ವಿಷಯಕ್ಕೆ ಹೋಗು

ಪುಟ:ಶ್ರೀ ಬಸವಣ್ಣನವರ ದಿವ್ಯಜೀವನ.pdf/೩೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
17

ಕಲಿತಿದ್ದನಾದರೂ ಉತ್ಸಾಹದ ಭರದಲ್ಲಿ ಅವನು ಈ ಚೆಲ್ಲಾಟದಲ್ಲಿ ಭಾಗವಹಿಸಿದನು. ಆತನ ಈ ಹೊಸತನವನ್ನರಿಯದ ಒಬ್ಬ ಬಾಲಕ ಚೇಷ್ಟೆಯಿಂದ ಅವನ ಮುಖದ ಮೇಲೆ ಜೋರಾಗಿ ನೀರು ಗೊಜ್ಜಿದನು. ಅದರಿಂದ ಕೃಷ್ಣನು ತುಂಬ ಗಾಬರಿಯಾದನು. ಅದೇ ಸಮಯಕ್ಕೆ ಅವನ ಬಾಯಿಯಲ್ಲಿ ನೀರು ಸೇರಿ, ಅವನು ಮುಳುಗತೊಡಗಿದನು. ಈ ರೀತಿ ನಗೆಯು ಹೊಗೆಯಾಗ ತೊಡಗಿದುದನ್ನು ಕಂಡು ಬಾಲಕರೆಲ್ಲ ಹೆದರಿ ಅಲ್ಲಿಂದ ಓಡಿಹೋದರು. ಕೃಷ್ಣನನ್ನು ಬಸವ ಮುಳುಗಿಸಿದನೆಂದು ಊರಲ್ಲೆಲ್ಲ ಸಾರತೊಡಗಿದರು. ಈ ನಗೆಯಾಟದಿಂದ ತನ್ನ ನೆಚ್ಚಿನ ಗೆಳೆಯನಿಗೆ ಒದಗಿದ ಈ ಗಂಡಾಂತರವನ್ನು ಕಂಡು ಬಸವನೂ ಗಾಬರಿಕೊಂಡನು. ಆದರೆ ಎಲ್ಲರಂತೆ ಅಲ್ಲಿಂದ ಓಡಿಹೋಗದೆ ಅವನು ನೀರಿನಲ್ಲಿ ಜಿಗಿದು, ಕೃಷ್ಣನ ಚಂಡಿಕೆಯನ್ನು ಹಿಡಿದು ಎತ್ತಿ ಅವನನ್ನು ಬಾವಿಯ ದಂಡೆಗೆ ಎಳೆದು ತಂದನು. ಅಷ್ಟರಲ್ಲಿ ಬಾಲಕರ ಬೊಬ್ಬಾಟವನ್ನು ಕೇಳಿ ಊರ ಜನರೆಲ್ಲ ಅಲ್ಲಿಗೆ ಧಾವಿಸುತ್ತಲೇ ಬಂದರು. ಕೃಷ್ಣನ ತಂದೆತಾಯಂದಿರು ಬಸವನನ್ನು ಶಪಿಸುತ್ತ ಬಂದು ನೋಡುತ್ತಾರೆ — ಕೃಷ್ಣನು ನಿಶ್ಚೆಷ್ಟನಾಗಿ ಬಿದ್ದಿರುವ. ಬಸವನು ಅವನ ಬಳಿ ಕಂಬನಿಗಳನ್ನು ಸುರಿಸುತ್ತ ಕುಳಿತಿರುವ. ರೇಗಿಗೆದ್ದ ಕೆಲವರು ಬಸವನನ್ನು ಬೈಯಲು ಹಾಗೂ ಬಡಿಯಲು ಕೂಡ ಹಿಂಜರಿಯಲಿಲ್ಲ. ಬಸವನು ಅದನ್ನೆಲ್ಲ ಸಹಿಸಿಕೊಂಡನು. ಕೃಷ್ಣನಿಗೆ ಕೂಡಲೇ ಪ್ರಥಮೋಪಚಾರವು ನಡೆಯಿತು. ಶರೀರವನ್ನು ಸ್ವಲ್ಪ ಕಾಯಿಸಲಾಯಿತು. ಒಂದು ಅರ್ಧ ಗಂಟೆಯಲ್ಲಿ ಅವನ ಶ್ವಾಸೋಚ್ಚ್ವಾಸ ಸರಿಯಾಗಿ ನಡೆಯಿತು. ಆತನು ಸಚೇತನಾದ, ಕಂಗಳನ್ನು ತೆರೆದ. ಕೂಡಲೇ "ಬಸವಣ್ಣನೆಲ್ಲಿ?” ಎಂದು ಕೇಳಿದ. ಬಸವನ ದುಃಖಾಶ್ರುಗಳು ಆನಂದಾಶ್ರುಗಳಾಗಿ ಪರಿಣಮಿಸಿದವು. ಕೃಷ್ಣನು ಬಸವನನ್ನು ಬಿಗಿಯಾಗಿ ಅಪ್ಪಿಕೊಂಡು ಅಂದ: "ಬಸವಣ್ಣಾ! ಏನು ಹೇಳಲಿ? ನಾನು ಇದೀಗ ಒಂದು ಅದ್ಭುತ ಕನಸನ್ನು ಕಂಡೆನಯ್ಯಾ! ನೀರಿನಲ್ಲೆಲ್ಲ ಅಲೌಕಿಕ ಬೆಳಕೊಂದು ಹೊಳೆಯಿತು! ಅದರಲ್ಲಿ ನೀನು ಬಂದು ನನ್ನನ್ನು ಎತ್ತಿಕೊಂಡೆ! ಹೆದರದಿರು ಎಂದೆ. ಬಸವಣ್ಣಾ! ನಿನ್ನಿಂದಲೇ ನಾನಿಂದು ಉಳಿದೆ. ನಿನ್ನ ಉಪಕಾರಕ್ಕೆ ಎಣೆ ಇಲ್ಲ! ನೋಡಾ