ವಿಷಯಕ್ಕೆ ಹೋಗು

ಪುಟ:ಶ್ರೀ ಬಸವಣ್ಣನವರ ದಿವ್ಯಜೀವನ.pdf/೪೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
23

ಕೆಲಕಾಲ ಕಳೆಯಿತು. ಆಗ ಆತನು ಒಂದು ಕನಸನ್ನೋ ಕಣಸನ್ನೋ ಕಂಡನು. ಎಲ್ಲೆಡೆ ಬೆಳದಿಂಗಳ ಬೆಳಕು! ಒಬ್ಬ ಮುನಿಯು ಎದುರು ನಿಂತಿರುವ, ಆತನ ಎರಗಿದ ಮಸ್ತಕದ ಮೇಲೆ ತನ್ನ ವರದಹಸ್ತವನ್ನಿರಿಸಿ ಮುನಿಯು ಅಂದ:

"ಸಂಗನೆಡೆ ನಡೆಸಯ್ಯ! ಹಿಂಗುವವು ಸಂದೇಹ!
ಬೇಗ ನಡೆಯೇ ಬಸವ! ಕಾಯುತಿರುವನು ದೇವ!"

ಈ ದಿವ್ಯ ಕರೆಯನ್ನು ಕೇಳಿ ಬಸವನು ಮುನಿಯೆಡೆ ನೋಡುವಷ್ಟರಲ್ಲಿ ಕನಸು ಆಳಿದು ಮುನಿಯು ಕಾಣದಾದ. ತನ್ನ ಕುಲದೇವನಾದ-ಇಷ್ಟದೇವನಾದ ಸಂಗಮನಾಥನ ಕರೆಯೇ ಇದೆಂದು ಬಗೆದು, ಬಸವಣ್ಣನು ಕೂಡಲಸಂಗಮ ಕ್ಷೇತ್ರಕ್ಕೆ ತೆರಳಲು ನಿಶ್ಚಯಿಸಿ, ಮನೆಗೆ ಬಂದ, ಮತ್ತು ನಡೆದ ಸಂಗತಿಯನ್ನು ಯಾರಿಗೂ ಆರುಹದೆ ತನ್ನ ಕೋಣೆಯಲ್ಲಿ ಮಲಗಿಕೊಂಡ.

ಸಂಗನೆಡೆಗೆ:

'ಭಗವಂತನ ಕರೆ ಬಂದಾಗ ಎಲ್ಲವನ್ನು ಬೆಂಕಿಯಲ್ಲಿ ಎಸೆಯಬೇಕಾಗುವದು' (When the call comes, into the bontfire all must go!) ಎಂದು ಓರ್ವ ಆಧುನಿಕ ಅನುಭಾವಿಗಳು ಉಸುರಿರುವರು. ಎಲ್ಲ ಅನುಭಾವಿಗಳಂತೆ ಬಸವಣ್ಣನು ಹಾಗೆಯೇ ಮಾಡಿದನು. ಮಧ್ಯರಾತ್ರಿಯ ಸಮಯ ಬಸವಣ್ಣನು ಎಚ್ಚತ್ತ, ಆತನ ಅಂತರಂಗದಲ್ಲಿ ಮರಳಿ ವಿಚಾರಲಹರಿಗಳು ಬಲವಾಗಿ ಅಲೆಯತೊಡಗಿದವು. 'ಕರ್ಮವೂ ಭಕ್ತಿಯೂ ಒಂದೆಡೆ ಅದೆಂತು ಇರಬಲ್ಲದು? ಸಂಗಮ ಕರೆದಿರುವ! ಇನ್ನು ತಡಮಾಡದೆ ನಾನು ಅವನೆಡೆ ತೆರಳಲೇಬೇಕು!' ಎಂದು ತನ್ನಲ್ಲಿಯೇ ನುಡಿದು ಬಸವಣ್ಣ ಹಾಸಿಗೆಯಿಂದ ಒಮ್ಮೆಲೆ ಎದ್ದ. ಅದನ್ನು ಸುತ್ತಿಟ್ಟ ಒಂದು ಧೋತರವನ್ನು ಹೊದ್ದುಕೊಂಡ! ಉಟ್ಟ ಧೋತರದೊಡನೆ ಹೊರಡಲು ಸಿದ್ಧವಾದ.


————

೮. ನೋಡು 'ನವ್ಯದುಕೂಲಮಂ ಉಟ್ಟು, ದಿವ್ಯವಸ್ತ್ರಮಂ ಪೊದೆದು.'ಬ.ರ.ಪು.೧೧