ವಿಷಯಕ್ಕೆ ಹೋಗು

ಪುಟ:Dakshina Kannada Mangalore matthu Udupi.pdf/೫೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
ಜಿಲ್ಲೆಯ ಸಾಹಿತ್ಯ ಪರಂಪರೆ

ದಕ್ಷಿಣ ಕನ್ನಡ ಜಿಲ್ಲೆಗೆ ಗುಣ ಮತ್ತು ಗಾತ್ರಗಳೆರಡರಲ್ಲೂ ದೊಡ್ಡದಾದ ಸಾಹಿತ್ಯ ಪರಂಪರೆ ಇದೆ. ತುಳು, ಕನ್ನಡ, ಕೊಂಕಣಿ, ಸಂಸ್ಕೃತ ಈ ನಾಲ್ಕೂ ಭಾಷೆಗಳ ಸಾಹಿತ್ಯ ಪರಂಪರೆ ಸಮೃದ್ಧವಾಗಿದ್ದು ಇದನ್ನು ಸಂಗ್ರಹಿಸಿ ಹೇಳುವುದು ಕಠಿನ, ಇಲ್ಲಿ ಕೇವಲ ತೀರ ಸಂಕ್ಷಿಪ್ತವಾದ ನೋಟವನ್ನು ನೀಡಿದೆ.

ಈ ಜಿಲ್ಲೆಯ ಮುಖ್ಯ ಭಾಷೆ ತುಳು, ಕನ್ನಡವು ಪ್ರಾಯಶಃ ಹತ್ತನೆಯ ಶತಮಾನದ ಬಳಿಕ ಹೆಚ್ಚು ಪ್ರಚಲಿತವಾಗಿ, ಆಡಳಿತದ ಭಾಷೆಯಾಗಿ ನೆಲೆಯಾಯಿತು. ಆದರೂ, ಇಲ್ಲಿಯ ಕನ್ನಡದ ಸಾಹಿತ್ಯ ಸೃಷ್ಟಿ ಮಹತ್ತುಗಳೆರಡರಲ್ಲೂ ಆಸಾಧಾರಣವಾಗಿದೆ. ಕನ್ನಡ ಭಾಷೆಯ ವಿವಿಧ ರೂಪಗಳಲ್ಲಿ ಲಭ್ಯವಿರುವ ಜಾನಪದ ಗೀತೆಗಳು ಒಂದು ಮುಖ್ಯ ಸಾಹಿತ್ಯ ರೂಪ.

ಉದ್ಭಟ ಕಾವ್ಯ (ಶೃಂಗಾರಸಾರ) ವನ್ನು ಬರೆದ ಸೋಮರಾಜ ಅಥವಾ ಸೋಮೇಶ್ವರನೇ (ಕ್ರಿ.1200) ಇಲ್ಲಿನ ಮೊದಲ ಪ್ರಮುಖ ಕನ್ನಡ ಕವಿ. 1439ರಲ್ಲಿದ್ದ ಕಲ್ಯಾಣಕೀರ್ತಿ ವಿವಿದ ಛಂದೋ ಬಂಧಗಳಲ್ಲಿ ಕಾವ್ಯಗಳನ್ನು ಬರೆದವನು. ಹದಿನೈದನೇಯ ಶತಮಾನದ ಕೋಟೇಶ್ವರ 'ಜೀವಂಧರ ಷಟ್ಪದಿ'ಯ ಕರ್ತೃ. ಹದಿನಾರನೇ ಶತಮಾನದ ಲಕ್ಷಣಕಾರ ಕವಿ ಸಾಳ್ವನು, ರಸರತ್ನಾಕರ, ಶಾರದಾ ವಿಳಾಸ, ಸಾಳ್ವಭಾರತ, ವೈದ್ಯಸಾಂಗತ್ಯಳ ಕರ್ತೃ.

ಹದಿನೇಳನೇಯ ಶತಮಾನದಲ್ಲಿದ್ದ ರತ್ನಾಕರ ವರ್ಣಿ ಕನ್ನಡದ ಒಬ್ಬ ಶೇಷ್ಠ ಕವಿ. ಶೃಂಗಾರ, ಅಧ್ಯಾತ್ಮಗಳ ಅಭಿವ್ಯಕ್ತಿ, ಕಥನದ ಸೊಗಸು ಮತ್ತು ಸಾಂಗತ್ಯ ಛಂದಸ್ಸಿನ ಬಳಕೆಯ ಪ್ರಾವೀಣ್ಯಗಳಿಂದ ಇವನು ಅಗ್ರ ಪಂಕ್ತಿಯ ಕವಿಯೆನಿಸಿದ್ದಾನೆ. ಒಂದೆರಡು ಶತಕಗಳನ್ನೂ ಆತನು ರಚಿಸಿದ್ದಾನೆ. ಈ ಕಾಲಕ್ಕೂ ಹಿಂದೆ ಮುಂದೆ ಉಡುಪಿಯಿ ಮಾಧ್ವ ಪರಂಪರೆಯ ದಾಸ ಪಂಥದವರೂ ಹಲವು ಕೃತಿಗಳನ್ನು ರಚಿಸಿದರು. 'ಗೋಮಟೇಶ್ವರ ಚರಿತ್ರೆ'ಯ ಚಂದ್ರಮ, 'ಪದ್ಮಾವತೀ ಪರಿಣಯ'ದ ಪದ್ಮನಾಭ ಮೊದಲಾದವರು ಇತರ ಕವಿಗಳು. ಕೇವಲ ಮುವತ್ತು ವರ್ಷಗಳ ಕಾಲ ಬಾಳಿ (1870-1900) ಕಾವ್ಯಕ್ಷೇತ್ರಕ್ಕೆ ವಿಶಿಷ್ಟವಾದ ಕೊಡುಗೆ ನೀಡಿದ ನಂದಳಿಕೆ ಲಕ್ಷ್ಮೀನಾರಣಪ್ಪನು(ಮುದ್ದಣ)ನು ಈ ಜಿಲ್ಲೆಯ ಅಗ್ರಮಾನ್ಯ ಕವಿಗಳಲೊಬ್ಬನು. ಅದ್ಭುತ ರಾಮಾಯಣಂ, ಶ್ರೀ ರಾಮಪಟ್ಟಾಭಿಷೇಕಗಳು ಆತನ ಎರಡು ಕೃತಿಗಳು ಹಲವು

48