೧೪೬ / ಕುಕ್ಕಿಲ ಸಂಪುಟ
ದೃಷ್ಟಿಯಿಂದ ಕೊಡಗು ಜಿಲ್ಲೆಯಲ್ಲಿ ಆತನ ಗೊತ್ತುಗುರಿಗಾಗಿ ಯಥಾಸಾಧ್ಯ ನಾನು
ಅನ್ವೇಷಿಸಿದಾಗ ನನಗೆ ಆತನ ಯಕ್ಷಗಾನ ಪ್ರಬಂಧಗಳ ಓಲೆ ಮತ್ತು ಕಾಗದದ ಪ್ರತಿಗಳು
ದೊರೆತಿವೆ. ಆ ಪ್ರತಿಗಳು ನಮ್ಮಲ್ಲಿ ಈಗ ಅಚ್ಚಿನಲ್ಲಿ ದೊರೆಯುತ್ತಿರುವ ಪ್ರತಿಗಳಿಂದ
ಹೆಚ್ಚು ಶುದ್ಧವಾಗಿವೆ. ಆತನು ತುಳು ಭಾಷೆಯಲ್ಲಿ ರಚಿಸಿದ ಕೀರ್ತನೆಗಳು ಸಹ ಅಲ್ಲಿ
ಉಪಲಬ್ಧವಾಗಿವೆ. ಇದೊಂದು ಹಸ್ತಪ್ರತಿಯು ನೀವೀಗ ನೋಡುತ್ತಿರುವಂತೆ ತಾ.
೫-೮-೧೮೯೪ರಲ್ಲಿ ಕೊಡಗು ಶ್ರೀಧರ ಭಟ್ಟ ಎಂಬವರಿಂದ ಬರೆಯಲ್ಪಟ್ಟುದಾಗಿದೆ ಎಂದು
ಸ್ಪಷ್ಟವಿದೆಯಷ್ಟೆ: ಅವರ ಸ್ವಹಸ್ತಾಕ್ಷರ ಸಹಿ ಸಮೇತ ಇದೆಯಲ್ಲ. ಇದರಲ್ಲಿ
ಪಾರ್ತಿಸುಬ್ಬನದಾಗಿರುವ ತುಳು ಕೀರ್ತನೆಯೊಂದನ್ನು ಓದಿ ಹೇಳುತ್ತೇನೆ-
ನಾಣೆಂಚ್ ಗತಿಏ ಪಣ್ ರಂಗಯ್ಯ |
ಕಾಣಿಕೆ ಈರೆಗ್ ಎನಮನಸಯ್ಯ
|
ಕೋಣಿಟೆಂಟ್ ಸಹಾಯಾಪರಿದ್ದಿ
ಜಾಣತನೊಂಟು ನಡಪಿಂಚಿ ಯೋಗ್ಯ ಇದ್ದಿ |
ಪ್ರಾಣರಕ್ಷೆಗ್ ಧನಧಾನ್ಮೂಲ ಸೂವರಿದ್ದಿ
ಜಲಜ ಸಂಭವಗೇನ್ ಜಾನೆ ಮಾಂತ್ತೆನೆ |
ಛಲವೊಂತ ಬರಹೊನ್ ವೊಯಿತ್ ಬರೆಯೆನೊ |
ಫಲೊ ಇದ್ಯಾಂತನಣಮ್ಮ ಜಾಯೆ ಪುಟೊಯೆನೊ |
ಗೆಲವೊಂಟ್ ಹರಿ ಎನಣೇಪೊ ರಕ್ಷಿಪನೊ
ಧನ್ನೊಂತ ಗರುಡನ್ನ ಮೇಲ್ಟ್ ಗಮನೊ |
ಪುಣ್ಯಂತ ವಾಸುಕಿ ಹೃದಯೊಂಟು ಶಯನೊ |
ಮಾಸ್ಕೊಂತ ದಾಸರ ವಚನೊಂಟ್ ಗಾನೊ |
ಕಣ್ಣ ಪುರಂತ ಶ್ರೀಕೃಷ್ಣನ ಧ್ಯಾನೊ
|| ಪಲ್ಲ ||
Holl
|| 5 ||
Il a ll
(ಈ ಪದ್ಯವು ಶಿವಳ್ಳಿ ಬ್ರಾಹ್ಮಣರು ಮತ್ತು ಸ್ಥಾನಿಕ ಜಾತಿಯವರು ಆಡುವ ತುಳು
ಭಾಷೆಯಲ್ಲಿದೆ. ಶೂದ್ರಾದಿಗಳ ತುಳು ಭಾಷೆಗೂ, ಇದಕ್ಕೂ ಸ್ವಲ್ಪ ವ್ಯತ್ಯಾಸವಿದೆ.)
ಕನ್ನಡದಲ್ಲಿ ಇದರ ಯಥಾವದಾಷಾಂತರವು ಹೀಗಾಗುತ್ತದೆ.
ಇನ್ನಾರೆನಗೆ ಗತಿ | ಹೇಳಿ ರಂಗಯ್ಯ |
2. ಎನ್ನ ಮನಸ ಕಾಣಿ | ಕೆಯು ನಿಮಗಯ್ಯ
ಕೋಣಿಯೊಳೆನಗೆ ಸ | ಹಾಯ ಮಾಡುವರಿಲ್ಲ |
ಜಾಣತನದಿ ನಡೆ | ಸುವ ಯೋಗ್ಯನಿಲ್ಲ |
ಪ್ರಾಣರಕ್ಷೆಗೆ ಧನ | ಧಾನ್ಯ ಕಾಂಬುದಕಿಲ್ಲ
ಜಲಜಸಂಭವನಿಗಾ | ನೇನ ಮಾಡಿದನೋ |
ಛಲವುಳ್ಳ ಬರಹವ | ನೆಳೆದು ಬರೆದನೋ |
ಫಲವಿಲ್ಲದೇಕೆನ್ನ | ತಂದೆ ಪಡೆದನೊ |
ಗೆಲವಿಂದ ಹರಿ ಎನ್ನ | ನೆಂದು ರಕ್ಷಿಪನೊ
ಧನ್ಯನಾಗಿಹ ಗರು | ಡನ ಮೇಲೆ ಗಮನ |
ಪುಣ್ಯಾತ್ಮ ವಾಸುಕಿ | ಹೃದಯದಿ ಶಯನ |
I
|| ಪಲ್ಲ ||
110 11
|| 2 ||