ವಿಷಯಕ್ಕೆ ಹೋಗು

ಪುಟ:ಶ್ರೀ ಬಸವಣ್ಣನವರ ದಿವ್ಯಜೀವನ.pdf/೪೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

30

they pass away and in time, their thoughts find expression in Buddhas and Christs and it is these latter that become known to us!)12

ಸಂಗಮನಾಥನ ದೇವಸ್ಥಾನದ ಆಡಳಿತವನ್ನು ಮುನಿಗಳೇ ತಮ್ಮ ಶಿಷ್ಯರ ನೆರವಿನಿಂದ ನೋಡಿಕೊಳ್ಳುತ್ತಿದ್ದರು. ಆಶ್ರಮದಲ್ಲಿ ಬಸವಣ್ಣನವರ ಮನಸ್ಸಿನಲ್ಲಿ ಮೂಡಿದ ನೂತನ ವಿಚಾರಗಳು ಮೂರ್ತಸ್ವರೂಪಗಳನ್ನು ತಳೆದಿದ್ದವು. ಅಲ್ಲಿ ವೈದಿಕ ಕರ್ಮಕಾಂಡಕ್ಕೆ ಎಡೆಯಿರಲಿಲ್ಲ. ಸಂಗನ ಭಕ್ತಿಗೆ ಪ್ರಾಧಾನ್ಯವಿದ್ದಿತು. ವಿದ್ಯಾರ್ಥಿಗಳ ಆಯ್ಕೆಯಲ್ಲಿ ಕುಲವನ್ನು ಕಾಣದೆ, ಗುಣವನ್ನೇ ಕಾಣಲಾಗುತ್ತಿತ್ತು. ಆದುದರಿಂದ ವಿದ್ಯಾರ್ಥಿಗಳಲ್ಲಿ ಎಲ್ಲ ಜಾತಿಯ ಗುಣಿಗಳು ಸೇರಿಕೊಂಡಿದ್ದರು. ಆಶ್ರಮವು ದೇವಸ್ಥಾನದ ಆಶ್ರಯದಲ್ಲಿ ನಡೆಯಿಸಲಾಗಿದ್ದರೂ ಅದು ಸಾಧ್ಯವಿದ್ದಷ್ಟು ಸ್ವಯಂಪೂರ್ಣ ವಾಗುವಂತೆ ನೋಡಿಕೊಳ್ಳಲಾಗಿತ್ತು. ಆಶ್ರಮದ ಲಸಗಳನ್ನೆಲ್ಲ ವಿದ್ಯಾರ್ಥಿಗಳೇ ಮಾಡುತ್ತಿದ್ದರು. ಆಶ್ರಮಕ್ಕೆ ಬೇಕಾದ ಧಾನ್ಯ, ಹಣ್ಣು ಹಂಪಲು, ಕಾಯಿಪಲ್ಲೆಗಳನ್ನು ಅಲ್ಲಿಯ ತೋಟದಲ್ಲಿಯೂ ದೇವಸ್ಥಾನದ ಹೊಲಗಳಲ್ಲಿಯೂ ವಿದ್ಯಾರ್ಥಿಗಳ ಸ್ವಂತ ಶ್ರಮದಿಂದಲೇ ಬೆಳೆಯಿಸಲಾಗುತ್ತಿತ್ತು ವಿದ್ಯಾರ್ಥಿಗಳು ತಮ್ಮ ನಿತ್ಯದ ಪೂಜೆ, ಜಪ, ಧ್ಯಾನ, ಅಧ್ಯಯನಗಳನ್ನು ಮುಗಿಸಿ ತಮ್ಮ ತಮ್ಮ ಕಾಯಕಗಳಲ್ಲಿ ನಿರತರಾಗುತ್ತಿದ್ದರು. ನಸುಕಿನಲ್ಲಿ ಎದ್ದು ಪ್ರಾತರ್ವಿಧಿ-ಸ್ನಾನಾದಿಗಳನ್ನು ತೀರಿಸಿ, ಎಲ್ಲರೂ, ಸಂಗಮನಾಥನಿಗೆ ಪತ್ರಪುಷ್ಪಗಳನ್ನು ಏರಿಸಿ, ಅವನನ್ನು ಭಕ್ತಿಭಾವದಿಂದ ವಂದಿಸಿ, ಕೆಲಕಾಲ ಧ್ಯಾನದಲ್ಲಿ ಕಳೆದು, ಆಶ್ರಮಕ್ಕೆ ಬರುವರು. ಒಂದೆರಡು ಗಂಟೆ ಗುರುಗಳ ಸಾನ್ನಿಧ್ಯದಲ್ಲಿ ವೇದ-ವೇದಾಂತ ಆಗಮ-ಶಾಸ್ತ್ರ ದರ್ಶನ- ಪುರಾಣಗಳ ಅಧ್ಯಯನವನ್ನು ಮಾಡಿ ಅಲ್ಪ ಉಪ ಆಹಾರವನ್ನು ಸೇವಿಸಿ, ಅವರು ತಮ್ಮ ತಮ್ಮ ಕಾಯಕವನ್ನು ಮಾಡತೊಡಗುವರು. ತರುವಾಯ ಮಧ್ಯಾಹ್ನದ ಭೋಜನ, ಆಮೇಲೆ ಮರಳಿ ಅಧ್ಯಯನ, ಸಾಯಂಕಾಲ ಎಲ್ಲರೂ

————

೧೨. On liberty