ಆಗಮನದ ನಿರೀಕ್ಷೆಯಲ್ಲಿ ಗೌಡರಿದ್ದುದನ್ನು ತಿಳಿದ
ರಂಗಮ್ಮ ಕತ್ತಲಾದೊಡನೆಯೇ, ಎಂದಿಗಿಂತ ಸ್ವಲ್ಪ ಬೇಗನೆ, ದೀಪ ಹಾಕಿದರು.
ಏಳೂವರೆ ಹೊತ್ತಿಗೆ ದೇವಯ್ಯ ಕೊಠಡಿಗೆ ಬಂದ. ತಂದೆಯನ್ನು ಕಂಡೊಡನೆ
ದೇಹದ ಕಸುವೆಲ್ಲ ಹೊರಟು ಹೋದಂತಾಯಿತು ಅವನಿಗೆ.
"ಎಷ್ಟು ಹೊತ್ತಿಗೋ ಮನೇಗ್ಬರೋದು?" ಎಂದು ಗುಡುಗುತ್ತ ಗೌಡರು
ಎದ್ದು ನಿಂತು ಮಗನ ಸಮೀಪಕ್ಕೆ ಬಂದರು.

ತಪ್ಪಿಸಿಕೊಳ್ಳಲು ಹಾದಿಯೇ ಇಲ್ಲದ ಅಪರಾಧಿಯ ಹಾಗಾಯಿತು ದೇವಯ್ಯನ

ಸ್ಥಿತಿ. ತಾವು ಬರುವ ವಿಷಯವನ್ನು ತಂದೆ ಮೊದಲೇ ಬರೆದು ತಿಳಿಸಿದೆ ಈ ಸ್ಥಿತಿ
ಯೊದಗಿತಲ್ಲಾ ಎಂದು ಆತ ಹಲುಬಿದ. ಏನಾಗುತ್ತಿದೆ ಎಂಬುದನ್ನು ಸ್ಪಷ್ಟವಾಗಿ
ತಿಳಿಯುವುದರೊಳಗೇ ಆತನಿಗೇ ಏಟುಗಳು ಬಿದ್ದುವು. ತಂದೆ ಮಗನಿಗೆ ಅಂಗೈ ಬೀಸಿ
ಹೊಡೆದರು; ಮುಷ್ಟಿಯಿಂದ ಗುದ್ದಿದರು; ತನ್ನ ಕಾಲು ಹಿಡಿಯಲು ಬಂದವರನ್ನು
ಪಾದದಿಂದ ತುಳಿದರು. ತಮ್ಮ ಕುಲಕ್ಕೆ ಮನೆತನಕ್ಕೆ ಕಳಂಕಪ್ರಾಯನಾದ ಆ ಮಗನನ್ನು
ಮನಸ್ವೀ ಬಯ್ದರು. ದೇವಯ್ಯ ಯಾವ ರಕ್ಷಣೆಯೂ ದೊರೆಯದೆ "ಅಮ್ಮಾ-ಅಮ್ಮಾ-
ಸತ್ತೇ ಸತ್ತೇ," ಎಂದು ಕೂಗಾಡಿದ.
ರಾಜಶೇಖರನೂ ಚಿಕ್ಕ ಹುಡುಗನೂ ಗಡಗಡನೆ ನಡುಗುತ್ತ ಮೂಲೆ ಸೇರಿದರು.
ಜಯರಾಮು ತನ್ನ ತಾಯಿಯೊಡನೆ ಆ ಕೊಠೊಡಿಯ ಬಾಗಿಲಿನ ಎದುರು ಬಂದು
ನಿಂತ. ಕೆಳಗಿನಿಂದ ಚಿಕ್ಕ ಪುಟ್ಟ ಹುಡುಗರು ದೇವಯ್ಯನ ಚೀರಾಟದ ಸದ್ದು ಕೇಳಿ
ಮೇಲಕ್ಕೆ ಓಡಿ ಬಂದರು. ಗೌಡರು ಶರೀರದ ಆದ್ಯಂತ ಕಂಪಿಸುತ್ತಿದ್ದರು. ನೆಲದ
ಮೇಲೆ ಮೂಲೆಯಲ್ಲಿ ಮುದುರಿ ಕುಳಿತು ತನ್ನ ಮಗ ಎಳೆಯ ಮಗುವಿನಂತೆ ಅಳತೊಡ
ಗಿದುದನ್ನು ಕಂಡಾಗ, ಗೌಡರ ರೋಷ ಮೆಲ್ಲೆನೆ ಕರಗಿತು.
ಹೊಡೆತ ನಿಂತಿತೆಂದು ಜಯರಾಮು ತನ್ನ ತಾಯಿಯೊಡನೆ ಹಿಂತಿರುಗಿದ. ಇಷ್ಟು
ಬೇಗನೆ ತಮಾಷೆ ಮುಗಿಯಿತಲ್ಲಾ ಎಂದು ನೆರೆದಿದ್ದ ಹುಡುಗರಿಗೆ ನಿರಾಶೆಯಾಗಿ,
ದೇವಯ್ಯನಿಗೆ ಏಟು ಬಿದ್ದ ಸುದ್ದಿಯನ್ನು ಕೆಳಗೆ ವಠಾರದಲ್ಲಿ ಪ್ರಸಾರ ಮಾಡಲು
ಅವರು ಇಳಿದು ಹೋದರು.
ಗೌಡರು ತಮ್ಮ ಹೃದಯದ ಅಳಲನ್ನು ಯಾರೂ ತಿಳಿದುಕೊಳ್ಳಲಾರರೆಂದು
ಮನಸಿನೊಳಗೇ ಕೊರಗುತ್ತ, ಅಸಹನೀಯವಾಗುತ್ತಾ ಬಂದಿದ್ದ ಮೌನವನ್ನು ಮುರಿದು,
ಹೇಳಿದರು:
"ಇವತ್ನಿಂದ್ಲೇ ನೀನು ಸುಧಾರಿಸಿದ್ರೆ ಬದುಕ್ದೆ. ಇಲ್ಲೆ ಓದ್ರೆ ನನ್ಮ್ಗಗ ಸತ್ತಾಂತ
ತಿಳ್ಕಂತೀನಿ."
ರಾಜಶೇಖರನ ಕಡೆಗೆ ತಿರುಗಿ ಅವರೆಂದರು:
"ಏನಪ್ಪಾ, ದೇವೂನ ಒಂದಿಷ್ಟು ನೋಡ್ಕೊ ಅಂದ್ರೆ ಇಂಗ್ಮಾಡೋದಾ ನೀನು?"
ರಾಜಶೇಖರ ಉತ್ತರ ಕೊಡಲಾರದೆ ಹೋದ.
ಗೌಡರು ರುಮಾಲನ್ನು ತಲೆಗೇರಿಸಿ ಕೆಳಕ್ಕಿಳಿದು ರಂಗಮ್ಮನನ್ನು ಕರೆದರು.
"ನಾನು ಓಗ್ಬರ್ತಿನಿ ತಾಯೀ"
"ಆಗಲಪ್ಪಾ. ಈವಾಗ್ಲೇ ಹೊರಡ್ತೀರಾ?"
"ರಾತ್ರೆ ಗಾಡಿಗೆ ಓಯ್ತೀನಿ. ನಮ್ಮ ಹುಡುಗನ ಮೇಲೆ ಒಂದಿಷ್ಟು ನಿಗಾ
ಮಡಗಿರಿ ಅವ್ವಾ...ದೊಡ್ಡೋನು ಊರಲ್ಲೇ ಹೊಲ ನೋಡ್ಕೊಂತ ಅವ್ನೆ. ಇವ್ನು
ಎರಡ್ನೇಯೋನು. ಒಂದಿಷ್ಟು ಓದಿ ಅಭಿವೃದ್ಧಿಗೆ ಬರ್ಲೀಂತ ಆಸೆ."

"ಆಗಲಪ್ಪಾ ಆಗಲಿ. ನಾನು ಹೇಳ್ತಿರ್ತೀನಿ. ನಮ್ಮ ವಠಾರದಲ್ಲಿ ಈವರೆಗೆ

ಓದಿದೋರೆಲ್ಲ ಒಳ್ಳೊಳ್ಳೆ ಕೆಲಸದಲ್ಲಿದ್ದಾರೆ."
"ಬರ್ತೀನಿ ತಾಯಿ," ಎಂದು ಮತ್ತೊಮ್ಮೆ ಹೇಳಿ ಗೌಡರು ಹೊರಟು
ಹೋದರು.
....ಪಿತೃಭಕ್ತಿ ಪುತ್ರವಾತ್ಸಲ್ಯದ ವಿವಿಧ ರೂಪಗಳು ಜಯರಾಮುವಿನ ಕಣ್ಣೆ
ದುರು ಕಟ್ಟಿದಂತಾಗಿ, ಆ ರಾತ್ರೆ ಬಹಳ ಹೊತ್ತು ಆತನಿಗೆ ನಿದ್ದೆ ಬರಲಿಲ್ಲ. ಕತೆಯಲ್ಲಿ
ಓದುವುದಕ್ಕಿಂತಲೂ ವಾಸ್ತವತೆಯಲ್ಲಿ ಬದುಕು ಎಷ್ಟೊಂದು ರುದ್ರತರ ಎಂದು ಯೋಚಿ
ಸುತ್ತ ಆತ ಮಲಗಿದ.
ರಾಜಶೇಖರನೂ ಚಿಕ್ಕ ಹುಡುಗನೂ ಊಟ ಮಾಡಿ ಬಂದರು. ಮೈಕೈ
ನೋಯುತ್ತಿದ್ದ ದೇವಯ್ಯ ಮುಸುಕೆಳೆದುಕೊಂಡು ಹಾಸಿಗೆಯ ಮೇಲೆ ಉರುಳಿದ.
ಆತನನ್ನು ಮಾತನಾಡಿಸಲು ರಾಜಶೇಖರ ಮಾಡಿದ ಯತ್ನಗಳೆಲ್ಲ ವಿಫಲವಾದುವು.
...ದಿನಗಳು ಕಳೆದುವು. ದೇವಯ್ಯ ಹೊತ್ತಿಗೆ ಸರಿಯಾಗಿ ಈಗ ಕೊಠಡಿಗೆ
ಬರುತ್ತಿದ್ದ.ದುಂದು ವೆಚ್ಚ ಮಾಡುತ್ತಿರಲಿಲ್ಲ. ಸಿಗರೇಟು ಸೇದುವುದು ಕಡಮೆ
ಯಾಯಿತು. ಪಾಠ ಪುಸ್ತಕಗಳನ್ನೋದುವ ಪ್ರಯತ್ನವನ್ನೂ ಆತ ಮಾಡುತ್ತಿದ್ದು
ದನ್ನು ರಾಜಶೇಖರ ಗಮನಿಸಿದ.
ತಂದೆ ಬಂದು ಹೋದ ಮೊದಲಲ್ಲಿ ಕೆಲವು ದಿನ ರಾಜಶೇಖರನೊಡನೆ ದೇವಯ್ಯ
ಮಾತನಾಡಲೇ ಇಲ್ಲ. ಒಂದು ದಿನ ಅವನ ಅಂತರ್ಯದ ಬೇಗುದಿ ಸ್ಛೋಟ
ವಾಯಿತು.
"ನನ್ಮೇಲೆ ಚಾಡಿ ಹೇಳಿ ನಿಂಗೇನಪ್ಪಾ ಬಂತು?"
ಅಂತಹ ಪ್ರಶ್ನೆಯನ್ನು ರಾಜಶೇಖರ ನಿರೀಕ್ಷಿಸಿರಲಿಲ್ಲ. ತನ್ನ ವಿಷಯದಲ್ಲಿ
ದೇವಯ್ಯ ಹಾಗೆ ತಪ್ಪು ತಿಳಿಯಬಹುದೆಂದು ಆತ ಕನಸಿನಲ್ಲೂ ಭಾವಿಸಿರಲಿಲ್ಲ.
"ಇಲ್ಲಪ್ಪೋ. ನಾನು ಹೇಳಿಲ್ಲ!"
ಅದು ನಿಜವೆಂದು ಚಿಕ್ಕವನು ಸಾಕ್ಷ್ಯ ನುಡಿದ.
ರಂಗಮ್ಮನೇ ವರದಿ ಕೊಟ್ಟಿರಬೇಕೆಂಬುದು ಸ್ಪಷ್ಟವಾಯಿತು. ದೇವಯ್ಯ ಆ
ಮುದುಕಿ ಕಣ್ಣಿಗೆ ಬಿದ್ದಾಗಲೆಲ್ಲ ಆಕೆಯನ್ನು ನುಂಗಿಬಿಡುವವನಂತೆ ನೋಡುತ್ತಿದ್ದ.
ಒಂದು ಸಂಜೆ, ಪದ್ಮಾವತಿಯ ಜತೆಯಲ್ಲಿ ಅಂಗಳದಲ್ಲಿ ನಿಂತಿದ್ದ ರಂಗಮ್ಮ,
ಕೊಠಡಿಗೆ ಹೋಗುತ್ತಿದ್ದ ದೇವಯ್ಯನನ್ನು ಕಂಡು, ಕೇಳಿದರು:
"ಏನಪ್ಪಾ ನಿಮ್ತಂದೆ ಕಾಗದ ಬರೆದಿದಾರೇನು?"
"ಹೂಂ."
ಉತ್ತರ ಚುಟುಕಾಗಿತ್ತು. ಅದೂ ಗೊಗ್ಗರ ಧ್ವನಿಯಲ್ಲಿ.
"ಊರಲ್ಲೆಲ್ಲಾ ಚೆನ್ನಾಗಿದಾರೊ?"
"ಹೂಂ."

ಮತ್ತೆ ಮೊದಲಿನಂತೆಯೇ.

174

ಸೇತುವೆ

ಹುಡುಗ ಮೆಟ್ಟಲೇರಿ ಹೋದ ಬಳಿಕ ರಂಗಮ್ಮ ನೊಂದುಕೊಂಡು ಧ್ವನಿಯಲ್ಲಿ
ಹೇಳಿದರು:
"ನನ್ಮೇಲೆ ಕೋಪ ಆತನಿಗೆ_ಗೌಡ ಬಂದಾಗ ದೂರು ಹೇಳ್ದೆ ಅಂತ. ನನಗೇನು
ದ್ವೇಷವೆ? ಆ ಹುಡುಗನಿಗೆ ಒಳ್ಳೇದಾಗ್ಲೀಂತ್ಲೇ ಅಲ್ವೆ ನಾನು ಹೇಳಿದ್ದು?"
ಪದ್ಮಾವತಿ, ತನ್ನ ಮೈಗೆ ಅಂಟಿಕೊಂಡಿದ್ದ ಮಗುವನ್ನು ಎರಡೂ ಕೈಗಳಿಂದ
ಮತ್ತಷ್ಟು ಬಿಗಿಯಾಗಿ ತನ್ನೆಡೆಗೆ ಎಳೆದುಕೊಳ್ಳುತ್ತ, ಮುಗುಳ್ನಕ್ಕಳು.

೧೮
ಚಳಿಗಾಲ ಬಂದಾಗ ರಂಗಮ್ಮ ಮೈತುಂಬ ಕಂಬಳಿ ಹೊದೆದುಕೊಳ್ಳುತ್ತಿದ್ದರು.
ನರನಾಡಿಗಳಲ್ಲಿ ರಕ್ತ ಸಂಚಾರ ಕ್ಷೀಣವಾಗಿ ಅವರಿಗೆ ತುಂಬಾ ಸಂಕಟವಾಗುತ್ತಿತ್ತು.
ಈ ಸಲ ಅವರೆಂದರು:
"ಅಸಾಧ್ಯ ಚಳಿ ಈ ವರ್ಷ! ಅಸಾಧ್ಯ ಚಳಿ!"
ಆದರೆ ಇದೇ ಮಾತನ್ನು ಅವರು ಪ್ರತಿ ವರ್ಷವೂ ಹೇಳುತ್ತಿದ್ದರು. ಪ್ರತಿ
ಯೊಂದು ಸಲವೂ 'ಈ ವರ್ಷದ ಚಳಿ ಅಸಾಧ್ಯ' ಎಂದೇ ಅವರಿಗೆ ತೋರುತ್ತಿತ್ತು.
ಹೆಚ್ಚು ಕಡಮೆ ಪ್ರತಿ ಮುಂಜಾನೆಯೂ ಇಬ್ಬನಿ ಬೀಳುತ್ತಿತ್ತು. ಬೇಗನೆ ಎಚ್ಚರ
ವಾದರೂ ರಂಗಮ್ಮ ಮನೆಯಿಂದ ಹೊರಬರುತ್ತಿರಲಿಲ್ಲ. ಸೂರ್ಯನ ಬೆಳಕು ಓಣಿ
ಯೊಳಕ್ಕೆ ಬರುವವರೆಗೂ ಅವರು ಗಂಟಲಿನಿಂದ ಒಂದೇ ಸಮನೆ ಏನಾದರೂ ಸದ್ದು
ಹೊರಡಿಸುತ್ತ ಕುಳಿತುಬಿಡುತ್ತಿದ್ದರು.
ಪೋಲೀಸ್ ರಂಗಸ್ವಾಮಿಯ ಹುಡುಗ, ಮೀನಾಕ್ಷಮ್ಮನ ಮಗ, ಇಲ್ಲವೆ ಉಪಾ
ಧ್ಯಾಯರ ಮಕ್ಕಳು ಬಂದು ಕೂಗಿ ಕರೆಯುತ್ತಿದ್ದರು:
"ಅಜ್ಜೀ....ಎದ್ದಿಲ್ವೆ ಅಜ್ಜೀ?....ಹಾಲು ಬಂತು ಅಜ್ಜೀ..."
ಅಂತಹ ದಿನಗಳಲ್ಲಿ ರಂಗಮ್ಮನ ಪರವಾಗಿ ಕಮಲಮ್ಮನೇ ಹಾಲು ಹಾಕಿಸಿ
ಕೊಳ್ಳುತ್ತಿದ್ದಳು.
ಅದನ್ನು ಆಮೇಲೆ ಇಸಕೊಳ್ಳುತ್ತ ರಂಗಮ್ಮನೆನ್ನುತ್ತಿದ್ದರು:
"ಏನು ಹಾಲು ಕೊಡುತ್ತೇಂತ ಈ ಚಳಿಗೆ ಹಿಂಡ್ತಾರೋ...."
ಡಿಸೆಂಬರ್ನಲ್ಲೊಂದು ರಾತ್ರೆ, ಮುಂಜಾನೆ, ಚಳಿ ವಿಪರೀತವಾಗಿತ್ತು. 'ಆಹ್'
ಎಂದು ಉಸಿರುಬಿಟ್ಟರೆ ಸಾಕು, ಬಾಯಿಯಿಂದ ಉಗಿ ಹೊರಡುತ್ತಿತ್ತು.
ಆ ಬೆಳಗ್ಗೆ ಎಷ್ಟು ಹೊತ್ತಾದರೂ ರಂಗಮ್ಮ ಏಳಲೇ ಇಲ್ಲ.

ಎಷ್ಟು ಸಾರೆ ಬಾಗಿಲು ತಟ್ಟಿದರೂ ಉತ್ತರ ಬರಲಿಲ್ಲ. ಕಮಲಮ್ಮ ಗಾಬರಿ

ಗೊಂಡು ಮೀನಾಕ್ಷಮ್ಮನ ಮನೆಗೆ ಓಡಿದಳು. ಗಂಡಸರಲ್ಲಿ ಹೆಚ್ಚಿನವರಲ್ಲ ಕೆಲಸಕ್ಕೆ
ಹೊರಟು ಹೋಗಿದ್ದು, ಉಳಿದಿದ್ದವರು ಸುಬ್ಬುಕೃಷ್ಣಯ್ಯ ಮತ್ತು ಶಂಕರನಾರಾ
ಯಣಯ್ಯ ಮಾತ್ರ . ಇಬ್ಬರೂ ಧಾವಿಸಿ ಒಂದು ಬಾಗಿಲು ತಟ್ಟಿದರು. ಪ್ರಯೋಜನ
ವಾಗಲಿಲ್ಲ.
"ಇನ್ನೇನಪ್ಪಾ ಮಾಡೋದು?" ಎಂದು ಸುಬ್ಬುಕೃಷ್ಣಯ್ಯ .
ಶಂಕರನಾರಾಯಣಯ್ಯ ತನ್ನ ಕುರ್ಚಿ ತಂದಿಟ್ಟು ಅದರ ಮೇಲೆ ನಿಂತು ಎರಡು
ಹಂಚುಗಳನ್ನು ಎತ್ತಿಟ್ಟ. ಸೂರ್ಯನ ಬೆಳಕು ಕಟ್ಟೆಯೊಡೆದ ಕೆರೆಯ ಹಾಗೆ ರಂಗಮ್ಮನ
ಮನೆಯೊಳಕ್ಕೆ ನುಗ್ಗಿತು.
ಆದರೆ ಅಷ್ಟು ಹೊತ್ತಿಗಾಗಲೆ ಎದ್ದುಬಿಟ್ಟಿದ್ದರು ರಂಗಮ್ಮ. ಬಾಗಿಲ ವರೆಗೆ
ತೆವಳಿ ಬಂದು ಅಗಣಿ ತೆರೆದರು. ಹೊರಗಿದ್ದವರಿಗೆ ಕಂಡುಬಂದುದು, ಒಂದೇ ರಾತ್ರೆ
ಯಲ್ಲಿ ಬಹಳ ಕುಗ್ಗಿ ಹೊಗಿದ್ದ ರಂಗಮ್ಮ. ಅವರ ಕಣ್ಣುಗಳು ಹನಿಗೂಡಿದ್ದುವು.
ನೆರೆದಿದ್ದ ಎಲ್ಲರನ್ನೂ ಉದ್ದೇಶಿಸಿ ಮಾತನಾಡುವ ಶಕ್ತಿ ತಮಗಿಲ್ಲವೆನ್ನುವಂತೆ ಸುಬ್ಬು
ಕೃಷ್ಣಯ್ಯನನ್ನೇ ನೋಡುತ್ತ ಅವರೆಂದರು:
"ಕಾಲು ಕಣೋ. ಎರಡೂ ಕಾಲೂ ಹಿಡಕೊಂಬಿಡ್ತು. ಮಡಚೋಕೇ ಆಗ್ಲಿಲ್ಲ.
ವಯಸ್ಸಾಯ್ತು. ಇನ್ನು ತುಂಬ ಕಷ್ಟಾನಪ್ಪಾ".
"ಮಗನಿಗೆ ಕಾಗದ ಬರೀಬೇಕೇನು?" ಎಂದು ಕೇಳಿದ ಸುಬ್ಬುಕೃಷ್ಣಯ್ಯ,
ಬರಯಬೇಕೆಂದಾದರೆ ಬರೆದುಕೊಟ್ಟೇ ಕೆಲಸಕ್ಕೆ ಹೊಗೋಣವೆಂದು.
ಆದರೆ ರಂಗಮ್ಮ ಬೇಡವೆಂದರು:
"ಛೆ! ಛೆ! ನನಗೇನಾಗಿದೆ?" ಸ್ವಲ್ಪ ಚಳಿಯಾಯ್ತು ಅಷ್ಟೆ ...."
ಅವರ ದೃಷ್ಟಿ ಛಾವಣಿಯತ್ತ ಹೋಯಿತು. ಶಂಕರನಾರಾಯಣಯ್ಯ ಮೌನ
ವಾಗಿ ಮತ್ತೊಮ್ಮೆ ಕುರ್ಚಿಯನ್ನೇರಿ ಹಂಚುಗಳನ್ನು ಮೊದಲಿದ್ದಲ್ಲೇ ಇರಿಸಿದ.
ಆ ದಿನ ರಂಗಮ್ಮ ಮನೆಗೆಲಸಗಳನ್ನು ನಿಧಾನವಾಗಿ ಮಾಡಿದರು.
"ಒಂದು ದಿನ ಹೀಗೆ ಚಳೀಲಿ ಮೈ ಹೆಪ್ಪುಗಟ್ಟಿ ಸತ್ತೇ ಹೋಗ್ತೀನಿ ನಾನು "
ಎಂದು, ಬಿಸಿಲು ಚೆನ್ನಾಗಿ ಬಂದ ಮೇಲೆ, ರಂಗಮ್ಮ ಹೇಳಿದರು.
........ ದಿನಗಳುರುಳಿದವು. ಚಳಿಗಾಲ ಹಿಮ್ಮೆಟ್ಟಿತು. ಹೊಸ ವರ್ಷದ ವಿವಿಧ
ಕ್ಯಾಲೆಂಡರುಗಳು ವಠಾರದ ಮನೆಗೋಡೆಗಳನ್ನು ಅಲಂಕರಿಸಿದುವು.
ಇಂಟರ್ ಪಾಸ್ ಮಾಡಿದ ಜಯರಾಮು, ಎರಡು ತಿಂಗಳ ಕಾಲ ಕೆಲಸಕ್ಕಾಗಿ
ಅಲೆದ. ಪ್ರತಿ ಸಲವೂ ಯಾರನ್ನಾದರೂ ಭೇಟಿ ಮಾಡಿದಾಗಲೆಲ್ಲ, ಈ ಸಲ ಸಿಕ್ಕಿಯೇ
ಸಿಗುತ್ತದೆ ಎಂದು ತೋರುತ್ತಿತ್ತು. ಅದು ಅಶಾವಾದದ ಬಳ್ಳಿ ಬಿಟ್ಟಿದ್ದ ಒಂಟಿ ಹೂ.
ಭ್ರಮೆ ಎಂದು ಅದರ ಹೆಸರು. ಉದ್ಯೋಗ ಜಯರಾಮುವಿನ ಪಾಲಿಗೆ ಮಿಸುನಿ
ಜಿಂಕೆಯಾಯಿತು. ರಾತ್ರೆ ಕನಸಿನಲ್ಲೂ ಮರಕೊಳಿಸುವ ಹಾಗೆ ಹಗಲು ಯಾರು

ಯಾರೋ ಸೀಸದ ಮಾತುಗಳನ್ನು ಅವನ ಕಿವಿಯೊಳಕ್ಕೆ ಎರಕು ಹುಯ್ಯುತ್ತಿದ್ದರು.

__"ನೀನು ಪದವೀಧರನಲ್ಲ."
__"ಜಾತಿ?"
__"ಷಾರ್ಟ್ ‌ಹ್ಯಾಂಡ್ ಟೈಪ್‌ರೈಟಿಂಗ್ ತಿಳೀದು ಹಾಗಾದ್ರೆ?"
ಆತ ಪದವೀಧರನಾಗುವ ಮಾತೇ ಇರಲಿಲ್ಲ.
ಜಾತಿಯ ವಿಷಯದಲ್ಲಿ ಆತನೇನೂ ಮಾಡುವಂತಿರಲಿಲ್ಲ.
ಆದರೆ ಕೊನೆಯದು ಸಾಧ್ಯವಿತ್ತು.
ಶೀಘ್ರಲಿಪಿಯನ್ನೂ ಟೈಪು ಮಾಡುವದನ್ನೂ ಕಲಿಸಿಕೊಡುವ ಶಾಲೆಗೆ ಆತ
ವಿದ್ಯಾರ್ಥಿಯಾಗಿ ಹೋದ.
ಆತನ ಬರವಣಿಗೆ ನಡೆದೇ ಇತ್ತು. ಅಹಲ್ಯೆಯ ಮದುವೆಯನ್ನು ಹಿನ್ನೆಲೆ
ಯಾಗಿಟ್ಟು ಹೃದಯಸ್ಪರ್ಶಿಯಾದೊಂದು ಕತೆಯನ್ನು ಆತ ಬರೆದ. ಅದನ್ನೋದುತ್ತ
ರಾಧಾ ಒಂದೇ ಸಮನೆ ಕಣ್ಣೀರು ಸುರಿಸಿದಳು. ಅದನ್ನು ಪತ್ರಿಕೆಗೆ ಕಳುಹಿಸಬೇಕೆಂದಿದ್ದ
ಜಯರಾಮು. ಆದರೆ ರಾಧಾ ಬಿಡಲಿಲ್ಲ. "ಇದನ್ನು ಬೇರೆ ಯಾರೂ ಓದಬಾರದಣ್ಣ."
ಎಂದಳು. ಅಹಲ್ಯೆಯ ಬಗೆಗೆ ತನ್ನ ತಂಗಿ ತೋರಿದ ಪ್ರೀತಿಯನ್ನು ಕಂಡು ಜಯ
ರಾಮು ಮೂಕನಾಗಿ ಹೋದ.
ಉದ್ಯೋಗದ ಬೇಟೆ ಹಲವಾರು ಕಥಾವಸ್ತುಗಳನ್ನು ಆತನಿಗೆ ಒದಗಿಸಿತು.
'ದಿನಚರಿ ಕತೆಗಳು' ಎಂದು ಹೆಸರಿಟ್ಟು ಆ ಅನುಭವಗಳನ್ನೆಲ್ಲ ಆತ ಟಿಪ್ಪಣಿ ಮಾಡುತ್ತ
ಹೋದ. ಆದರೆ ಅದರಿಂದ ದುಡ್ಡು ಬರುತ್ತಿರಲಿಲ್ಲ.
ಶಂಕರನಾರಾಯಾಣಯ್ಯ ಹೇಳಿರಲಿಲ್ಲವೆ ಒಂದು ದಿನ?
"ಚಿತ್ರ ಬರೆದರೆ ದುಡ್ಡು ಬರೋದಿಲ್ಲ ಜಯರಾಮು."
ಆ ಮಾತು ಸಾಹಿತ್ಯದ ವಿಷಯದಲ್ಲೂ ಸತ್ಯವಾಗಿತ್ತು. ಆದರೆ ಬರವಣಿಗೆಯನ್ನು
ಬಿಟ್ಟುಕೊಡುವುದು ಮಾತ್ರ ಸಾಧ್ಯವಿರಲಿಲ್ಲ.
....ಎರಡು ತಿಂಗಳ ಅನಂತರವೊಂದು ಸಂಜೆ, ವಠಾರಕ್ಕೆ ಬೇಗನೆ ಹಿಂದಿರುಗಿದ
ಚಂದ್ರಶೇಖರಯ್ಯ, ಜಯರಾಮುವನ್ನು ಕರೆದು ಕೇಳಿದ:
ನಮ್ಮ ವಿಮಾ ಸಂಸ್ಥೆ ಕಚೇರೀಲಿ ಒಂದು ಗುಮಾಸ್ತೆ ಕೆಲಸ ಖಾಲಿ ಬಿದ್ದಿದೆ.
ಬರ್ತೀರೇನು?_"
ಅದೇನೋ ಕನಸಿನ ಸಂಭಾಷಣೆಯೆಂಬಂತೆ ಜಯರಾಮು ಉತ್ತರಿಸಿದ:
"ಓ ಬರ್ತೀನಿ. ಯಾವ ಕೆಲಸ ಮಾಡೋದಕ್ಕೂ ಸಿದ್ಧವಾಗಿದೀನಿ ನಾನು."
"ಸಂಬಳ ಕಮ್ಮಿ. ಈಗ ನಲ್ವತ್ತೈದು ಕೊಡ್ತಾರೆ. ಒಂದು ವರ್ಷ ಆದ್ಮೇಲೆ
ಖಾಯಂ ಮಾಡೋ ವಿಷಯದ ಪರಿಶೀಲನೆ. ಖಾಯಂ ಆದರೆ, ಸಂಬಳ ಜಾಸ್ತಿ
ಮಾಡ್ತಾರೆ. ಬೇಕಿದ್ದರೆ ನಿಮ್ಮ ತಂದೆಗೆ ಕಾಗದ ಬರೆದು ಕೇಳಿ. ಆದರೆ ತಡವಾಗ
ಬಾರದು. ತಮ್ಮ ತಮ್ಮವರಿಗೇ ಕೆಲಸ ಕೊಡಿಸೋಕೆ ಅಲ್ಲಿ ಪ್ರಯತ್ನ ಪಡೋ ಜನ
ಬೇಕಾದಷ್ಟಿದಾರೆ." "ಅದೆಲ್ಲ ಯೋಚಿಸ್ವೇಕಾದ್ದಿಲ್ಲ ಚಂದ್ರಶೇಖರಯ್ಯ. ನಮ್ಮ ತಂದೇನ ಈ ವಿಷಯ
ದಲ್ಲಿ ಕೇಳೋ ಅಗತ್ಯವೇ ಇಲ್ಲ."
"ಹಾಗಾದ್ರೆ ನಾಳೇನೆ ಒಂದು ಅರ್ಜಿ ಬರಕೊಡಿ."
"ಹೂಂ. ಬರಕೊಡ್ತೀನಿ."
ಆಮೇಲೆ ಜಂದ್ರಶೇಖರಯ್ಯ ಮೌನವಾದ. ತಾನು ಕೃತಜ್ಞತೆಯನ್ನರ್ಪಿಸಿಲ್ಲ
ಜಯರಾಮು ಕಸಿವಿಸಿಗೊಂಡ. ಆದರೆ ಏನನ್ನು ಹೇಳಬೇಕೇಂದು ತೋಚಲಿಲ್ಲ.
ಏನನ್ನೋ ಹೇಳಲು ಹೊರಟಾಗ ನಾಲಿಗೆ ತಡವರಿಸಿತು.
"ನೀವು ಮಾಡ್ತಿರೋ ಉಪಕಾರ ಎಂಥದೂಂತ ಖಂಡಿತ ಊಹಿಸಲಾರಿರಿ ಚಂದ್ರ
ಶೇಖರಯ್ಯ."
ಆತ ನಕ್ಕುಬಿಟ್ಟ.
"ಇನ್ನೂ ಕೆಲಸವೇ ಸಿಕ್ಕಿಲ್ವಲ್ಲ ಜಯರಾಮು. ಆಮೇಲೆ ಥ್ಯಾಂಕ್ಸ್ ಕೊಡಿ."
ಜಯರಾಮು ತನ್ನ ಮನೆಯೊಳಕ್ಕೆ ಹೋಗಿ, ತಾಯಿಗೂ ತಂಗಿಗೂ ತಾನು
ಬರೆಯಲಿರುವ ಹೊಸ ಅರ್ಜಿಯ ವಿಷಯ ತಿಳಿಸಿದ. ಆ ತಾಯಿಯ ಮುಖದ ಮೇಲೆ
ಆಸೆಯ ಮುಗುಳುನಗೆ ಮೂಡಿತು. ಯಾವ ಬಗೆಯ ಕೆಲಸ? ಕಚೇರಿ ಎಲ್ಲಿರೋದು?
ಎಂದೆಲ್ಲ ವಿವರವಾಗಿ ಕೇಳಿ ರಾಧಾ ಅವನನ್ನು ಬೇಸರಪಡಿಸಿದಳು.
ಬೇರೆಯೂ ಒಂದು ಯೋಚನೆ ಹೊಳೆದು ರಾಧಾ ಕೇಳಿದಳು:
"ವಿಮಾ ಸಂಸ್ಥೆಯ ಕತೆ ಯಾರೂ ಬರೆದೇ ಇಲ್ಲ, ಅಲ್ವೆ ಅಣ್ಣ? ನೀನು ಅದನ್ನು
ಬರೆದರೆ ಚೆನ್ನಾಗಿರುತ್ತೆ."
.....ಬಟ್ಟೆ ಬದಲಾಯಿಸುತ್ತಿದ್ದ ಚಂದ್ರಶೇಖರಯ್ಯ ತಾಯಿ ಮಕ್ಕಳ ಸಂವಾದ
ಕೇಳಿಸುವುದೇನೋ ಎಂದು ಕಿವಿಗೊಟ್ಟ. ತನ್ನ ವಿಷಯವಾಗಿ ಅವರೇನು ಮಾತನಾಡು
ತ್ತಿದ್ದರೆಂದು ತಿಳಿಯುವ ಆತುರ ಆತನಿಗೆ. ಆದರೆ ಏನೂ ಸ್ಪಷ್ಟವಾಗಿ ಕೇಳಿಸುತ್ತಿರಲಿಲ್ಲ.
ರಾಧೆಯ ಕೀಟಲೆ ನಗೆ, ಜಯರಾಮುವಿನ ಹುಸಿ ಮುನಿಸಿನ ಉತ್ತರ ....
"ನೀವು ಮಾಡ್ತಿರೋ ಉಪಕಾರ ಎಂಥದೂಂತ ಖಂಡಿತ ಊಹಿಸ್ಲಾರಿರಿ ಚಂದ್ರ
ಶೇಖರಯ್ಯ..."
ಹುಚ್ಚು ಹುಡುಗ. ನಾಳೆಯ ದಿನ ಆ ಕೆಲಸ ದೊರೆತು, ರಾಧೆಯೂ ರಾಧೆಯ
ತಾಯ್ತಂದೆಯರೂ ತನ್ನ ಬಗೆಗೆ ಒಳ್ಳೆ ಮಾತನ್ನಾಡುವಾಗ ತನಗೆ ಆಗುವ ಸಂತೋಷ
ಎಷ್ಟೆಂಬುದನ್ನು ಊಹಿಸುವುದು ಅವನಿಂದ ಸಾಧ್ಯವೆ?
ಚಂದ್ರಶೇಖರಯ್ಯ ಮದುವೆಯಾಗಲು ತೀರ್ಮಾನಿಸಿದ್ದ. ಆ ತೀರ್ಮಾನಕ್ಕೆ
ಇದೇ ಕಾರಣವೆಂದು ಯಾವುದಾದರೂ ಒಂದನ್ನಷ್ಟೇ ಎತ್ತಿ ತೋರಿಸುವುದು ಸಾಧ್ಯವಿರ
ಲಿಲ್ಲ. ಊರಿನಲ್ಲಿ ಹಿರಿಯರು ಆಡುತ್ತಿದ್ದ ನಿಂದೆಯ ನುಡಿಗಳನ್ನು ಕೇಳಿ ಕೇಳಿ ಆತನಿಗೆ
ಸಾಕಾಗಿತ್ತು.ಆದರೆ ಅದಕ್ಕಿಂತಲೂ ಮುಖ್ಯವಾಗಿ ಆತನ ಯೌವನ ಕೇಳುತ್ತಿತ್ತು:

23

'ಒಂಟಿಯಾಗಿಯೇ ಎಷ್ಟು ದಿನ ಇರೋದು ಸಾಧ್ಯ?' ಒಂದು ಹೆಣ್ಣು ಜೀವನದ ಸ್ನೇಹ

ವನ್ನು ಆತನ ಮನಸ್ಸು ದೇಹಗಳೆರಡೂ ಬಯಸುತ್ತಿದ್ದುವು, ಅದಕ್ಕೆಲ್ಲ ಕಳಶವಿಡುವಂತೆ
ಅಹಲ್ಯೆಯ ವಿವಾಹ ಪ್ರಕರಣ ಆತನ ಮೇಲೆ ಬಲವಾದ ಪರಿಣಾಮವನ್ನುಂಟು
ಮಾಡಿತ್ತು. ಪ್ರೀತಿಯ ವಿಷಯ, ವಿವಾಹದ ವಿಷಯ,ಅಹಲ್ಯೆ_ವೆಂಕಟೇಶರು ಒಬ್ಬ
ರೊಡನೊಬ್ಬರು ಮಾತನಾಡಿದ್ದರೋ ಇಲ್ಲವೋ, ಆತನಿಗೆ ತಿಳಿಯದು. ಆದರೆ ಅಷ್ಟೆಲ್ಲ
ರಂಪವಾದ ಮೇಲೆ, "ಅಹಲ್ಯೆಯನ್ನೇ ಮದುವೆಯಾಗ್ತೇನೆ" ಎಂದು ವೆಂಕಟೇಶ ಹೇಳ
ಬೇಗಿತ್ತು. ಆದರೆ ಆತ ಆಂತಹ 'ಗಂಡಸುತನ' ತೋರಲಿಲ್ಲ. ಅದಕ್ಕಾಗಿ ಆತನ
ನ್ನೆಂದೂ ಚಂದ್ರಶೇಖರಯ್ಯ ಕ್ಷಮಿಸಲಾರ. ಜಯರಾಮುವಿನೆದುರು ವೆಂಕಟೇಶನನ್ನು
ಒಂದೆರಡು ಸಾರಿ ಬೈದು ಚಂದ್ರಶೇಖರಯ್ಯ ಸ್ವಲ್ಪ ತೃಪ್ತಿಪಟ್ಟುಕೊಂಡಿದ್ದ. ಏನಾದರೂ
ನೆಪ ಮಾಡಿಕೊಂಡು ರಾಮಚಂದ್ರಯ್ಯನೊಡನೆ ಆತ್ಮೀಯವಾಗಿ ಆಗಾಗ್ಗೆ ಮಾತ
ನಾಡಿದ್ದ. ಆದರೆ ಆ ಪ್ರಕರಣ ಸ್ವತಃ ಅವನಿಗೇ ಸವಾಲು ಹಾಕಿತ್ತು: 'ನಿನ್ನ ವಿಷಯ
ವೇನು? ರಾಧೆಯ ಬಗ್ಗೆ ನಿನ್ನ ಅಭಿಪ್ರಾಯವೇನು?'
ಆ ಅಭಿಪ್ರಾಯಕ್ಕೆ ಸಂಬಂಧಿಸಿ ಅವನ ಮನಸ್ಸಿನಲ್ಲಿ ಈಗ ಯಾವ ಶಂಕೆಯೂ
ಉಳಿದಿರಲಿಲ್ಲ.
ಈ ಬೀದಿಯಲ್ಲಿ ಬಸ್ಸುಗಳಲ್ಲಿ ಹುಡುಗಿಯರನ್ನು ನೋಡಿದರೂ ರಾಧೆಯ ನೆನಪು
ಆತನಿಗೆ ಆಗುತ್ತಿತ್ತು. ದಾಂಪತ್ಯ ಜೀವನದ ಯೋಚನೆಗಳು ಮೂಡಿದಾಗಲೆಲ್ಲ
ರಾಧೆಯೇ ಕಣ್ಣೆದುರು ನಿಲ್ಲುತ್ತಿದ್ದಳು.
ಚಂದ್ರಶೇಖರಯ್ಯ ತನಗೆ ತಾನೇ ಪ್ರಶ್ನಿಸಿಕೊಂಡ:
'ರಾಧೆಯಿಲ್ಲದೆ ಹೋಗಿದ್ದರೆ, ಖಾಲಿಯಾದ ಜಾಗವನ್ನು ಜಯರಾಮುಗೆ
ಕೊಡಿಸ್ತಿದ್ದೆಯೇನು?'
ಅವನ 'ಅಹಂ' ಎಂದಿತು:
"ಓಹೋ, ಕೊಡಿಸ್ತಿದ್ದೆ.'
ಅದು ಆತ್ಮವಂಚನೆಯ ಉತ್ತರ ಎಂಬುದು ಅವನಿಗೆ ಗೊತ್ತಿತ್ತು.
ಜಯರಾಮುಗೆ, ಚಂದ್ರಶೇಖರಯ್ಯ ಪ್ರತಿನಿಧಿಯಾಗಿ ದುಡಿಯುತ್ತಿದ್ದ ವಿಮಾ
ಸಂಸ್ಥೆಯ ಕಚೇರಿಯಲ್ಲಿ ಕೆಲಸ ಸಿಕ್ಕಿತು.
ಆತನ ತಾಯಿ, ದೇವರೆದುರು ತುಪ್ಪದ ದೀಪ ಹಚ್ಚಿಟ್ಟು ಮಗ ಮಂಡಿಯೂರಿ
ಕೈಮುಗಿಯುವಂತೆ ಮಾಡಿದಳು.
ಬೇಗನೆ ಹೊರಟುಬರಲು ತನ್ನ ಗಂಡನಿಗೆ ಕಾಗದ ಬರೆಯಬೇಕೆಂದು ಆಕೆ
ಯೋಚಿಸಿದಳು. ಆದರೆ ಅದರ ಅಗತ್ಯವಿಲ್ಲವೆಂಬುದು ತನಗೇ ಹೊಳೆದು, ಕೆಲಸ
ಸಿಕ್ಕಿದ ವಿಷಯವನ್ನಷ್ಟೇ ಬರೆದು ತಿಳಿಸುವಂತೆ ಜಯರಾಮುಗೆ ಹೇಳಿದಳು: 'ಚಂದ್ರ
ಶೇಖರಯ್ಯ ಕೆಲಸ ಕೊಡಿಸಿದ್ದು' ಎಂಬುದನ್ನೂ ಬರೆಯುವಂತೆ ಸೂಚಿಸದಿರಲಿಲ್ಲ.
ಆ ತಾಯಿ ಕೆಳಕ್ಕಿಳಿದು ತಾನು ಸಂಧಿಸಿದವರಿಗೆಲ್ಲ ಆ ಸುದ್ದಿ ಹೇಳುತ್ತ ಬಂದಳು. "ನಮ್ಮ ಜಯರಾಮುಗೆ ಕೆಲಸ ಸಿಗ್ತು."
ನಮ್ಮ ರಾಧಾಗೆ ಗ೦ಡು ಗೊತ್ತಾಯ್ತು ಎನ್ನುವಾಗ ಇರಬಹುದಾದ ಸ೦ತೋ
ಷದ ಧ್ವನಿಯಿತ್ತು ಆ ಮಾತಿನಲ್ಲಿ.
ಅದರ ಜತೆಯಲ್ಲಿ ಇನ್ನೊ೦ದು ವಾಕ್ಯವನ್ನು ಆಕೆ ಹೇಳಿದಳು:
"ಚ೦ದ್ರಶೇಖರಯ್ಯ ಕೊಡಿಸಿದ್ರು. ಅವರ ಕಚೇರೀಲೇ ಕೆಲಸ.
ರಂಗಮ್ಮ ಆಕೆಗೆ ಅಂದರು:
"ಹಾಗೆಯೇ ಮಗಳ ಮದುವೇನೂ ಒಂದು ಮಾಡಿಸ್ಬಿಡಮ್ಮ."
ಬೇರೆ ದಿನವಾಗಿದ್ದರೆ, ಆ ಮಾತು ಕೇಳಿದೊಡನೆಯೇ ಆಕೆಯ ಮುಖ ಬಾಡು
ತ್ತಿತ್ತು. ಈ ದಿನ ಹಾಗಾಗಲಿಲ್ಲ. ಧೈರ್ಯದಿಂದಲೆ ಆಕೆಯೆಂದಳು:
"ಆಗಲಿ ರಂಗಮ್ನೋರೇ. ನಿಮ್ಮ ಆಶೀರ್ವಾದವಿದ್ದರೆ ಅದೂ ಒಂದು ದಿನ
ಆದೀತು, ನೋಡೋಣ."
ಅಣ್ಣನಿಗೆ ಕೆಲಸ ಸಿಕ್ಕಿತೆಂದು ರಾಧಾ ಕುಣಿದಾಡಿಳು.
ಚಂದ್ರಶೇಖರಯ್ಯನನ್ನು ರಾತ್ರೆ ಊಟಕ್ಕೆ ಕರೆಯಬೇಕೆಂದು ಗೊತ್ತಾಯಿತು.
ಆದರೆ ಸಂಜೆಯಾದರೂ ಆತನ ಸುಳಿವೇ ಇರಲ್ಲಿಲ. ಜಯರಾಮು ಆತ ಇರಬಹುದಾದ
ಜಾಗಗಳಲ್ಲೆಲ್ಲ ಸುತ್ತಾಡಿ, ಒಂದೆಡೆ ಅವನನ್ನು ಕಂಡು, ಕರೆದುಕೊಂಡು ಬಂದ.
...........ಹಿಗ್ಗುತ್ತಿದ್ದ ಹೃದಯವನ್ನು ಬಿಗಿಯಾಗಿ ಹಿಡಿದು ಚಂದ್ರಶೇಖರಯ್ಯ
ಊಟ್ಟಕ್ಕೆ ಕುಳಿತ. ಮೂರು ವರ್ಷಗಳಿಂದ ಪಕ್ಕದ ಮನೆಯಲ್ಲೇ ಇದ್ದ ಆತ, ಮೊದಲ
ಬಾರಿ ಕಂಡ ಅಪರಿಚಿತರ ಮನೆಯಲ್ಲಿ ಕುಳಿತವನಂತೆ, ಸಂಕೊಚದಿಂದ
ವರ್ತಿಸಿದ.
ರಾಧಾ ಅಣ್ಣನಿಗೂ ಚಂದ್ರಶೇಖರಯ್ಯನಿಗೂ ಬಡಿಸುತ್ತ ಹೋದಳು. ಆತ
ರಾಧೆಯನ್ನು ತಲೆಯೆತ್ತಿ ಕೂಡಾ ನೋಡದೆ ಊಟ ಮಾಡಿದ.
ಕೊಠಡಿಗೆ ಹಿಂತಿರುಗಿದ ಚಂದ್ರಶೇಖರಯ್ಯನಿಗೆ ಅಂತಹ ನಿರ್ಮಲ ಒಲವನ್ನು
ದೊರಕಿಸಿಕೊಂಡ ತಾನು ಸುಖಿಯೆಂದು ತೋರಿತು. ಸಿಗರೇಟಿನ ನೆನಪಾಯಿತಾದರೂ,
ಸೇದಲು ಮನಸ್ಸಾಗಲಿಲ್ಲ.

೧೯

ಬಿಸಿಲು ಚೆನ್ನಾಗಿ ಬೀಳತೊಡಗಿದಂತೆ ನಿತ್ಯದ ಉತ್ಸಾಹದಿಂದ ರಂಗಮ್ಮ
ಓಡಾಡಿದರು.
"ಈ ವರ್ಷವಾದರೂ ಬೆಂಗಳೂರಿಗೆ ವರ್ಗವಾಗುವಂತೆ ಪ್ರಯತ್ನಿಸಬೇಕು," ಎಂದು