ವಿಷಯಕ್ಕೆ ಹೋಗು

ಪುಟ:ಅಕ್ಬರ್ ಬೀರಬಲ ಚಾತುರ್ಯವಾದ ವಿನೋದ ಕಥೆಗಳು.djvu/೧೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
ಪೂರ್ವಜನ್ಮದ ವೃತ್ತಾಂತ.


ಚೀನಕಾಲದಲ್ಲಿ ಈ ಆರ್ಯವರ್ತ ದೇಶದಲ್ಲಿ ಬೈಜರವೆಂಬ ಒಂದು ಗ್ರಾಮವಿತ್ತು. ಅಲ್ಲಿ ಮಹಾಪಂಡಿತನೂ ಸದಾ ಚಾರ ಸಂಪನ್ನನೂ ಆದಂಥ ಸುಕರ್ಮನೆಂಬ ಬ್ರಾಹ್ಮ ಣನು ಇದ್ದನು. ಇವನಿಗೆ ಸುದಾಸನೆಂಬ ಒಬ್ಬ ಪರಮ ಸ್ನೇಹಿತನಿದ್ದನು. ಈ ಸುದಾಸನು ಜಾತಿಯಲ್ಲಿ ತಲವಾ ರನಿದ್ದನು. ಇವರಿಬ್ಬರು ಏನಾದರೊಂದು ಕಾರ್ಯವನ್ನು ಮಾಡುವದಿದ್ದರೆ ಪರಸ್ಪರರ ಸಮ್ಮತಿಯಿಲ್ಲದೆ ಮಾಡುತ್ತಿದ್ದಿಲ್ಲ. ಹೀಗೆ ಎ ಷ್ಟೋ ವರುಷಗಳು ಕಳೆದು ಹೋದಮೇಲೆ ಸುಕರ್ಮನ ಮನಸ್ಸಿನಲ್ಲಿ ರಾಜ ನಾಗಬೇಕೆಂಬ ಅಭಿಲಾಷೆಯು ಹುಟ್ಟಿತು. ಆಗ ಅದನ್ನು ಸಂಪಾದಿಸಬೇ ಕೆಂಬ ಇಚ್ಛೆಯಿಂದ ಘೋರ ತಪಶ್ಚರ್ಯವನ್ನು ಮಾಡಿ ಜಗದೀಶನನ್ನು ಒಲಿ ಸಿಕೊಳ್ಳಬೇಕೆಂದು ನಿಶ್ಚಯಿಸಿ, ಈ ಸಂಗತಿಯನ್ನು ತನ್ನ ಪರಮಸ್ನೇಹಿತ ನಾದ ಸುದಾಸನಿಗೆ ತಿಳಿಸಿದನು. ಈ ಮಾತು ಅವನ ಮನಸ್ಸಿಗೂ ಬಂತು,



ನಮ್ಮಲ್ಲಿ ಕನ್ನಡ ವೇದಾಂತಗ್ರಂಥಗಳು ಕಾವ್ಯಗ್ರಂಥಗಳು, ಶಿವಪುರಾಣಗಳು ಚಾತುರ್ಯವಾದ ಕಥೆಗಳು, ಗ್ರಂಥಗಳು, ವೈದ್ಯಗ್ರಂಥಗಳು, ಯಕ್ಷಗಾನ ಗ್ರಂಥಗಳು, ವೀರಶೈವ ಮತಗ್ರಂಥಗಳು, ನಾಟಕಗಳು, ಕನ್ನಡ ಸಂಸ್ಕೃತ ಗ್ರಂ ಥಗಳು ಸಿಗುವವು, ಬೇಕಾದವರು ಬರದು ತರಿಸಿಕೊಳ್ಳಬಹುದು.

ನಮ್ಮ ವಿಳಾಸ:- ಶ್ರೀ. ಕ ನ್ನ ಯ್ಯ ಶೆ ಟ್ಟ.

ಕರ್ನಾಟಕ ಬುಕಡಿಪೋ ಏಜಂಟ್ ಬಳ್ಳಾರಿ.