ವಿಷಯಕ್ಕೆ ಹೋಗು

ಪುಟ:Dakshina Kannada Mangalore matthu Udupi.pdf/೪೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಉದ್ಯಮ ವ್ಯಾಪಕವಾಗಿ ಹರಡಿತು. ಈ ಹಂಚಿನ ಕಾರ್ಖಾನೆಗಳು ನಮ್ಮ ದೇಶದ ಮಾತ್ರವಲ್ಲ ಶ್ರೀಲಂಕ, ಬರ್ಮಾ, ಪೂರ್ವ, ಆಫ್ರಿಕಾ, ಆಸ್ಟ್ರೇಲಿಯಾ, ಮೊದಲಾದ ಬೇಡಿಕೆಗಳನ್ನು ಪೂರೈಸುತ್ತಿದ್ದವು.

ಹೀಗೆ ಹಂಚಿನ ಉದ್ಯಮ ಬೆಳೆಯಲು ಕಾರಣ ಕರಾವಳಿಯುದ್ದಕ್ಕೂ ಹಂಚಿಗೆ ಬೇಕಾದ ಮಣ್ಣು ಸಿಗುತ್ತಿದ್ದುದು. ನದೀ ತೀರದ ಹಿನ್ನೀರಿನ ಸ್ಥಳಗಳಲ್ಲೇ ಈ ಕಾರ್ಖಾನೆಗಳು ನಿರ್ಮಾಣಗೊಳ್ಳುತ್ತಿದ್ದು ಕಟ್ಟಿಗೆ ಮಣ್ಣು ಸಾಗಾಣಿಕೆ ಅನುಕೂಲವಾಗುತ್ತದೆ.

ಇದರ ಜೊತೆಗೆ ಮೊಸಾಯಿಕ್ ಟೈಲ್ಸ್‌ಗಳ ಉತ್ಪನ್ನವಿದೆ. ಇದರ ಬೇಡಿಕೆಯೂ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತದೆ. ಜಿಲ್ಲೆಯ ಇನ್ನೊಂದು ಮುಖ್ಯ ಉದ್ಯಮವೆಂದರೆ ಗೇರು ಬೀಜದ ಉದ್ಯಮ. ಇದು ಇತ್ತೀಚೆಗೆ ಬೆಳೆಯುತ್ತ ಬಂದ ಉದ್ಯಮ. ಮಂಗಳೂರು ಈ ಉದ್ಯಮದ ಕೇಂದ್ರ. ಮಂಗಳೂರಿನ ನಂತರ ಇಡಿಯ ದೇಶಕ್ಕೆ ಈ ಉದ್ಯಮ ವ್ಯಾಪಿಸಿದೆ. ಈಗ ಈ ಉದ್ಯಮದ ಕೇಂದ್ರ ಕೇರಳದ ಕ್ವಿಲಾನ್. ಕ್ವಿಲಾನ್‌ನಲ್ಲಿ ಒಟ್ಟು ಉದ್ಯಮದ ಶೇಕಡಾ 80 ಪಾಲಿದ್ದರೆ ದಕ್ಷಿಣ ಕನ್ನಡ ಶೇಕಡಾ 12 ಪಾಲು ಉದ್ಯಮವನ್ನು ಬೆಳಿಸಿಕೊ೦ಂಡಿದೆ.

ಇದರ ಮುಖ್ಯ ಕೊರತೆಯೆಂದರೆ ದಕ್ಷಿಣ ಕನ್ನಡದ ಉದ್ಯಮಕ್ಕೆ ಪೂರೈಸುವಷ್ಟು ಗೇರು ಬೀಜ ಇಲ್ಲದಿರುವುದು. ಜಿಲ್ಲೆಯ ಸುಮಾರು 41,656 ಹೆಕ್ಟೇರುಗಳಲ್ಲಿ ಗೇರುಕೃಷಿಯನ್ನು ಮಾಡಲಾಗಿದೆ.

ಆದ್ದರಿಂದ ಕಚ್ಛಾ ಗೇರು ಬೀಜವನ್ನು ಆಮದು ಮಾಡುಕೊಳ್ಳಬೇಕಾಗುತ್ತದೆ. ಸ್ವಲ್ಪ ಪ್ರಮಾಣದಲ್ಲಿ ಗೇರು ಬೀಜ ಉತ್ತರ ಕನ್ನಡ ಮತ್ತು ಕೇರಳದಿಂದ ಈ ಜಿಲ್ಲೆಗೆ ದೊರೆಯುತ್ತದೆ.

ಸಂಸ್ಕರಿಸಿದ ಗೇರುಬೀಜದ ರಫ್ತನ್ನು ಮಂಗಳೂರು, ಕಲ್ಲಿ ಕೋಟೆಗಳಿಂದ ಜಲಮಾರ್ಗದ ಮೂಲಕ ಮಾಡಲಾಗುತ್ತದೆ.

ಜಿಲ್ಲೆಯಲ್ಲಿ ಒಟ್ಟು 13 ಗೇರುಬೀಜ ಸಂಸ್ಕರಣ ಕಾರ್ಖಾನೆಗಳಿವೆ. ಎಲ್ಲವೂ ಸೇರಿ 8000 ಜನರಿಗೆ ಕೆಲಸ ಕೊಡುತ್ತವೆ.

35